ಈ ಗಡ್ದೆ ಗೆಣಸು ತರಕಾರಿ ಬೆಳೆಗೆ ಅತೀ ಕಡಿಮೆ ನೀರು ಸಾಕು.

ಎಲ್ಲಾ ತರಕಾರಿಗಳನ್ನು ಕೆಲವು ಋತುಮಾನಗಳಲ್ಲಿ ಬೆಳೆಸುವುದು ಕ್ರಮ. ಸುವರ್ಣ ಗಡ್ಡೆ ಎಂಬ ತರಕಾರಿಯನ್ನು ನಾಟಿ ಮಾಡುವ ಸಮಯ ಈಗ. ಈ ಬೆಳೆಗೆ  ಮಳೆಗಾಲ ಬರುವ ತನಕ ಅಲ್ಪ ಸ್ವಲ್ಪ ನೀರು ಕೊಟ್ಟರೆ ಸಾಕು ಮಳೆಗಾಲ ಮುಗಿಯುವ ಸಮಯದಲ್ಲಿ ದೊಡ್ಡ ಗಡ್ಡೆಯಾಗಿ ಪ್ರತಿಫಲ ಕೊಡುತ್ತದೆ.  ಇದು ಅತೀ ಕಡಿಮೆ ನೀರಿನಲ್ಲಿ ಬೆಳೆಯಬಹುದುದಾದ  ಗಡ್ದೆ ಗೆಣಸು  ತರಕಾರಿ ಎಂದರೂ ತಪ್ಪಾಗಲಾರದು. ಕೇರಳದವರು ಎಲ್ಲೇ ಹೋದರೂ ಮರಗೆಣಸು, ಸುವರ್ಣಗಡ್ಡೇ ಬೆಳೆಯುವುದನ್ನು ಬಿಡುವುದಿಲ್ಲ. ಅವರು ಸುವರ್ಣ ಗಡ್ಡೆ ನೆಡುವುದು ಮಾರ್ಚ್ ತಿಂಗಳಲ್ಲಿ,(ಕುಂಭ ಮಾಸ) …

Read more

ತೆಂಗಿನ ಇಳುವರಿ ಹೆಚ್ಚಲು ಹಿಪ್ಪು ನೇರಳೆ ಬೆಳೆ ಸಹಾಯಕ.

ತೆಂಗಿನ ತೋಟದಲ್ಲಿ ಮಿಶ್ರ ಬೆಳೆಗಳನ್ನು ಬೆಳೆಸಿದರೆ ತೆಂಗಿನಲ್ಲಿ ಇಳುವರಿ ಹೆಚ್ಚುತ್ತದೆ. ತೆಂಗಿನ ತೋಟದಲ್ಲಿ ಬಹುವಾರ್ಷಿಕ ಮಿಶ್ರ ಬೆಳೆಗಳಲ್ಲಿ ಹಿಪ್ಪು ನೇರಳೆ ಒಂದು. ಉಳಿದೆಲ್ಲಾ ಮಿಶ್ರ ಬೆಳೆಗಳು ಕೊಡುವ ಆದಾಯಕ್ಕೆ ಹೋಲಿಕೆ ಮಾಡಿದರೆ ಹಿಪ್ಪು ನೇರಳೆಯೇ ಶ್ರೇಷ್ಟ. ಇದು ನೆಟ್ಟು ಸಸಿ ಆಗುವ ತನಕ ಒಂದು ವರ್ಷ ಕಾಯಬೇಕಾಗಬಹುದು. ನಂತರ ಇದರಿಂದ ನಿರಂತರ ಆದಾಯ ಬರುತ್ತಲೇ ಇರುತ್ತದೆ. ತೆಂಗಿನ ಅಧಿಕ ಇಳುವರಿಗೂ ಇದು ಸಹಾಯಕವಾಗುತ್ತದೆ. ರೇಶ್ಮೆ ವ್ಯವಸಾಯ ಎಂಬುದು ಒಂದು ರೀತಿಯಲ್ಲಿ ಸರಕಾರಿ ನೌಕರಿ ಇದ್ದಂತೆ. ತಿಂಗಳಾಂತ್ಯಕ್ಕೆ ಬರುವ…

Read more

ಹಳ್ಳಿಯ ಯುವಕರಿಗೆ ಉದ್ಯೋಗ ಕೊಡಬಲ್ಲ ಅಣಬೆ ಕೃಷಿ.

 ಆರ್ಥಿಕ ಸಂಕಷ್ಟದಿಂದ ಪಟ್ಟಣ ತೊರೆದು ಜನ ಹಳ್ಳಿಯೆಡೆಗೆ ಮುಖಮಾಡಿದ್ದಾರೆ. ಕೆಲವರಿಗೆ ಇನ್ನು ಪಟ್ಟಣದ ಸಹವಾಸವೇ ಬೇಡ ಎಂಬಂತಾಗಿದೆ.   ವೃತಿ ಅರಸುವ ಆಸಕ್ತರಿಗೆ  ಮನೆಯ ಕಡಿಮೆ ಸ್ಥಳಾವಕಾಶದಲ್ಲೂ  ಮಾಡಬಹುದಾದ ಲಾಭದ ಉದ್ದಿಮೆ ಅಣಬೆ ಬೇಸಾಯ. ವಿಶೇಷ ವಿಧ್ಯಾವಂತರೂ ಅಗಬೇಕಾಗಿಲ್ಲ. ಭಾರೀ ಬಂಡವಾಳವೂ ಬೇಕಾಗಿಲ್ಲ. ಇನ್ನೂ ಇದರೊಂದಿಗೆ ಜೇನು ಸಾಕಣೆಯಂತ ವೃತ್ತಿ ಮಾಡಿದರೆ ಮತ್ತೂ ಅನುಕೂಲ.     ಅಣಬೆ ಬೆಳೆಸಲು ಹೆಚ್ಚು ಬಂಡವಾಳ ಬೇಡ. ವೃತ್ತಿಯಲ್ಲಿ ಸ್ವಲ್ಪ ಶ್ರದ್ಧೆ ಇದ್ದರೆ ಸಾಕು. ಸೂಕ್ತ ತರಬೇತಿಯನ್ನು ಪಡೆದು ಪ್ರಾರಂಭಿಸಿದರೆ ಇದರಲ್ಲಿ ಹಿಂತಿರುಗಿ…

Read more
ಭತ್ತದ ಹುಲ್ಲಿನಲ್ಲಿ ಬೆಳೆಸಲಾದ ಅಣಬೆ

ಅಣಬೆ ಬೇಸಾಯದಿಂದ ಕೈತುಂಬಾ ವರಮಾನ.

ತಿನ್ನುವ ಅಣಬೆಗೆ ಉತ್ತಮ ಬೇಡಿಕೆ. ಪಟ್ಟಣಗಳಲ್ಲದೆ, ಹಳ್ಳಿಗಳಲ್ಲೂ ಸಹ ಅಣಬೆಯ ಉಪಯೋಗ ಪ್ರಾರಂಭವಾಗಿದೆ.    ಕಡಿಮೆ ಬಂಡವಾಳದಲ್ಲಿ  ಕಡಿಮೆ ಸ್ಥಳಾವಕಾಶದಲ್ಲಿ ಮಾಡಬಹುದಾದ ಕೃಷಿ ಪೂರಕ ವೃತ್ತಿ.  ಬೆಂಗಳೂರಿನ ಗ್ರಾಮಾಂತರ ಭಾಗಗಳಲ್ಲಿ ಹಲವರು ಜನ ಅಣಬೆ ಬೇಸಾಯ ಮಾಡುತ್ತಾರೆ. ಇದೇ ವೃತ್ತಿಯಲ್ಲಿ ಮೇಲೆ ಬಂದವರಿದ್ದಾರೆ. ಗೋವಾದಲ್ಲಿ  ಇದು ಅತೀ ಹೆಚ್ಚಿನ ಪ್ರಮಾಣದಲ್ಲಿ  ಇದೆ. ಹೆಚ್ಚಿನ ಕಡೆಗೆ ಗೋವಾದಿಂದ ಅಣಬೆ  ಸರಬರಾಜು ಆಗುತ್ತದೆ. ಇತರ ಕಡೆಗಳಲ್ಲಿ ಬೆಳೆಸುವವರ ಸಂಖ್ಯೆ  ತುಂಬಾ  ಕಡಿಮೆ. ಹೇಗೆ ಪ್ರಾರಂಭಿಸಬೇಕು: ಅಣಬೆ ಬೇಸಾಯ ಮಾಡುವ ಮುನ್ನ…

Read more
Silk cocoon for sale

ಸರ್ಕಾರೀ ಸಂಬಳ ಪಡೆದಂತೆ -ರೇಶ್ಮೆ ಕೃಷಿ.

ರೇಶ್ಮೆ ವ್ಯವಸಾಯ ಮನೆ ಮಂದಿ ಸೇರಿ ತಮ್ಮ ಸಂಪಾದನೆಯನ್ನು ತಾವೇ ಗಳಿಸುವ ವೃತ್ತಿ. ಇದನ್ನು ಮಾಡಲು ದೈಹಿಕ ಶ್ರಮ ಬೇಕಾಗಿಲ್ಲ. ಮಕ್ಕಳಿಂದ ಹಿಡಿದು ವೃದ್ದರ ವರೆಗೆ ಈ ವೃತ್ತಿಯಲ್ಲಿ  ತೊಡಗಿಸಿಕೊಳ್ಳಲು ಅವಕಾಶವಿದೆ. ಬರೇ ಇಷ್ಟೇ ಅಲ್ಲ. ರೇಶ್ಮೆ  ವ್ಯವಸಾಯ ಹೆಚ್ಚು ಇರುವ ಕಡೆ ಇದಕ್ಕೆ ಪೂರಕವಾಗಿ ಸ್ವ ಉದ್ಯೋಗ ಮಾಡಿ ಆದಾಯಗಳಿಸಲೂ ಅನುಕೂಲ ಇದೆ. ನಮ್ಮ ರಾಜ್ಯದ ರಾಮನಗರ, ಕನಕಪುರ, ಕೋಲಾರ, ಶಿಡ್ಲಘಟ್ಟ, ಹಾಗೆಯೇ ಚಿತ್ರದುರ್ಗ ಕಡೆ, ಅಲ್ಲದೆ ಉತ್ತರದಲ್ಲಿ ರಾಮದುರ್ಗ, ಬೆಳಗಾವಿ ಸುತ್ತಮುತ್ತ ಹಲವಾರು ರೈತರು…

Read more
silk cocoon decoration item

ಕೃಷಿಕರಿಗೆ ಇದು ಲಾಭದ ಸ್ವ ಉದ್ಯೊಗದ ಅವಕಾಶ

ಕೃಷಿಯ ವ್ಯವಸ್ಥೆಯೊಳಗೆ ಆದಾಯ ಹೆಚ್ಚಿಸಿಕೊಳ್ಳಲು ಎಷ್ಟೊಂದು ಅವಕಾಶಗಳಿವೆ.  ಇದನ್ನು ಬಳಸಿಕೊಂಡು ರೈತರು ತಮ್ಮ ಈಗಿನ ಆದಾಯವನ್ನು ದುಪ್ಪಟ್ಟು ಮಾಡಿಕೊಳ್ಳಲು ಸಾಧ್ಯವಿದೆ.  ಕೃಷಿ ಬರೇ ಕೃಷಿಕರನ್ನು ಮಾತ್ರ  ಬದುಕಿಸುವುದಲ್ಲ.  ಸಮಾಜದಲ್ಲಿ ಬಹಳಷ್ಟು ಜನರಿಗೆ  ಬದುಕು ನೀಡುವಂತದ್ದು ! ರೇಶ್ಮೆ ವ್ಯವಸಾಯ  ನಮ್ಮ ದೇಶದ ಅಸಂಖ್ಯಾತ ರೈತರಿಗೆ ಬದುಕು ನೀಡಿದ ಬೆಳೆ. ಹಿಪ್ಪು ನೇರಳೆ ಬೆಳೆ ಬೆಳೆಸಿ, ಅದರಲ್ಲಿ ಹುಳು ಸಾಕಿ ಅದರ ಗೂಡುಗಳನ್ನು  ಮಾರುಕಟ್ಟೆಗೆ  ಒಯ್ದು ಮಾರಾಟ ಮಾಡಿ ಸಂಪಾದನೆ  ಮಾಡುವುದು ಒಂದಾದರೆ, ಇದೇ ಗೂಡುಗಳಿಂದ ಬೇರೆ ಬೇರೆ…

Read more

ಬಣ್ಣದ ಕ್ಯಾಪ್ಸಿಕಂ- 16 ಲಕ್ಷ ಆದಾಯ.

ಕೆಲವು ಅಧಿಕ ಮೌಲ್ಯದ ತೋಟಗಾರಿಕಾ ಬೆಳೆಗಳಿವೆ. ಅದರಲ್ಲಿ  ಒಂದು ದೊನ್ನೆ ಮೆಣಸು. ಇದು ತಿನ್ನುವ  ತರಕಾರಿ ಬೆಳೆಯಾದ ಕಾರಣ ಬೇಡಿಕೆಗೆ ಸಮಸ್ಯೆ ಇಲ್ಲ. ಇದನ್ನು ಪಾಲೀ ಹೌಸ್ ಒಳಗೆ ಯಾರು ಎಲ್ಲಿಯೂ ಬೆಳೆಸಬಹುದು. ಭವಿಷ್ಯದಲ್ಲಿ ಕಡಿಮೆ ಸ್ಥಳಾವಕಾಶದಲ್ಲಿ ಅಧಿಕ ಉತ್ಪಾದನೆ ಮಾಡುವ ತಂತ್ರ ಹಸುರು ಮನೆ. ಸಾಕಷ್ಟು ಜನ ರೈತರು ಈ ತಂತ್ರಜ್ಞಾನದ ಮೂಲಕ ಬೇರೆ ಬೇರೆ ಬೆಳೆ ಬೆಳೆಯುತ್ತಿದ್ದಾರೆ. ಇದಕ್ಕೆ  ಸರಕಾರದಿಂದ ದೊಡ್ಡ ಪ್ರಮಾಣದಲ್ಲಿ ಸಹಾಯ ಧನವೂ ಇದೆ. ದೊನ್ನೆ ಮೆಣಸು ಬೆಳೆಯನ್ನು ಪಾಲೀಹೌಸ್ ಒಳಗೆ …

Read more
error: Content is protected !!