ದಾಳಿಂಬೆ-ಗುಣಮಟ್ಟದ ಹಣ್ಣು ಪಡೆಯುವ ವಿಧಾನ

ದಾಳಿಂಬೆ  ಬೆಳೆಯಲ್ಲಿ ಹೆಚ್ಚಾಗಿ ಕಂಡುಬರುವ ಸಮಸ್ಯೆ ಕಾಯಿ ಒಡೆಯುವಿಕೆ ಮತ್ತು ಕಾಯಿಯ ನೋಟ ಕೆಡುವಿಕೆ. ಬೆಳೆದು ಇನ್ನೇನು ಕಠಾವಿಗೆ ಸಿದ್ದವಾಗುವ ಸಮಯದಲ್ಲಿ ನೋಟವನ್ನು ಕೆಡಿಸುವ  ಕಾಯಿ ಒಡಕ, ಮತ್ತು ಸನ್ ಬರ್ನ್ ಸಮಸ್ಯೆ ಕಂಡು ಬರುತ್ತದೆ. ಇದರಿಂದ ಅರ್ಧಕ್ಕೂ  ಹೆಚ್ಚು ಕಾಯಿ ಉಪಯೋಗಕ್ಕಿಲ್ಲದೆ ನಷ್ಟವಾಗುತ್ತದೆ. ಈ ತೊಂದರೆ  ಮತ್ತು ರೋಗ ,ಕೀಟ ಸಮಸ್ಯೆಗಳಿಂದ ಪಾರಾದರೆ ಇದು ಲಾಭದ ಉತ್ತಮ ಬೆಳೆ.   ಯಾಕೆ ಆಗುತ್ತದೆ? ದಾಳಿಂಬೆಯ ಕಾಯಿಗೆ ಯಾವ ರೋಗಾಣು – ಕೀಟಾಣು ಬಾಧೆ ಇಲ್ಲದಿದ್ದರೂ ಇದು…

Read more
ಬೋರ್ ವೆಲ್ ನೀರಿನಲ್ಲಿರುವ ಕಶ್ಮಲಗಳು

ಬೋರ್ ವೆಲ್ ನೀರಿನಲ್ಲಿರುವ ಕಶ್ಮಲಗಳ ನಿವಾರಣೆ

ಹನಿ ನೀರಾವರಿ ಎಂದರೆ ನಾವು ಬಳಸುವ ನೀರಿನ ಮೂಲದಲ್ಲಿ  ಯಾವ ಕಶ್ಮಲ  ಇದೆ ಎಂದು ಕೂಲಂಕುಶವಾಗಿ ಗಮನಿಸಿ , ಅದನ್ನು ಸೋಸಲು  ಮತ್ತು ಸ್ವಚ್ಚಮಾಡಲು ಬೇಕಾದ ವ್ಯವಸ್ಥೆ ಮಾಡಿಕೊಂಡರೆ ಹನಿ ನೀರಾವರಿ 100% ಯಶಸ್ವಿ. ಹೆಚ್ಚಿನವರು ಕಡಿಮೆ ಖರ್ಚಿನಲ್ಲಿ ವ್ಯವಸ್ಥೆಗಳನ್ನು  ಮಾಡಿಕೊಳ್ಳುವ ಉದ್ದೇಶದಿಂದ ಅಗತ್ಯವಾದ ಸೋಸು ವ್ಯವಸ್ಥೆಗಳನ್ನು ಅಳವಡಿಸಿಕೊಳ್ಳುವುದಿಲ್ಲ. ಅದರ ಫಲವಾಗಿ ಸೂಕ್ಷ್ಮ ನೀರಾವರಿ ವ್ಯವಸ್ಥೆ  ಕೆಡುತ್ತದೆ. ಯಾವ ನೀರಿನ ಮೂಲ: ನಾವು ನೀರಾವರಿಗಾಗಿ ಬಳಕೆ ಮಾಡುವ ನೀರಿನ ಮೂಲಗಳೆಂದರೆ ಬಾವಿ- ಕೆರೆ ನೀರು, ಕೊಳವೆ ಬಾವಿ…

Read more

ಇದೇ ಫೆಬ್ರವರಿ 5-6-7-8 ನೆನಪಿರಲಿ.

ದೇಶ ಸುತ್ತಿದರೆ ಕೋಶ ಓದಿದ ಫಲವಂತೆ. ಅದೇ ರೀತಿಯಲ್ಲಿ ರೈತರಿಗೆ  ಜ್ಞಾನ ಎಲ್ಲಿ ಸಿಗುತ್ತದೆಯೋ ಅಲ್ಲಿಗೆ ಭೇಟಿ ಕೊಟ್ಟರೆ ಅದು ಅವರ ವೃತ್ತಿಗೆ ತೊಡಗಿಸಿದ ಬಂಡವಾಳ.  ನಿಮ್ಮ ಜ್ಞಾನ ಬಂಡವಾಳವನ್ನು ಹೆಚ್ಚಿಸಬೇಕೆಂಬ ಹಂಬಲ ಇದ್ದಲ್ಲಿ ಇದೇ ತಿಂಗಳ 5 -6-7 ಮತ್ತು 8 ರಂದು  ಹೇಸರಘಟ್ಟಕ್ಕೆ ಭೇಟಿ ಕೊಡಿ. ಸಂಸ್ಥೆಯ ನಿರ್ಧೇಶಕರಾದ ಡಾ| ಎಂ ಆರ್ ದಿನೇಶ್ ರವರು  ನಿಮ್ಮನ್ನು ಆಮಂತ್ರಿಸುತ್ತಾರೆ.     Click here to watch video of IIHR    …

Read more

ಅಂತರ್ಜಲ ಮಟ್ಟ ಏರಿಸಲು ಕಷ್ಟ ಇಲ್ಲ.

ಎಲ್ಲೆಡೆ ಆಂತರ್ಜಲ ಮಟ್ಟ ಕುಸಿದಿದೆ, ನಾಳೆಯ ನೀರಿಗಾಗಿ ಇಂದು ಚಿಂತನೆ ನಡೆಯುತ್ತಿದೆ.ನೀರಿನ ತೃಷೆ ತಣಿಸಲು ಆಂತರ್ಜಲ ಬಳಕೆ ಪ್ರಾರಂಭ ಆದ ನಂತರ ಅಂತರ್ಜಲ ಮಟ್ಟ ಕುಸಿಯಲಾರಂಭಿಸಿತು. ಜನ ಮಳೆ ಕಡಿಮೆಯಾಗಿದೆ, ಹವಾಮಾನ ವೈಪರೀತ್ಯ ಎಂದೆಲ್ಲಾ ಹೇಳುತ್ತಾ ಜಲ ಜಾಗೃತಿ ಮೂಡಿಸುತ್ತಿದ್ದಾರೆ. ವಾಸ್ತವಾಗಿ ಅಂತರ್ಜಲ ಮಟ್ಟ ಕುಸಿತಕ್ಕೆ ಕಾರಣ ಹಲವು ಇದೆ. ಇದರಲ್ಲಿ ಅತಿಯಾದ ನೀರಿನ ಬಳಕೆ ಒಂದು. ಅಂತರ್ಜಲ ಕೆಳಗಿಳಿಯಲು ಕಾರಣ: ಸರಳವಾಗಿ ಹೇಳಬೇಕೆಂದರೆ ಲೆಕ್ಕಕ್ಕಿಂತ ಮಿತಿ ಮೀರಿ ನೀರಿನ ಬಳಕೆ ಆದುದೇ ಅಂತರ್ಜಲ ಕುಸಿತಕ್ಕೆ ಕಾರಣ….

Read more

ಬೇಸಿಗೆ ಕಾಲದಲ್ಲಿ ನೀರೊತ್ತಾಯ ತಡೆಯಲು ಹೀಗೆ ಮಾಡಿಕೊಳ್ಳಿ.

ಬೇಸಿಗೆಯಲ್ಲಿ ಕೃಷಿಕರಿಗೆ ಹೊಲಕ್ಕೆ ನೀರುಣಿಸುವುದೇ ಕೆಲಸ. ಇಂದು ನೀರುಣಿಸಿದರೆ ನಾಳೆ ನೋಡುವಾಗ ಒಣಗಿರುತ್ತದೆ. ಅಷ್ಟೂ ನೀರನ್ನೂ ಬೆಳೆ ಸಸ್ಯಗಳು ಹೀರಿಕೊಳ್ಳುವುದಲ್ಲ. ಅದರಲ್ಲಿ ಮುಕ್ಕಾಲು ಪಾಲು ಆವಿಯಾಗಿ ವ್ಯಯವಾದರೆ ಕಾಲು ಪಾಲು ಮಾತ್ರ ಸಸ್ಯ ಬಳಕೆ ಮಾಡಿಕೊಳ್ಳುತ್ತದೆ. ಆವೀಕರಣ ತಡೆದರೆ ನೀರು ತುಂಬಾ ಕಡಿಮೆ ಸಾಕು. ಬೇಸಿಗೆ ಕಾಲ ಎಂದರೆ ಸೂರ್ಯನ ಪ್ರಖರ ಬಿಸಿಲಿಗೆ ಏನಿದ್ದರೂ ಒಣಗಿ ಹೋಗುವ ಕಾಲ. ಈ ಸಮಯದಲ್ಲಿ ಸಿಮೆಂಟ್ ನೆಲಕ್ಕೆ  1 ಲೀ. ನೀರು ಚೆಲ್ಲಿದರೆ ಅದು ಆವಿಯಾಗಲು ಆಗಲು  1 ಗಂಟೆ…

Read more

ಅಡಿಕೆ ಮರದಲ್ಲಿ ನಳ್ಳಿಗಳು ಯಾಕೆ ಉದುರುತ್ತವೆ?

ಅಡಿಕೆ ಮರದ ಹೂ ಗೊಂಚಲಿನಲ್ಲಿ  ಇರುವ ಎಲ್ಲಾ ಮಿಡಿಗಳೂ  ಕಾಯಿ ಕಚ್ಚಿಕೊಳ್ಳುವುದಿಲ್ಲ. ಸ್ವಲ್ಪ ಉದುರುತ್ತವೆ. ಹೆಚ್ಚಿನವು ಉಳಿಯುತ್ತದೆ. ಎಲ್ಲವೂ ಉದುರಿದರೆ , ಲೆಕ್ಕಕ್ಕಿಂತ ಹೆಚ್ಚು ಉದುರಿದರೆ   ಆಗ ತಲೆ ಬಿಸಿ ಮಾಡುವ ಬದಲಿಗೆ ಕೆಲವು ನಿರ್ವಹಣೆ ಮಾಡಿ ಉಳಿಸುವ ಪ್ರಯತ್ನ ಮಾಡಬೇಕು. ಅಡಿಕೆ ಮರದ ಹೂ ಗೊಂಚಲಿನಲ್ಲಿ ಅಕ್ಕಿಯ ತರಹ ಇರುವಂತದ್ದು, ಗಂಡು ಹೂವು. ಕಡಲೆ ಗಾತ್ರದ ತರಹ ಇರುವಂತದ್ದು ಹೆಣ್ಣು ಹೂವು. ಹೂ ಗೊಂಚಲು ಅರಳಿದ ತಕ್ಷಣದಿಂದಲೇ ಗಂಡು ಹೂವು ಅರಳಲಾರಂಭಿಸುತ್ತದೆ.  ಅದು ಸುಮಾರು 24…

Read more
ಜೀವಾಮೃತ ಮಿಶ್ರಣ

ಜೀವಾಮೃತಕ್ಕೆ ಜೀವ ಕೊಡುವ ವಿಧಾನ.

ಜೀವಾಮೃತ, ಅಮೃತ ಪಾನಿ, ಅಲ್ಲದೆ ಯಾವುದೇ ಸೂಕ್ಷ್ಮಾಣು ಜೀವಿ ಮಿಶ್ರಣಗಳನ್ನು  ತಯಾರಿಸುವ ಸಮಯದಲ್ಲಿ ಬ್ಯಾರಲ್ ಗೆ ಹಾಕಿ ಕಲಕಬೇಕು ಎನ್ನುತ್ತಾರೆ. ಕಲಕುವುದರಿಂದ ಅದರಲ್ಲಿ ಜೀವಾಣುಗಳು ಹೆಚ್ಚಾಗುತ್ತದೆ. ಅವುಗಳಿಗೆ ಜೀವ ಬರುತ್ತದೆ.  ಸೂಕ್ಷ್ಮಾಣು ಜೀವಿಗಳು ಈ ಕ್ರಿಯೆಯಲ್ಲಿ  ಹೆಚ್ಚಿನ ಪ್ರಮಾಣದಲ್ಲಿ ಬೆಳವಣಿಗೆಯಾಗಿ ಸಂಖ್ಯಾಭಿವೃದ್ದಿಯಾಗುತ್ತವೆ. ಇದು ಮತ್ತೆ ಯಾಕೂ ಆಲ್ಲ. ನಾವು ಬಳಕೆ ಮಾಡುವ ಕಚ್ಚಾ ವಸ್ತುಗಳಲ್ಲಿ ಸೂಕ್ಷ್ಮಾಣು ಜೀವಿಗಳು ಇರುತ್ತವೆ. ಈ ಸೂಕ್ಷ್ಮಾಣು ಜೀವಿಗಳು  ಕನಿಷ್ಟ ಪ್ರಮಾಣದಲ್ಲಿದ್ದರೆ ಅದಕ್ಕೆ ಆಹಾರ ಕೊಟ್ಟು ಅದನ್ನು ಕೆವು ದಿನಗಳ ತನಕ  ಪೋಷಣೆ ಮಾಡಿ…

Read more
Dry leaf waste mulching

ದರಗು ಹಾಸಿದರೆ ನೀರು ಕಡಿಮೆ ಸಾಕು. ಮಣ್ಣು ಫಲವತ್ತಾಗುತ್ತದೆ.

ಚಳಿಗಾಲ ಬಂದಿದೆ. ಎಲ್ಲಾ ಮರಮಟ್ಟುಗಳೂ ತಮ್ಮ ಎಲೆಗಳನ್ನು ಉದುರಿಸಿವೆ. ನೆಲದಲ್ಲಿ ಬಿದ್ದಿರುವ ಈ ದರಗನ್ನು ಯಾವುದೇ  ಕಾಣಕ್ಕೆ  ಮಳೆ ನೀರಿನಲ್ಲಿ ಕೊಚ್ಚಿ ಹೋಗಿ ನಷ್ಟವಾಗಲು ಬಿಡಬೇಡಿ.ಹೊಲಕ್ಕೆ ಹಾಕಿ. ಮುಂದಿನ ವರ್ಷವೇ ಗಮನಾರ್ಹ ಬದಲಾವಣೆ ಗಮನಿಸಿ. ಫಲವತ್ತತೆ ನವೀಕರಣ:     ಜಪಾನ್ ದೇಶದ ಸಹಜ ಕೃಷಿಯ ಜನಕ ಎಂದೇ ಹೆಸರುವಾಸಿಯಾದ, ಫುಕುಫೋಕಾರವರು ತಾವು ಬೆಳೆಸಿ ಅಲ್ಲಿಂದ ತನಗೆ ಬೇಕಾದ ಫಸಲನ್ನು ಮಾತ್ರ ತೆಗೆದುಕೊಂಡು ಉಳಿದುದನ್ನು  ಅಲ್ಲೇ ಬಿಡುತ್ತಿದ್ದರಂತೆ. ಇದರಿಂದ ಕೃಷಿ ಮಾಡಿದ ಹೊಲದ ಫಲವತ್ತತೆ ವರ್ಷದಿಂದ ವರ್ಷ ಉತ್ತಮವಾಗುತ್ತಾ…

Read more
mealy bug

ಬಿಳಿ ಉಣ್ಣಿ- ಹಿಟ್ಟು ತಿಗಣೆ; ತೊಂದರೆ ಮತ್ತು ಪರಿಹಾರಗಳು.

ಮಿಲಿಬಗ್, ಅಥವಾ ಹಿಟ್ಟು ತಿಗಣೆ  ಎಲೆ ಅಡಿ ಭಾಗದಲ್ಲಿ  ಮತ್ತು ಎಳೆ ಚಿಗುರು  ಹಾಗೆಯೇ ಕಾಯಿಯ ತೊಟ್ಟಿನ ಸನಿಹದಲ್ಲಿ  ಮುದ್ದೆಯಾಗಿ ಕುಳಿತು ರಸ ಹೀರುತ್ತದೆ. ಸಸ್ಯ ಬೆಳವಣಿಗೆ ಕುಂಠಿತವಾಗುತ್ತದೆ. ಅಸಹ್ಯವೂ ಆಗುತ್ತದೆ.ಇದು ತರಕಾರಿ, ಹಣ್ಣು ಹಂಪಲು, ಹೂವಿನ ಗಿಡಗಳು ಸೇರಿದಂತೆ ಸುಮಾರು 200 ನಮೂನೆಯ ಬೆಳೆಗಳಿಗೆ  ಹಾನಿ ಮಾಡುತ್ತದೆ.ಮೈಬಣ್ಣ   ಬಿಳಿ ಹಿಟ್ಟು ತರಹ ಇರುವ ಕಾರಣ ಹಿಟ್ಟು ತಿಗಣೆ ಎಂಬ ಹೆಸರು ಕೊಡಲಾಗಿದೆ. ವಿಧಗಳು: ಇದರಲ್ಲಿ  ಮೂರು ನಾಲ್ಕು ಪ್ರಭೇಧಗಳಿದ್ದು ,ಕೆಲವು ಮರಮಟ್ಟುಗಳಿಗೂ ಇನ್ನು ಕೆಲವು ಕೆಳಸ್ಥರದ…

Read more
ಉತ್ತಮ ಇಳುವರಿ ಕೊಡುವ ಮರಗಳಿಂದ ಬೀಜ ಆಯ್ಕೆ ಮಾಡಬೇಕು.

ತೆಂಗು – ಲೋಕಲ್ ತಳಿಗಳಲ್ಲಿ ಉತ್ತಮ ಬೀಜ ಆಯ್ಕೆ.

ಮೂಲದಿಂದಲೂ ನಾವು ತೆಂಗು ಬೆಳೆಸುವಾಗ ಸ್ಥಳೀಯ ತಳಿಯನ್ನೇ ಆಯ್ಕೆ ಮಾಡುತ್ತಾ ಬಂದಿದ್ದೇವೆ. ಎಲ್ಲಿ ಉತ್ತಮ ತೆಂಗಿನ ಸಸಿ ಇದೆಯೋ ಅಲ್ಲಿಂದ ತೆಂಗಿನ ಬೀಜ ತಂದು ಅದನ್ನು ಬೀಜಕ್ಕಿಟ್ಟು ಅದು ಸಸಿಯಾದ ನಂತರ ನೆಡುವುದು ನಮ್ಮ ಕ್ರಮವಾಗಿದೆ. ಈಗಿನ ಆಧುನಿಕ ಹೈಬ್ರೀಡ್ ತಾಂತ್ರಿಕತೆಯ ಬೀಜೋತ್ಪಾದನೆಗೂ  ಮೂಲ ಇದೇ. ನೈಸರ್ಗಿಕ ಮಿಶ್ರ ಪರಾಗಸ್ಪರ್ಶ: ಸ್ಥಳಿಯ ತಳಿಗಳು ನೈಸರ್ಗಿಕವಾಗಿ  ಪರಾಗಸ್ಪರ್ಶಕ್ಕೆ ಒಳಗಾಗಿ ಆದವುಗಳು. ಇಂದು ನಮ್ಮಲ್ಲಿರುವ 95% ತೆಂಗಿನ ತೋಟಗಳು ಇದೇ ವಿಧಾನದಲ್ಲಿ ಆಯ್ಕೆ ಮಾಡಿದ್ದೇ ಆಗಿದೆ. ಇಂತಲ್ಲಿ  ಕೆಲವು ಉತ್ತಮ…

Read more
error: Content is protected !!