ಮೆಣಸಿನ ಎಲೆ ಮುರುಟುವಿಕೆ ನಿಯಂತ್ರಣ

ಮೆಣಸಿನ ಕಾಯಿಯ ಅತೀ ದೊಡ್ದ ಆರ್ಥಿಕ ಬೆಳೆಯಾಗಿದ್ದು, ಮೆಣಸು ಬೆಳೆಗಾರರು ಈ ಬೆಳೆ ಉಳಿಸಿಕೊಳ್ಳುವುದಕ್ಕಾಗಿ ಸಾಕಷ್ಟು ಖರ್ಚು ಮಾಡುತ್ತಾರೆ. ಇದರಲ್ಲಿ ಹೆಚ್ಚಿನ ಪಾಲು ಕೀಟ ನಿರ್ವಹಣೆಗೇ ತಗಲುತ್ತದೆ. ಈ ಕೀಟಗಳಲ್ಲಿ ಮುಖ್ಯವಾದುದು, ಥ್ರಿಪ್ಸ್ ನುಶಿ ಮತ್ತು ಜೇಡರ ನುಶಿ. ಯಾರೇ ಬೆಳೆ ಬೆಳೆದರೂ ಈ ಕೀಟ ಅವರನ್ನು  ಬಿಟ್ಟಿದ್ದಿಲ್ಲ. ಇನ್ನೇನು ಸಸಿ ಬೆಳೆದು ಹೂ ಬಿಡಲು ಪ್ರಾರಂಭವಾಗುತ್ತದೆ ಎನ್ನುವಾಗಈ ಕೀಟ ಹಾಜರ್. ಎಲೆಗಳು ಮುರುಟಿಕೊಂಡು ಅಲ್ಲಿಗೇ ಬೆಳೆವಣಿಗೆ ಕುಂಠಿತವಾಗುತ್ತದೆ.

ಥಿಪ್ಸ್ ನುಶಿ ಏನು – ಹೇಗೆ:

  • ಇದು ಒಂದು ರಸ ಹೀರುವ ಕೀಟ ಇಅದರ ಹೆಸರು  Scirtothrips dorsalis and yellow mitePolyphagotarsonemus latus
  • ಇದು ಬೆಳೆಯ  ಯಾವುದೇ ಹಂತದಲ್ಲಿ  ಬರಬಹುದಾದ ಕೀಟ.
  • ಈ ಕೀಟ ಅತೀ ಸಣ್ಣದಾಗಿದ್ದು, ಹಳದಿ ಮತ್ತು ಕಪ್ಪು ಬಣ್ಣದಿಂದ ಕೂಡಿರುತ್ತದೆ.
  • ಇವು ಎಲೆಯ ಕೆಳ ಭಾಗದಲ್ಲಿ  ಕುಳಿತು ರಸ ಹೀರುತ್ತವೆ.
  • ಎಲೆಗಳು ತುದಿಯಿಂದ ಒಳಮೈಗೆ  ಮುದುಡಿಕೊಳ್ಳುತ್ತವೆ.
  • ಈ ರೀತಿ ಮುರುಟುವುದಕ್ಕೆ ಇದನ್ನು  ಮುರುಟು ರೋಗ ಎನ್ನುತ್ತಾರೆ.
  • ಚಂಡಿ ರೋಗ ಎಂಬುದಾಗಿಯೂ ಕರೆಯುತ್ತಾರೆ.
  • ಪ್ರಾರಂಭದಲ್ಲಿ  ಇದು ಸ್ವಲ್ಪ ಸ್ವಲ್ಪ ಇರುತ್ತದೆ. ನುಶಿಯ ಸಂಖ್ಯಾಭಿವೃದ್ದಿಯಾದಂತೆ ಹೆಚ್ಚಾಗುತ್ತಾ ಬರುತ್ತದೆ.
  • ಸಸಿ ಮಡಿಯಲ್ಲಿಯೂ ಈ ಕೀಟ ಬಾಧೆ ಕಂಡು ಬರುತ್ತದೆ.
  • ನಾಟಿ ಮಾಡಿದ  1-2 ತಿಂಗಳಲ್ಲಿಯೂ ಕಂಡು ಬರುತ್ತದೆ.
  • ಇದು ಹೆಚ್ಚಾದರೆ  ಇಡೀ ಬೆಳೆಯೇ ಹೋಯಿತು ಎಂದರ್ಥ.

ಈ ನುಶಿಗಳು ರಸ ಹೀರುವುದು ಮಾತ್ರವಲ್ಲ. ಮುರುಟು ರೋಗದ ನಂಜಾಣುವನ್ನು ಗಿಡದಿಂದ ಗಿಡಕ್ಕೆ ಹರಡುತ್ತದೆ.  ಹೂ ಬಿಡುವ ಮುಂಚೆ ಆದರೆ ಹೂ ಮೊಗ್ಗು ಬರಲು ತಡೆಯೊಡ್ಡುತ್ತದೆ. ಹೂ ಬಿಡುವ ಹಂತದಲ್ಲಿ ಹೂ ಮೊಗ್ಗುಗಳು ಉದುರುತ್ತವೆ. ಮಿಡಿಯಾಗುವ ಹಂತದಲ್ಲಿ ಮಿಡಿಗಳು ಉದುರುತ್ತವೆ.

  • ಬೇಸಿಗೆ ಕಾಲದ ಬೆಳೆಗೆ ಮತ್ತು ಚಳಿಗಾಲದ ಬೆಳೆಗೆ ಈ ನುಶಿಯ ಹಾವಳಿ ಹೆಚ್ಚು.
  • ಒಣ ವಾತಾವರಣ ಇದ್ದಾಗ ಇದರ ಸಂಖ್ಯಾಭಿವೃದ್ದಿ ಹೆಚ್ಚುತ್ತಾ ಹೋಗುತ್ತದೆ.
  • ಮಳೆ ಬಂದರೆ ತಂತತಿ ಕ್ಷೀಣಿಸುತ್ತದೆ. ಗಾಳಿಯ ಮೂಲಕ ಗಿಡದಿಂದ ಗಿಡಕ್ಕೆ  ಹರಡುತ್ತದೆ.
  • ಬೆಳೆದ ಕೀಟವು ಎಲೆಯ ಕೆಳಗೆ 50 ಕ್ಕೂ ಹೆಚ್ಚು ಮೊಟ್ಟೆಗಳನ್ನು ಇಡುತ್ತದೆ.
  • 4-5 ದಿನದಲ್ಲಿ ಮೊಟ್ಟೆ ಒಡೆದು ಮರಿಯಾಗುತ್ತದೆ.
  • ಬೆಳೆದ ಕೀಟವು 10-15 ದಿನಗಳ ತನಕ ಜೀವಿಸುತ್ತದೆ.
  • ಡಿಸೆಂಬರ್ ಜನವರಿ ತಿಂಗಳಲ್ಲಿ ಈ ಕೀಟದ ಹವಳಿ ಜಾಸ್ತಿ.
ತೀವ್ರವಾದಾಗ ಈ ರೀತಿ ಆಗುತ್ತದೆ. ಇದನ್ನು ತಕ್ಷಣ ತೆಗೆಯಬೇಕು.

ನಿಯಂತ್ರಣ:

  • ಹೆಚ್ಚಿನ ರೈತರು ಇದರ ನಿಯಂತ್ರಣಕ್ಕೆ ರಾಸಾಯನಿಕ ಕೀಟನಾಶಕಗಳನ್ನೇ ಬಳಕೆ ಮಾಡುತ್ತಾರೆ.
  • ವಾಣಿಜ್ಯಿಕವಾಗಿ ಬೆಳೆ  ಬೆಳೆಸುವಾಗ ಇದು ಅನಿವಾರ್ಯವೂ ಆಗಿರುತ್ತದೆ.
  • ಈ ನುಶಿ ಬಾಧೆಗೆ ನಿರೋಧಕ ಶಕ್ತಿ ಪಡೆದ ತಳಿಗಳನ್ನು ಅಭಿವೃದ್ದಿಪಡಿಸಲಾಗಿದೆ.

  • ನಿರೋಧಕ ಶಕ್ತಿ ಪಡೆದ ತಳಿಗಳು: ಅರ್ಕಾ ಶ್ವೇತಾ- ಅರ್ಕಾ ಮೇಘನ- ಅರ್ಕಾ ಹರಿತ

    – ಎಸ್- 3 ,  ಪಂಥ್ ಸಿ- 1,  ಪಂಥ್ ಸಿ- 2,  ಜ್ವಾಲಾ, ಮುಸಲವಾಡಿ, ಕೆ. 2425  ಮುಂತಾದ ತಳಿಗಳು  ನಿರೋಧಕ ಶಕ್ತಿ ಪಡೆದಿವೆ.

ಯಾವ ಕಾರಣಕ್ಕೆ ಇದು ಹೆಚ್ಚಾಗುತ್ತಿದೆ:

  • ಮೆಣಸನ್ನು  ಏಕ ಬೆಳೆಯಾಗಿ ಬೆಳೆಸುವಾಗ ಈ ನುಶಿಯ ಸಮಸ್ಯೆ ಹೆಚ್ಚಾಗುತ್ತದೆ.
  • ಇದನ್ನು ತಿನ್ನುವ ಕೆಲವು ಪರಾವಲಂಭಿ ಜೀವಿಗಳಿವೆ. ಗುಲಗುಂಜಿ  ಹುಳ,  ಕೆಲವು ಜೇಡಗಳು, ಕ್ರೈಸೋಫೆರ್ಲಾ ಮುಂತಾದವುಗಳು.
  • ಇವು ನಿರಂತರ ಕೀಟನಾಶಕದ ಬಳಕೆಯ ಕಾರಣದಿಂದ ನಾಶವಾಗಿದೆ.
  • ಮೆಣಸು ಬೆಳೆಯುವ ರೈತರು ಕೀಟ ಬಾರದಂತೆ ಮುನ್ನೆಚ್ಚರಿಕೆಯಾಗಿ ಸಿಂಪರಣೆ ಕೈಗೊಳ್ಳುತ್ತಾರೆ. ಅದು ಪರಭಕ್ಷಕಗಳ ನಾಶಕ್ಕೆ ಕಾರಣವಾಗುತ್ತಿದೆ.
  • ಕೀಟ ನಾಶಕಗಳಲ್ಲಿ ಅಂತರ್ ವ್ಯಾಪೀ ಕೀಟನಾಶಕಗಳ ಬಳಕೆ ಹೆಚ್ಚಾದ ಕಾರಣ ನುಶಿಗಳು ನಿರೋಧಕ ಶಕ್ತಿ ಬೆಳೆಸಿಕೊಂಡಿವೆ.
  • ರೈತರು ಶಿಫಾರಸಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಕೀಟ ನಾಶಕ ಬಳಕೆ ಮಾಡುತ್ತಿದ್ದಾರೆ.
  • ಎಲೆಗಳ ಅಡಿ ಭಾಗದಲ್ಲಿ ಕೀಟ ವಾಸವಾಗಿರುತ್ತದೆ, ರೈತರು ಮೇಲ್ಭಾಗದಲ್ಲೇ ಸಿಂಪರಣೆ  ಮಾಡುತ್ತಾರೆ. ಇದು ಕೀಟಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುತ್ತಿಲ್ಲ.
ಪರಭಕ್ಷಕ ಕೀಟ

ಯಾವ ಸಿಂಪರಣೆ  ಉತ್ತಮ:

  • ಕೀಟ ಬರುವ ಮುಂಚೆ ಮುನ್ನೆಚ್ಚರಿಕಾ ಕ್ರಮವಾಗಿ ಸಿಂಪರಣೆ ಮಾಡುವಾಗ ನೀರಿನಲ್ಲಿ ಕರಗುವ ಗಂಧಕವನ್ನು ಸಿಂಪರಣೆ ಮಾಡಬೇಕು. ಇದು ಎಲೆ ಅಡಿ ಭಾಗದಲ್ಲಿ ಲೇಪನವಾದಂತೆ ಅಂಟಿದರೆ ಒಳ್ಳೆಯದು.
  • ಮೆಣಸಿನ ಜೊತೆಗೆ ಬಲೆ ಬೆಳೆಗಳಾದ ಚೆಂಡು ಹೂವು, ಬೆಂಡೆ, ಹತ್ತಿ ಬೆಳೆಸಿದರೆ ಅದಕ್ಕೆ ಮೊದಲು ನುಶಿಗಳು ಹಾನಿ ಮಾಡುತ್ತವೆ.
  • ಪ್ರಾರಂಭದ ಹಂತದಲ್ಲಿ ಎಲೆ ಅಡಿ ಭಾಗಕ್ಕೆ ಬೀಳುವಂತೆ ವೆಟ್ಟೆಬಲ್ ಸಲ್ಫರ್ ಸಿಂಪರಣೆ ಮಾಡಿ.ಇದನ್ನು ರೋಗ ಬರುವ ಮುಂಚೆಯೇ ಮಾಡುವುದು ಉತ್ತಮ.
ಮಧ್ಯಂತರದಲ್ಲಿ ಚೆಂಡು ಹೂವು ಬೆಳೆಯಿರಿ
  • ಯಾವಾಗಲೂ ಕೊನೇ ಹಂತದಲ್ಲಿ ಅನಿವಾರ್ಯವಾದಾಗ ಮಾತ್ರ ಅಂತರ್ವ್ಯಾಪೀ ಕೀಟನಾಶಕ ( ಇಮಿಡಾ ಕ್ಲೋಫ್ರಿಡ್- ರೀಜೆಂಟ್) ಬಳಕೆ ಮಾಡಬೇಕು. ಯವಾಗಲೂ ಶಿಫಾರಸಿಗಿಂತ ಹೆಚ್ಚು ಬಳಸಬಾರದು.
  • ಮೆಣಸಿನ ಹೊಲಕ್ಕೆ ಬೆಳಗ್ಗಿನ ಸಮಯ 10 ನಿಮಿಷ ಕಾಲ ಹೊತ್ತು ತುಂತುರು ನೀರಾವರಿ ಮಾಡುವುದರಿಂದ ಅವು ತೊಳೆದು ಹೋಗಿ ನಾಶವಾಗುತ್ತದೆ. ( ತೆರೆದ ವಾತಾವರಣದಲ್ಲಿ ಬೆಳೆದಾಗ)
  • ಎಲೆ ಅಡಿ ಭಾಗಕ್ಕೆ ಲೇಪನವಾಗುವಂತೆ ಬೂದಿ ಇತ್ಯಾದಿ ಸಿಂಪರಣೆ ಮಾಡುವುದರಿಂದ ಹೆಚ್ಚಿನ ಪ್ರಯೋಜನ ಕಾಣಬಹುದು.

ಚಳಿಗಾಲದಲ್ಲಿ ಮೆಣಸಿನ ಬೆಳೆಯನ್ನು ಸಾಧ್ಯವಾದಷ್ಟು ತಪ್ಪಿಸಿ. ಪರಭಕ್ಷಕ ಕೀಟಗಳು ನಾಶವಾಗುವಂತ ಕೀಟನಾಶಕ ಬಳಸಬೇಡಿ.
 

Leave a Reply

Your email address will not be published. Required fields are marked *

error: Content is protected !!