ಇರುವೆಗಳು ಯಾಕೆ ಬರುತ್ತವೆ- ಇದರಿಂದ ತೊಂದರೆ ಇದೆಯೇ?

ಇರುವೆಗಳು ಯಾಕೆ ಬರುತ್ತವೆ- ಇದರಿಂದ ತೊಂದರೆ ಇದೆಯೇ?

ತರಕಾರಿಗಳಿಗೆ, ಹಣ್ಣು ಹಂಪಲುಗಳಿಗೆ ಇರುವೆಗಳು ಬರುವುದು ಸಾಮಾನ್ಯ. ಕೆಂಪು ಇರುವೆಗಳ ಉಪಟಳಕ್ಕೆ  ಯಾವುದನ್ನೂ ಬೆಳೆಯುವುದು ಬೇಡ ಎನ್ನಿಸುತ್ತದೆ. ವಿಚಿತ್ರ ವಿಚಿತ್ರ ಇರುವೆಗಳು ನಾವು ಬೆಳೆದ ಫಲಕ್ಕೆ ತೊಂದರೆ ಮಾಡುತ್ತವೆ. ಯಾಕೆ ಇವುಗಳು ರೈತರ ಬೆಳೆಗೆ ತೊಂದರೆ ಮಾಡುತ್ತವೆ. ಅವು ಯಾಕೆ ಬರುವುದು ಇದಕ್ಕೆಲ್ಲಾ ಉತ್ತರ ಇಲ್ಲಿದೆ. ಇವು ಬರಬೇಕಾದರೆ ಯಾವುದಾದರೂ ಕಾರಣ ಇರಬೇಕು. ಗಾಳಿ ಬಾರದೆ ಎಲೆ ಅಲ್ಲಾಡಲಿಕ್ಕಿಲ್ಲ. ಸಿಹಿ ಇಲ್ಲದೆ ಇರುವೆ ಬರಲಿಕ್ಕಿಲ್ಲ ಎಂಬ ಮಾತಿದೆ. ಇವುಗಳು ಬೆಳೆಗೆ ತೊಂದರೆ ಮಾಡಲು ಬರುವುದೋ ಅಥವಾ ಅವು…

Read more
ಬೇರು ಹುಳ ನಿಯಂತ್ರಣಕ್ಕೆ ಇದು ಸಕಾಲ.

ಬೇರು ಹುಳ ನಿಯಂತ್ರಣಕ್ಕೆ ಇದು ಸಕಾಲ.

ಬೇರು ಹುಳ white grub ಅಡಿಕೆ ಬೆಳೆಗೆ ಅತೀ ದೊಡ್ಡ ಶತ್ರು ಎಂತಲೇ ಹೇಳಬಹುದು. ಇದು ಬರೇ ಅಡಿಕೆ ಬೆಳೆಗೆ ಮಾತ್ರವಲ್ಲ.ಕಬ್ಬು, ತೆಂಗು ಹಾಗೆಯೇ ಇನ್ನಿತರ ಮರಮಟ್ಟು ಬೆಳೆಗಳಿಗೂ ಇದು ತೊಂದರೆ ಮಾಡುತ್ತದೆ. ಮರಗಳ ಕಾಂಡ ಕೊರಕ, ಗೆಲ್ಲು ಕೊರಕ, ಬೇರು ತಿನ್ನುವ ಹುಳಗಳ ತೊಂದರೆ ಈ ಸಮಯದಲ್ಲೇ ಜಾಸ್ತಿ. ಇದನ್ನು ನೀವೂ ಗಮನಿಸಿರಬಹುದು. ಕಾರಣ ಇಷ್ಟೇ. ಈ ಸಮಯದಲ್ಲಿ ಜೂನ್ , ಜುಲೈ ತಿಂಗಳಲ್ಲಿ ದುಂಬಿಗಳು ಮೊಟ್ಟೆ ಇಟ್ಟದ್ದು ಮರಿಗಳಾಗಿ ತಮ್ಮ  ಆಹಾರ ಸೇವನೆ ಕೆಲಸ…

Read more
ಕರಿಮೆಣಸು ಬಳ್ಳಿ ಸಾಯುತ್ತಿದೆಯೇ? ಈ ಕೀಟ ಇರಬಹುದು ಗಮನಿಸಿ.

ಕರಿಮೆಣಸು ಬಳ್ಳಿ ಸಾಯುತ್ತಿದೆಯೇ? ಈ  ಕೀಟ ಇರಬಹುದು ಗಮನಿಸಿ.

ಕರಿಮೆಣಸಿನ ಬಳ್ಳಿಗೆ ರೋಗ ಬರುತ್ತದೆ. ಇದರಿಂದಾಗಿ ಬಳ್ಳಿ ಸಾಯುತ್ತದೆ ಎಂಬುದು ನಮಗೆಲ್ಲಾ ಗೊತ್ತಿರುವ ವಿಚಾರ. ಆದರೆ ರೋಗ ಬಂದು ಬಳ್ಳಿ ಸಾಯುವುದಲ್ಲದೆ ಕೀಟದ ಕಾರಣದಿಂದಲೂ ಬಳ್ಳಿ ಸಾಯುತ್ತದೆ. ಇದು ಹರಡುವ ಕೀಟವಾಗಿದ್ದು, ರೋಗದಿಂದ ಬಳ್ಳಿ ಒಣಗಿದಂತೆ ಇದರಿಂದಲೂ ಒಣಗುತ್ತದೆ. ಕರೆಗಳೂ ಉದುರುತ್ತದೆ. ಎಲೆಗಳೂ ಉದುರುತ್ತದೆ. ಈ ಬಗ್ಗೆ ಮಾಹಿತಿ ಇಲ್ಲಿದೆ. ಗದ್ದೆ ಬೇಸಾಯ ಮಾಡುವವರಿಗೆ ಬೇಸಾಯ ಕೈ ಹಿಡಿಯಬೇಕಿದ್ದರೆ ದಿನಾ ಗದ್ದೆಗೆ ಸುತ್ತು ಬರಬೇಕಂತೆ. ಅದಕ್ಕಾಗಿಯೇ ಗದ್ದೆಗೆ ಹುಣಿಯೂ ಇರುತ್ತದೆ. ಉತ್ತಮ ಬೇಸಾಯಗಾರರು ಬೆಳಗ್ಗಿನ ಹೊತ್ತು ಗದ್ದೆಗೆ…

Read more
ತೆಂಗಿಗೆ ಯಾಕೆ ಈ ಕೀಟದ ಹಾವಳಿ ಹೆಚ್ಚಾಯಿತು? ಏನು ಪರಿಹಾರ.

ತೆಂಗಿಗೆ ಯಾಕೆ ಈ ಕೀಟದ ಹಾವಳಿ ಹೆಚ್ಚಾಯಿತು? ಏನು ಪರಿಹಾರ.

ತೆಂಗಿನ ಮರ, ಗಿಡಗಳಿಗೆ ಇತ್ತೀಚೆಗೆ ಕೆಂಪು ಮೂತಿ ಕೀಟದ ಹಾವಳಿ ಭಾರೀ ಹೆಚ್ಚಾಗುತ್ತಿದೆ. ರೈತರು ತೆಂಗು ಬೆಳೆಯುವುದೇ ಅಸಾಧ್ಯ ಎನ್ನಲಾರಂಭಿಸಿದ್ದಾರೆ. ಹೀಗೇ ಮುಂದುವರಿದರೆ ರೈತರಿಗೆ ಸಸಿ ನೆಡುವುದೇ ಕೆಲಸವಾದರೂ ಅಚ್ಚರಿ ಇಲ್ಲ. ಇದನ್ನು ಸರಿಯಾಗಿ ಹದ್ದುಬಸ್ತಿಗೆ ತಾರದೆ ಇದ್ದರೆ ಮುಂದೆ ರೈತರು ತೆಂಗು ಬೆಳೆಸುವುದನ್ನೇ ಬಿಡುವ ಸ್ಥಿತಿ ಬಂದರೂ ಅಚ್ಚರಿ ಇಲ್ಲ. ಯಾವ ಕಾರಣಕ್ಕೆ ಈ ದುಂಬಿ ಹೆಚ್ಚಾಗುತ್ತಿದೆ. ಇದರ ನಿಯಂತ್ರಣ ಹೇಗೆ? ತೆಂಗಿನ ಮರಗಳಿಗೆ ಬರುವ ಎಲ್ಲಾ ರೋಗಗಳಿಂದಲೂ, ಕೀಟಗಳಿಂದಲೂ  ಪ್ರಭಲವಾದದ್ದು  ಕೆಂಪು ಮೂತಿ ದುಂಬಿ…

Read more
Why are areca nut leaves turn yellow

Why are areca nut leaves turn yellow?

Arecanut leaves are the indicators of its health and yield. The greener, vigorous leaves are very important in their all-growth phase. But this year almost all farm become yellow. Why? In this video, we can discuss the reason for the yellowing of areca nut leaves. Everywhere we can see this situation. Now after the rain,…

Read more
ಹಾಲಿ ವರ್ಷದಲ್ಲಿ 50% ಅಡಿಕೆ ಉತ್ಪಾದನೆ ಕೊರತೆ. ಬೆಲೆ ಏರುವ ಸಾಧ್ಯತೆ

ಹಾಲಿ ವರ್ಷದಲ್ಲಿ 50% ಅಡಿಕೆ ಉತ್ಪಾದನೆ ಕೊರತೆ. ಬೆಲೆ ಏರುವ ಸಾಧ್ಯತೆ.

ಹಾಲೀ ವರ್ಷದ ಹವಾಮಾನ ವೈಪರೀತ್ಯದ ಕಾರಣ ಅಡಿಕೆಯ ಸಾಂಪ್ರದಾಯಿಕ ಬೆಳೆ ಪ್ರದೇಶಗಳಲ್ಲಿ 50% ಫಸಲು ನಷ್ಟವಾಗಿದ್ದು, ಈ ನಷ್ಟ ಇನ್ನೂ ಒಂದೆರಡು ಮುಂದುವರಿಯುವ ಸಾಧ್ಯತೆ ಇದೆ.ಈಗಾಗಲೇ ಅಡಿಕೆ ತೋಟಗಳು ನೀರಿಲ್ಲದೆ, ನೀರು ಇದ್ದೂ ಹಾಳಾಗಿದೆ. ಅಡಿಕೆ ಮರಗಳಲ್ಲಿ ಗರಿಗಳು ಒಣಗಿವೆ. ಹೂಗೊಂಚಲು ಕರಟಿ ಹೋಗಿವೆ, ಬೆಳೆಗಾರರು ಮರ ಉಳಿದರೆ ಸಾಕು ಎನ್ನುವ ಸ್ಥಿತಿಗೆ ಬಂದಿದ್ದಾರೆ. ಅಡಿಕೆ ಬೆಳೆಗಾರರ ಪಾಲಿಗೆ ಈ ವರ್ಷದ ಹವಾಮಾನ ವೈಪರೀತ್ಯ ಅತೀ ದೊಡ್ಡ ನಷ್ಟವನ್ನು ಉಂಟುಮಾಡಿದೆ. ದಕ್ಷಿಣ ಕನ್ನಡ, ನೆರೆಯ ಕಾಸರಗೋಡು, ಉಡುಪಿ,…

Read more
ಹಣ್ಣು - ತರಕಾರಿ ಬೆಳೆಯುವವರ ಪಾಲಿಗೆ ಪರಮ ವೈರಿ ಈ ಕೀಟ.

ಹಣ್ಣು – ತರಕಾರಿ ಬೆಳೆಯುವವರ ಪಾಲಿಗೆ ಪರಮ ವೈರಿ ಈ ನೊಣ.

ಹಣ್ಣು  ತರಕಾರಿ ಬೆಳೆಗಾರರು ಬೆಳೆದ ಎಲ್ಲಾ ಉತ್ಪನ್ನಗಳೂ ಹಾಳಾಗದೆ ಉಳಿದರೆ, ಅವರಿಗೆ ಲಕ್ಷ್ಮಿ ಒಲಿದಂತೆ. ಆದರೆ ಈ ಒಂದು ಕೀಟ ಅವರ ಪಾಲಿನ ಪರಮ ವೈರಿ. ದೇವರು ಕೊಟ್ಟರೂ ಅರ್ಚಕ ಬಿಡ ಎಂಬಂತೆ ಈ ಕೀಟ  ಸಾಧ್ಯವಾದಷ್ಟೂ ತೊಂದರೆ ಮಾಡಿ ರೈತನ ಪಾಲಿಗೆ ಸಿಂಹ ಸ್ವಪ್ನವಾಗುತ್ತಿದೆ. ನಮ್ಮ ದೇಶವೂ ಸೇರಿದಂತೆ ಪ್ರಪಂಚದಾದ್ಯಂತ ರೈತ ಬೆಳೆದ ಹಣ್ಣು , ತರಕಾರಿಗಳಲ್ಲಿ 50% ಕ್ಕೂ ಹೆಚ್ಚು ಕೀಟಗಳ ಪಾಲಾಗುತ್ತಿವೆ. ಮಾವಿನ ಹಣ್ಣಿಗೆ ಮಾರುಕಟ್ಟೆಯಲ್ಲಿ ಕಿಲೋ 100 ಇರಬಹುದು. ಆದರೆ ರೈತನಿಗೆ…

Read more
banana plants

ಮಳೆಗಾಲದಲ್ಲಿ ಬಾಳೆ ಸಸ್ಯ ಮಗುಚಿ ಬೀಳುವುದಕ್ಕೆ ಕಾರಣ- ಪರಿಹಾರ.

ಮಳೆಗಾಲದಲ್ಲಿ ಬಾಳೆ ದಂಟು ಮುರಿದು ಬೀಳುವ ಸಮಸ್ಯೆ ಎಲ್ಲಾ ಕಡೆಯಲ್ಲೂ ಕಂಡು ಬರುತ್ತದೆ. ಅಂತಹ ಬಾಳೆಯ ಕಾಂಡವನ್ನು ಸ್ವಲ್ಪ ಕಡಿದು ನೋಡಿದರೆ ಕಾಂಡ ಹಾಳಾಗಿರುತ್ತದೆ. ಬಾಳೆಯ ಸಸ್ಯಗಳು ಇನ್ನೇನೋ ಗೊನೆ ಹಾಕಬೇಕು ಎಂಬ ಹಂತದಲ್ಲಿ, ಅಥವಾ ಗೊನೆ ಹಾಕಿ ಬೆಳೆಯುತ್ತಿರುವ ಹಂತದಲ್ಲಿ ಇದಕ್ಕೆ ಇಂದು ಕೀಟ ತೊಂದರೆ  (Pseudostem borer,and Rhizome weevil)ಮಾಡುತ್ತದೆ. ಈ ಕೀಟದ ಚಟುವಟಿಕೆ ಮಳೆಗಾಲ ಪ್ರಾರಂಭದಲ್ಲಿ ಮತ್ತು ಕೊನೆಗೆ ಹೆಚ್ಚು. ಇದರಿಂದ ಇಡೀ  ಗೊನೆ ಹಾಳಾಗುತ್ತದೆ. ಉಳಿದ ಬಾಳೆಗೂ ಪ್ರಸಾರವಾಗುತ್ತದೆ. ಬಾಳೆ ಗೊನೆ…

Read more
cashew

ಗೇರು – ಈಗ ಮರಗಳ ಮೇಲೆ ಒಮ್ಮೆ ದೃಷ್ಟಿ ಹರಿಸುತ್ತಿರಿ

ಈ ಸಮಯದಲ್ಲಿ ಗೇರು ಮರಗಳಲ್ಲಿ ಗೇರು ಬೀಜದ ಕೊಯಿಲು ನಡೆಯುತ್ತಿರುತ್ತದೆ. ಗೇರು ಬೀಜ ಕೊಯಿಲಿಗೆ ಹೋಗುವ ಸಮಯದಲ್ಲಿ ಬುಡ ಭಾಗವನ್ನು ತಪ್ಪದೇ ಗಮನಿಸಿರಿ. ಈ ಸಮಯದಲ್ಲಿ ಬುಡದ ಕಾಂಡಕ್ಕೆ ಕಾಂಡ ಕೊರಕ ಹುಳು ಬಾಧಿಸುತ್ತದೆ. ಈ ಹುಳು ಬಾಧಿಸಿದ ಸಮಯದಲ್ಲಿ ಉಪಚಾರ ಮಾಡಿದರೆ  ಮಾತ್ರ ಅದನ್ನು ಬದುಕಿಸಲು ಸಾಧ್ಯ.  ಪತ್ತೆ ಕ್ರಮ: ಗೇರು ಮರಕ್ಕೆ ಮಾರಣಾಂತಿಕವಾಗಿ ಹಾನಿ ಮಾಡುವ ಕೀಟ ಕಾಂಡ ಕೊರಕ (Stem borer of cashew). ಈ ಸಮಯದಲ್ಲಿ ಕಾಂಡ ಕೊರಕ ಕೀಟ ಕಾಡದ…

Read more
ಹೂವು ಬಿಟ್ಟ ಮಾವಿನ ಮರ

ಮಾವಿನ ಹೂವು ಉದುರದಂತೆ ರಕ್ಷಿಸುವ ವಿಧಾನ.

ಈ ವರ್ಷ ಮಾವಿನ ಮರಗಳೆಲ್ಲಾ ಹೂವು  ಬಿಟ್ಟಿವೆ. ಎಲ್ಲಾ ಹೂವು ಕಾಯಿಕಚ್ಚಿ ಕಾಯಿಯಾದರೆ ಮಾವಿನ ಮಾರುಕಟ್ಟೆಯೇ ಸಾಕಾಗದು. ಆದರೆ ಬಹುತೇಕ ಮಾವಿನ ಹೂವು ಉಳಿಯುವುದಿಲ್ಲ.  ರಕ್ಷಿಸಲು ಕೆಲವು ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು. ಮಾವಿನ ಮರದಲ್ಲಿ ಹೂ ಬಿಡುವ ಹಂತ ಬಹಳ ನಿರ್ಣಾಯಕ ಹಂತವಾಗಿದ್ದು, ದೊಡ್ಡ ದೊಡ್ಡ ಬೆಳೆಗಾರರರು  ಹೂ ಉಳಿದು ಕಾಯಿ ಹೆಚ್ಚಲು ಗರಿಷ್ಟ ಸಿಂಪರಣೆ ಮಾಡುತ್ತಾರೆ.ವಾಣಿಜ್ಯಿಕ ಮಾವು ಬೆಳೆಗೆ ಇದೆಲ್ಲಾ ಸರಿ. ಸಣ್ಣ ಸಣ್ಣ ಹಿತ್ತಲಿನ ಹಣ್ಣು ಹಂಪಲು ಮರವುಳ್ಳವರು ಹೂವು ಬಿಟ್ಟದ್ದನ್ನು ರಕ್ಷಿಸಿಕೊಳ್ಳುವ  ಉಪಾಯ…

Read more
error: Content is protected !!