ಕೆಂಪಡಿಕೆ ರಾಶಿ- 40,000 ಆಗಬಹುದು ಎನ್ನುತ್ತಾರೆ.

ಉತ್ತರ ಭಾರತದ ವ್ಯಾಪಾರಿಗಳು ಅಡಿಕೆ ಬೇಕು ಎಂದು ಕೇಳಿಕೊಂಡು ಬರುತ್ತಿದ್ದಾರೆ. ಈ ಕಾರಣದಿಂದ ಸ್ಥಳೀಯ ವ್ಯಾಪಾರಿಗಳು ದರವನ್ನು ಸ್ವಲ್ಪ ಸ್ವಲ್ಪವೇ ಏರಿಕೆ ಮಾಡುತ್ತಿದ್ದಾರೆ. ಒಂದು ವಾರದಿಂದ ಚಾಲಿ ದರ ಕ್ವಿಂಟಾಲಿಗೆ 300 ರೂ. ಹೆಚ್ಚಳವಾಗಿದೆ. ಕೆಂಪು ಅಡಿಕೆಯ ಬೆಲೆ 2000 ರೂ. ಹೆಚ್ಚಾಗಿದೆ. 3-4 ವರ್ಷಗಳಿಂದ ಕೆಂಪಡಿಕೆಯಲ್ಲಿ ದರದಲ್ಲಿ ಏನೂ ದೊಡ್ಡ ಏರಿಕೆ ಆಗದ ಕಾರಣ ಈ ಬಾರಿ ಸ್ವಲ್ಪ ಏರಿಕೆ ಆಗುವ ಸಾಧ್ಯತೆ ಇದೆ ಎನ್ನುತ್ತಾರೆ ಕೆಲವು  ವ್ಯಾಪಾರದ ಅನುಭವಿಗಳು.

  • ಕೆಲವು ಮೂಲಗಳ ಪ್ರಕಾರ ಈಗ ನಷ್ಟ ಮಾಡಿಕೊಂಡು ವ್ಯಾಪಾರ ಮಾಡುತ್ತಿದ್ದಾರೆ.
  • ಇದರಿಂದ ಅಡಿಕೆ ದಾಸ್ತಾನು ಕಡಿಮೆಯಾಗಿ ಮಾರುಕಟ್ಟೆಯಲ್ಲಿ  ಕೊರತೆ  ಉಂಟಾಗಿ ಮತ್ತೆ ಲಾಭ ಮಾಡಿಕೊಳ್ಳಬಹುದು ಎಂಬ ಯೋಚನೆಯಲ್ಲೂ ವ್ಯಾಪಾರಿಗಳು ಇದ್ದಾರೆ ಎನ್ನಲಾಗುತ್ತಿದೆ.
  • ಹೀಗೆ ಮಾಡಿದರೆ ಸಣ್ಣ ಪುಟ್ಟ ವ್ಯಾಪಾರಿಗಳು ತಲೆ ಎತ್ತದಂತೆ ಆಗಿ ದೊಡ್ದ ವ್ಯಾಪಾರಿಗಳ ಕೈಗೆ  ಮಾರುಕಟ್ಟೆ ಹಿಡಿತ ಸಿಗುತ್ತದೆ ಎಂಬುದೂ ಒಂದು ಲೆಕ್ಕಾಚಾರ.
  • ಒಟ್ಟಾರೆಯಾಗಿ ಅಡಿಕೆ ಮಾರುಕಟ್ಟೆ ಯಾರಿಗೂ ಬಿಡಿಸಲಾಗದ ಕಗ್ಗಂಟಾಗಿದೆ.
  • ಕಳೆದ ವಾರ  ಹಳೆ ಚಾಲಿ ರೂ. 29,400 ರಿಂದ 29,800 ಕ್ಕೆ  ನೆಗೆದಿದೆ. ಹೊಸ ಚಾಲಿ  24,500 ಇದ್ದುದು 25,000 ಕ್ಕೆ ಏರಿದೆ.
  •  ಕೆಂಪು ರಾಶಿ 37,100  ಇದ್ದುದು 38,700 ತನಕ ಏರಿಕೆಯಾಗಿದೆ.

ಯಾಕೆ ಹೆಚ್ಚಾಯಿತು:

  • ಇದಕ್ಕೆ ನಿರ್ದಿಷ್ಟ ಕಾರಣ ಎನು ಎಂಬುದು ಹೇಳುವುದು ಕಷ್ಟವಾದರೂ ಒಟ್ಟಾರೆ ಮೇಲೆ  ಉತ್ತರ ಭಾರತದಲ್ಲಿ ಬೇಡಿಕೆ.
  • ಕೆಲವು ಮೂಲಗಳ ಪ್ರಕಾರ ಅಡಿಕೆ  ದಾಸ್ತಾನು ಕಡಿಮೆ  ಇದೆ ಎನ್ನಲಾಗುತ್ತಿದೆ
  • ಗುಜರಾತ್ ಮೂಲದ ಕೆಲವು ವ್ಯಾಪಾರಿಗಳು ಇಂಡೋನೇಶಿಯಾ, ಶ್ರೀ ಲಂಕಾ ಮೂಲದ ಅಡಿಕೆಯನ್ನು ಆಮದು ಮಾಡಿಕೊಳ್ಳುತ್ತಿದ್ದಾರೆ.
  • ಇದು ಎಲ್ಲಾ ವರ್ಗದ ಅಡಿಕೆಗೆಲೂ ಸೇರಲ್ಪಟ್ಟಿರುವ ಕಾರಣ ಕಿಲೋ ಗೆ 230-250 ತನಕದ ಬೆಲೆಯಲ್ಲಿ ಇದು ಪೂರೈಸುವುದಿಲ್ಲ.
  • ಆಮದು ವ್ಯವಹಾರಕ್ಕೂ ಸಹ ಕೆಲವು ಕಷ್ಟಗಳು ಎದುರಾಗಿದ್ದು, ಹಿಂದಿನಂತೆ ಸಲೀಸಾಗಿ ವ್ಯವಹಾರ ಮಾಡಲಾಗುತ್ತಿಲ್ಲ.
  • ಚೀನಾದಲ್ಲಿ ಕೊರೋನಾ ವೈರಸ್ ಕಾಡ್ಗಿಚ್ಚಿನಂತೆ ಹಬ್ಬುತ್ತಿದ್ದು,ಇಡೀ ಜಗತ್ತೇ ಗಾಬರಿಯಲ್ಲಿದೆ.
  • ಈ ಗಾಬರಿಯಲ್ಲಿ ಆಮದು- ರಪ್ತು ವ್ಯವಹಾರ ನಡೆಸಲು ಅಡ್ಡಿಯಾಗುತ್ತಿದೆ.

ದೇಶ ದೇಶಗಳೊಳಗೆ ಸುಲತಿತ ವ್ಯವಹಾರ ಕಷ್ಟವಾಗಿದ್ದು, ಯಾವುದೇ ಸಾಮಾನು ಸರಂಜಾಮು ವ್ಯವಹಾರವೂ ಸಹ ಕಟ್ಟು ನಿಟ್ಟಿನ ತಪಾಸಣೆಯಲ್ಲೇ ನಡೆಯುತ್ತಿದೆ.

ಆಂತರಿಕ ಕಾರಣ:

  • ದೇಶೀಯ ಅಡಿಕೆ ಉತ್ಪಾದನೆ ಎಲ್ಲಾ ಕಡೆಗಳಲ್ಲೂ 30-40% ಕಡಿಮೆ ಎಂಬ ಲೆಕ್ಕಾಚಾರ ಇದೆ. ಈಗಾಗಲೇ ಕೊಯಿಲು ಮುಗಿದಿದ್ದು, ಹೊಸ ಅಡಿಕೆಯ ಅವಕ ತುಂಬಾ ಕಡಿಮೆ ಇದೆ.
  • 2017-18  ನೇ ಸಾಲಿನಲ್ಲಿ ಮತ್ತು  2018-19 ಸಾಲಿನಲ್ಲಿ ಅಡಿಕೆ  ಉತ್ಪಾದನೆ ಸರಾಸರಿ 25 % ಕಡಿಮೆ  ಇತ್ತು. ಅದರ  ಕಾರಣ ಮಾಮೂಲಿನ ಅವಕ ಇಲ್ಲದಾಗಿದೆ.
  • ಈ ವರ್ಷ ಇಲ್ಲಿ ತನಕ ಇಷ್ಟು ಹಾನಿ ಮಾಡಿರದಂತ  ಹೂ ಗೊಂಚಲು ತಿನ್ನುವ ಹುಳು  ಬಾಧಿಸಿ ಅಡಿಕೆಯ ಉತ್ಪಾದನೆ  ಕಡಿಮೆಯಾಗುವ ಸಾಧ್ಯತೆ  ಇದೆ.
  • ಇದೆಲ್ಲಾ ಒಟ್ಟಾರೆ ದಾಸ್ತಾನುಗಾರರಲ್ಲಿ- ಉತ್ಪನ್ನ ತಯಾರಕರಲ್ಲಿ  ಅಡಿಕೆ ಕೊರತೆ ಉಂಟಾಗುವಂತೆ ಮಾಡಿದೆ.

ಎಷ್ಟು ಏರಬಹುದು:

  • ಮಾರ್ಚ್ ತಿಂಗಳ ಮೊದಲ ವಾರದ ತನಕ ದರ ಎರಿಕೆಯಾಗಬಹುದು. ಹಾಗೆಂದು ದೊಡ್ಡ ಮೊತ್ತದ ಏರಿಕೆ ಅಲ್ಲ.
  • ಸ್ವಲ್ಪ ಸ್ವಲ್ಪವೇ ಏರಿಕೆಯಾಗಿ ಚಾಲಿಯ ದರ 30500 ತನಕ ಏರಿಕೆ ಅಗಬಹುದು.
  • ಕೆಂಪಡಿಕೆ 40,000 ತನಕ ಏರಿಕೆಯಾಗಬಹುದು ಎನ್ನುತ್ತಾರೆ.
  • ಯಾರೂ ಬಹಿರಂಗ ಹೇಳಿಕೆಯನ್ನು ಕೊಡಲು ಹಿಂಜರಿಯುತ್ತಿದ್ದಾರೆ.

ಮಾರ್ಚ್ ತಿಂಗಳ ನಂತರ ಬೆಲೆ ಸ್ವಲ್ಪ ಇಳಿಕೆಯಾಗಲೂ ಬಹುದು, ನಂತರ ಮೇ  ತರುವಾಯ ಧಾರಣೆ ಸ್ವಲ್ಪ ಚೇತರಿಕೆ ಆಗಬಹುದು ಎನ್ನುತ್ತಾರೆ.
ಏನೇ ಆದರೂ ಈ ವರ್ಷದ ಬೆಳೆ ಲೆಕ್ಕಾಚಾರದ ಅಂದಾಜಿನಲ್ಲಿ  ಚಾಲಿ ಬೆಲೆ ರೂ. 30,000  ದಾಟಿ 32,000 ದ ವರೆಗೂ ಕೆಂಪು  ರಾಶಿ  40,000 ಸನಿಹಕ್ಕೆ ಬರಬಹುದು ಎನ್ನುತ್ತಾರೆ.
ಬೆಳೆಗಾರರು 30,000 ದಾಟಿದ ತರುವಾಯ ಇನ್ನೂ ಹೆಚ್ಚಿನ ಬೆಲೆಗೆ ಕಾಯುವ ಬದಲು ಸ್ವಲ್ಪ ಸ್ವಲ್ಪ ಮಾರಾಟ ಮಾಡುವುದು ಉತ್ತಮ.
 

Leave a Reply

Your email address will not be published. Required fields are marked *

error: Content is protected !!