hollavenur

ಕೆಂಪು ಅಡಿಕೆ

ಚಾಲಿ ದರ ಹಿಂದೆ- ಕೆಂಪು ಸ್ಥಿರ: ದಿನಾಂಕ:21-12-2021 ರ ಧಾರಣೆ.

ಹೊಸ ಚಾಲಿ ಮಾರುಕಟ್ಟೆಗೆ   ಬರಲಾರಂಭಿಸಿದೆ. ಚಾಲಿಯ ಗುಣ ಮಟ್ಟದ ಮೇಲೆ ಬೆಳೆಗಾರರಿಗೆ ಹೆಚ್ಚು ಖಾತ್ರಿ ಇಲ್ಲದ ಕಾರಣ ಬಿದ್ದ ಒದ್ದೆಯಾದ ಅಡಿಕೆಯನ್ನು ಹೇಗೂ ದರ ಒಳ್ಳೆಯದಿದೆಯಲ್ಲಾ ಎಂದು ಮಾರಾಟ ಮಾಡುತ್ತಿದ್ದಾರೆ. ಮೊದಲೇ ಹೇಳಿದಂತೆ ಚಾಲಿಗೆ ಖಾಸಗಿ ವ್ಯಾಪಾರಸ್ಥರಲ್ಲಿ ದರ ಕಡಿಮೆ, ಸಹಕಾರಿಗಳಲ್ಲಿ ಸ್ಥಿರವಾಗಿಯೂ ಇದೆ. ನಾಳೆ ನಾಡಿದ್ದಿನಲ್ಲಿ ಸಾಂಸ್ಥಿಕ ಖರೀದಿದಾರರೂ ಸ್ವಲ್ಪ ದರ ಇಳಿಸುವ ಮುನ್ಸೂಚನೆ ಇದೆ. ಕೆಂಪು ಅಡಿಕೆ ಬೆಳೆಗಾರರಲ್ಲಿ ದೊಡ್ಡ ಬೆಳೆಗಾರರು ಮತ್ತು ಚೇಣಿಯವರು ಮಾರಾಟಕ್ಕೆ  ದರ ಯಾವಾಗ ಏರುತ್ತದೆ ಎಂದು ಕಾಯುತ್ತಿದ್ದಾರೆ. ಈ…

Read more
ಹೊಸ ರಾಸಿ ಅಡಿಕೆ

ದೀಪಾವಳಿ- ಅಡಿಕೆ ಆಶಾಧಾಯಕ- ಕರಿಮೆಣಸು ನಿರಾಸೆ. 02-11-2021 ರ ಧಾರಣೆಗಳು.

ನವೆಂಬರ್ ತಿಂಗಳ ಮೊದಲ ದಿನ, ದಿನಾಂಕ:02-11-2021  ರ ಮಂಗಳವಾರ ಅಡಿಕೆ ಮಾರುಕಟ್ಟೆ ಆಶಾದಾಯಕವಾಗಿಯೇ ಮುಂದುವರಿದಿದೆ.ಕರಿಮೆಣಸು ಮಾತ್ರ ಯಾಕೋ ಸ್ವಲ್ಪ ಹಿಮ್ಮೆಟ್ಟಿದೆ. ಈ ವಾರದಲ್ಲಿ ಇನ್ನು ಎರಡು ದಿನ ಮಾರುಕಟ್ಟೆ ಇರುತ್ತದೆ. ಆದರೆ ಈ ದಿನಗಳಲ್ಲಿ ಅಡಿಕೆ ಅವಕ ತುಂಬಾ ಕಡಿಮೆ ಇರುತ್ತದೆ. ಹಾಗಾಗಿ ಬಿಡ್ಡಿಂಗ್ ಕೂಡಾ  ಅಷ್ಟು ಹುಮ್ಮಸ್ಸಿನಲ್ಲಿ ಇರುವುದಿಲ್ಲ.  ಆದಾಗ್ಯೂ ಮಾರುಕಟ್ಟೆ ಸ್ಥಿರವಾಗಿ ಉಳಿಯಲಿದೆ ಎಂಬ ಮಾಹಿತಿಗಳಿವೆ. ಕರಿಮೆಣಸು ಶುಕ್ರವಾರದ ಹುರುಪಿಗೆ ಹೋಲಿಸಿದರೆಮತ್ತೆ ಸ್ವಲ್ಪ ಹಿಂಜರಿಕೆಯಾಗಿದೆ. ಇನ್ನೂ ಸ್ವಲ್ಪ ಹಿಂದೆ ಬರಬಹುದು ಎಂಬ ಮಾಹಿತಿಗಳಿವೆ. ಅದು…

Read more
ಗಾಳಿ ಮಳೆ

ಫೆಬ್ರವರಿ ತನಕವೂ ಮಳೆ ಬರುತ್ತದೆಯೇ?ಆತಂಕ ಬೇಡ.

ಕೆಲವು ವರದಿಗಳ ಪ್ರಕಾರ ಮುಂದಿನ ಫೆಬ್ರವರಿ ತನಕವೂ ಮಳೆ ಬರಲಿದೆ ಎಂಬ ಸುದ್ದಿಗಳಿವೆ. ಹೀಗೆ ಆದರೆ ಕೃಷಿಕರಿಗೆ ಅಪಾರ ನಷ್ಟವಾಗುತ್ತದೆ. ಹಾಗೆ ಆಗದೆ ಇರಲಿ ಎಂಬುದೇ ಎಲ್ಲರ ಆಶಯ. ಈ ಬಗ್ಗೆ ಕೆಲವು ಕಡೆ ಹುಡುಕಾಡಿದಾಗ ರೈತರು ಅಂತಹ ಆತಂಕ ಪಡಬೇಕಾಗಿಲ್ಲ. ಆಗಾಗ ಕೆಲವು ವಿಶೇಷ ದಿನಗಳ ಸಮಯಕ್ಕೆ ಕಾಕತಾಳೀಯವಾಗಿ ವಾಯುಭಾರ ಕುಸಿತ ಉಂಟಾಗಿ ಮಳೆ ಬರುವ ಸಾಧ್ಯತೆಗಳು ಕಂಡು ಬರುತ್ತವೆ. ಮಳೆ ಬೇಕು ಆದರೆ ಅದು ಯಾವಾಗ ಬರಬೇಕು ಆಗಲೇ ಬಂದರೆ ಅನುಕೂಲ. ಈ ವರ್ಷ…

Read more
ಕೆಂಪು ಅಡಿಕೆ

ಅಡಿಕೆ ಧಾರಣೆ – ದಿನಾಂಕ- 04-10-2021

ರಾಜ್ಯದ ವಿವಿಧ ಅಡಿಕೆ ಬೆಳೆಯುವ ಪ್ರದೇಶಗಳ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿ ಇಂದು ದಿನಾಂಕ 04-10-2021  ರಂದು ಅಡಿಕೆ ಧಾರಣೆ ಹೀಗಿದೆ. ಒಟ್ಟಾರೆಯಾಗಿ ಇಂದು ಅಡಿಕೆ ಮಾರುಕಟ್ಟೆ ಸ್ವಲ್ಪ ನಿಸ್ತೇಜ. ಕರಾವಳಿ ಸೇರಿದಂತೆ ಎಲ್ಲಾ ಕಡೆಯಲ್ಲಿ ಕ್ಯಾಂಪ್ಕೋ ದ ಬಿಡ್ದಿಂಗ್ ಹೆಚ್ಚಿನ ಪ್ರಮಾಣದಲ್ಲಿತ್ತು. ಖಾಸಗಿಯವರು ಹಣ ಇಲ್ಲ ಎಂಬ ಕಾರಣದಿಂದ ಬಿಡ್ಡಿಂಗ್ ನಿಂದ ಹಿಂದೆ ಸರಿದ ಸುದ್ದಿಗಳಿವೆ. ಈ ತನಕ ಅಧಿಕ ದರದಲ್ಲಿ ಖರೀದಿ ಮಾಡಿದ ಮಾಲು ವ್ಯವಹಾರ ಆಗದೆ ಹಣದ ತಾಪತ್ರಯ ಉಂಟಾಗಿದೆ. ಹಾಗಾಗಿ ಖರೀದಿಗೆ…

Read more
ಚಾಲಿ ಅಡಿಕೆ ಟೆಂಡರ್

ರಾಜ್ಯದಲ್ಲಿ ಇಂದು ಅಡಿಕೆ ಧಾರಣೆ – ದಿ. 28-09-2021.

ಅಡಿಕೆ ಧಾರಣೆ ಚಾಲಿಯನ್ನು ಬಿಟ್ಟು ಉಳಿದವು ಹಿಮ್ಮುಖ ಚಲನೆಯನ್ನು ತೋರಿಸುತ್ತಿದೆ. ಚಾಲಿ ಅಡಿಕೆ ಖರೀದಿಯಲ್ಲಿ ಖಾಸಗಿಯವರ ಉತ್ಸಾಹ ಕಡಿಮೆಯಾಗಿದೆ. ಸಹಕಾರಿಗಳು ಅದರಲ್ಲೂ ಕ್ಯಾಂಪ್ಕೋ ದರ ಕರಾವಳಿಯಲ್ಲಿ ಉತ್ತಮ ಚಾಲಿಗೆ ರೂ.50,000 ಕ್ಕೆ ಖರೀದಿ ಮಾಡಿದೆ. ಖಾಸಗಿಯವರೂ ಸಹ ಕ್ಯಾಂಪ್ಕೋ ದರಕ್ಕೆ ಸಮನಾಗಿಯೇ ಖರೀದಿಸಿವೆ. 50,000 ಕ್ಕಿಂತ ಹೆಚ್ಚಿನ ದರಕ್ಕೆ ಖರೀದಿ ಮಾಡಿಲ್ಲ. ಕೆಂಪು ರಾಶಿ ಶಿರಸಿಯಲ್ಲಿ ಗರಿಷ್ಟ 52,399,  ಯಲ್ಲಾಪುರದಲ್ಲಿ, 53,450 ಕ್ಕೆ ಖರೀದಿ ನಡೆದಿದೆ. ಚಾಲಿ ಸಹ 48,600 ಅತ್ಯಧಿಕ ದರವಾಗಿರುತ್ತದೆ. ಕೆಲವು ವರ್ತಕರು ಸ್ವಲ್ಪ…

Read more
ಕೆಂಪಡಿಕೆ

ಅಡಿಕೆ ಧಾರಣೆ- ದಿನಾಂಕ 18-09-2021.

ದಿನಾಂಕ 18-09-2021 ರಂದು ರಾಜ್ಯದ ವಿವಿಧ ಅಡಿಕೆ ಬೆಳೆಯುವ ಪ್ರದೇಶಗಳ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿ ಟೆಂಡರ್ ಆದ ದರ ವಿವರ ಹೀಗಿದೆ. ಕೆಲವು ಕಡೆ ಈ ದಿನ ಟೆಂಡರ್ ನಡೆದಿಲ್ಲ. ಅಲ್ಲಿ ಹಿಂದಿನ ದಿನದ ದರವನ್ನೇ ನಮೂದಿಸಲಾಗಿದೆ. ಊರು ದಿನಾಂಕ   ವಿಧ  ಕನಿಷ್ಟ  ದರ ಗರಿಷ್ಟ ದರ  ಸರಾಸರಿ ದರ ಬಂಟವಾಳ: 18/09/2021, Coca, 7, 10000, 22500, 20000 BANTWALA, 18/09/2021, New Variety, 2, 23500, 49000, 44500 BANTWALA, 18/09/2021, Old Variety,…

Read more

ಸಾವಯವ ತ್ಯಾಜ್ಯ ಹುಡಿ ಮಾಡಬೇಕೇ? ಯಂತ್ರ ಬಾಡಿಗೆಗೆ ಇದೆ.

ಸಾವಯವ ತ್ಯಾಜ್ಯಗಳಾದ ತೆಂಗಿನ ಗರಿ, ಅಡಿಕೆ ಗರಿ ,ಸೊಪ್ಪು ಸದೆ ಇತ್ಯಾದಿಗಳನ್ನು  ಹುಡಿ ಮಾಡಿ ಬಳಕೆ ಮಾಡಿದರೆ ಅದು ವೇಗವಾಗಿ ಕರಗಿ ಗೊಬ್ಬರವಾಗುತ್ತದೆ. ಹೀಗೆ ಹುಡಿ ಮಾಡಲು ಯಂತ್ರಗಳು ಇವೆ. ಈ ಯಂತ್ರಗಳು ಭಾರೀಪ್ರಮಾಣದ ತ್ಯಾಜ್ಯಗಳನ್ನು  ಕೆಲವೇ ಗಂಟೆಗಳಲ್ಲಿ ಹುಡಿ ಮಾಡಿಕೊಡುತ್ತದೆ. ಪ್ರಸ್ತುತ ರೈತಾಪಿ ವರ್ಗದ ಜನರಿಗೆ ಸರ್ಕಾರವು ರಸಗೊಬ್ಬರದ ದರ ಏರಿಕೆ ಆಗಿರುವಂತಹ ಹಿನ್ನೆಲೆಯಲ್ಲಿ ದೇಶದ ಕೃಷಿ ಸಂಶೋಧನಾ ಅಧ್ಯಯನ ನಡೆಸಿ ಸಾವಯವ ಕೃಷಿಯನ್ನು ಅವಲಂಬಿಸಿದರೆ ಹೆಚ್ಚಿನ ಆದಾಯವನ್ನು ಗಳಿಸಬಹುದೆಂದು ಎಲ್ಲ ಪ್ರಗತಿಪರ ರೈತರು ಸಾವಯವ ಕೃಷಿಯನ್ನು…

Read more

ಸಾಗುವಾನಿ (ತೇಗ)ಮರದ ಗೆಲ್ಲು ಕಡಿದರೆ ಏನಾಗುತ್ತದೆ?

ಮರಮಟ್ಟುಗಳಲ್ಲಿ ಚಿನ್ನದ ಮರವೆಂದೇ ಖ್ಯಾತವಾದ ಸಾಗುವಾನಿ (ತೇಗ) ಮರವನ್ನು ನೇರವಾಗಿ ಬೆಳೆಯಲಿ ಎಂದೋ, ಇತರ ಉದ್ಡೆಶಗಳಿಗಾಗಿಯೋ ಗೆಲ್ಲು ಸವರುತ್ತೇವೆ. ಗೆಲ್ಲು ಸವರುವುದರಿಂದ ಮರದ ಗುಣಮಟ್ಟ ಏನಾಗುತ್ತದೆ ಎಂಬುದರ ಪೂರ್ಣ ಮಾಹಿತಿ. ಬಹಳ ಜನ ನಮ್ಮ ಹಲಸಿನ ಮರ ಸಾಗುವಾನಿ ಮರ ಹೆಬ್ಬಲಸಿನ ಮರದಲ್ಲಿ ಒಡಕು( ಬಿರುಕು) ಬಂದು ಯಾವುದಕ್ಕೂ ಆಗದಂತಾಯಿತು ಎಂದು ಹೇಳುತ್ತಾರೆ.  ಇದಕ್ಕೆ ಕಾರಣ ನಾವೇ ಹೊರತು ಮರ ಅಲ್ಲ. ಸಾಗುವಾನಿ ಇರಲಿ, ಇನ್ಯಾವುದೇ ನಾಟಾ ಉದ್ದೇಶದ ಮರಮಟ್ಟುಗಳು  ಇರಲಿ ನಾವು ತಿಳಿದೋ ತಿಳಿಯದೆಯೋ  ಗೆಲ್ಲುಗಳನ್ನು…

Read more
ನೂತನ ಮುಖ್ಯಮಂತ್ರಿಗಳ ಪ್ರಮಾಣ ವಚನ ಸ್ವೀಕಾರ.

ರೈತರ ಮಕ್ಕಳಿಗೆ ಸ್ಕಾಲರ್ಶಿಪ್ ನೂತನ ಮುಖ್ಯ ಮಂತ್ರಿಗಳ ಕೊಡುಗೆ.

ಕರ್ನಾಟಕದ ಮಾಜಿ ಮುಖ್ಯಮಂತ್ರಿ ಶ್ರೀ ಬಿ ಎಸ್ ಯಡಿಯೂರಪ್ಪನವರೇ  ರೈತರಿಗೆ ಕೊಡುವುದರಲ್ಲಿ ಎತ್ತಿದ  ಕೈಯಾದರೆ ಈಗಿನ ಹೊಸ ಮುಖ್ಯಮಂತ್ರಿಗಳಾಗಿ ಅಧಿಕಾರ  ಸ್ವೀಕರಿಸಿದ  ಬಸವರಾಜ ಬೊಮ್ಮಾಯಿಯವರೂ ಅವರಿಗಿಂತ ಏನೂ ಕಡಿಮೆ ಇಲ್ಲ. ಇಂದು (28-07-2021) ರಂದು ಕರ್ನಾಟಕದ ಮುಖ್ಯಮಂತ್ರಿ  ಸ್ಥಾನವನ್ನೇರಿದ  ಶ್ರೀ ಬಸವರಾಜ್ ಬೊಮ್ಮಾಯಿಯವರು  ರೈತರಿಗೆ ಏನು ಕೊಡುವುದು ಎಂದು ಯೋಚಿಸಿ ಹೊಸತಾಗಿ ಯಾರೂ ಕೊಡದೆ ಇರುವ ಹೊಸ ಯೋಜನೆಗೆ ಚಾಲನೆ ನೀಡಿದ್ದಾರೆ. ರೈತರ ಮಕ್ಕಳ ಉನ್ನತ ವ್ಯಾಸಂಗಕ್ಕಾಗಿ ರೂ.1000 ಕೋಟಿಯನ್ನು  ಮಿಸಲಿಟ್ಟು ಹೊಸ ದಾಖಲೆ ಮಾಡಿದ್ದಾರೆ. ಶ್ರೀಯುತ  ಎಸ್…

Read more
ಉತ್ತಮ ಚಾಲಿ ಅಡಿಕೆ

ಅಡಿಕೆಗೆ ಮತ್ತೆ ಬೆಲೆ ಏರಿಕೆ ಪ್ರಾರಂಭ- ಇಂದು ದೊಡ್ಡ ಜಂಪ್.

ಕಳೆದ ಮೂರು ನಾಲ್ಕು ದಿನಗಳಿಂದ ಬೆಳಗ್ಗೆ ಗೂಬೆ ಕೂಗಲು ಪ್ರಾರಂಭವಾಗಿದೆ. ಚಾಲಿ 43,000 ದಲ್ಲಿದ್ದ ಬೆಲೆ 45,000.ಕ್ಕೆ ಏರಿದೆ. ಮುನ್ಸೂಚನೆಗಳು ಅಡಿಕೆ ಧಾರಣೆಯನ್ನು ಮೇಲೆ ಒಯ್ಯುವ ಸಂಭವವಿದೆ. ಚಾಲಿ ಅಡಿಕೆಗೆ ಉತ್ತರ ಭಾರತದಿಂದ ಬೇಡಿಕೆ ಪ್ರಾರಂಭವಾಗಿದೆ ಎಂಬ ವದಂತಿ ಇದೆ. ಕೊರೋನಾ ಲಾಕ್ ಡೌನ್ ಸಮಯದಿಂದಲೂ ವ್ಯಾಪಾರಿಗಳಲ್ಲಿ  ದಾಸ್ತಾನು ಉಳಿದಿದೆ. ಆ ಕಾರಣದಿಂದ ಬೆಲೆ ಏರಿಕೆ ಆಗುವ ಎಲ್ಲಾ ಸಾಧ್ಯತೆಗಳೂ ಕಂಡು ಬರುತ್ತಿದೆ. ಚಾಲಿ ಅಡಿಕೆಗೆ ಜೂನ್ ತಿಂಗಳ ಕೊನೆಗೆ ಬೆಲೆ ಏರಿಕೆ ಪ್ರಾರಂಭವಾದುದು, ಜುಲೈ ಮೊದಲ…

Read more
error: Content is protected !!