ಅಧಿಕಇಳುವರಿಗೆ ನೆರವಾಗುವ ರಾಸಾಯನಿಕ ಇಲ್ಲದ NPK ಪೋಷಕ.

ಕೆಲವು ರೈತರು ಬೆಳೆಗಳಿಗೆ ಎಲ್ಲಾ ರೀತಿಯ ಗೊಬ್ಬರಗಳನ್ನು ಕೊಡುತ್ತಾರೆ. ವರ್ಷದಿಂದ ವರ್ಷಕ್ಕೆ ಗೊಬ್ಬರ ಕೊಡುವ ಪ್ರಮಾಣವನ್ನೂ ಹೆಚ್ಚಿಸುತ್ತಾರೆ. ಆದರೆ ವರ್ಷದಿಂದ ವರ್ಷಕ್ಕೆ ಫಸಲು ಕಡಿಮೆಯಾಗುತ್ತದೆ. ಸಸ್ಯ ದ ಆರೋಗ್ಯವೂ ಹಾಳಾಗುತ್ತದೆ. ಇದಕ್ಕೆ ಕಾರಣ ಮಣ್ಣಿನ ಜೈವಿಕತೆ ಕ್ಷೀಣಿಸುವುದು. ಪರಿಸ್ಥಿತಿಗೆ ಸಹಜವಾಗಿ ಮಣ್ಣಿಗೆ ಸಾವಯವ ವಸ್ತುಗಳನ್ನು ಹೇರಳವಾಗಿ ಪೂರೈಕೆ ಮಾಡಲು ಆಗುತ್ತಿಲ್ಲ. ಇದರಿಂದಾಗಿ ಮಣ್ಣಿನ ಜೈವಿಕ ಗುಣ ಕ್ಷೀಣವಾಗುತ್ತಾ ಬರುತ್ತದೆ. ಹಾಕಿದ ಗೊಬ್ಬರವನ್ನು ಲಭ್ಯಸ್ಥಿತಿಗೆ ತಂದು ಅಧಿಕಇಳುವರಿ ಪಡೆಯಲು ಈ ಜೈವಿಕ ಸಮ್ಮಿಶ್ರಣ ನೆರವಾಗುತ್ತದೆ. ನಾವು ತಿನ್ನುವ ಆಹಾರ ದೇಹದಲ್ಲಿ…

Read more
ಪರಭಕ್ಷಕ ಇರುವೆ

ಇರುವೆಗಳಿಂದ ಬೆಳೆಗೆ ತೊಂದರೆ ಇದೆಯೇ?

ಇರುವೆಗಳು ನಮ್ಮ ಹೊಲದಲ್ಲಿ ಅಲ್ಲಲ್ಲಿ ನೆಲದ ಮಣ್ಣನ್ನು ತಿರುವಿ ಹಾಕುವ  ಕೆಲಸವನ್ನು ಮಾಡುತ್ತವೆ. ಕೆಲವೊಮ್ಮೆ  ಹಣ್ಣು ಹಂಪಲುಗಳ ಮೇಲೆಯೂ ವಾಸಿಸುತ್ತವೆ. ಎಲೆಯಲ್ಲಿ ಗೂಡುಕಟ್ಟಿ ಕುಳಿತಿರುತ್ತವೆ. ಇವುಗಳಿಂದ ರೈತನಿಗೆ ಯಾವ ಹಾನಿಯೂ ಇಲ್ಲ. ಇವು ಒಂದು ದೃಷ್ಟಿಯಲ್ಲಿ  ಮಣ್ಣನ್ನು ಸುಸ್ಥಿತಿಯಲ್ಲಿಡುವ ಜೀವಿಗಳು. ಯಾರ ಮಣ್ಣಿನಲ್ಲಿ ಇರುವೆಗಳು ಚಟುವಟಿಕೆಯಲ್ಲಿ ಇರುತ್ತವೆಯೋ ಆ ಮಣ್ಣು ಫಲವತ್ತಾದ ಮಣ್ಣಾಗಿರುತ್ತದೆ. ಇರುವೆಗಳಲ್ಲಿ ಪ್ರಕಾರಗಳು: ನೆಲದಲ್ಲಿ ಹಲವಾರು ಬಗೆಯ ಇರುವೆಗಳು ವಾಸವಾಗಿರುತ್ತವೆ. ಸಾಮಾನ್ಯವಾಗಿ ನೆಲದಲ್ಲಿ  ಹರಿದಾಡುವ ಇರುವೆಗಳು ಬೇರೆ ಕಡೆ ವಾಸಿಸುವುದು ಅಪರೂಪ. ಕೆಲವು ಇರುವೆಗಳು…

Read more
error: Content is protected !!