ಮಹಾಳಿ ರೋಗಕ್ಕೆ ಮೊಳೆ ಮದ್ದು!

ಒಬ್ಬ ಮಿತ್ರರು ಸಲಹೆ ಕೇಳುತ್ತಾರೆ. ಅಡಿಕೆಯ ಕೊಳೆ ರೋಗ ನಿಯಂತ್ರಣಕ್ಕೆ ಮರದ ಬುಡಕ್ಕೆ ತುಕ್ಕು ಹಿಡಿದ ಮೊಳೆ ಹೊಡೆದರೆ ಆಗುತ್ತದಂತೆ. ಕೇರಳದಲ್ಲಿ ಇದು ಯಶಸ್ವಿಯಾಗಿದೆಯಂತೆ. ಈ ಬಗ್ಗೆ ನಮ್ಮ ಅಭಿಪ್ರಾಯ ಕೇಳುತ್ತಾರೆ.

  • ಮನುಷ್ಯ ತನ್ನೆಲ್ಲಾ ಸಿಟ್ಟನ್ನು ಕೊನೆಗೆ ತೀರಿಸಿಕೊಳ್ಳುವುದು ತನ್ನ ಹೆಂಡತಿಯ ಮೇಲೆ ಎನ್ನುತ್ತಾರೆ ಹಿಂದಿನವರು.
  • ಉಳಿದವರು ಅದಕ್ಕೆ  ಪ್ರತಿಕ್ರಿಯಿಸುತ್ತಾರೆ. ಆದರೆ ಹೆಂಡತಿಗೆ ಗಂಡನೇ ದೊಡ್ದದು.
  • ಅದಕ್ಕೆ ಏನು ಮಾಡಿದರೂ ಮಾತಾಡುವುದಿಲ್ಲ. ಆ ಅವಕಾಶವನ್ನು  ಗಂಡಸು ಬಳಸಿಕೊಳ್ಳುತ್ತಾನೆ.
  • ಇದರ ಉಲ್ಲೇಖ  ಇಲ್ಲಿ ಯಾಕೆಂದರೆ ಯಾವುದಕ್ಕೂ ಪ್ರತಿರೋಧ ಒಡ್ಡದೇ ಇರುವಂತದ್ದು ಸಸ್ಯ.
  • ಅದಕ್ಕೆ ಮೊಳೆ ಹೊಡೆದರೂ ಮಾತಾಡುವುದಿಲ್ಲ. ಕೊಡಲಿ ಏಟು ಕೊಟ್ಟರೂ  ಮಾತಾಡುವುದಿಲ್ಲ.
  • ಯಾವ ಪ್ರಯೋಗ ಮಾಡುವುದಿದ್ದರೂ  ಕೈಕಾಲು ಕಟ್ಟಿ ಹಾಕಬೇಕಾದ ಕಷ್ಟ ಇಲ್ಲ.
  • ಹಾಗಾಗಿ ಕೆಲವು ಜನ  ಮರ/ಸಸ್ಯಗಳಲ್ಲಿ ತಮ್ಮ ಪ್ರಯೋಗ  ಕೈಗೊಳ್ಳುತ್ತಿರುತ್ತಾರೆ.
  • ಅಂತದ್ದರಲ್ಲಿ ಒಂದು ಮರಕ್ಕೆ ಮೊಳೆ ಹೊಡೆಯುವುದು .

  • ಕೇರಳದ ಒಂದು ಊರಿನಲ್ಲಿ ರೈತರೊಬ್ಬರು ಆಡಿಕೆ ಮರದ ಮಹಾಳಿ ರೋಗ ತಡೆಗೆ ಮರದ ಬುಡದ ಬೇರಿನ ಸಮೀಪದ ಕಾಂಡಕ್ಕೆ ಮೊಳೆ ಹೊಡೆದು ನಿಯಂತ್ರಿಸಿದ್ದಾರಂತೆ.
  • ಹಿಂದೆ ಇವರು ವರ್ಷಕ್ಕೆರದು ಬಾರಿ ಬೋರ್ಡೋ ದ್ರಾವಣವನ್ನು ಬಳಸುತ್ತಿದ್ದರಂತೆ.
  • ಇನ್ನು ಅದನ್ನು ಬಿಟ್ಟು ಇದೇ ಕ್ರಮ ಅನುಸ್ರಿಸುವುದರಲ್ಲಿದ್ದಾರೆ ಎಂಬ ವರದಿ TwoCercles.net ನಲ್ಲಿ  ಪ್ರಕಟವಾಗಿದೆ.

ಈ ಸುದ್ದಿ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಓಡಾಡುತ್ತಿದೆ. ಬಹಳ ಜನರಿಗೆ ಇದು ಕುತೂಹಲ ಮೂಡಿಸಿದೆ. ಕೆಲವರು ನಷ್ಟ ಇಲ್ಲ ಎಂದು ಇದನ್ನು ಅನುಸರಿಸಲು ಮುಂದಾಗಿದ್ದಾರೆ.

  • ಇದರ ಸಂಶೋಧಕರು ವಿಚಾರವನ್ನು  ಹೆಚ್ಚಿನ ಅಧ್ಯಯನಕ್ಕಾಗಿ ಕೇರಳ ಕೃಷಿ ವಿಶ್ವವಿಧ್ಯಾನಿಲಯದ ವಿಜ್ಞಾನಿಗಳ ಗಮನಕ್ಕೂ ತಂದಿದ್ದಾರಂತೆ.

ಇದು ಹೊಸತಲ್ಲ:


ತೆಂಗಿನ ನುಶಿ ಹತೋಟಿಗೆ ತಾಮ್ರದ ಮೊಳೆ

  • ಯಾವಾಗಲೂ ನಮ್ಮ ರೈತರಿಗೆ ಹೊಸತು ಕೇಳಿದರೆ ಸಾಕು ಅವರ ಕಿವಿ ನೆಟ್ಟಗಾಗುತ್ತದೆ.
  • ಅದು 2004-05 ನೇ ಇಸವಿ. ಶಿವಮೊಗ್ಗ ಜಿಲ್ಲೆ ಸಾಗರದಲ್ಲಿ ಇಂತಹ ಒಂದು ಸುದ್ದಿ ಪ್ರಚಾರ ಪಡೆದಿತ್ತು
  • ಆಗ ತೆಂಗಿನ  ಮರಕ್ಕೆ ನುಶಿ ಕಾಟ ವಿಪರೀತವಾಗಿತ್ತು. ಈ ನುಶಿ ಕಾಟ ತಡೆಯಲು ಮರದ ಕಾಂಡಕ್ಕೆ ತಾಮ್ರದ ಮೊಳೆ ಹೊಡೆಯುವುದು ಸೂಕ್ತ ಎಂಬ  ಪರಿಹಾರ.
  • ಸಾಗರದ ಒಂದು ಅಂಗಡಿಯವರು ಕ್ವಿಂಟಾಲು ಗಟ್ಟಲೆ ತಾಮ್ರದ ಮೊಳೆಗಳು ಮಾರಿದ್ದುಂಟು.
  •  ನೂರಾರು ಜನ  ತಮ್ಮ ತೆಂಗಿನ ಮರದ ಕಾಂಡಕ್ಕೆ  ಮೊಳೆ ಹೊಡೆದದ್ದಿದೆ
  • ಆದರೆ ನುಶಿ ಪೀಡೆ ಹೋಗಲೇ ಇಲ್ಲ. ಅಂತದ್ದೇ ಇದು ಒಂದು ಎಂದರೂ ತಪ್ಪಾಗಲಾರದು.

ಮೊಳೆಯಿಂದ ಏನಾಗುತ್ತದೆ:

  • ಕೊಳೆಯುವ ಮಹಾಳಿ ರೋಗ ಬರುವುದು ಒಂದು ಶಿಲೀಂದ್ರದ ಕಾರಣದಿಂದ.
  • ಈ ಶಿಲೀಂದ್ರಕ್ಕೂ ಕಬ್ಬಿಣದ ತುಕ್ಕ್ಕು ಹಿಡಿದ ಮೊಳೆಗೂ ಯಾವ ಸಂಬಂಧವೋ ತಿಳಿಯುತ್ತಿಲ್ಲ.

ಆದರೆ ಮೊಳೆ ಹೊಡೆದದ್ದರಿಂದ ಕಬ್ಬಿಣದ ಆಕ್ಸೈಡ್ ಅತೀ ಅಲ್ಪ ಪ್ರಮಾಣದಲ್ಲಿ  ಅಡಿಕೆ ಮರದ ಅಂಗಾಂಶಗಳಿಗೆ ಸೇರಬಹುದೇ ಹೊರತು ಅದರಿಂದ ಕೊಳೆ ರೋಗದ ಶಿಲೀಂದ್ರ ಸಾಯುವ ಸಾಧ್ಯತೆ  ಇಲ್ಲ.

ಯಾವುದೇ ಗಾಯಗಳಾದರೂ ಅದು ಗುಣವಾಗದೆ ದೊಡ್ಡ ಗಾಯವಾಗುತ್ತದೆ.
  • ಇಷ್ಟಕ್ಕೂ ಏಕದಳ  (ಮೋನೋಕೋಟ್)  ಸಸ್ಯಗಳಾದ ಅಡಿಕೆ, ತೆಂಗು ಮುಂತದ ತಾಳೆ ಜಾತಿಯ ಸಸ್ಯಗಳ ಕಾಂಡಕ್ಕೆ  ಆಗುವ ಗಾಯ ಮತ್ತೆ  ಅಲ್ಲಿಗೆ ಕೂಡಿಕೊಳ್ಳುವುದಿಲ್ಲ ಎಂಬುದು ಅಧ್ಯಯನ.
  • ಗಾಯವಾದ ಭಾಗದಲ್ಲಿ ರಸ ಸ್ರವಿಸುವ ಸಾಧ್ಯತೆಯೂ ಇಲ್ಲದಿಲ್ಲ.

ಮೊಳೆ  ಹೊಡೆಯುವುದು ಮುಂತಾದ ಅವೈಜ್ಞಾನಿಕ ವಿಧಾನಗಳಿಂದ  ಸಸ್ಯ ರೋಗಗಳನ್ನುಗುಣಪಡಿಸುವುದು ಅಸಾಧ್ಯ. ಇವು ಬರೇ ಪ್ರಚಾರ ಪಡೆಯುವ ತಂತ್ರಗಳು.

  • ಒಂದೆರಡು  ಕಡೆ ಯಾವುದೋ ಕಾಕತಾಳಿಯ ಘಟನಾವಳಿಗಳಿಂದ  ಸಸ್ಯ ರೋಗಗಳು ಇಂತಹ ಕ್ರಮಗಳಿಂದ ಹತೋಟಿಗೆ ಬಂದಿರಬಹುದಾದರೂ ಅದು ಸಾರ್ವಕಾಲಿಕ ಸತ್ಯ ಆಗಿರಲಾರದು.

ರೈತರೇ ಇಲ್ಲಸಲ್ಲದ ವೈಜ್ಞಾನಿಕ ಆಧಾರಗಳಿಲ್ಲದ ಮಾಹಿತಿಗಳಿಗೆ ಬೆಲೆ ಕೊಡಬೇಡಿ.

 

Leave a Reply

Your email address will not be published. Required fields are marked *

error: Content is protected !!