
ಕೇಂದ್ರ ವಿದ್ಯುತ್ ಕಾಯಿದೆ – ರೈತರಿಗೆ ತೊಂದರೆ ಇದೆಯೇ?
ಸರಕಾರ ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣ ಮಾಡಿದರೆ ರೈತರಿಗೆ ವಿದ್ಯುತ್ ಉಚಿತವಾಗಿ ಸಿಗುವುದಿಲ್ಲ. ಅದನ್ನು ನಾವು ವಿರೋಧಿಸಬೇಕು. ಖಾಸಗೀಕರಣ ಹಾಗೆ ಹೀಗೆ ಎಂದೆಲ್ಲಾ ರೈತರ ಕಿವಿ ತುಂಬಿ ಅವರನ್ನೂ ತಮ್ಮ ಬೆಂಬಲಕ್ಕೆ ಸೇರಿಸಿಕೊಳ್ಳಲು ಹವಣಿಕೆ ನಡೆಯುತ್ತಿದೆ. ಸರಕಾರ ಹಂತ ಹಂತವಾಗಿ ಎಲ್ಲಾ ಸರಕಾರೀ ವ್ಯವಸ್ಥೆಗಳನ್ನು ಖಾಸಗೀಕರಣ ಮಾಡುವ ತಯಾರಿಯಲ್ಲಿದೆ. ನಮ್ಮ ಪ್ರತಿನಿಧಿಗಳು ಯೋಗ್ಯರೇ ಆಗಿದ್ದರೆ ಇದರಿಂದ ಸಾರ್ವಜನಿಕರಿಗೆ ಅನುಕೂಲವೇ ಆಗುವುದು. ಕೇಂದ್ರ ಸರಕಾರ ನಾಳೆ ನಡೆಯಲಿರುವ ಮುಂಗಾರು ಅಧಿವೇಶನದಲ್ಲಿ ವಿದ್ಯುತ್ ಸರಬರಾಜು ವ್ಯವಸ್ಥೆಯ Electricity Amendment Bill 2021…