ಈ ದಾಳಿಂಬೆ ಹಣ್ಣು ಉಚಿತವಾಗಿ ಕೊಟ್ಟರೂ ಗಿರಾಕಿ ಇಲ್ಲ. ಯಾಕೆ?

ಈ  ದಾಳಿಂಬೆ ಹಣ್ಣು ಉಚಿತವಾಗಿ ಕೊಟ್ಟರೂ ಗಿರಾಕಿ ಇಲ್ಲ. ಯಾಕೆ?

ಇಲ್ಲಿ ತೋರಿಸಿದ ದಾಳಿಂಬೆ ಹಣ್ಣು ನೋಡಲು ಆಕರ್ಷಕವಾಗಿಲ್ಲ. ಹಾಗಾಗಿ ಉಚಿತವಾಗಿ ಕೊಟ್ಟರೂ ಕೊಳ್ಳುವುದಕ್ಕೆ ಗಿರಾಕಿ ಇಲ್ಲ. ಇದನ್ನು ಹಣ್ಣು ಮಾರುವ ಅಂಗಡಿ,ಸೂಪರ್ ಮಾರ್ಕೆಟ್ ನಲ್ಲಿ ಮಾರಲಿಕ್ಕಾಗುವುದಿಲ್ಲ. ಇದನ್ನು ರೈತರ ಹೊಲದಿಂದ ಕೊಳ್ಳುವವರೂ ಇಲ್ಲ. ಇದನ್ನು ಉಚಿತವಾಗಿ ಕೊಟ್ಟಂತೆ ರೈತರು ಮಾರಬೇಕು. ರಸ್ತೆ ಬದಿಯಲ್ಲಿ  ಮಂದ ಬೆಳಕಿನಲ್ಲಿ ಅಗ್ಗ- ಭಾರೀ ಅಗ್ಗ  ಎಂದು ಬೊಬ್ಬೆ ಹಾಕಿ ಮಾರಾಟ ಮಾಡಬೇಕು.  ಇದು  ನಮ್ಮ ಮನೋಸ್ಥಿತಿ. ಕೃಷಿಕರಿಗೆ ಗ್ರಾಹಕರು ಅತೀ ಮುಖ್ಯ. ಗ್ರಾಹಕ ಎಂದರೆ ಬಳಕೆದಾರ. ರೈತ  ಬೆಳೆ ಬೆಳೆಯುವಾಗ ಬಳಕೆದಾರರ…

Read more
ವೃತ್ತಿ ಪ್ರೌಢತೆ ಪಡೆದುಕೊಂಡ ಓರ್ವ ಕಾಫೀ, ಮೆಣಸು ಭತ್ತದ ಕೃಷಿಕ ವೈ ಎಸ್ ರುದ್ರಪ್ಪ, ಸಕಲೇಶಪುರ, ಬಾಗೆಯ ಕೃಷಿಕರು.

ಕೃಷಿಕರು ತಮ್ಮ ವೃತ್ತಿಕ್ಷೇತ್ರದಲ್ಲಿ ಪ್ರೌಢತೆ ಬೆಳೆಸಿಕೊಳ್ಳದಿದ್ದರೆ ಉಳಿಗಾಲ ಇಲ್ಲ.

ಒಬ್ಬ ಮೆಕ್ಯಾನಿಕ್ ಶಿಕ್ಷಣ ಕಡಿಮೆಯಾದರೂ ಸಹ ತನ್ನ ವೃತ್ತಿ ಕ್ಷೇತ್ರದಲ್ಲಿ ಪ್ರೌಢತೆಯನ್ನು ಬೆಳೆಸಿಕೊಳ್ಳುತ್ತಾ ಮುಂದುವರಿಯುತ್ತಿರುತ್ತಾನೆ. ಇಂತಹ ಪಾರ್ಟ್ ಹಾಳಾದ ಕಾರಣ ಈ ಸಮಸ್ಯೆ ಉಂಟಾಗಿದೆ ಎಂಬುದಾಗಿ ನಿಖರವಾಗಿ ಹೇಳುತ್ತಾನೆ. ಆದರೆ ನಮ್ಮ ಕೃಷಿಕರು ಈ ವಿಷಯದಲ್ಲಿ ಇನ್ನೂ ಪ್ರೌಢರಾಗಿಲ್ಲ. ಪ್ರತೀಯೊಂದು ವಿಚಾರಕ್ಕೂ ಇನ್ನೊಬ್ಬನಲ್ಲಿ ಕೇಳುವ, ಅವನ ಸಂಭಾವನೆ ರಹಿತ ಉಚಿತ ಸಲಹೆ ಕೇಳುವ ಬಹಳಶ್ಟು ಸಂದೇಹಗಳಲ್ಲೇ  ಮುಂದುವರಿಯುವ ಮನೋಸ್ಥಿತಿ ನಮ್ಮ ಕೃಷಿಕ ವರ್ಗದಲ್ಲಿ ಕಾಣಿಸುತ್ತಿದೆ. ಹತ್ತು ಜನರ ಅಭಿಪ್ರಾಯ ಕೇಳಿ ತನಗೆ ತೋಚಿದಂತೆ ಅದನ್ನು ಅಳವಡಿಸಿಕೊಳ್ಳುವುದು ನಮ್ಮಲ್ಲಿ…

Read more
ಸಕ್ಕರೆ ಹೆಚ್ಚಾಗಿದೆ- ರೈತರು ಕಬ್ಬು ಬೆಳೆಯಬೇಡಿ

ಸಕ್ಕರೆ ಉತ್ಪಾದನೆ ಹೆಚ್ಚಿದೆ- ರೈತರು ಕಬ್ಬು ಬೆಳೆಯಬೇಡಿ. ಸರಕಾರದ ಹೇಳಿಕೆ.

ದೇಶದಲ್ಲಿ ಸಕ್ಕರೆ ಉತ್ಪಾದನೆ ಹೆಚ್ಚಾಗಿದೆ. ಹಾಗಾಗಿ ಕಬ್ಬು ಬೆಳೆಯುವ ರೈತರು ಇನ್ನು ಬೆಳೆಯಬೇಡಿ. ಬೆಳೆ ಪರಿವರ್ತನೆ ಮಾಡಿ, ಇಂಧನ ಮತ್ತು ಶಕ್ತಿ ಉತ್ಪಾದನೆ ಕಡೆಗೆ ಗಮನಹರಿಸಬೇಕು ಎಂಬುದು ಕೇಂದ್ರ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಮಂತ್ರಿಗಳಾದ ನಿಥಿನ್ ಗಡ್ಕರಿಯವರ ಮಾತು.  ಭಾರತ ದೇಶದಲ್ಲಿ ಕಬ್ಬು ಬೆಳೆ ಹೆಚ್ಚಾಗುತ್ತಿದ್ದು, ಎಲ್ಲರೂ ಸಕ್ಕರೆ ಕಾರ್ಖಾನೆಗೆ ಕಬ್ಬು ಹಾಕುತ್ತಾರೆ. ಉತ್ಪಾದಿಸಿದ ಸಕ್ಕರೆ ಮಿಗತೆಯಾಗಿ ಕಾರ್ಖಾನೆಗಳು ನಷ್ಟಕ್ಕೊಳಗಾಗುತ್ತಿವೆಯಂತೆ. ನಮ್ಮ ದೇಶದಲ್ಲಿರುವ ಬಹುತೇಕ ಸಕ್ಕರೆ ಕಾರ್ಖಾನೆಗಳು ಈಗ ಸಕ್ಕರೆ ಉತ್ಪಾದನೆಗಾಗಿ ಕೆಲಸ ಮಾಡುತ್ತಿಲ್ಲ. ಬದಲಿಗೆ…

Read more
ಹೆಸರು

ಅಪೌಷ್ಟಿಕತೆಯತ್ತ ಜನತೆ- ಬೇಳೆ ಕಾಳು ಬೆಳೆಗಾರರ ಕಡೆಗಣನೆ.

ಮನುಷ್ಯರಿಗೆ ಮೆದುಳು ಶಕ್ತಿ ಚುರುಕು ಆಗಲು, ದೇಹದಲ್ಲಿ ಅಂಥಃಶಕ್ತಿ ಹೆಚ್ಚಲು ಬೇಕಾಗುವುದು ಪೌಷ್ಟಿಕ ಆಹಾರ. ವಿಟಮಿನ್ ಗಳು, ಪ್ರೋಟೀನುಗಳು ಹೇರಳವಾಗಿರುವ ಬೇಳೆ ಕಾಳುಗಳ ಬಳಕೆಯಿಂದ ಮಾತ್ರ ಇದು ಸಾಧ್ಯ. ಇವುಗಳ ಬೆಳೆ ಕಡಿಮೆಯಾಗುತ್ತಿದ್ದು, ಭವಿಷ್ಯದಲ್ಲಿ ಇದು ಮಾನವ ಸಂಪನ್ಮೂಲದ ಮೇಲೆ ಪರಿಣಾಮ ಬೀರಲಿದೆ. ಇದಕ್ಕೆಲ್ಲಾ ಕಾರಣ ದೇಶದಲ್ಲಿ ಈ ಬೆಳೆಗಳನ್ನು ಬೆಳೆಸುವವರ ಕಡೆಗಣನೆ. ಬೇಳೆ ಕಾಳುಗಳು ಮಾನವನಿಗೆ ಶಾರೀರಿಕ ಸಧೃಢತೆಯನ್ನು ಕೊಡುತ್ತವೆ. ಇದು ಪೌಷ್ಟಿಕ ಆಹಾರವಾಗಿದ್ದು, ಇದರ ಬಳಕೆ ಕಡಿಮೆ ಮಾಡಿದರೆ ನಮ್ಮ ಶಾರೀರಿಕ ಅಂಥಃ ಶಕ್ತಿ…

Read more
ಅಡಿಕೆ ಬೆಳೆಗಾರರನ್ನು ನಿದ್ದೆಗೆಡಿಸುತ್ತಿರುವ ಹಳದಿ ಎಲೆ ರೋಗದ ಅಡಿಕೆ ಮರ

ಕೃಷಿಕರ ಮನೋಸ್ಥಿತಿ ಕುರಿತು ರಮೇಶ್ ದೇಲಂಪಾಡಿಯವರ ಅರ್ಥಗರ್ಭಿತ ಮಾತು

ಒಂದು ಕಾಲದಲ್ಲಿ ಜನರಿಗೆ ಅದರಲ್ಲೂ ಕೃಷಿಕರಿಗೆ ತಿಳಿದವರು ಹೇಳಿದ ವಿಚಾರದಲ್ಲಿ ನಂಬಿಕೆ ಇತ್ತು. ನಂಬಿಕಾರ್ಹವಾದ ಸಲಹೆಗಳನ್ನೇ ನೀಡುವವರೂ ಇದ್ದರು. ಇಂದು ಜನತೆಗೆ ನಂಬಿಕೆ ಕಡಿಮೆಯಾಗಿದೆ. ಜನರ ಮನೋಸ್ಥಿತಿಗನುಗುಣವಾಗಿ ಉಳಿದೆಲ್ಲವೂ. ಈ ಬಗ್ಗೆ ಸುಳ್ಯದ ರಮೇಶ್ ದೇಲಂಪಾಡಿ ಎಂಬ ಕೃಷಿಕರು ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಅಭಿಪ್ರಾಯಗಳನ್ನು ಹೀಗೆ ವ್ಯಕ್ತಪಡಿಸುತ್ತಾರೆ. ಶ್ರೀಯುತರು ತಮ್ಮ ಬರಹದಲ್ಲಿ ಕೆಲವು ಸೂಕ್ಷ್ಮ ವಿಚಾರಗಳನ್ನು ಸೂಚ್ಯವಾಗಿವಾಗಿ ಹೇಳಿದ್ದಾರೆ. ನಾವು  ಬದಲಾವಣೆಯಾದರೆ  ಮಾತ್ರ ಅಭಿವೃದ್ದಿ ಸಾಧಿಸಲು ಸಾಧ್ಯ ಎಂಬುದನ್ನು ತಮ್ಮ ಈ ಬರಹದಲ್ಲಿ ದ್ವನಿ ಅರ್ಥದಲ್ಲಿ ವಿವರಿಸಿದ್ದಾರೆ….

Read more
ಮದುವೆಯ ಸಂಧರ್ಭ

ಕೃಷಿಕರ ಮಕ್ಕಳಿಗೆ ಮದುವೆ ಭಾಗ್ಯ- ಯಾಕೆ ಕಷ್ಟವಾಗುತ್ತಿದೆ? ಪರಿಹಾರ ಏನು?

ಬಹಳ ಜನ ಯುವಕರಿಗೆ ಕೃಷಿ ವೃತ್ತಿಯೇ ಆಗಬಹುದು ಎಂಬ ಆಸೆ ಇದೆ. ಅದರೆ ನಮಗೆ ಹೆಣ್ಣು ಸಿಗದೆ ಮದುವೆ ಭಾಗ್ಯದಿಂದ ವಂಚಿತರಾದೇವೋ ಏನೋ ಎಂಬ ಆತಂಕದಿಂದ, ಬೇರೆ ಉದ್ಯೋಗವನ್ನೇ  ಹುಡುಕುತ್ತಿದ್ದಾರೆ.ವಾಸ್ತವಾಗಿ ಪರಿಸ್ಥಿತಿಯೂ ಹೀಗೇ ಇದೆ. ಬರೇ ಕೃಷಿಕರಿಗೆ ಮಾತ್ರವಲ್ಲ. ಸಮಾಜದಲ್ಲಿ ಯಾರಿಗೆ ಖಾತ್ರಿಯ ಸಂಪಾದನೆ ಮೂಲ ಇಲ್ಲವೋ,ಯಾರಿಗೆ ಮೈ ಕೈ ಕೊಳಕು ಆಗದ ಬಿಳಿಕಾಲರಿನ ಉದ್ಯೋಗ ಇಲ್ಲವೋ, ಅವರಿಗೆಲ್ಲಾ ಈಗ ಮದುವೆಯೆಂಬ ಜೀವನದ ಅತ್ಯಂತ ಪ್ರಮುಖ ಘಟ್ಟ ಅನಿಶ್ಚಿತ. ಸರಕಾರಿ ಉದ್ಯೋಗ, ಸಾಪ್ಟ್ವೇರ್ ಮಂತಾದ ಅಧಿಕ ಸಂಪಾದನೆಯ…

Read more
ಸಾವಯವ ಕೃಷಿಕ -Organic farmer -

ಸಾವಯವ ಬೇಸಾಯ ರಾಷ್ಟ್ರೀಯ ನಷ್ಟಕ್ಕೆ ಒಂದು ಕೊಡುಗೆಯೇ?.

ಬಹಳ ಜನ ಸಾವಯವ ಬೇಸಾಯ ಕ್ರಮವನ್ನು ತಮ್ಮ ಮೈಮೇಲೆ ಎಳೆದುಕೊಂಡವರಂತೆ ವರ್ತಿಸುತ್ತಾರೆ. ಇವರಲ್ಲಿ ಗರಿಷ್ಟ ಜನ ರಜಾ ಕಾಲದ ಕೃಷಿಕರು. ಮತ್ತೆ ಕೆಲವರು ಕಾಟಾಚಾರಕ್ಕೆ ಕೃಷಿ ಮಾಡುವವರು. ನಾನು ಸುಮಾರು 20 ವರ್ಷಕ್ಕೆ ಹಿಂದೆ ಹಣ ಕೊಟ್ಟು ಭೂಮಿ ಖರೀದಿ ಮಾಡಿದೆ. ಸಾಲದ ಹಣ. ಭೂಮಿಯ ಬೆಲೆ ಆಗಲೇ ದುಬಾರಿಯಾಗಿತ್ತು. ನನಗೆ ಭೂಮಿಗೆ ಹಾಕಿದ ಹಣ , ನನ್ನ ಬೇಸಾಯದ ಖರ್ಚನ್ನು ಹಿಂಪಡೆಯುವ ಬಯಕೆ ಸಹಜವಾಗಿ ಎಲ್ಲರಿಗೂ ಇದ್ದಂತೆ ಇತ್ತು. ನಾನು ಸಾವಯವ ಕೃಷಿ ಎಂದು ಅದರ…

Read more

ನಮ್ಮ ಕೃಷಿ ವ್ಯವಸ್ಥೆಯಲ್ಲಿ ಮಹಾನ್ ಸಂಚಲನ ಇದರಿಂದ ಮಾತ್ರ ಸಾಧ್ಯ.

ತಜ್ಞರು ಕ್ಷೇತ್ರ  ಜ್ಞಾನ ಇಲ್ಲದೆ ಏನೋನೋ ಸುಧಾರಣೆಗಳನ್ನು ಸರಕಾರಕ್ಕೆ ಶಿಫಾರಸು ಮಾಡುತ್ತಾರೆ. ಇದು ಕೃಷಿಕರ ಬದುಕನ್ನು ಉತ್ತಮಪಡಿವುದು ಅಷ್ಟಕ್ಕಷ್ಟೇ. ನಿಜವಾಗಿ ಮೂಲಭೂತ ಅಗತ್ಯ ಬೇರೆಯೇ ಇದೆ. ಭಾರತ ದೇಶದ ರೈತ ತನ್ನ ಜೀವಮಾನದಲ್ಲಿ  ನೆಮ್ಮದಿಯ ಜೀವನವನ್ನು ಕಳೆಯುವುದು ಬರೇ ಮಕ್ಕಳಾಟಿಕೆಯ ವಯಸ್ಸಿನಲ್ಲಿ ಮಾತ್ರ. ಜವಾಬ್ಧಾರಿ ಬಂದ ನಂತರ ತನ್ನ ಕೊನೇ ಉಸಿರಿನ ತನಕವೂ ರೈತ ನೆಮ್ಮದಿಯ ಜೀವನ ನಡೆಸಲಾರ. ಒಂದಿಲ್ಲೊಂದು ತಲೆಬಿಸಿಯಲ್ಲೇ (Tension)ಅವನು ಅಲ್ಪಾಯುಷಿಯಾಗಿ ಅಂತ್ಯವನ್ನು ಕಾಣುತ್ತಾನೆ. ವ್ಯಕ್ತಿಯೊಬ್ಬನಿಗೆ ಬದುಕುವ ಹಕ್ಕು ಇರುವಾಗ ನೆಮ್ಮದಿಯ ಬದುಕಿಗೆ ಬೇಕಾಗುವ…

Read more
Farmer harvesting the watermelon

ರೈತರೇ ಹೆಚ್ಚು ಬೆಳೆಸಲು ಹೋಗದಿರಿ- ಪರಿಸ್ಥಿತಿ ಸರಿಯಾಗಿಲ್ಲ…

ಹಿರಿಯರು ಒಂದು ಮಾತು ಹೇಳುತ್ತಾರೆ, ನಿಮ್ಮ ತಲೆಗೆ ನಿಮ್ಮದೇ ಕೈ ಎಂದು. ನಾವು ಬದುಕಲು ನಾವೇ ದುಡಿಯಬೇಕು. ಇದು ಸರಿ ಎಲ್ಲಾ ಕ್ಷೇತ್ರಗಳಲ್ಲೂ ಹೀಗೇನೇ. ಆದರೆ ಕೃಷಿ ಕ್ಷೇತ್ರ ಇದಕ್ಕಿಂತ ಭಿನ್ನ. ಇಲ್ಲಿ ನಾವು ಎಷ್ಟೂ ದುಡಿಯಬಹುದು. ಆದರೆ ಆ ದುಡಿಮೆಗೆ  ಪ್ರತಿಫಲ ಕೊಡುವವರು ಬೇರೆಯವರು. ಇದರಿಂದಾಗಿ ಕೃಷಿ ಕ್ಷೇತ್ರ ಇನ್ನು ಕೆಲವು ವರ್ಷ ಕಾಲ ಮಂಕಾಡೆ ಮಲಗುವ ಸಾಧ್ಯತೆ ಇದೆ. ಕೊರೋನಾ ಉಳಿದೆಲ್ಲಾ ಕ್ಷೇತ್ರಗಳನ್ನು ಬಾದಿಸಿದ್ದು, ಅತ್ಯಲ್ಪ. ಒಂದು ಉದ್ದಿಮೆ ಉತ್ಪಾದನೆ ಮಾಡದಿದ್ದರೆ, ಏನೂ ಆಗುವುದಿಲ್ಲ….

Read more
ಹೂ ಬೆಳೆದವರಿಗೂ ನಷ್ಟ ಮಾರುವವರಿಗೂ ನಷ್ಟ

ಕೃಷಿ ಕ್ಷೇತ್ರವನ್ನು ಬಗ್ಗು ಬಡಿಯಲಿದೆ ಕೊರೋನಾ ಮಹಾಮಾರಿ.

ಈಗಾಗಾಲೇ ಹಣ್ಣು ಹಂಪಲು, ಹೂವು, ತರಕಾರಿ ಬೆಳೆದ ರೈತರು ಭಾರೀ ನಷ್ಟ ಅನುಭವಿಸಿದ್ದಾರೆ. ಸದ್ಯವೇ ಹಾಲಿಗೆ ಬೇಡಿಕೆ ಕಡಿಮೆಯಾದ ಕಾರಣ ಹಾಲಿನ ಬೆಲೆಯೂ ಇಳಿಮುಖವಾಗುವ ಸೂಚನೆ ಇದೆ. ನಷ್ಟ ಭರ್ತಿಗಾಗಿ ಮತ್ತೆ ಅದೇ ಬೆಳೆ ಬೆಳೆಯುವ ಬದಲು ಆಹಾರ ಬೆಳೆಗಳ ಕಡೆಗೆ ಗಮನಹರಿಸುವುದು ಉತ್ತಮ. ಪರಿಸ್ಥಿತಿ ಸುಧಾರಣೆಯಾದ ನಂತರ ಇಂತಹ ಬೆಳೆಗಳನ್ನು ಬೆಳೆಸುವುದು ಸೂಕ್ತ.  ಕೊರೋನಾ ಮಹಾಮಾರಿ ಪ್ರಾರಂಭವಾಗಿ 3 ತಿಂಗಳು ಕಳೆದಿದೆ ಅಷ್ಟೇ . ಈ ತನಕ ಕೆಲವು ಬೆಳೆಗಾರರಿಗೆ ನಷ್ಟವಾಯಿತು. ಅದು ಮುಗಿದ ಸುದ್ದಿಯಾಯಿತು….

Read more
error: Content is protected !!