ಕಾಫಿ ಬೆಳೆಗೆ ಇದು ಅತೀ ದೊಡ್ಡ ಸಮಸ್ಯೆ.

ಎಲೆಗಳ ಮೇಲೆ ತಾಮ್ರದ  ಕಲೆಗಳು ಕಂಡು ಬಂದು ಅದು ಒಣಗಿ ಎಲೆಗಳು ಉದುರಿ ಸಸ್ಯದಲ್ಲಿ ಬರೇ ಕಡ್ಡಿ ತರಹದ  ಗೆಲ್ಲುಗಳು ಮಾತ್ರ ಉಳಿಯುವ ಈ ರೋಗ ಇತ್ತೀಚೆಗೆ ಕಾಫೀ ಬೆಳೆಯಲಾಗುವ ಪ್ರದೇಶಗಳಲ್ಲಿ ವ್ಯಾಪಕವಾಗುತ್ತಿದೆ. ಇದು ಬೆಳೆಗಾರರಲ್ಲಿ ಅತಂಕವನ್ನು ಉಂಟುಮಾಡಿದೆ..

  • ಎಲೆ  ತುಕ್ಕು ರೋಗ , ಅರಶಿನ ಚುಕ್ಕೆ ಅಥವಾ ಎಲೆ ಚುಕ್ಕೆ ರೋಗ, leaf rust                 ಎಂಬುದು  ಇದರ  ಹೆಸ ರು.
  •  ಈ ರೋಗ ಆರ್ಥಿಕವಾಗಿ ಬೆಳೆಗಾರರಿಗೆ ಹೆಚ್ಚಿನ ಹಾನಿಯನ್ನು ತರುವಂತ ದ್ದು.
  • ಇದರಿಂದ ಶೇ. 70 ಕೂ ಹೆಚ್ಚು ಬೆಳೆ ನಷ್ಟ ಉಂಟಾಗುತ್ತದೆ.
  • ವಿದೇಶಗಳಲ್ಲಿ ಇದು ಬಾರೀ ಹಾನಿ ಮಾಡಿದ ವರದಿ  ಇದೆ.

  • ನಮ್ಮ ದೇಶಕ್ಕೆ  ಇದು ಸುಮಾರು  200  ವರ್ಷಕ್ಕೆ  ಹಿಂದೆ ಬಂದು ಅಲ್ಲಲ್ಲಿ ಸಾಕಷ್ಟು ಹಾನಿ ಮಾಡಿದೆ.

ಎಲ್ಲಿಂದ ಬಂತು:

  • ಈ ರೋಗ ಮೊತ್ತಮೊದಲು ಆಫ್ರಿಕಾ ದೇಶದಲ್ಲಿ,ನಂತರ ಅದು ಶ್ರೀಲಂಕಾ ಆ ನಂತರ ಬ್ರೆಝಿಲ್ ನಲ್ಲೂ ಕಂಡು ಬಂತು. ಇದು  ಹಾಗೆಯೇ ಭಾರತಕ್ಕೂ ಕಾಲಿಟ್ಟಿತು.
  • ಪ್ರಪಂಚದ ಬೇರೆ ಬೇರೆ ವರ್ಗದ ಕೀಟ ಬಾಧೆಗಳಲ್ಲಿ ಈ ರೋಗವನ್ನು ಪ್ರಮುಖ ಏಳನೇ ರೋಗವೆಂದು ಪರಿಗಣಿಸಲಾಗಿದೆ.
  • ಇದರ  ತೀವ್ರತೆ ಹೆಚ್ಚಾದರೆ ಇಡೀ ಕಾಫೀ ತೋಟವೇ ಹಾಳಾಗುವ ಸಾಧ್ಯತೆ ಇದೆ.

ಶ್ರೀಲಂಕಾದಲ್ಲಿ ಈ ರೋಗ ಕಾರಣದಿಂದ  ಕಾಫೀ ತೋಟಗಳೇ  ನಿರ್ನಾಮವಾದ ಬಗ್ಗೆ  ಮಾಹಿತಿ ಇದೆ. ಇಲ್ಲಿ ಬೆಳೆಗಾರರು ಕಾಫಿಯ ಬದಲು ಚಹ ಬೆಳೆಸಲು ಮುಂದಾದುದೇ ಈ ಕಾರಣಕ್ಕೆ  ಎನ್ನಲಾಗುತ್ತದೆ.

ಗಿಡ ಹೀಗಾಗುತ್ತದೆ

ಹೇಗೆ ರೋಗ ಬರುತ್ತದೆ:

  • ಎಲ್ಲಾ ಸಮಯದಲ್ಲೂ  ಈ ರೋಗ ಹರಡುವುದಿಲ್ಲ.
  • ಕೆಲವು ಅನುಕೂಲಕರ ವಾತಾವರಣದಲ್ಲಿ  ಮಾತ್ರ ಹೆಚ್ಚಾಗಿ ಹರಡುತ್ತದೆ.
  • ಮೇ ತಿಂಗಳಿನಿಂದ ನವೆಂಬರ್  ಡಿಸೆಂಬರ ತನಕದ ಅವಧಿಯಲ್ಲಿ ತಂಪು ಆರ್ಧ್ರ ಹವಾಮಾನದಲ್ಲಿ ಈ ರೋಗಕ್ಕೆ  ಕಾರಣವಾದ ಶಿಲೀಂದ್ರದ  ಹರಡುವಿಕೆ ಹೆಚ್ಚು.
  • ಮಳೆ – ಬಿಸಿಲು ಇರುವಾಗ   ಇದರ ಹರಡುವಿಕೆಗೆ ಅನುಕೂಲ.
  • ಹಾಗೆಂದು ಇದು ನಿರ್ದಿಷ್ಟ ಕಾಲಮಾನದಲ್ಲಿ ಮಾತ್ರ  ಬರುವ ರೋಗ ಅಲ್ಲ.
  • ವರ್ಷದ ಎಲ್ಲಾ ಕಾಲದಲ್ಲೂ ಬರುತ್ತದೆ.
  • ಉಲ್ಬಣಗೊಳ್ಳಲು ಮಳೆಗಾಲದ ಹವಾಮಾನ  ಪೂರಕ.
  • ಶುಷ್ಕ ವಾತಾವರಣದಲ್ಲಿ ರೋಗ ಕಾರಕ ಶಿಲೀಂದ್ರ ಇದ್ದರೂ ಸಹ ಅದು ಹೆಚ್ಚು ಚಾಟುವಟಿಕೆಯಲ್ಲಿರುವುದಿಲ್ಲ.
  • ರೈನ್ ಗನ್ ನೀರಾವರಿ ಮಾಡಿ ಕೆಲವೇ ಸಮಯದಲ್ಲಿ ಅತಿಯಾಗಿ  ಮಳೆ ಬಂದರೆ ಚಟುವಟಿಕೆ  ಹೆಚ್ಚುತ್ತದೆ.

ರೋಗ ಕಾರಕ ಶೀಲೀಂದ್ರದ ಹೆಸರು Uredospores.  ಇದು ಗಾಳಿ , ನೀರು, ಮಂಜು, ಕೀಟ  ಪ್ರಾಣಿ ಮತ್ತು ಮನುಷ್ಯರ ಮೂಲಕ ಹರಡುತ್ತದೆ.

  • ಎಲೆಗಳ ಅಡಿ ಭಾಗದಲ್ಲಿ ನಸು ಹಳದಿ ಚುಕ್ಕೆಗಳು ಕಾಣಿಸಿಕೊಳ್ಳುತ್ತದೆ.
  • ನಂತರ ಅದು ದೊಡ್ಡದಾಗುತ್ತಾ ಎಲೆ ಎಲ್ಲಾ  ಹಳದಿಯಾಗಿ  ಉದುರುತ್ತದೆ.
  • ಇವು ರೋಗ ಬಂದಾಗ ಗಿಡದ ಎಲೆಗಳು ಉದುರುತ್ತವೆ.

ನಿಯಂತ್ರಣ:

ಶೇ 0.5 ರ ಬೋರ್ಡೋ ದ್ರಾವಣ ಸಿಂಪಡಿಸಿ
  • ಪ್ರಾರಂಭದಲ್ಲಿ ಈ ರೋಗ ನಿವಾರಣೆಗೆ ಬೊರ್ಡೋ ದ್ರಾವಣದ  ಸಿಂಪರಣೆ ಯನ್ನು ಶಿಫಾರಸು ಮಾಡಲಾಗುತ್ತಿತ್ತು.
  • ಇದರಲ್ಲಿ ಫಲಿತಾಂಶ ಸಿಗದ ಕಾರಣ  ಇದರ ಬದಲಿಗೆ ಬೇರೆ ಶಿಲೀಂದ್ರ ನಾಶಕದ ಅರಸುವಿಕೆ ಅಗತ್ಯವಾಯಿತು.
  • ಹಾಗೆಂದು ಇದು ಕೆಲವು ಕಡೆ ಫಲಿತಾಂಶ  ಕೊಟ್ಟಿದೆ.

 ಫೆಬ್ರವರಿ- ಮಾರ್ಚ್ ಹೂ ಮೊಗ್ಗು ಮೂಡುವ ಸಮಯ   ಮತ್ತು ಮೇ – ಜೂನ್  ಮಳೆ ಗಾಲಕೆ ಮುಂಚೆ, ಹಾಗೂ ಸಪ್ಟೆಂಬರ್ ಅಕ್ಟೋಬರ್ ತಿಂಗಳಲ್ಲಿ ಮಳೆ ಮುಗಿಯುವ ಸಮಯದಲ್ಲಿ  ಶೇ. 0.5  ರ  ಬೋರ್ಡೋ ದ್ರಾವಣವನ್ನು ಸಿಂಪಡಿಸಿದರೆ  ಶಿಲೀಂದ್ತದ ಬೀಜಾಂಕುರ ತಡೆಯಲ್ಲಡುತ್ತದೆ.

  •  ಅಂತರ್ ವ್ಯಾಪೀ ಶಿಲೀಂದ್ರ ನಾಶಕವಾದ  Bayleton ( Triadimefon ) ವನ್ನು ಮಳೆಗಾಲ ಪ್ರಾರಂಭವಾಗುವ ಸಮಯದಲ್ಲಿ  ಒಮ್ಮೆ
  • ಮಳೆಗಾಲ ಮುಗಿಯುವ ಸಮಯದಲ್ಲಿ ಒಮ್ಮೆ  ಸಿಂಪರಣೆ  ಮಾಡಿದರೆ  ರೋಗಕಾರಕ  ಶಿಲೀಂದ್ರ ನಿಯಂತ್ರಣಕ್ಕೆ  ಬರುತ್ತದೆ.’
  • ಈ ರೋಗಕ್ಕೆ ನಿರೋಧಕ ಶಕ್ತಿ ಪಡೆದ  ತಳಿಗಳನ್ನು ಬೆಳೆಸಿದರೆ  ಬೆಳೆಗಾರರು ನಿಶ್ಚಿಂತರಾಗಿರಬಹುದು.

ಈ ರೋಗ ಹತೋಟಿಗೆ ಶೇ 0.5 ರ ಬೋರ್ಡೋ ದ್ರಾವಣದಷ್ಟು ಅಗ್ಗದ ಶಿಲೀಂದ್ರ ನಾಶಕ ಬೇರೆ ಇಲ್ಲ. ಇದು ಬರೇ ಈ ರೋಗ ಮಾತ್ರವಲ್ಲ ಎಲೆ, ಕಾಯಿ ಕೊಳೆ ರೋಗವನ್ನು ಸಹ ತಡೆಯುವ ಕಾರಣ ಇದನ್ನು ಬಳಸಿ ನಿಯಂತ್ರಣ ಆಗದಿದ್ದ ಪಕ್ಷದಲ್ಲಿ ಮಾತ್ರ ಬೇರೆ ಬಳಕೆ ಮಾಡಿ.

 

Leave a Reply

Your email address will not be published. Required fields are marked *

error: Content is protected !!