ಅಡಿಕೆ ಮಾರುಕಟ್ಟೆ- ಕೆಂಪಡಿಕೆ ಹಿಂದೆ- ಚಾಲಿ ಮುಂದೆ.

 ಅಡಿಕೆ ಮಾರುಕಟ್ಟೆ- ಕೆಂಪಡಿಕೆ ಹಿಂದೆ- ಚಾಲಿ ಮುಂದೆ.   

ರಾಜ್ಯದ ಅಡಿಕೆ ಮಾರುಕಟ್ಟೆಯಲ್ಲಿ ದಿನಾಂಕ 11-08-2023ರ ಶುಕ್ರವಾರ ಒಟ್ಟು ಸುಮಾರು 425 ಟನ್  ಅಡಿಕೆ ವ್ಯವಹಾರ ನಡೆದಿದೆ. ಕಳೆದ ವಾರ ಯಾವುದೋ  ಸುದ್ದಿಯ ಕಾರಣಕ್ಕೆ ಕೆಂಪಡಿಕೆ ಧಾರಣೆಯಲ್ಲಿ  ಇಳಿಕೆ ಕಂಡು ಬಂತು. ಚಾಲಿ ಅಡಿಕೆಯ ಧಾರಣೆಯಲ್ಲಿ ಏರಿಕೆ ಆಗುತ್ತಾ ಇದೆ. ಆಗಸ್ಟ್  ತಿಂಗಳು ಸಪ್ಟೆಂಬರ್ ತಿಂಗಳಲ್ಲಿ ಇನ್ನೂ ಸ್ವಲ್ಪ ಏರಿಕೆ ಆಗಬಹುದು ಎಂಬ ಆಶಾಭಾವನೆ  ಮಾರಾಟಗಾರರ ಮಾಹಿತಿಯಿಂದ ಕೇಳಿ ಬರುತ್ತಿದೆ. ಕೆಂಪಡಿಕೆ ಧಾರಣೆ ಇಳಿಕೆ ತಾತ್ಕಾಲಿಕವಾಗಿದ್ದು, ತಿಂಗಳಾಂತ್ಯಕ್ಕೆ  ಇದೆ. ಕ್ವಿಂಟಾಲಿಗೆ ರೂ.1000 ದಷ್ಟಾದರೂ ಏರಬಹುದು ಎನ್ನುತ್ತಾರೆ. ಕಳೆದ…

Read more
ದಿನಾಂಕ:13-12-2022 ಚಾಲಿ, ಕೆಂಪುಅಡಿಕೆ, ಕರಿಮೆಣಸು, ರಬ್ಬರ್ , ಕಾಫೀ

ದಿನಾಂಕ:13-12-2022 ಚಾಲಿ,ಕೆಂಪುಅಡಿಕೆ, ಕರಿಮೆಣಸು, ರಬ್ಬರ್ , ಕಾಫೀ ಧಾರಣೆ.

ಚಾಲಿ ದರ ಭಾರೀ ಕುಸಿತ ಆಗಲಿಲ್ಲ.ಏರಿಕೆಯ ಸೂಚನೆಯೂ ಇಲ್ಲ.ಕೆಂಪುಅಡಿಕೆ ಧಾರಣೆ ಮಾತ್ರ ಯಾವ ಬೆಳೆಗಾರನೂ ಕಲ್ಪಿಸಿರದ ಮಟ್ಟಕ್ಕೆ ಬಂದಿದೆ.ಯಾಕೆ ಎಂಬ ಕಾರಣ ಯಾರಿಗೂ ಗೊತ್ತಿಲ್ಲ. ಗುಟ್ಕಾ ತಿನ್ನುವುದು ಕಡಿಮೆಯಾಗಿಲ್ಲ.ಗುಟ್ಕಾ ತಯಾರಿಕೆ ನಿಂತಿಲ್ಲ. ಆದರೆ ಅಡಿಕೆಗೆ ಬೆಲೆ ಇಲ್ಲ. ಕರಿಮೆಣಸು ಒಮ್ಮೆ ಚೇರಿಸಿಕೊಂಡರೂ  ಮತ್ತೆ ಮುಗ್ಗರಿಸಿದೆ. ರಬ್ಬರ್ ಬೆಲೆ ಏರಿಕೆ ಸಾಧ್ಯತೆ ಇಲ್ಲ.ಕೊಬ್ಬರಿಯೂ ಸಹ ನೆಲಕಚ್ಚಿದ ಸ್ಥಿತಿಯಲ್ಲಿದೆ. ಒಟ್ಟಿನಲ್ಲಿ ಕೃಷಿ ಉತ್ಪನ್ನಗಳ ಬೆಲೆ ಭಾರೀ ಅಸ್ತಿರವಾಗಿದೆ. ಶಿವಮೊಗ್ಗ ಮಾರುಕಟ್ಟೆಯಲ್ಲಿ ಕಳೆದ ವಾರದಿಂದ ಅಧಿಕ ಪ್ರಮಾಣದಲ್ಲಿ ಅಡಿಕೆ ಮಾರುಕಟ್ಟೆಗೆ ಬರುತ್ತಿದೆ. ಸಾಗರ,…

Read more
12-07-2022 ಅಡಿಕೆ, ಕರಿಮೆಣಸು, ಕಾಫಿ, ಶುಂಠಿ ಕೊಬ್ಬರಿ ಧಾರಣೆ

ದಿನಾಂಕ 12-07-2022 ಅಡಿಕೆ, ಕರಿಮೆಣಸು, ಕಾಫಿ, ಶುಂಠಿ ಕೊಬ್ಬರಿ ಧಾರಣೆ.

ಇಂದು ದಿನಾಂಕ 12-07-2022 ಮಂಗಳವಾರ  ರಾಜ್ಯ ವಿವಿಧ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿ ಅಡಿಕೆ, ಕರಿಮೆಣಸು ಶುಂಠಿ, ಕಾಫಿ,ರಬ್ಬರ್, ಕೊಬ್ಬರಿ ಧಾರಣೆ ಹೀಗಿದೆ. ಚಾಲಿ ಅಡಿಕೆ ಧಾರಣೆ: ಕ್ವಿಂಟಾಲು. ಹೊಸ ಚಾಲಿ ಸ್ವಲ್ಪ ಚೇತರಿಕೆ ಆಗಿದೆ. ವ್ಯಾಪಾರಿಗಳು ಸ್ವಲ್ಪ ವಿಚಾರಣೆ ಮಾಡುತ್ತಿದ್ದಾರೆ. ಸ್ವಲ್ಪ ಸ್ವಲ್ಪ ಹೊಸತಕ್ಕೆ ಏರಿಕೆ ಆಗಬಹುದು. ಹಳೆಯ ಅಡಿಕೆಯೇ ಇಲ್ಲ ಎಂಬ ಸ್ಥಿತಿ. ಆದರೂ ಬೆಳ್ತಂಗಡಿಯಲ್ಲಿ ಅತ್ಯಧಿಕ 109 ಚೀಲ ನಿನ್ನೆ ಮಾರಾಟವಾಗಿದೆ. BANTWALA, 12/07/2022, Coca, 27, 12500, 25000, 22500 BANTWALA,…

Read more
ಕೆಂಪಡಿಕೆ ಚೇತರಿಕೆ ಪ್ರಾರಂಭವಾಗಿದೆ.

ಕೆಂಪಡಿಕೆ ಚೇತರಿಕೆ ಪ್ರಾರಂಭವಾಗಿದೆ- ಚಾಲಿಗೆ ಮುಹೂರ್ತ ಕೂಡಿಲ್ಲ. ರಾಶಿ 50,000 ದಾಟಿದೆ.

ಕೆಂಪಡಿಕೆ ರಾಶಿಗೆ ಶಿರಸಿಯಲ್ಲಿ, ಹೊಸನಗರದಲ್ಲಿ ಇಂದು ಕ್ವಿಂಟಾಲಿಗೆ 50,000 ದಾಟಿದೆ. ಯಲ್ಲಾಪುರದಲ್ಲಿ 54,000 ದಾಟಿದೆ. ಇನ್ನೇನು ಕೆಲವೇ ವಾರಗಳಲ್ಲಿ ಇನ್ನೂ ಚೇತರಿಕೆ ಆಗುವ ಸಂಭವ ಇದೆ ಎನ್ನುತ್ತಾರೆ ಶಿವಮೊಗ್ಗದ ವರ್ತಕರೊಬ್ಬರು. ಚಾಲಿ ದರ ಮಾತ್ರ ಏರಿಲ್ಲ. ಆದರೆ ಮಾರುಕಟ್ಟೆಗೆ ಅಡಿಕೆ ಬಾರದ ಕಾರಣ ಏನಾಗುತ್ತದೆ ವ್ಯಾಪಾರಿ ತಂತ್ರ ಎಂಬುದನ್ನು ಕಾದು ನೋಡಬೇಕಾಗಿದೆ. ಚಾಲಿಗೂ ಬೇಡಿಕೆ ಇದೆ. ಕೆಂಪಡಿಕೆಗೂ ಬೇಡಿಕೆ ಇದೆ. ಆದರೆ ದರ ಏರಿಕೆಗೆ ಸೂಕ್ತ ಮುಹೂರ್ತ ಕೂಡಿ ಬರಬೇಕು. ಬಹಳ ಜನ ಈ ವರ್ಷ ಅಡಿಕೆಗೆ…

Read more
ಅಡಿಕೆ ಮಾರುಕಟ್ಟೆ ಸ್ಥಿರ

ಅಡಿಕೆ ಮಾರುಕಟ್ಟೆ ಸ್ಥಿರ : ಕುಸಿಯುವ ಭೀತಿ ಇಲ್ಲ.

ಎಪ್ರೀಲ್ ತಿಂಗಳಲ್ಲಿ ಅಡಿಕೆ ಮಾರುಕಟ್ಟೆ ಸ್ವಲ್ಪ ಚೇತರಿಕೆ ಆಗಬಹುದು ಎಂಬ ಊಹನೆ ಇತ್ತು. ಊಹನೆಯಂತೆ ಹಳೆ ಚಾಲಿ ಮತ್ತು ಪಟೋರಾ ಅಡಿಕೆ ದರ ಸ್ವಲ್ಪ ಏರಿತಾದರೂ ಹೊಸ ಅಡಿಕೆ ದರ ಸ್ಥಿರವಾಗಿಮುಂದುವರಿದಿದೆ. ಅಡಿಕೆ ಉತ್ಪಾದನೆ ಜಾಸ್ತಿ ಇದೆ ಎಂಬ ಮಾಹಿತಿಗಳ ನಡುವೆ, ದರ ಕುಸಿಯುವ ಭೀತಿ ಇಲ್ಲ ಎಂಬುದಾಗಿ ವರ್ತಕರ ಹೇಳಿಕೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷದ ಧಾರಣೆ ಸ್ವಲ್ಪ ಏರಿಕೆಯಲ್ಲೇ ಇದೆ. ಕಳೆದ ವರ್ಷದಷ್ಟು ಇಳಿಕೆಯ ಅಂಜಿಕೆಯೂ ಇಲ್ಲ. ಒಟ್ಟಿನಲ್ಲಿ ಅಡಿಕೆ ಆಮದು ಆಗುವ…

Read more
ಅಡಿಕೆ

ವರ್ಷಾಂತ್ಯದಲ್ಲೂ ಸ್ಥಿರತೆ ಉಳಿಸಿಕೊಂಡ ಅಡಿಕೆ ಧಾರಣೆ- ಮುಂದೆ ಇದೆ ಚಾನ್ಸ್.

ಸಾಮಾನ್ಯವಾಗಿ ಮಾರ್ಚ್ ವರ್ಷಾಂತ್ಯದಲ್ಲಿ ದರ ಇಳಿಕೆ ಸಾಮಾನ್ಯ. ಆದರೆ ಈ ವರ್ಷ ಹಾಗೆ ಆಗದೆ ಸ್ಥಿರತೆ ಕಾಯ್ದುಕೊಳ್ಳಲಾಗಿದೆ. ಹಾಗಾಗಿ ಮುಂದಿನ ತಿಂಗಳಲ್ಲಿ ಚಾಲಿ- ಕೆಂಪಡಿಕೆ ಎರಡೂ ಏರಿಕೆ ಆಗಲಿದೆ. ಅಡಿಕೆ ಮಾರುಕಟ್ಟೆಯಲ್ಲಿ ಏರಿಕೆಯ ಸೂಚನೆ ದರ ಸ್ಥಿರತೆಯಲ್ಲಿ ಗಮನಿಸಬಹುದು.  ಚಾಲಿ ಎರಡು ತಿಂಗಳಿಂದ ಸ್ಥಿರವಾಗಿತ್ತು. ಈಗ  ಸಾಗರ, ಹೊಸನಗರ, ಇಲ್ಲೆಲ್ಲಾ ಸಿಪ್ಪೆ ಗೋಟಿಗೆ ಬೇಡಿಕೆ ಬರಲಾರಂಭಿಸಿದೆ. ಶಿರಸಿ, ಸಿದ್ದಾಪುರ, ಯಲ್ಲಾಪುರದಲ್ಲಿ ಚಾಲಿ ದರ ಏರಿಕೆ ಪ್ರರಾಂಭವಾಗಿದೆ. ಸಿಪ್ಪೆ ಗೋಟು ದರ ಏರಿಕೆ ಚಾಲಿಗೆ ಬೇಡಿಕೆಯ ಸೂಚನೆಯಾಗಿದ್ದು, ಚಾಲಿ…

Read more
ಅಡಿಕೆ

ಅಡಿಕೆ ಧಾರಣೆ ಏನಾಗಬಹುದು? ಯಾಕೆ ಏನೂ ಸಂಚಲನ ಇಲ್ಲ ?

ಅಡಿಕೆ ಧಾರಣೆ ಕಳೆದ ಎರಡು ತಿಂಗಳಿಂದ ನಿಂತ ನೀರಿನ ತರಹ ಮುಂದುವರಿದಿದೆ. ಯಾವ ಏರಿಕೆಯೂ ಇಲ್ಲ. ಇಳಿಕೆಯೂ ಇಲ್ಲ. ಕರಾವಳಿಯ ಅಡಿಕೆ ಬೆಳೆಗಾರರು ಅಡಿಕೆ ಕೊಡುವುದನ್ನು ಕಡಿಮೆಮಾಡಿದ್ದಾರೆ. ಕೆಂಪಡಿಕೆ ಮಾಡುವ ಕಡೆಯೂ ಜನ ದರ ಏರಿಕೆಗೆ ಕಾಯುತ್ತಿದ್ದಾರೆ. ಮಾರುಕಟ್ಟೆಗೆ ಬರುವ ಅಡಿಕೆ ಪೂರ್ತಿ ಚೇಣಿ ಮಾಡಿದವರ ಕಮಿಟ್ಮೆಂಟ್ ಹಾಗೂ ಮುಂದಿನ ಚೇಣಿ ವಹಿಸಿಕೊಳ್ಳುವುದಕ್ಕೇ ಬೇಕಾದ  ಫಂಡ್ ಕ್ರೋಡೀಕರಣಕ್ಕೆ ಎಂಬ ಸುದ್ದಿಗಳಿವೆ. ಇಷ್ಟಕ್ಕೂ ಮುಂದೆ ಅಡಿಕೆ ಧಾರಣೆ ಏನಾಗಬಹುದು, ಏನಾದರೂ ಸಂಚಲನ ಉಂಟಾಗಬಹುದೇ ಎಂಬ ಕುತೂಹಲ ಎಲ್ಲರದ್ದೂ. ಅಡಿಕೆ…

Read more
ಬಿಲಿ ಚಾಲಿ ಸುಪಾರಿ ಅಡಿಕೆ

ಶುಕ್ರವಾರದ ಅಡಿಕೆ ಧಾರಣೆ-ದಿನಾಂಕ 03-12-2021

ಅಡಿಕೆ ಬೆಳೆಗಾರರಿಗೆ 2021 ವರ್ಷ ಅಂತಹ ನಿರಾಸೆಯನ್ನೆನೂ ಮಾಡಲಿಲ್ಲ.  ವರ್ಷದ ಹೆಚ್ಚಿನ ಸಮಯದಲ್ಲಿ ಉತ್ತಮ ಬೆಲೆ ಇತ್ತು.  ಕಳೆದ ವರ್ಷ ಮತ್ತು ಈ ವರ್ಷ ಅಡಿಕೆಗೆ ಬೇಡಿಕೆ ಎಷ್ಟು ಇದೆ ಎಂಬುದರ ಪೂರ್ಣ ಚಿತ್ರಣ ಸಿಕ್ಕಿದೆ. ಆಮದು ಮಾಡುತ್ತಾ ದೇಶದ ಅಡಿಕೆ ಬೆಳೆಗಾರರ ಮೇಲೆ ಕಲ್ಲು ಹೊತ್ತು ಹಾಕುತ್ತಾ ಈ ತನಕ ನಮ್ಮನ್ನು ಮೋಸವೇ ಮಾಡಲಾಗಿತ್ತು. ಇದೆಲ್ಲವೂ ಈಗ ಜನತೆಗೆ ಗೊತ್ತಾಗಿದೆ. ವರ್ಷದ ಕೊನೆ ತಿಂಗಳು, ಮೊದಲ ವಾರ ಶುಕ್ರವಾರ ಅಡಿಕೆ ಬೆಳೆಗಾರರ ಪಾಲಿಗೆ ಉತ್ತಮ ಧಾರಣೆ…

Read more
Farmer Mr. Subraya

Farmer earns annually Rs.3 Lakhs by intercrop with Arecanut.

Don’t depend on single crop like arecanut. Go for intercrops.Choose suitable intercrop and get maximum income from it. Annually he is getting Rs. 3 lakhs above income from intercrop. This is the advice of Mr. Subraya, a farmer from Dalavayi Hosakoppa of Soraba taluk Shivamogga dist. Karnataka.  Farmer is Executive engineer in BSNL and now…

Read more
ಅರೆಮಲೆನಾಡಿನಲ್ಲಿ ಎಲಕ್ಕಿ

ಅರೆಮಲೆನಾಡು ಪ್ರದೇಶದಲ್ಲೂ ಏಲಕ್ಕಿ ಬೆಳೆಯಬಹುದು- ಇವರು ಬೆಳೆದು ತೋರಿಸಿದ್ದಾರೆ.

ಅರೆಮಲೆನಾಡು ಪ್ರದೇಶವಾದ ಹಾಸನ ಜಿಲ್ಲೆಯ ಅರಕಲಗೂಡುವಿನ ಲಕ್ಷ್ಮೀ  ಫಾರಂ ನ ಮಾಲಿಕ ರಂಗಸ್ವಾಮಿ ಎಂಬ ಪ್ರಗತಿಪರ ಕೃಷಿಕ ತಮ್ಮ ಪ್ರದೇಶದ ಹವಾಮಾನ ಸ್ಥಿತಿಯನ್ನು ಜಾಣ್ಮೆಯಿಂದ ಕೆಲವು  ಮಾರ್ಪಾಡುಗಳನ್ನು ಮಾಡುವ ಮೂಲಕ ಮಲೆನಾಡಿನ ಪ್ರದೇಶದಲ್ಲಿ   ಏಲಕ್ಕಿ  ಬೆಳೆದಿದ್ದಾರೆ. ಅಧಿಕ ಅದಾಯದ ಮಿಶ್ರ ಬೆಳೆ  ಬಯಸುವವರಿಗೆ ಇದು ಒಂದು ಮಾದರಿ ಬೆಳೆ ಪ್ರಾತ್ಯಕ್ಷಿಕೆ ತೋಟ. ಮಿಶ್ರ ಬೆಳೆಯಾಗಿ ಏಲಕ್ಕಿ: ಏಲಕ್ಕಿ ಎಲ್ಲಿ ಬೆಳೆಯುತ್ತದೆ. ತಕ್ಷಣ ಎಲ್ಲರ ಉತ್ತರ ಅದು ಮಲೆನಾಡಿನ ತಂಪು ಹವಾಗುಣದಲ್ಲಿ. ಅದಕ್ಕೆ ಎತ್ತರ ತಗ್ಗಿನ ಕಣಿವೆ  ಪ್ರದೇಶದಲ್ಲಿ…

Read more
error: Content is protected !!