ಗ್ಲೆರಿಸೀಡಿಯಾ ಆಧಾರದಲ್ಲಿ ಕರಿಮೆಣಸಿನ ಬಳ್ಳಿ ಬೆಳೆಸಬಹುದು.
ಗ್ಲೆರಿಸೀಡಿಯಾ ಗೆಲ್ಲು ನೆಟ್ಟು ಕರಿಮೆಣಸಿನ ಬಳ್ಳಿಯನ್ನು ಬಿಟ್ಟರೆ ಚೆನ್ನಾಗಿ ಬೆಳೆಯುತ್ತದೆ. ಇದರಿಂದ ಕೊಯಿಲು ಮಾಡಲು ಕಷ್ಟವಿಲ್ಲ. ಹಿಂದೆ ನಮ್ಮಲ್ಲಿ ಹಾಲುವಾಣ…
ಗ್ಲೆರಿಸೀಡಿಯಾ ಗೆಲ್ಲು ನೆಟ್ಟು ಕರಿಮೆಣಸಿನ ಬಳ್ಳಿಯನ್ನು ಬಿಟ್ಟರೆ ಚೆನ್ನಾಗಿ ಬೆಳೆಯುತ್ತದೆ. ಇದರಿಂದ ಕೊಯಿಲು ಮಾಡಲು ಕಷ್ಟವಿಲ್ಲ. ಹಿಂದೆ ನಮ್ಮಲ್ಲಿ ಹಾಲುವಾಣ ಮರಗಳಿಗೆ ಮೆಣಸಿನ ಬಳ್ಳಿ ಹಬ್ಬಿಸುತ್ತಿದ್ದರು. ಕ್ರಮೇಣ ಅಡಿಕೆ, ತೆಂಗಿನ ಮರ ಹಾಗೆಯೇ ಇನ್ನಿತರ ಕಾಡು ಮರಮಟ್ಟುಗಳಿಗೆ ಬಳ್ಳಿ ಹಬ್ಬಿಸುವುದು ಪ್ರಾರಂಭವಾಯಿತು. ಈ ಮರಮಟ್ಟುಗಳಲ್ಲಿ ಬಳ್ಳಿ ಉತ್ತಮವಾಗಿ ಹಬ್ಬುತ್ತದೆಯಾದರೂ ಕೊಯಿಲು ಕೆಲಸ ಕಷ್ಟವಾಗಲಾರಂಭಿಸಿದೆ. ಅದಕ್ಕೊಂದು ಪರಿಹಾರ ಹುಡುಕುವ ನಿಟ್ಟಿನಲ್ಲಿ ಬೇರೆ ಬೇರೆ ಪ್ರಯೋಗಗಳು ನಡೆಯುತ್ತಿವೆ. ಅವುಗಳಲ್ಲಿ ಒಂದು ಗ್ಲೆರಿಸೀಡಿಯಾ ಸಸ್ಯ. ಈ ಸಸ್ಯಕ್ಕೆ ಕರಿಮೆಣಸಿನ ಬಳ್ಳಿ ಹಬ್ಬಿಸುವುದರಿಂದ…
ಅಡಿಕೆ ಮರಗಳಲ್ಲಿ ಶಿರ ಒಣಗಿ ಕೊಳೆಯುವ ಸಮಸ್ಯೆ ಬಹಳ ಹಿಂದಿನಿಂದಲೂ ಇದ್ದದ್ದು. ಕೆಲವು ವರ್ಷ ಹೆಚ್ಚಾಗುತ್ತದೆ. ಕೆಲವು ವರ್ಷ ಗೌಣವಾಗಿರುತ್ತದೆ. ಈ ವರ್ಷ ಇದು ಹೆಚ್ಚಿನ ಪ್ರಮಾಣದಲ್ಲಿ ಕಾಣಿಸುತ್ತಿದ್ದು, ಬೆಳೆಗಾರರು ಯಾಕೆ ಹೀಗಾಗುತ್ತಿದೆ ಎಂದು ಗಾಬರಿಯಾಗಿದ್ದರೆ. ಇದು ಒಂದು ಶಿಲೀಂದ್ರ ರೋಗವಾಗಿದ್ದು, ಸರಿಯಾದ ನಿರ್ವಹಣೆ ವಿಧಾನಗಳಿಂದ ಬಾರದಂತೆ ಮಾಡುವುದು ಸಾಧ್ಯ.ಇದನ್ನು ತೆಂಡೆ ರೋಗ ಎಂದು ಕೆಲವರು ಹೇಳುವುದಿದೆ. ತೆಂಡೆ, ಅಥವಾ ಚೆಂಡೆ ರೋಗ ಎಂದರೆ ಮಲೆನಾಡಿನಲ್ಲಿ ಕಂಡುಬರುವ ಹಿಡಿಮುಂಡಿಗೆ ಅಥವಾ ಬಂದ್ ರೋಗ. ಇದು ಶಿರ ಕೊಳೆಯುವ…
ಭಾರತದ ಕೃಷಿಗೆ TATA ದವರ ಕೊಡುಗೆ ಏನು ಎಂದರೆ TATA ಉತ್ಪನ್ನಗಳು.RATHAN TATA ಅವರ ಯುಗ ಅಂತ್ಯವಾಗಿದೆ. ಆದರೆ ಅವರ ಕೊಡುಗೆ ಅಜರಾಮರವಾಗಿದೆ. ಕೃಷಿಕರಿಗೂ ಟಾಟಾ ಸಂಸ್ಥೆ ಬಹಳಷ್ಟು ಕೊಡುಗೆಯನ್ನು ಕೊಟ್ಟಿರುವುದನ್ನು ಇಲ್ಲಿ ಸ್ಮರಿಸಬೇಕು. Tata Trust ಮೂಲಕ ಭಾತರದ ರೈತರಿಗೆ ಟಾಟಾ ಸಂಸ್ಥೆ ಭಾರೀ ಕೊಡುಗೆಯನ್ನು ಕೊಟ್ಟಿದೆ. ಒಮ್ಮೊಮ್ಮೆ ಹೀಗೆ ಅನ್ನಿಸುತ್ತದೆ. ರತನ್ ಟಾಟಾ ರಂತಹ ನಿಸ್ವಾರ್ಥ ವ್ಯಕಿಗಳಿಗೆ ಆಯುಸ್ಸು ಕೊಡುವವರು ಚಿರಂಜೀವಿಯಾಗಿ ಬದುಕುವ ಆಯುಸ್ಸು ಕೊಡುವುದಿಲ್ಲ ಎಂದು. ಸುಮ್ಮನೆ ಅನ್ನದಂಡ ಭೂಮಿಗೆ ಭಾರ ಎಂಬಂತಿರುವವರಿಗೆ…
ಕೊಟ್ಟಿಗೆ ಗೊಬ್ಬರದಲ್ಲಿ Farm Yard Manure ಉತ್ತಮ ಪೊಷಕಾಂಶಗಳಿದ್ದರೂ ಆದರ ಪೂರ್ಣ ಪ್ರತಿಫಲವನ್ನು ನಾವು ಪಡೆಯಲಾಗುತ್ತಿಲ್ಲ. ಅದಕ್ಕೆ ಕಾರಣ ಈ ಗೊಬ್ಬರವನ್ನು ನಾವು ಸರಿಯಾಗಿ ದಾಸ್ತಾನು ಮಾಡುವುದಿಲ್ಲ. ಸರಿಯಾದ ವಿಧಾನದಲ್ಲಿ ಬಳಕೆಯನ್ನೂ ಮಾಡುವುದಿಲ್ಲ. ಕೊಟ್ಟಿಗೆ ಗೊಬ್ಬರದ ವಿಚಾರದಲ್ಲಿ ತಾತ್ಸಾರ ಬೇಡ. ಅದರಲ್ಲಿ ಸತ್ವಗಳು ಕಡಿಮೆಯಾದರೂ ಅದರ ಗುಣಕ್ಕೆ ಸರಿಸಾಟಿ ಇನ್ನೊಂದಿಲ್ಲ.. ಹಾಗಾಗಿ ಇದನ್ನು ಪೋಷಕಾಂಶ ನಷ್ಟವಾಗದಂತೆ ಸಂಗ್ರಹಿಸಬೇಕು ಮತ್ತು ಬಳಕೆ ಮಾಡಬೇಕು. ಕೊಟ್ಟಿಗೆ ಗೊಬ್ಬರ (ತಿಪ್ಪೆ ) ಎಂಬುದು ನಮ್ಮ ಹೊಲದಲ್ಲೇ ನಾವು ತಯಾರಿಸುವ ಗೊಬ್ಬರಕ್ಕೆ ಇಟ್ಟಿರುವ…
ಉತ್ತಮ ಇಳುವರಿ ಪಡೆಯಲು ರೈತರು ಯಾವ ಗೊಬ್ಬರವನ್ನು ಬಳಸಿದರೆ ಒಳ್ಳೆಯದು ಅದು ಹೇಗೆ ಕೆಲಸ ಮಾಡುತ್ತದೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ. ಸಾಮಾನ್ಯವಾಗಿ ಹೆಚ್ಚಿನ ರೈತರು ರಸಗೊಬ್ಬರದ ಜೊತೆಗೆ ಅಲ್ಪ ಸ್ವಲ್ಪವಾದರೂ ಸಾವಯವ ಮೂಲದ ಗೊಬ್ಬರವನ್ನು ಬಳಕೆ ಮಾಡುತ್ತಾರೆ. ಅವುಗಳಲ್ಲಿ ಬೇರೆ ಬೇರೆ ಪ್ರಕಾರದ ಗೊಬ್ಬರಗಳಿದ್ದು ಪೋಷಕಾಂಶ ಮತ್ತು ಅದರ ಬಿಡುಗಡೆ ಹಾಗೂ ಅವುಗಳ ಧೀರ್ಘಕಾಲಿಕ ಪರಿಣಾಮಗಳನ್ನು ತುಲನೆ ಮಾಡಿದಾಗ ಯಾವ ಗೊಬ್ಬರ ಉತ್ತಮ ಎಂಬ ತೀರ್ಮಾನಕ್ಕೆ ಬರಬಹುದು. ಎಲ್ಲಾ ರೈತರೂ ಮಣ್ಣು ಬೇಕು ಎಂಬ ಕಳಕಳಿಯಿಂದ…
ಸಾವಯವ ಗೊಬ್ಬರದ ಪ್ರಮುಖ ಮೂಲ ಕಾಂಪೋಸ್ಟ್. ಬಹುತೇಕ ಎಲ್ಲಾ ಕೃಷಿಕರೂ ಸಾವಯವ ಗೊಬ್ಬರ ತಯಾರಿಸುತ್ತಾರೆ. ಆದರೆ ಹೆಚ್ಚಿನವರು ವೈಜ್ಞಾನಿಕವಾಗಿ ಹೇಗೆ ತಯಾರಿಸಬೇಕೋ ಹಾಗೆ ತಯಾರಿಸದ ಕಾರಣ ಅದರ ಬಳಕೆಯಿಂದ ಸರಿಯಾದ ಫಲವನ್ನು ಪಡೆಯುತ್ತಿಲ್ಲ. ವೈಜ್ಞಾನಿಕವಾಗಿ ತಯಾರಿಸಿದ ಕಾಂಪೋಸ್ಟ್ ಗೊಬ್ಬರ ಎರೆಹುಳು ಗೊಬ್ಬರದಷ್ಟೇ ಸತ್ವವನ್ನು ಒಳಗೊಂಡಿರುತ್ತದೆ ಹಾಗೆಯೇ ಕೊಂಡು ತರುವ ಚೀಲದಲ್ಲಿ ತುಂಬಿದ ಸಾವಯವ ಗೊಬ್ಬರಕ್ಕಿಂತ ಅದೆಷ್ಟೋ ಪಾಲು ಫಲಿತಾಂಶವನ್ನು ಕೊಡುತ್ತದೆ. ಇದನ್ನು ಮಾಡುವುದಕ್ಕೆ ಕಷ್ಟ ಏನೂ ಇಲ್ಲ. ಬರೇ ಸರಳ.ಆದರೆ ನಾವು ಅಜ್ಜ ನೆಟ್ಟ ಆಲದ ಮರಕ್ಕೆ…
ಜರ್ಸಿ – ಎಚ್ ಎಫ಼್ ಹಸುಗಳು ಹಾಕುವ ಸಗಣಿಯಲ್ಲಿ ಹೆಚ್ಚು ಪೋಷಕಾಂಶಗಳು ಇರುತ್ತವೆ ಎಂದರೆ ಬೇಸರ ಮಾಡಿಕೊಳ್ಳಬೇಡಿ. ನಿಜವಾಗಿಯೂ ಇದು ಸತ್ಯ. ಈ ಹಸುಗಳು ವಿದೇಶಿ ತಳಿಗಳಾದರೂ ಅವು ಹಾಕುವ ಸಗಣಿಯಲ್ಲಿ ಪೋಷಕಾಂಶ ಚೆನ್ನಾಗಿಯೇ ಇರುತ್ತದೆ. ಹಾಗೆಂದು ನಾಟೀ ಹಸುಗಳ ಸಗಣಿಯಲ್ಲಿ ಇಲ್ಲ ಎಂದಲ್ಲ. ಯಾವ ಹಸುಗಳಿಗೆ ಅಧಿಕ ಸತ್ವದ ಆಹಾರ ಕೊಡಲಾಗುತ್ತದೆಯೋ ಅವುಗಳು ವಿಸರ್ಜಿಸುವ ತ್ಯಾಜ್ಯದಲ್ಲಿ ಆ ಸತ್ವಗಳ ಉಳಿಕೆ ಇರುತ್ತವೆ. ಹಸುಗಳಲ್ಲಿ ನಾಟಿ ಮತ್ತು ವಿದೇಶೀ ತಳಿ ಎಂಬ ಎರಡು ವಿಧಗಳು. ನಾಟಿ ತಳಿಗೆ…
ಜಾಯಿ ಸಾಂಬಾರದ (Nutmeg spice) ಬೆಳೆಗಾರರಿಗೆ ಬೀಜದ ಗಿಡ ಉತ್ತಮವೋ ಅಥವಾ ಕಸಿ ಗಿಡವೋ ಎಂಬ ಸಂದೇಹಕ್ಕೆ ಇಲ್ಲಿದೆ ನಿಖರ ಉತ್ತರ. ಈ ಸಾಂಬಾರ ಬೆಳೆಗೆ ಈಗ ಬ್ರಾರೀ ಟ್ರೇಂಡ್ ಉಂಟಾಗಿದೆ. ಇದರ ಅವಕಾಶವನ್ನು ಬಳಕೆ ಮಾಡಿಕೊಂಡು ಬೀಜದ ಗಿಡಕ್ಕಿಂತ ಕಸಿ ಗಿಡ ಸೂಕ್ತ ಉತ್ತಮ ಎಂಬ ಪ್ರಚಾರವೂ ಚಾಲ್ತಿಯಲ್ಲಿದೆ. ಇದೆಲ್ಲಾ ಕೈಯಿಂದ ಕೊಯ್ಯುಲಿಕ್ಕಾಗುವುದನ್ನು ದೋಟಿ ಬಳಸಿ ಕೊಯ್ದಂತೆ ಎಂದರೂ ತಪ್ಪಾಗಲಾರದು. ಬೀಜದ ಗಿಡಕ್ಕೆ ಜನ ಹೇಳುವಂತೆ ಅಂತಹ ವೀಕ್ ಪಾಯಿಂಟ್ ಗಳು ಇಲ್ಲ. ಕಸಿ ಗಿಡವೂ…
ಮಾವಿನ ಮರ- ಸಸಿ ಬಹುತೇಕ ಎಲ್ಲಾ ಕೃಷಿಕರಲ್ಲೂ ಇರುತ್ತದೆ.ಹಣ್ಣು ತಿನ್ನುವ ಆಸೆಗಾಗಿ ಬೆಳೆಸಿದ ಈ ಮರಗಳಿಂದ ಉತ್ತಮ ಫಲ ಪಡೆಯಲು ಈ ಕೆಲಸವನ್ನು ಈಗ ಮಾಡಲೇಬೇಕು. ಮಳೆಗಾಲದ ಸಮಯದಲ್ಲಿ ಮಾವಿನ ಮರಗಳಿಗೆ ಬರುವ ಒಂದು ಶಿಲೀಂದ್ರ ರೋಗದ ಸೋಂಕು ಆ ಮರದ ಫಸಲಿನ ಮೇಲೆ ನೇರ ಪರಿಣಾಮ ಉಂಟು ಮಾಡುತ್ತದೆ.ಬಹಳಷ್ಟು ಜನ ಮಾವಿನ ಸಸಿ ಬೆಳೆದವರು ಅದರಲ್ಲಿ ಫಲ ಬಂದರೂ ಉಪಯೋಗಕ್ಕಿಲ್ಲ ಎನ್ನುತ್ತಾರೆ. ಇದಕ್ಕೆ ಕಾರಣ ಮಳೆಗಾಲದಲ್ಲಿ ಬರುವ ಶಿಲೀಂದ್ರ ರೋಗದ ರೋಗಾಣು ಮರದಲ್ಲಿ ಜೀವಂತವಾಗಿ ಉಳಿಯುವುದು….
1 ಎಕ್ರೆ ಅಡಿಕೆ ಬೆಳೆಸುವವರು ಸಾಮಾನ್ಯವಾಗಿ 500 ಅಡಿಕೆ ಸಸಿಗಳನ್ನು ನೆಡುತ್ತಾರೆ. ಅದರ ಬದಲು ಈ ರೀತಿಯ ವಿಶೇಷ ಅಂತರದ ಅಡಿಕೆ ಬೇಸಾಯದಲ್ಲಿ ಹೆಚ್ಚು ವಿಸ್ತೀರ್ಣ ಇಲ್ಲದೆ ಅಡಿಕೆ ಸಸಿಗಳನ್ನು ಹಿಡಿಸಿ ಅಧಿಕ ಫಸಲು ಪಡೆಯಬಹುದು. ಇಲ್ಲಿ ನೀರು, ಗೊಬ್ಬರ, ಶ್ರಮ ಉಳಿತಾಯವಾಗುತ್ತದೆ. ಮುಂದಿನ ದಿನಗಳಲ್ಲಿ ಎದುರಾಗುವ ತೋಟ ನಿರ್ವಹಣೆ ಮೇಲ್ವಿಚಾರಣೆ ಸಮಸ್ಯೆಗೆ ಇದು ಉತ್ತಮ ಬೇಸಾಯ ವಿಧಾನ ಎನ್ನಿಸಬಲ್ಲದು. ಅಡಿಕೆ ತೋಟ ಎಂದರೆ ಸಾಲಾಗಿ ಸಸಿಗಳನ್ನು ನೆಡುವುದು, ಪರಸ್ಪರ ನಿರ್ಧಿಷ್ಟ ಅಂತರ. ಅದರಲ್ಲೂ ಚದರ ಚೌಕ…