ಅಡಿಕೆ ಮರದ ಸಿಂಗಾರದ ಹುಳ ನಿವಾರಣೆಗೆ ಮತ್ತು ಸುಳಿ ತಿಗಣೆ ನಿಯಂತ್ರಣಕ್ಕೆ ರೈತರು ವಿಷ ರಾಸಾಯನಿಕ ಸಿಂಪರಣೆ ಮಾಡಿ ಜೇನು ನೊಣಗಳ ಮಾರಣಹೋಮ ನಡೆಯುತ್ತಿದೆ ಎಂಬ ಆರೋಪವಿದೆ. ನಿಜವಾಗಿ ಇದು ಕೀಟನಾಶಕದ ಫಲವೇ ಅಲ್ಲ ನಮ್ಮ ಅಜ್ಞಾನದ ಫಲವೇ ?
- ಹೌದು.
- ನಮ್ಮ ರೈತರು ಮಾಡುವ ಕೆಲವು ಅಚಾತುರ್ಯಗಳಿಂದ ನಮ್ಮ ಕಣ್ಣೆದುರು ಜೇನು ನೊಣಗಳು- ಇತರ ಪರಾಗ ಸ್ಪರ್ಷ ಮಾಡುವ ಕೀಟಗಳು ಸಾಯುತ್ತವೆ.
- ಮುಂದೆ ನಾವೂ ಇದೇ ಕಾರಣದಿಂದ ಅಸ್ವಸ್ಥರಾಗಿ ಸಾಯುವುದೇ.
Click to WhatsApp us and build your website now!
ಯಾಕೆ ಹೀಗಾಗುತ್ತದೆ?
- ನಾವು ಬಳಕೆ ಮಾಡುವ ಕೀಟನಾಶಕದ ಬಗ್ಗೆ ನಮಗೆ ತಿಳುವಳಿಕೆ ಸಾಲದೆ ತೊಂದರೆಗಳು ಸಹಜವಾಗಿ ಆಗುತ್ತದೆ.
- ತತ್ ಕ್ಷಣಕ್ಕೆ ಜೇನು ನೊಣಗಳು ಸಾಯುತ್ತವೆ. ನಾವೂ ಮುಂದೆ ಅಸ್ವಸ್ಥರಾಗುತ್ತೇವೆ.
- ಕೀಟ ಬಂದಿದೆ ಎಂದರೆ ಅದು ಯಾವುದು ಎಂದು ಸ್ಪಷ್ಟವಾಗಿ ನೋಡುವ ವ್ಯವಧಾನ ನಮ್ಮಲ್ಲಿಲ್ಲ.
- ಬೇರೆಯವರು ಹೇಳಿದರು ಎಂದು ನಾವು ಅದನ್ನೇ ಬಳಕೆ ಮಾಡುತ್ತೇವೆ.
- ಕೀಟನಾಶಕ ಮಾರಾಟಗಾರರಿಂದ ಸ್ಟ್ರಾಂಗ್ ಔಷಧಿ ಕೊಡಿ ಎಂದು ಕೇಳುತ್ತೇವೆ.
- ಬಳಕೆ ವಿಧಾನ / ಪ್ರಮಾಣದ ಬಗ್ಗೆ ಕೇಳುವುದಿಲ್ಲ. ಹಸ್ತ ಪ್ರತಿ ಓದುವುದಿಲ್ಲ.
- ಕೀಟ ನಾಶಕ ತಯಾರಕರೂ ಬಳಕೆ ಕ್ರಮದ ಹಸ್ತ ಪ್ರತಿಯನ್ನು ತೀರಾ ಕಳಪೆ ದರ್ಜೆಯ ಕಾಗದಲ್ಲಿ , ಕಣ್ಣಿಗೆ ಕಾಣದಷ್ಟು ಸಣ್ಣ ಅಕ್ಷರದಲ್ಲಿ ಮುದ್ರಿಸಿ ಒದಗಿಸುತ್ತಾರೆ.
- ಪ್ರತೀ ಬಾಟಲಿಯಲ್ಲಿ ಅಂಟಿಸುವುದನ್ನು ಬಿಟ್ಟಂತಿದೆ.
- ಕೀಟನಾಶಕಗಳಿಗೆ ಕಾನೂನಿನ ಬಿಗು ತುಂಬಾ ಕಡಿಮೆಯಾದಂತೆ ಕಂಡು ಬರುತ್ತದೆ.
- ತಯಾರಕರೂ ತಮ್ಮ ಉತ್ಪನ್ನವನ್ನು ಇಷ್ಟು ಲೀ. ನೀರಿಗೆ ಇಷ್ಟು ಗ್ರಾಂ ಅಥವಾ ಇಷ್ಟು ಮಿಲಿ ಎಂದು ಮುದ್ರಿಸಿರುವುದಿಲ್ಲ.
- ಎಕ್ರೆಗೆ ಇಷ್ಟು ಎಂಬ ಪ್ರಮಾಣವನ್ನು ಸೂಚಿಸಿರುತ್ತಾರೆ .
- ಇದು ಕೀಟನಾಶಕದ ದುರ್ಬಳಕೆಗೆ ಕಾರಣವಾಗಿದೆ.
![](https://kannada.krushiabhivruddi.com/wp-content/uploads/2020/02/DSC01754-FILEminimizer-1.jpg)
ಇದೆಲ್ಲಾ ಕಾರಣಗಳಿಂದ ರೈತರು ತಮಗೆ ತೋಚಿದಂತೆ ಕೀಟನಾಶಕ ಬಳಕೆ ಮಾಡಿ ಅನಾಹುತಗಳನ್ನು ಮೈಗೆಳೆದುಕೊಳ್ಳುತ್ತಿದ್ದಾರೆ. ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಬಳಕೆ ಮಾಡುವುದು, ನಿರ್ದಿಷ್ಟ ಕೀಟದ ನಿಯಂತ್ರಣಕ್ಕೆ ಸಾಕಾಗುವ ಔಷಧಿಯನ್ನು ಬಳಸದೆ ಇಲಿ ಕೊಲ್ಲಲು ಹುಲಿಯ ತಯಾರಿ ಮಾಡುತ್ತೇವೆ.
ಮೂಲ ತಿಳುವಳಿಕೆ:
![](https://kannada.krushiabhivruddi.com/wp-content/uploads/2020/02/insecicide.png)
- ಕೀಟನಾಶಕಗಳಲ್ಲಿ ಸ್ಪರ್ಶ ಕೀಟನಾಶಕ ಮತ್ತು ಅಂತರ್ವ್ಯಾಪೀ ಕೀಟನಾಶಕ ಎಂದು ಎರಡು ವಿಧ.
- ಸ್ಪರ್ಶ ಕೀಟನಾಶಕಗಳು ಎಂದರೆ ಸಂಬಂಧಿಸಿದ ಕೀಟದ ಮೇಲೆ ಕೀಟನಾಶಕ ತಗಲಿದರೆ ಮತ್ತು ಯಾವುದಾದರೂ ಬೆಳೆಯ ಮೇಲೆ ಕೀಟದ ವಾಸ ಇದ್ದರೆ ಈ ಕೀಟನಾಶಕ ಸಿಂಪಡಿಸಿದಾಗ ಅದು ಸಾಯುತ್ತದೆ.
- ಅದರ ಉಳಿಕೆ ಅಂಶ ಹೆಚ್ಚು ಸಮಯ ಇರುವುದಿಲ್ಲ.
- ಸಸ್ಯ ಭಾಗಕ್ಕೆ ಇದು ತಗಲಿದರೆ ಅದರ ಮೇಲೆ ಕೀಟ ಕುಳಿತರೆ ಅಥವಾ ರಸ ಹೀರಿದರೆ ಅದು ಸಾಯಲೂ ಬಹುದು.
- ಕೀಟಗಳಿಗೆ ಸಿಂಪರಣೆ ಮಾಡಿದ ವಾಸನೆ ಮತ್ತು ಅದು ಅಂಟಿರುವ ಭಾಗ ಗಮನಕ್ಕೆ ಬಂದು ಅಲ್ಲಿಗೆ ಅವು ಸುಳಿಯುವುದು ತುಂಬಾ ಕಡಿಮೆ.
- ಹೆಚ್ಚೆಂದರೆ ಇದರ ಪರಿಣಾಮ 2- 7 ದಿನಗಳ ತನಕ ಮಾತ್ರ ಉಳಿಕೆ ಇರುತ್ತದೆ.
- ಅಂತರ್ವ್ಯಾಪೀ ಕೀಟನಾಶಕ ಇದು ಒಂದು ವಿಶಿಷ್ಟ ಕೀಟನಾಶಕವಾಗಿದೆ.
- ಬೆಳೆಗಳಿಗೆ ಸಿಂಪಡಿಸುವಾಗ ಯಾವ ಕೀಟ ಇರಲಿ ಇಲ್ಲದಿರಲಿ, ಅದು ಸಸ್ಯಾಂಗದ ಒಳ ಸೇರಿ ಧೀರ್ಘ ಕಾಲದ ತನಕ ಅಲ್ಲಿ ಇರುತ್ತದೆ.
- ಉಳಿಕೆ ಅಂಶ ಇರುವ ತನಕ ಬಂದು ರಸ ಹೀರುವ ಕೀಟವನ್ನು ಸಾಯುವಂತೆ ಮಾಡುತ್ತದೆ.
- ಇದು ಸುಮಾರು 7 ದಿನದಿಂದ 40 ದಿನಗಳ ಕಾಲ ಸಸ್ಯಾಂಗದಲ್ಲಿ ಸೇರಿಕೊಂಡಿರುತ್ತದೆ.
ಸ್ಪರ್ಶ ಕೀಟನಾಶಗಳ ತೊಂದರೆ ಸ್ವಲ್ಪ ಕಡಿಮೆ. ಅಂತರ್ವ್ಯಾಪೀ ಕೀಟನಾಶಕಗಳಿಂದ ವಾತಾವರಣದ ಮೇಲೆ ದುಷ್ಪರಿಣಾಮ ಹೆಚ್ಚು.
![](https://kannada.krushiabhivruddi.com/wp-content/uploads/2020/02/DSC02571-FILEminimizer.jpg)
- ಜೇನು ನೊಣಗಳ ಶರೀರಕ್ಕೆ ಸೇರಿ ಅದು ಗೂಡಿನ ಇತರ ನೊಣಗಳಿಗೆ ಪರಾಗ- ಮಧುವಿನ ಮೂಲಕ ತಲುಪುತ್ತದೆ.
- ಸಸ್ಯ ಅಂಗದ ಒಳಗೆ ಸೇರಿದಂತೆ ಅದು ಮಾನವನ ರೋಮ ನಾಳಗಳ ಮೂಲಕ ದೇಹಕ್ಕೂ ಸೇರುವ ಸಾಧ್ಯತೆ ಇದೆ.
- ಇದನ್ನು ತುಂಬಾ ಎಚ್ಚರಿಕೆಯಿಂದ ಬಳಸಬೇಕು.
- ಶಿಫಾರಿತ ಪ್ರಮಾಣಕ್ಕಿಂತ ಹೆಚ್ಚು ಬಳಸಿದರೆ ಕೀಟಕ್ಕೆ ಬೇಗ ನಿರೋಧಕ ಶಕ್ತಿ ಬರುತ್ತದೆ.
- ಈಗಿನ ಹೊಸ ತಲೆಮಾರಿನ ಕೆಲವು ( ಇಮಿಡಾ, ಮುಂತಾದವು) ಕೀಟನಾಶಕಗಳನ್ನು ನಿಜವಾಗಿ ಪ್ರತೀ ಲೀ. ನೀರಿಗೆ ¼ ಮಿಲಿ . 100 ಲೀ. 25 ಮಿಲಿ. ಸಾಕು.
- ಆದರೆ ಅದನ್ನು ಮಾರುಕಟ್ಟೆ ಅನುಕೂಲಕ್ಕಾಗಿ ½ ಮಿಲಿ ಎನ್ನುತ್ತಾರೆ.
- ಜನ ಇದನ್ನು 2 ಮಿಲಿ ತನಕ ಬಳಕೆ ಮಾಡುತ್ತಾರೆ. ಇದರಿಂದ ತೊಂದರೆಗಳು ಆಗದಿರುತ್ತದೆಯೇ?
ಜೇನು ನೊಣಗಳ ರಕ್ಷಣೆ:
- ಜೇನು ನೊಣಗಳು ಬಹಳ ಸೂಕ್ಷ್ಮ ಕೀಟಗಳಾಗಿದ್ದು ಅಲ್ಪ ಸ್ವಲ್ಪ ಸೋಂಕು ತಗಲಿದರೂ ಸಾಯುತ್ತವೆ.
- ತಂಬಾಕು, ಗುಟ್ಕಾ ವಾಸನೆಗೇ ಸಾಯುತ್ತವೆ. ಹಾಗೆಂದು ಎಲ್ಲಾ ಕೀಟನಾಶಕಗಳಿಗೆ ಅವು ಸಾಯುವುದಿಲ್ಲ.
- ಸ್ಪರ್ಶ ಕೀಟ ನಾಶಕಗಳಿಗೆ ಸಾಯುವ ಸಾಧ್ಯತೆ ಕಡಿಮೆ.
- ಹಾಗೆಂದು ನೊಣಗಳ ಮೇಲೆ ಹನಿ ಬಿದ್ದಾಗ ಸಾಯುವ ಸಾಧ್ಯತೆ ಇದೆ.
- ಕೀಟ ನಾಶಕಗಳಲ್ಲಿ ಮೂರು ಬಣ್ಣಗಳ ಮೂಲಕ ಯಾವುದು ಕಡಿಮೆ ಹಾನಿಕಾರಕ ಎಂದು ತಿಳಿದು ಬಳಕೆ ಮಾಡಬೇಕು.
- ಕೆಂಪು ಬಣ್ಣದ ಕೀಟ ನಾಶಕಗಳು ಬಹುತೇಕ ಅಂತರ್ವ್ಯಾಪೀ ಕೀಟನಾಶಕಗಳಾಗಿದ್ದು, ಅದನ್ನು ಬಳಕೆ ಮಾಡದಿರುವುದು ಪರಿಸರ ಹಾಗೂ ಮಾನವನ ಆರೋಗ್ಯ ದೃಷ್ಟಿಯಿಂದ ಅವಶ್ಯಕ.
- ಹಳದಿ ಮಾರ್ಕ್ ನ ಕೀಟನಾಶಕಗಳು ಜೇನು ಹುಳಗಳಿಗೆ ತೊಂದರೆ ಇಲ್ಲ. ಪ್ರಮಾಣಕ್ಕಿಂತ ಹೆಚ್ಚು ಬಳಕೆ ಮಾಡಿದರೆ ತೊಂದರೆ ಇದೆ.
- ಕಾಪರ್ ಸಲ್ಫೇಟ್ ಮುಂತಾದ ನೀಲಿ ಬಣ್ಣದ ಕೀಟ ನಾಶಕಗಳು ಅಂತಹ ತೊಂದರೆ ಮಾಡಲಾರವು.
- ಹಸುರು ಬಣ್ಣದ ಜೈವಿಕ ಕೀಟನಾಶಕ – ಸಸ್ಯ ಜನ್ಯ ಕೀಟನಾಶಕ ಗಳಿಂದ ಜೇನು ನೊಣಗಳಿಗೆ ಹಾನಿ ಇಲ್ಲ.
- ಹಾಗೆಂದು ತಂಬಾಕು ಮುಂತಾದವುಗಳಿಂದ ತಯಾರಿಸಿದ ಕೀಟನಾಶಕಗಳಾದರೆ ಅದರಿಂದ ಜೇನು ನೊಣ ಮಾತ್ರವಲ್ಲ- ಜೇನು ಕುಟುಂಬಕ್ಕೂ ತೊಂದರೆ ಇದೆ.
ರೈತರು ಬುದ್ಧಿವಂತರಾಗಬೇಕು:
- ಈಗ ಹಿಂದಿನಂತಿಲ್ಲ. ಅಲ್ಲಲ್ಲಿಕೃಷಿ ಮೇಳಗಳು ಆಗುತ್ತವೆ.
- ಭೇಟಿ ಕೊಡುತ್ತೇವೆ. ಅಲ್ಲಿ ಕೀಟ ಶಾಸ್ತ್ರಜ್ಞರು- ರೋಗ ಶಾಸ್ತ್ರಜ್ಞರು ಬರುತ್ತಾರೆ.
- ಅವರ ಸಂಪರ್ಕ ಸಂಖ್ಯೆಯನ್ನು ಕೇಳಿ ತಿಳಿದುಕೊಳ್ಳಿ.
- ಈಗ ಸರಕಾರದ ವತಿಯಿಂದ ಎಲ್ಲರಿಗೂ ಮೊಬೈಲ್ ದೂರವಾಣಿಯನ್ನು ಒದಗಿಸಲಾಗಿದೆ.
- ಅವರು ನಿಮ್ಮ ಕರೆಗೆ ಯಾವಾಗಲೂ ಸ್ಪಂದಿಸಲು ಸಿದ್ದರಿರುತ್ತಾರೆ.
- ನಾವು ಅವರ ಸಂಪರ್ಕಕ್ಕೆ ಹಿಂಜರಿಯುತ್ತೇವೆ.
- ಅವರಿಗೆ ಏನು ಗೊತ್ತಿಲ್ಲ ಎಂಬ ಮನೋಭಾವನೆಯನ್ನು ಬಿಡಬೇಕು.
- ಅವರು ನಮ್ಮವರು ಎಂದು ನಂಬಿಕೆಯಿಂದ ವ್ಯವಹರಿಸಬೇಕು.
ಇಂದು ಈಗ ಆಗುತ್ತಿರುವ ತೊಂದರೆಗೆ ಕಾರಣ ನಾವೇ. ಮೊನೋಕ್ರೊಟೋಫೋಸ್, ಥಿಮೇಟ್, ನುವಾನ್ ಲಾಂಬ್ಡ್ರಾ ಸೈಹೋಥ್ರಿನ್, ಪ್ಯುರಡಾನ್,ಮುಂತಾದ ಕೀಟನಾಶಕ ಬಳಕೆ ಮಾಡಬಾರದು.
ಬಾಟಲಿಯಲ್ಲಿ non-systemic insecticide. systemic broad spectrum insecticide ಎಂಬುದಾಗಿ ಬರೆದದ್ದನ್ನು ಗಮನಿಸಿ ಬಳಕೆ ಮಾಡಿ. ಬೆಳೆಗ್ಗೆ 10 ಗಂಟೆಯ ನಂತರ ಸಂಜೆ 4 ಗಂಟೆ ಒಳಗೆ ಸಿಂಪರಣೆ ಮಾಡಿದರೆ ಆಗ ಜೇನು ನೊಣಗಳ ಪ್ರಮಾಣ ಕಡಿಮೆ ಇರುತ್ತದೆ.