![ಅಡಿಕೆ ಗರಿಗಳು ಯಾಕೆ ಹೀಗಾಗುತ್ತವೆ- ಪರಿಹಾರ ಏನು? ಅಡಿಕೆ ಗರಿ ತಿನ್ನುವ ತಿಗಣೆಯ ಹಾನಿ](https://kannada.krushiabhivruddi.com/wp-content/uploads/2020/12/1625937027447-FILEminimizer.jpg?v=1625937329)
ಅಡಿಕೆ ಗರಿಗಳು ಯಾಕೆ ಹೀಗಾಗುತ್ತವೆ- ಪರಿಹಾರ ಏನು?
ಅಡಿಕೆಯ ಸಸ್ಯದ ಎಲೆಗಳು ಗುಚ್ಚದ ತರಹ ಆಗುವ, ಸಸ್ಯ ಬೆಳವಣಿಗೆಯನ್ನು ಹತ್ತಿಕ್ಕುವ ಕೆಲವು ರಸ ಹೀರುವ ಕೀಟಗಳನ್ನು ನಿಯಂತ್ರಿಸದಿದ್ದರೆ ಸಸಿ ಏಳಿಗೆ ಆಗುವುದೇ ಇಲ್ಲ. ಅಡಿಕೆ ಸಸಿ/ ಮರದ ಎಲೆ ಹಾಳಾದರೆ ಅದರ ಏಳಿಗೆಯೇ ಆಗುವುದಿಲ್ಲ. ಎಲೆಯ ರಸ ಹೀರಿ ತೊಂದರೆ ಮಾಡುವ ಕೆಲವು ತಿಗಣೆಗಳು ಇತ್ತೀಚಿನ ದಿನಗಳಲ್ಲಿ ಭಾರೀ ತೊಂದರೆ ಮಾಡುತ್ತಿವೆ. ಒಂದು ಅಡಿಕೆ ನೆಟ್ಟು ಸುಮಾರು 5 ವರ್ಷಕ್ಕೆ ಅದು ಫಲ ಕೊಡಲು ಪ್ರಾರಂಭವಾಗಬೇಕು. ಆದರೆ ಇಂತಹ ಕೀಟಗಳು ಧಾಳಿ ಮಾಡಿದವೆಂದರೆ ಅದರ ಬೆಳವಣಿಗೆಯೇ…