ಎಲೆ ಚುಕ್ಕೆ ರೋಗ ಸಿಂಪರಣೆಯಿಂದ ವಾಸಿಯಾಗುವುದಿಲ್ಲ

ಎಲೆ ಚುಕ್ಕೆ ರೋಗ ಸಿಂಪರಣೆಯಿಂದ ವಾಸಿಯಾಗುವುದಿಲ್ಲ – ಮಾಡಬೇಕಾದದ್ದು ಬೇರೆ ಇದೆ.

ಎಲೆಚುಕ್ಕೆ ರೋಗ ಇಲ್ಲದ ಸ್ಥಳವೇ ಇಲ್ಲ. ಇದಕ್ಕೆ ಬೆಳೆಗಾರರು ಏನು ಸಿಂಪಡಿಸಬೇಕು ಎಂದು ಕೇಳುತ್ತಾರೆ. ಆದರೆ ಮೊದಲು ಮಾಡಬೇಕಾದಾದ ಈ ಕೆಲಸ ಮಾಡದೆ ಸಿಂಪರಣೆ  ಮಾಡಿದರೆ ವಾಸಿಯಾಗುವುದಿಲ್ಲ. ಕೆಲವು ಕಡೆ ಕಡಿಮೆ ಇರಬಹುದು. ಕೆಲವು ಕಡೆ ಉಲ್ಪಣ ಸ್ಥಿತಿಗೆ ತಲುಪಿರಲೂ ಬಹುದು. ನೂರು ಮರಗಳಲ್ಲಿ ಕೆಲವು ಮರಗಳು ಸೋಂಕು  ತಗಲಿಸಿಕೊಳ್ಳದೆಯೂ ಇರಬಹುದು. ಇದೆಲ್ಲಾ ಸಸ್ಯದ ಅಂತರ್ಗತ ಶಕ್ತಿಯ ಮೇಲೆ ಅವಲಂಭಿಸಿದೆ. ಕೆಲವು ಸಾಂಕ್ರಾಮಿಕ ರೋಗಗಳು ತೀವ್ರವಾಗಿ ಹರಡಿದರೂ ಎಲ್ಲರನ್ನೂ ಬಾಧಿಸದೆ ಕೆಲವರನ್ನು ಬಿಟ್ಟಿರಬಹುದು. ಅದು ರೋಗಾಣು ಕೊಟ್ಟ…

Read more
ಸ್ಪ್ರೆಡ್ಡರ್ ಅಥವಾ ಅಂಟು ಇಲ್ಲದೆ ಸಿಂಪಡಿಸಿದ ದ್ರಾವಣ

ಬೋರ್ಡೋ ಸಿಂಪಡಿಸುವಾಗ ಸ್ಪ್ರೆಡ್ಡರ್ ಬಳಕೆ ಬೇಕೇ, ಬೇಡವೇ?

ಬೋರ್ಡೋ ದ್ರಾವಣ ಸಿಂಪಡಿಸುವಾಗ ಹಿಂದೆ ರಾಳ ಎಂಬ ವಸ್ತುವನ್ನು ಬಳಕೆ ಮಾಡುತ್ತಿದ್ದರು. ಅದು ಒಂದು ಮರದ ಮೇಣವಾಗಿತ್ತು. ಈಗ ಅದರ ಬದಲಿಗೆ ಆಧುನಿಕ ಹೆಸರಿನ ಉತ್ಪನ್ನಗಳು ಬಂದಿವೆ. ಬಟ್ಟೆಯೊಂದನ್ನು ನೀರಿನಲ್ಲಿ ಹಾಕಿ. ಆಗ ಅದರ ಎಲ್ಲಾ ಭಾಗಗಳೂ ಏಕ ಪ್ರಕಾರ ಒದ್ದೆಯಾಗುವುದಿಲ್ಲ. ಅದನ್ನು ಸಾಬೂನಿನ ದ್ರಾವಣದಲ್ಲಿ ಹಾಕಿ, ಎಲ್ಲಾ ಭಾಗಗಳೂ ಒದ್ದೆಯಾಗುತ್ತದೆ. ಇದಕ್ಕೆ ಕಾರಣ ಸಾಬೂನಿನಲ್ಲಿರುವ ಪ್ರಸರಕ ಗುಣ.   ಈ ತತ್ವದ ಮೇಲೆ ಕೃಷಿಯಲ್ಲಿ ಸ್ಪ್ರೆಡ್ಡರುಗಳ ಬಳಕೆ ಅಗತ್ಯವಾಯಿತು. ಸ್ಪ್ರೆಡ್ಡರ್ ಬಳಸಿದಾಗ ನೀವು ಸಿಂಪಡಿಸಿದ ದ್ರಾವಣ…

Read more
error: Content is protected !!