ಹತ್ತಿ ಬೀಜದ ದರ ಏರಿದೆ- ರಾಯಧನ ಇಳಿದಿದೆ.

by | Mar 28, 2020 | News Update (ಸುದ್ದಿ ವಿಶೇಷ) | 0 comments

ಜೈವಿಕ ತಂತ್ರಜ್ಞಾನದ ಬಿಟಿ ಹತ್ತಿಗೆ ಬೇಯರ್ ಕಂಪೆನಿಗೆ ಕೊಡಬೇಕಾದ ರಾಯಲ್ಟಿಯನ್ನು  ಭಾರತ ಸರಕಾರ ಗಣನೀಯ ಪ್ರಮಾಣದಲ್ಲಿ ಕಡಿಮೆ ಮಾಡಿದೆ. ಆದರ ಪರಿಣಾಮ ಇಲ್ಲಿ ಹತ್ತಿ ಬೀಜದ ಬೆಲೆ ಕಡಿಮೆಯಾಗಬೇಕಿತ್ತು. ಆದರೆ ಬೆಲೆ  ಮಾತ್ರ 2.5 %  ಹೆಚ್ಚಳವಾಗಿದೆ.

  • ನಾವು ಬೆಳೆಯುವ ಬಿಟಿ ಹತ್ತಿಯ ಬಿಟಿ ತಂತ್ರಜ್ಞಾನದ ಮೂಲ ಅಮೆರಿಕಾ ದೇಶದ ಮಾನ್ಸಂಟೋ ಕಂಪೆನಿ.  (ಈ ಕಂಪೆನಿಯನ್ನು ಜರ್ಮನ್ ಮೂಲದ ಬೇಯರ್ ಎಂಬ ಔಷಧ ಕಂಪೆನಿ ಖರೀದಿಸಿದೆ)
  • ಇಲ್ಲಿ ಯಾವುದೇ ಕಂಪೆನಿ ಬಿಟಿ ಹತ್ತಿ ಬೀಜ ಉತ್ಪಾದಿಸಿದರೂ ಅದರ ಬೀಜ ಮಾರಾಟ ಮಾಡುವಾಗ 100 ರೂ. ಗೆ 49 ರೂ. ಗಳನ್ನು ಅದರ ತಂತ್ರಜ್ಞಾನದ ಮೂಲಕಂಪೆನಿಗೆ ಕೊಡಬೇಕಿತ್ತು.
  • ಇದು  ಹಲವಾರು ವರ್ಷಗಳಿಂದಲೂ ನಡೆಯುತ್ತಿತ್ತು,
  • ಭಾರತದ ಹಲವಾರು ಕಂಪೆನಿಗಳು ಬಿಟಿ ಹತ್ತಿ ಬೀಜ ಉತ್ಪಾದಿಸುತ್ತವೆ.
  • ಆದರೆ ಅದರ ಮೂಲ ಕಂಪೆನಿ ಅವರಲ್ಲ.
  • ತಳಿ ಮೂಲವನ್ನು ಅವರಿಂದ  ಪಡೆದು ಇಲ್ಲಿ ಬೀಜೋತ್ಪಾದನೆ ಮಾಡಬೇಕು ಮತ್ತು ಅದರ ಬಗ್ಗೆ ರಾಯಧನ (Royalty) ಕೊಡಬೇಕು.

ಏನು ಈ ಬಿಟಿ:

  • ಹತ್ತಿ ಬೆಳೆಯಲ್ಲಿ ಕಾಯಿ ಕೊರಕ, ಮೊಗ್ಗು ಕೊರಕ ನಿಯಂತ್ರಣಕ್ಕೆ ಕೀಟನಾಶಕ ಬಳಸುವ ಬದಲು ಅದನ್ನು ಜೈವಿಕವಾಗಿ ಕೀಟನಾಶಕ ಬಳಸದೆ ನಿಯಂತ್ರಣ ಮಾಡಲು ಬಂದ ತಾಂತ್ರಿಕತೆ,  ಜೆನೆಟಿಕಲಿ ಮೋಡಿಫೈಡ್  ಬೀಜಗಳು.
  • ಇದು ವಂಶ ಗುಣದಲ್ಲೇ ಕಾಯಿ ಕೊರಕಕ್ಕೆ ನಿರೋಧಕ ಶಕ್ತಿ ಹೊಂದಿದ್ದು, ಬೋರರ್ ಹುಳವು ಇದರ ಸುದ್ದಿಗೇ ಬರುವುದಿಲ್ಲ.

2006  ನೇ ಇಸವಿಯಿಂದ ಈ ತಂತ್ರಜ್ಞಾನದ ಹತ್ತಿ ಬೀಜಗಳು ಭಾರತದ ಹತ್ತಿ ಬೆಳೆಗಾರರ ಹೊಲದಲ್ಲಿ ಬೆಳೆಸಲ್ಪಡುತ್ತಿವೆ.ಇದನ್ನು ಇಲ್ಲಿಯ  ಕಂಪೆನಿಗಳೇ ಅವರ ಪರವಾನಿಗೆಯ ಮೇಲೆ ಬೀಜೋತ್ಪಾದನೆ ಮಾಡುತ್ತವೆ. ಅದಕ್ಕೆ ಬೇಕಾಗುವ ಪೇರೆಂಟಲ್ ಸೀಡ್ ಅನ್ನು ಮೂಲ ಕಂಪೆನಿ ಕೊಡುತ್ತದೆ.

  • ಅದನ್ನು ರೈತರ ಮೂಲಕ ಬೀಜೋತಾದನೆ ಮಾಡಿಸಲಾಗುತ್ತದೆ.
  • ಮತ್ತೆ ಅದನ್ನು ರೈತರಿಗೆ ಬೆಳೆಸಲು ಕೊಡಲಾಗುತ್ತದೆ.
  • ಇದಕ್ಕೆ  ಈ ತನಕ ಮೂಲ ಕಂಪೆನೆಗೆ ಕೊಡಬೇಕಾಗಿದ್ದ ರಾಯಧನ 49% .
  • 2016 ನೇ ಇಸವಿಯಿಂದಲೂ ಈ ರಾಯಧನ ಇಳಿಕೆ ಬಗ್ಗೆ  ಭಾರತ ಸರಕಾರ ಮತ್ತು ಮಾನ್ಸಾಂಟೋ  ಕಂಪೆನಿ ನಡುವೆ ಚರ್ಚೆಗಳಾಗುತ್ತಿತ್ತು.
  • ಈ ಸಲ ದೃಢ  ಮಾಡುವ ಮೂಲಕ  25  ಮಾರ್ಚ್ ನಂದು ಇದನ್ನು ಶೇ. ವಾರಿನಿಂದ 450  ಗ್ರಾಂ ನ ಪ್ಯಾಕೆಟ್ ಗೆ ಕೇವಲ ರೂ.20 ಎಂದು ನಿರ್ಧರಿಸಿದೆ.

ರೈತರಿಗೆ ಲಾಭವಾಗಲಿಲ್ಲ: 

  • ಸರಕಾರ ರಾಯಧನವನ್ನೇನೋ ಇಳಿಸಿದೆ. ಆದರೆ ಅದರ ಪ್ರತಿಫಲವನ್ನು ರೈತರಿಗೆ ಕೊಡಲಿಲ್ಲ.
  • ಅದರ ಬದಲು ಹಿಂದೆ ಇದ್ದ ಪ್ಯಾಕೆಟ್  ಹತ್ತಿ ಬೀಜದ ದರವನ್ನು  730 ರೂ. ಗಳಿಗೆ ಏರಿಸುವ ಮೂಲಕ 2.8 % ಏರಿಸಿದೆ ಎಂದು ಬೇಯರ್ ಮಾನ್ಸಂಟೋ ಕಂಪೆನಿ ಹೇಳಿಕೊಂಡಿದೆ.
  • ಜೊತೆಗೆ ಕೇಂದ್ರದ ಆಡಳಿತಾರೂಢ ಸರಕಾರ ಮಾನ್ಸಂಟೋ ಎಂಬ ವಿದೇಶೀ ಕಂಪೆನಿಯ ಕೃಷಿಯಲ್ಲಿ ಜೈವಿಕ ಉನ್ನತೀಕರಿಸಿದ ತಂತ್ರಜ್ಞಾನವನ್ನು  ವಿರೋಧಿಸುತ್ತದೆ ಎಂದು ಹೇಳಿದೆ.

ಈ ಪರಿಸ್ಥಿತಿಯಿಂದ ಭಾರತದ ಮಾರುಕಟ್ಟೆಯಲ್ಲಿ ನಮಗಲ್ಲದೆ ಇತರ ಬಹುರಾಷ್ಟೀಯ ಕಂಪೆನಿಗಳಿಗೂ ಸಹ ವ್ಯವಹಾರ ಕಷ್ಟವಾಗಿದೆ ಎಂಬ ನಿರಾಶಾ ಭಾವನೆಯನ್ನೂ ಇದು ತಳೆದಿದೆ.

ಭಾರತದ ಹತ್ತಿ ಬೆಳೆ ಈಗ ಪೂರ್ಣ ಪ್ರಮಾಣದಲ್ಲಿ ಬಿಟಿ ಹತ್ತಿಗೇ ಪರಿವರ್ತನೆಯಾಗಿದ್ದು, ಮುಂದೆ ಇದರಿಂದ ಹತ್ತಿ ಬೆಳೆಗಾರರಿಗೆ ತೊಂದರೆ ಆಗದಿರಲಿ.

 

0 Comments

Submit a Comment

Your email address will not be published. Required fields are marked *

Get in Touch

For all kinds of inquiries, regarding the Krushiabhivruddi website and its other media channels, including corporate advertising contact us on 

support@krushiabhivruddi.com
+91-9663724066

ಒಂದು ಎಕ್ರೆಯಲ್ಲಿ ಮಿಶ್ರ ಬೆಳೆಯಿಂದ ಕನಿಷ್ಟ 3 ಲಕ್ಷ ಆದಾಯ ಗಳಿಸುವ ರೈತ.

Categories

error: Content is protected !!