ತೃಣನಾದೆಯಲೋ ಮಾನವಾ.
ಸಮಸ್ತ ಆರ್ಥಿಕ ವ್ಯವಸ್ಥೆಯನ್ನೂ ಕ್ಷಣ ಮಾತ್ರದಲ್ಲಿ ನಾವು ಯಾರೂ ಕಲ್ಪಿಸದ ರೀತಿಯಲ್ಲಿ ಮಟ್ಟ ಹಾಕಿದ್ದು ಪ್ರಕೃತಿಯೇ. ಇನ್ನು ನಾವು ಪ್ರಕೃತಿಯ ಆಜ್ನೆಯಂತೆ ನಡೆಯಬೇಕು. ನಮ್ಮ ಆಟ ಏನೂ ನಡೆಯಲ್ಲ. ಬ್ಯಾಂಕುಗಳಲ್ಲಿ ಹಣ ಇಲ್ಲ. ಜನರ ತಿರುಗಾಟ ಇಲ್ಲ. ಮಾರುಕಟ್ಟೆ ಎಲ್ಲವೂ ಮಲಗಿದೆ. ಅಂಗಡಿ ಬಾಗಿಲುಗಳು ಮುಚ್ಚಿವೆ. ಸಾರಿಗೆಯ ವಾಹನಗಳಿಲ್ಲ. ಎಲ್ಲರೂ ಅವರವರ ಮನೆಯಲ್ಲಿದ್ದಾರೆ. ಇಡೀ ಅರ್ಥ ವ್ಯವಸ್ಥೆಯೇ ಸ್ಥಬ್ದವಾಗಿದೆ. ಇದು ಎಷ್ಟು ದಿನವೋ ಯಾರಿಗೂ ಗೊತ್ತಿಲ್ಲ. ಸಾಂಕ್ರಾಮಿಕ ರೋಗಗಳು ಕೋಟ್ಯಾಂತರ ರೂ.ಗಳನ್ನು ಬ್ಯಾಂಕಿನಲ್ಲಿಟ್ಟವರನ್ನೂ , ಸಾವಿರಾರು ಎಕ್ರೆ…