mulching for water saving

ಇದು 75% ದಷ್ಟು ನೀರು ಉಳಿಸುವ ವಿಧಾನ.

 ಬೇಸಿಗೆ ಬಂದರೆ ಸಾಕು .ನೀರು- ನೀರಾವರಿ, ನೀರಿನ ಕೊರತೆ.  ದಿನಾ ಇದೇ ಕೆಲಸ. ಬೇಸಿಗೆ ಬಂದರೆ ಸಾಕು ಎಲ್ಲೂ ಹೋಗುವಂತಿಲ್ಲ. ನೀರಾವರಿಯದ್ದೇ ತಲೆಬಿಸಿ. ಇಷ್ಟೆಲ್ಲಾ ನೀರುಣಿಸಿದರೆ  ಅಂತರ್ಜಲ ಯಾಕೆ  ಭೂ ಗರ್ಭದ ಪಾತಾಳ ಜಲಕ್ಕೂ ಹೋಗಬೇಕಾಗ ಬಹುದು. ಇದಕ್ಕೆ  ಪರಿಹಾರ ಎಷ್ಟು ಬೇಕೋ ಅಷ್ಟು ನೀರು ಕೊಟ್ಟು, ಆವೀಕರಣವನ್ನು ಶೂನ್ಯ ಮಾಡುವುದು. ಆವೀಕರಣ ತಡೆದರೆ ಸಸ್ಯಕ್ಕೆ  ಬೇಕಾಗುವ ನೀರು ತುಂಬಾ ಕಡಿಮೆ. ಮಳೆ ಹಿಂದಿನಂತಿಲ್ಲ: ಪ್ರಕೃತಿಯ ನಡೆ ಹೇಗಿರುತ್ತದೆ ಎಂದು ಬಲ್ಲವರಾರೂ ಇಲ್ಲ. ಮಳೆ ಬಂದರೆ ಬಂತು….

Read more
Wide bole

ತೆಂಗಿನ ಮರಕ್ಕೆ ಬೊಡ್ಡೆ ಬರುವುದು ಹೇಗೆ ಮತ್ತು ಇದರ ಪ್ರಯೋಜನ.

ತೆಂಗಿನ ಮರದ ಬುಡದಲ್ಲಿ ಬೆಳೆಯುವ ಒಂದು ರೀತಿಯ ಬೊಡ್ಡೆಯೇ (Bole) ಆ ಮರದ ಶಕ್ತಿ ಕೇಂದ್ರ. ಯಾವ ತೆಂಗಿನ ಮರಕ್ಕೆ  ಬೊಡ್ಡೆ ಇದೆಯೋ ಆ ಮರ ಸ್ವಲ್ಪ ಮಟ್ಟಿಗೆ ಬರ ನಿರೋಧಕ ಶಕ್ತಿಯನ್ನು ಪಡೆದಿರುತ್ತದೆ.    ಮರಳುಗಾಡಿನಲ್ಲಿ ವಾಸಿಸುವ ಒಂಟೆ ತನ್ನ ಬೆನ್ನಿನ ಭಾಗದಲ್ಲಿ ಆಪತ್ಕಾಲಕ್ಕೆ ಬೇಕಾಗುವ ಆಹಾರ ನೀರನ್ನು ಲಭ್ಯವಿರುವಾಗ ಸಂಗ್ರಹಿಸಿಟ್ಟುಕೊಂಡು ಅಭಾವದ ಸಮಯದಲ್ಲಿ  ಅದನ್ನು ಬಳಸಿಕೊಂಡು ಬದುಕುತ್ತದೆ. ಅದೇ ರೀತಿ ಕೆಲವು ಪ್ರಾಣಿಗಳು, ಪಕ್ಷಿಗಳು, ಸಸ್ಯಗಳು ಆಪತ್ಕಾಲಕ್ಕೆ  ಬಳಕೆಗಾಗುವಂತೆ ತಮ್ಮಲ್ಲಿ ಆಹಾರ ದಾಸ್ತಾನು ಇಟ್ಟುಕೊಂಡಿರುತ್ತವೆ….

Read more

ಅನನಾಸು ತಿಂದವರಿಗೆ ರೋಗ ಇಲ್ಲ.

ನಾವು ಏನೇನೂ ಹಣ್ಣುಗಳನ್ನು ಆರೋಗ್ಯಕ್ಕೆ ಉತ್ತಮ ಎಂದು ದುಬಾರಿ ಬೆಲೆ ಕೊಟ್ಟು ಖರೀದಿಸಿ ತಿನ್ನುತ್ತೇವೆ. ಆದರೆ ಕಾಲಬುಡದಲ್ಲೇ ಇರುವ ಎಲ್ಲಕ್ಕಿಂತ ಶ್ರೇಷ್ಟ ಹಣ್ಣನ್ನು ಮಾತ್ರ ತಾತ್ಸರದಿಂದ ಕಾಣುತ್ತೇವೆ. ನಿಜವಾಗಿ ಹುಳಿ ಸಿಹಿ ಮಿಶ್ರ ಅರೋಗ್ಯಕರ ಹಣ್ಣು ಎಂದರೆ ಅನನಾಸು. ಇದಕ್ಕೆ  ಸಾಟಿಯಾದ ಬೇರೆ ಹಣ್ಣು ಇಲ್ಲ ಎನ್ನುತ್ತಾರೆ ಅಮೇರಿಕನ್ನರು.   ವಿಷೇಶ ಗುಣಗಳು: ಅನನಾಸಿನಲ್ಲಿ ಸಿ ಅನ್ನಾಂಗ ಹೇರಳವಾಗಿದ್ದು ಅದನ್ನು ಸೇವಿಸುವುದು ಎಲ್ಲಾ ವಯೋಮಾನದವರಿಗೂ ಒಳ್ಳೆಯದು. ಬೀಡಿ ಸೇದುವವರು ಕೆಮ್ಮು ಕಡಿಮೆಯಾಗಲು ಅನನಾಸು ಒಳ್ಳೆಯದೆಂದು  ಹೇಳುತ್ತಾರೆ. ಕಾರಣ,…

Read more

ಕೃತ್ರಿಮ ವಿಧಾನ- ಜೈಲು ಶಿಕ್ಷೆ.

ನಮ್ಮ ದೇಶದಲ್ಲಿ ಹಣ್ಣು ಹಂಪಲುಗಳನ್ನು ಬೇಗ ಹಣ್ಣು ಮಾಡಲು ಕೆಲವು ರಾಸಾಯನಿಕ ವಸ್ತುಗಳನ್ನು ಬಳಕೆ ಮಾಡುತ್ತಿರುವುದು ಬಹಿರಂಗ ವಿಚಾರ. ಇನ್ನು ಮುಂದೆ ಈ ರೀತಿ ಮಾಡಿದರೆ  ಮಾಡಿದವನಿಗೆ ಜೈಲು ಶಿಕ್ಷೆ ಆಗುತ್ತದೆ. ಇದು ದೆಹಲಿ ಹೈಕೋರ್ಟು ನೀಡಿದ ತೀರ್ಪು.   ಹಿನ್ನೆಲೆ: ಹಣ್ಣುಹಂಪಲುಗಳನ್ನು ಗಿರಾಕಿಗಳು ಕೊಳ್ಳುವುದು ಅದರ  ಆಕರ್ಷಕ ಮೈ ಬಣ್ಣ ಮತ್ತು ಗಾತ್ರವನ್ನು ನೋಡಿ.   ಹಣ್ಣು ಹಂಪಲುಗಳಿಗೆ ಅತೀ ದೊಡ್ಡ ಸಮಸ್ಯೆ ಎಂದರೆ ಹಣ್ಣಿನ ಒಳಗೆ  ಹುಳ ಆಗುವುದು ಮತ್ತು ಸಿಪ್ಪೆ ಕೊಳೆಯುವುದು. ಇದರಿಂದ…

Read more
ಈ ಹಂತದಲ್ಲಿ ಥಿನ್ನಿಂಗ್ ಮಾಡಬೇಕು

ದ್ರಾಕ್ಷಿ ಥಿನ್ನಿಂಗ್ ಮಾಡಿ – ಗುಣಮಟ್ಟ ಹೆಚ್ಚಿಸಿ.

ದ್ರಾಕ್ಷಿ ಗೊಂಚಲಿನಲ್ಲಿ ಎಲ್ಲಾ ಒಂದೇ ಗಾತ್ರದ  ಹಣ್ಣುಗಳಿದ್ದರೆ ತುಂಬಾ ಆಕರ್ಷಕವಾಗಿರುತ್ತದೆ. ಅದು ಉತ್ತಮ ಬೆಲೆಗೆ ಮಾರಾಟವಾಗುತ್ತದೆ. ಎಲ್ಲದಕ್ಕೂ  ಗಾತ್ರ ಮತ್ತು ನೋಟವೇ ಮುಖ್ಯ. ಇದು ತನ್ನಷ್ಟಕ್ಕೇ ಆಗುವುದಲ್ಲ. ಬೆಳೆಗಾರರು ಅದಕ್ಕೆ ಬೇಕಾದ ಥಿನ್ನಿಂಗ್ ಮಾಡಿದರೆ ಮಾತ್ರ ಹೀಗೆ ಇರುತ್ತದೆ. ದ್ರಾಕ್ಷಿ ಗೊಂಚಲಿನಲ್ಲಿ ಹೆಚ್ಚಿನ ಹೂವುಗಳು ಪರಾಗಸ್ಪರ್ಶಕ್ಕೊಳಗಾಗಿ ಕಾಯಿಕಚ್ಚುತ್ತವೆ. ಎಲ್ಲವೂ ಕಾಯಿಯಾದರೆ ಕೆಲವು ಬಟಾಣಿ ಗಾತ್ರ , ಮತ್ತೆ ಕೆಲವು ಇನ್ನೂ ಸಣ್ಣ ಗಾತ್ರ ಕೆಲವು ಯೋಗ್ಯ ಗಾತ್ರ, ಹೀಗೆ ಕಾಯಿಗಳಲ್ಲೆಲ್ಲಾ ಆಕಾರ ವೆತ್ಯಾಸ ಇರುತ್ತದೆ. ಹೀಗೆ ಆದರೆ…

Read more

ಆರೋಗ್ಯಬೇಕೇ- ಕೀಟನಾಶಕ ಮಿತಿಗೊಳಿಸಿ.

ಅಡಿಕೆ ಉಳಿಯಬೇಕು. ದುಡ್ಡು ಆಗಬೇಕು ನಿಜ. ಆದರೆ ದುಡ್ಡಿನಲ್ಲಿ ಆರೋಗ್ಯವನ್ನು ಖರೀದಿಸಲಿಕ್ಕೆ ಆಗುವುದಿಲ್ಲ. ಅನಾರೋಗ್ಯ ಬಂದರೆ ನಮ್ಮ ಸಂಪಾದನೆಯಲ್ಲಿ ಆಸ್ಪೆತ್ರೆಯವರು- ವೈದ್ಯರು ಪಾಲುದಾರರಾಗುತ್ತಾರೆ. ಅವರನ್ನು ಸಾಕುವ ಕೆಲಸ ಬೇಡ. ಅಡಿಕೆ ಬೆಳೆಗಾರರಿಗೆ ಸಲಹೆಗಳ ಸುರಿಮಳೆಗಳೇ ಹರಿದು ಬರುತ್ತಿವೆ. ಯಾವ ರೈತರು ಪ್ರಧಾನ ಮಂತ್ರಿಗಳ ಕೃಷಿ ವಿಕಾಸ ಯೋಜನೆಯ 6000 ರೂ. ಫಲಾನುಭವಿಗಳಿದ್ದಾರೆಯೋ ಅವರಿಗೆ  ಮೊಬೈಲ್ ನಂಬ್ರಕ್ಕೆ ಸಂದೇಶಗಳು ಬರುತ್ತಿವೆ. ಇದರಲ್ಲೆಲ್ಲಾ ಅಷ್ಟು ಇಷ್ಟು ರಾಸಾಯನಿಕ ಬಳಕೆ ಮಾಡಿ ಬೆಳೆ ಸಂರಕ್ಷಿಸಿಕೊಳ್ಳಿ ಎಂಬ ಸಂದೇಶ ಇದೆ. ರೈತರೇ ಇದನ್ನು…

Read more

ಮಹಾಳಿ ರೋಗಕ್ಕೆ ಮೊಳೆ ಮದ್ದು!

ಒಬ್ಬ ಮಿತ್ರರು ಸಲಹೆ ಕೇಳುತ್ತಾರೆ. ಅಡಿಕೆಯ ಕೊಳೆ ರೋಗ ನಿಯಂತ್ರಣಕ್ಕೆ ಮರದ ಬುಡಕ್ಕೆ ತುಕ್ಕು ಹಿಡಿದ ಮೊಳೆ ಹೊಡೆದರೆ ಆಗುತ್ತದಂತೆ. ಕೇರಳದಲ್ಲಿ ಇದು ಯಶಸ್ವಿಯಾಗಿದೆಯಂತೆ. ಈ ಬಗ್ಗೆ ನಮ್ಮ ಅಭಿಪ್ರಾಯ ಕೇಳುತ್ತಾರೆ. ಮನುಷ್ಯ ತನ್ನೆಲ್ಲಾ ಸಿಟ್ಟನ್ನು ಕೊನೆಗೆ ತೀರಿಸಿಕೊಳ್ಳುವುದು ತನ್ನ ಹೆಂಡತಿಯ ಮೇಲೆ ಎನ್ನುತ್ತಾರೆ ಹಿಂದಿನವರು. ಉಳಿದವರು ಅದಕ್ಕೆ  ಪ್ರತಿಕ್ರಿಯಿಸುತ್ತಾರೆ. ಆದರೆ ಹೆಂಡತಿಗೆ ಗಂಡನೇ ದೊಡ್ದದು. ಅದಕ್ಕೆ ಏನು ಮಾಡಿದರೂ ಮಾತಾಡುವುದಿಲ್ಲ. ಆ ಅವಕಾಶವನ್ನು  ಗಂಡಸು ಬಳಸಿಕೊಳ್ಳುತ್ತಾನೆ. ಇದರ ಉಲ್ಲೇಖ  ಇಲ್ಲಿ ಯಾಕೆಂದರೆ ಯಾವುದಕ್ಕೂ ಪ್ರತಿರೋಧ ಒಡ್ಡದೇ…

Read more

ಮೇವು ಸಮಸ್ಯೆಯೇ – ಅಜೋಲಾ ಬೆಳೆಸಿ -ಬಳಸಿ.

ಪಶುಪಾಲನೆ ಮಾಡುವವರಿಗೆ ದೊಡ್ದ ಸಮಸ್ಯೆ ಎಂದರೆ ಹಸುರು ಮೇವಿನ ಉತ್ಪಾದನೆ. ಎಷ್ಟು ಹಸುರು ಮೇವಿದ್ದರೂ ಸಾಕಾಗದು. ಅದಕ್ಕಾಗಿ ಕೆಲವರು ಎಕ್ರೆಗಟ್ಟಲೆ ಜಾಗವನ್ನು ಮೇವು ಉತ್ಪಾದನೆಗಾಗಿ ಮೀಸಲಿಡುತ್ತಾರೆ.  ಅದರೊಂದಿಗೆ ಸ್ವಲ್ಪ ಅಜೋಲಾವನ್ನು ಮನೆಯ ಸಮೀಪ ಬೆಳೆಸಿದರೆ ಪೌಷ್ಟಿಕ ಮೇವು ಲಭ್ಯವಾಗುತ್ತದೆ.  ಮೇವನ್ನು ಅದಕ್ಕಾಗಿಯೇ ಹೊಲ ಮೀಸಲಿಟ್ಟು ಬೆಳೆಸಿದಾಗ  ಆ ಹೊಲದ  ಉತ್ಪಾದಕತೆಯನ್ನುಲೆಕ್ಕಾಚಾರ ಹಾಕಿದರೆ  ಅದು ನಷ್ಟ. ಇದರ ಬದಲಿಗೆ ಪೌಷ್ಟಿಕ ಮೇವನ್ನು ಕಡಿಮೆ ಸ್ಥಳದಲ್ಲಿ ಬೇರೆ ಕಡೆಯಲ್ಲಿ ಉತ್ಪಾದಿಸುವುದು ಲಾಭದಾಯಕ. ಪಶುಗಳಿಗೆ ಸತ್ವ ಇಲ್ಲದ 50 ಕಿಲೋ ಮೇವು ಕೊಡುವ ಬದಲಿಗೆ…

Read more

ಇವರಿಗೆ ಉತ್ತರಿಸುವಷ್ಟಾದರೂ ಕೃಷಿಕ ಬುದ್ದಿವಂತನಾಗಬೇಕು.

ನೀವು ಒಂದು ವಾಟ್ಸ್ ಆಪ್ ಗ್ರೂಪ್ ನೋಡಿ. ಫೇಸ್ ಬುಕ್  ಖಾತೆ ತೆರೆಯಿರಿ. ಅಲ್ಲಿಗೆ ಪ್ರಾರಂಭ. ಬೆಳೆ ಬೆಳೆಸುವಾಗ ಯಾವುದಾದರೂ ಒಂದು ಸಂದೇಹವನ್ನು ನಿಮ್ಮ ಮಿತ್ರರುಗಳಲ್ಲಿ  ಹಂಚಿಕೊಂಡರೆ ಸಾಕು ತಕ್ಷಣ ನಿಮ್ಮ ಕಮೆಂಟ್ ಬಾಕ್ಸ್ ಗೆ  call me xxxxxx8x90 ಹೀಗೆ ನೂರಾರು ನಂಬ್ರಗಳ ಜನ ಸಂದೇಶ ಕಳುಹಿಸುತ್ತಾರೆ. ಸಂಪರ್ಕಿಸಿದರೆ ನಿಮ್ಮನ್ನು ಕುಳಿತುಕೊಳ್ಳಲು ಬಿಡದೆ ಸಂಪರ್ಕ ಸಾಧಿಸುತ್ತಾರೆ.     ಇಷ್ಟಲ್ಲದೆ ಕೆಲವರು ನೇರವಾಗಿ ತಮ್ಮ ಉತ್ಪನ್ನಗಳ ಬಣ್ಣ ಬಣ್ಣದ ಬ್ರೋಶರ್ ಗಳನ್ನು ಅಟಾಚ್ ಮಾಡುತ್ತಾರೆ. ಕೆಲವರು…

Read more
ಸಾವಯವ ವಿಧಾನದ ಕಳೆ ನಿಯಂತ್ರಣ

ಸಾವಯವ ಕಳೆ ನಿಯಂತ್ರಣ ವಿಧಾನ.

ರಾಸಾಯನಿಕ ವಿಧಾನದ ಕಳೆ ನಿಯಂತ್ರಣದ ಬದಲಿಗೆ ಸಾವಯವ ವಿಧಾನದಲ್ಲಿ ಕಳೆ ನಿಯಂತ್ರಿಸಲು ಸಾಧ್ಯವಿದೆ.  ಇದರಿಂದ ಮಣ್ಣಿನ ಫಲವತ್ತತೆ ಹೆಚ್ಚಾಗುತ್ತದೆ. ಕೆಲಸ ಸ್ವಲ್ಪ ದುಬಾರಿಯಾದರೂ ಈ ವಿಧಾನದ ಕಳೆ ನಿಯಂತ್ರಣ ಎಲ್ಲಾ ದೃಷ್ಟಿಯಿಂದಲೂ ಉತ್ತಮ. ಕೃಷಿ ಭೂಮಿ ಫಲವತ್ತತೆ ಕಳೆದುಕೊಳ್ಳುತ್ತಿರುವ ಈ ಸಂದರ್ಭದಲ್ಲಿ ಇಂತಹ ವಿಧಾನದ ಕಳೆ ನಿಯಂತ್ರಣ ನಮ್ಮ ಆದ್ಯತೆಯಾದರೆ ಒಳ್ಳೆಯದು. ಕಳೆ ನಿಯಂತ್ರಣ ಕೃಷಿಕರಿಗೆ  ಒಂದು ದೊಡ್ದ  ಸವಾಲು. ಕಳೆಗಳು ಹೊಲ ನಿರ್ವಹಣೆಗೆ  ತುಂಬಾ ಅನನುಕೂಲ ಪರಿಸ್ಥಿತಿಯನ್ನು  ಉಂಟು ಮಾಡುತ್ತವೆ. ನಾವು ಬಳಕೆ ಮಾಡುವ ಬಹುತೇಕ …

Read more
error: Content is protected !!