ಜನರಲ್ಲಿ ಭಯ ಮೂಡಿಸಿದ ಮಿಡತೆ ಹಾವಳಿ ಬಗ್ಗೆ ಹಿರಿಯ ಕೀಟ ಶಾಸ್ತ್ರಜ್ಞ, ಕರಾವಳಿ ಕರ್ನಾಟಕದ ಕೃಷಿ ತೋಟಗಾರಿಕಾ ವಲಯ ಸಂಶೋಧನಾ ಕೇಂದ್ರದ ಮುಖ್ಯಸ್ಥರಾದ ಶ್ರೀ ಎಸ್ ಯು ಪಾಟೀಲ್ ರವರು ಹೇಳುವ ಮಾತುಗಳು ಇವು.
ಮೇಲಿನ ಧ್ವನಿ ಮುದ್ರಿಕೆಯಲ್ಲಿ ಈ ವಿಚಾರದ ಬಗ್ಗೆ ಶ್ರೀಯುತರು ವಿವರವಾಗಿ ಹೇಳಿದ್ದಾರೆ.
- ಈ ಮಿಡತೆಗಳಿಂದ ಯಾವ ಹಾನಿಯೂ ಉಂಟಾಗದು ಭಯಪಡುವ ಅಗತ್ಯ ಇಲ್ಲ.ಮಹಾರಾಷ್ಟ್ರ ದಾಟಿ ಬರುವುದೇ ಸಂದೇಹ.
- ಮಿಡತೆಗಳಲ್ಲಿ ಉದ್ದ ಮೀಸೆಯವು ಪರಭಕ್ಷಕಗಳು.
- ಗಿಡ್ಡ ಮೀಸೆಯವು ಮಾತ್ರ ಸ್ವಲ್ಪ ಹಸುರನ್ನು ತಿನ್ನುವವುಗಳು.
- ಎಲ್ಲಾ ಮಿಡತೆಗಳೂ ಬೆಳೆ ಹಾನಿ ಮಾಡುವುದಿಲ್ಲ.
- ಮಿಡತೆಗಳು, ಜಿರಲೆಗಳು ಅತ್ಯಧಿಕ ಪ್ರೋಟೀನು ಉಳ್ಳವುಗಳು.
- ವಿದೇಶಗಳಲ್ಲಿ ಇದರ ಪ್ರೋಟೀನ್ ಭರಿತ ಆಹಾರ ಉತ್ಪನ್ನ್ಗಗಳು ಇವೆ.
- ನಮ್ಮಲ್ಲೂ ಸಧ್ಯವೇ ಇದು ಬರಲಿದೆ.
- ನಮ್ಮ ದೇಶದಲ್ಲೂ ಸತ್ವ ಭರಿತ ಆಹಾರ ಅವಶ್ಯಕತೆ ನೀಗಿಸಲು ಇದು ಅಗತ್ಯವಾದೀತು.
- ಹಲವು ಬಿಸ್ಕೆಟ್ ಹಾಗೂ ಅಧಿಕ ಸತ್ವದ ಆಹಾರಗಳಲ್ಲಿ ಇದನ್ನು ಸೇರಿಸಲಾಗುತ್ತದೆ.
- ಮಿಡತೆಗಳನ್ನು ಇದೇ ಉದ್ದೇಶಕ್ಕೆ ಸಾಕುವುದು ಜಗತ್ತಿನ ಹಲವು ದೇಶಗಳಲ್ಲಿ ಇದೆ.
- ಈಗ ಬಂದ ಮಿಡತೆಗಳು ಒಣ ವಾತಾವರಣ ಮತ್ತು ಮರಳುಗಾಡಿನಲ್ಲಿ ಮಾತ್ರ ಸಂತಾನಾಭಿವೃದ್ದಿ ಮಾಡುವವುಗಳು.
- ಇಲ್ಲಿಗೆ ಬರುವ ಸಾಧ್ಯತೆ ತುಂಬಾ ಕಡಿಮೆ. ಬಂದರೂ ನಮ್ಮಲ್ಲಿ ಅವು ಗೌಣವಾಗಬಲ್ಲದು.