ಮಳೆ ಭವಿಷ್ಯವನ್ನು ಹಿಂದೆ ಪಂಚಾಗಕರ್ತರು ಹೇಳುತ್ತಿದ್ದರು. ಈಗ ಅದನ್ನು ಹವಾಮಾನ ಇಲಾಖೆ ಹೇಳುತ್ತದೆ. ಅದು ಪೂರ್ವಭಾವಿಯಾಗಿಯೇ. ಭಾರತೀಯ ಹವಾಮಾನ ಕಚೇರಿ ಈ ವರ್ಷ ಸರಾಸರಿ ಮಳೆಯಾಗುವ ಸೂಚನೆಯನ್ನು ನೀಡಿದೆ.
- ಮೇ ಕೊನೇ ವಾರ, ಜೂನ್ ಒಂದನೇ ತಾರೀಖಿಗೆ ಕೇರಳ ಪ್ರವೇಶಿಸುವ ಮುಂಗಾರು ಮಳೆ
- ಸಪ್ಟೆಂಬರ್ ತನಕ ದೇಶದಾದ್ಯಂತ ಏಕ ಪ್ರಕಾರವಾಗಿ ಬೀಳಲಿದ್ದು,
- ಕೃಷಿಕರ ಬದುಕಿಗೆ ಇದು ನೆಮ್ಮದಿ ತರಲಿದೆ ಎಂಬುದಾಗಿ ಭೂ ವಿಜ್ಞಾನ ಸಚಿವಾಲಯದ ಕಾರ್ಯದರ್ಶಿ ಎಂ.ರಾಜೀವನ್ ಹೇಳುತ್ತಾರೆ.
ಈ ವರ್ಷದ ಮುಂಗಾರು ಮಳೆಯನ್ನು ಸರಾಸರಿ ಮಳೆ ಅಥವಾ ಸಮಾನ್ಯ ಮಳೆ ಎಂದು ವ್ಯಾಖ್ಯಾನಿಸಲಾಗುತ್ತದೆ. ರೈತರು ಮೇ ತಿಂಗಳಲ್ಲಿ ಹೊಲದ ಸಿದ್ದತೆ ಮಾಡಿಕೊಳ್ಳಬಹುದು. ಎಲ್ಲಾ ಪ್ರದೇಶದಲ್ಲೂ ಏಕ ಪ್ರಕಾರ ಮಳೆಯಾಗುತ್ತದೆ. ಎಂದೂ ಸಹ ಇಲಾಖೆ ಹೇಳಿದೆ.
ಕೃಷಿ ಆರ್ಥಿಕತೆಗೆ ಸಹಕಾರಿ:
- ಈ ವರ್ಷ ದೇಶಕ್ಕೆ ಹಾಗೂ ಪ್ರಪಂಚಕ್ಕೆ ಎದುರಾದ ಗಂಡಾಂತರ ಇಡೀ ಅರ್ಥ ವ್ಯವಸ್ಥೆಯನ್ನು ಬುಡಮೇಲು ಮಾಡಲೂ ಬಹುದು.
- ಆದರೆ ತಕ್ಷಣಕ್ಕೆ ದೇಶದ ಆಹಾರ ಸಮಸ್ಯೆ ಮತ್ತು ಜೀವನ ಬಧ್ರತೆಗೆ ಮುಂಗಾರು ಮಳೆಯೇ ಪ್ರಮುಖ ಆಧಾರ.
- ಉತ್ತಮ ಮುಂಗಾರು ಮಳೆ ಇದ್ದರೆ ದೇಶಕ್ಕೆ ಆಹಾರದ ಧಾನ್ಯಗಳ ಕೊರತೆ ಉಂಟಾಗಲಾರದು.
- ಅದು ಈ ವರ್ಷ ಕೈಗೂಡಲಿದೆ. ನಾಲ್ಕೂ ತಿಂಗಳ ಕಾಲ ಮಳೆ ಬರಲಿದ್ದು, ಕೆರೆ, ಜಲಾಶಯಗಳು ಭರ್ತಿಯಾಗಿ ಕೃಷಿಕರಿಗೆ ತಮ್ಮ ಕೃಷಿ ಚಟುವಟಿಕೆಯನ್ನು ಮುಂದುವರೆಸಲು ಯಾವುದೇ ತೊಂದರೆ ಉಂಟಾಗಲಾರದು ಎಂದು ಭಾವಿಸಲಾಗಿದೆ.
ಮಳೆ ಮತ್ತುದೇಶದ ಕೃಷಿ:
- ಭಾರತದ ಆರ್ಥಿಕತೆ ಕೃಷಿ ಕ್ಷೇತ್ರವನ್ನು ಅವಲಂಭಿಸಿದೆ.
- ಇಲ್ಲಿ 1.3 ಶತಕೋಟಿ ಜನಸಂಖ್ಯೆ ಕೃಷಿಯನ್ನು ಅವಲಂಭಿಸಿದ್ದಾರೆ.
- ಬಹುಷಃ ಪೂರ್ವ ಮುಂಗಾರು ಮೇ ಎರಡನೇ ವಾರದಲ್ಲೇ ಪ್ರಾರಂಭವಾಗುವ ಮುನ್ಸೂಚನೆ ಇದೆ.
- ಎಲ್ ನೀನೋ ಪರಿಣಾಮ ಈ ವರ್ಷ ತಟಸ್ಥವಾಗಿದೆ.
- ಆದರೆ ಮುಂಗಾರು ಮಳೆ ಪ್ರಾರಂಭವಾಗಿ ಕೆಲವು ಸಮಯದ ತರುವಾಯ ಲಾ ನೀನಾ ಪರಿಣಾಮ ಉಂಟಾಗಲೂ ಬಹುದು.
- ಎಲ್ ನೀನೋ ಪರಿಣಾಮದಿಂದ ಮಳೆ ಅಸ್ಥಿರವಾಗುತ್ತದೆ. ಲಾನೀನಾ ಪರಿಣಾಮದಿಂದ ವಾಡಿಕೆಗಿಂತ ಹೆಚ್ಚಿನ ಮಳೆ ಸುರಿಯಬಹುದು.
- ಜಲಾಶಯಗಳಲ್ಲಿ ನೀರಿನ ಸಂಗ್ರಹ ಜಾಸ್ತಿಯಾಗಿ ಅಂತರ್ ಜಲ ಸಂಗ್ರಹ ಹೆಚ್ಚಾಗಲು ಅವಕಾಶವಾಗಬಹುದು.
- ಭಾರತದ ಬಹುತೇಕ ಕೃಷಿ ಚಟುವಟಿಕೆಗಳು ಮುಂಗಾರು ಮಳೆಯನ್ನೇ ನಂಬಿ ನಡೆಯುವಂತವುಗಳು.
- ಇಲ್ಲಿ ಮಳೆಯಾಶ್ರಿತ ಬೆಳೆಗಳೇ ಜಾಸ್ತಿ. ಕಳೆದ ಕೆಲವು ವರ್ಷಗಳಿಂದ ಮಳೆಯ ಕೊರತೆ, ಅದಕಾಗಿ ನಡೆದ ಅಂತರ್ಜಲ ಶೋಷಣೆ ಪರಿಣಾಮ ಇಲ್ಲಿ ಜಲ ಕ್ಷಾಮವೂ ಎದುರಾಗಿದೆ.
ಇದೆಲ್ಲಾ ಸಮಸ್ಯೆಗಳು ಈ ವರ್ಷ ಕಡಿಮೆಯಾಗಲಿದ್ದು, ದೇಶದ ಆರ್ಥಿಕತೆಯನ್ನು ಮುನ್ನಡೆಸಲು ಕೃಷಿ ಕ್ಷೇತ್ರ ಸಹಕ್ಕರಿಸಲಿದೆ ಎಂಬುದಾಗಿ ಹವಾಮಾನ ಇಲಾಖೆ ಹೇಳುತ್ತದೆ.
ಈ ವರ್ಷದ ಹವಾಮಾನವೂ ಇದನ್ನು ಪುಷ್ಟೀಕರಿಸುತ್ತಿದ್ದು, ಈಗಾಗಲೇ ತಾಪಮಾನ ಏರಿಕೆ ಪ್ರಾರಂಭವಾಗಿದೆ. ಕೆಲವು ಕಡೆ ಈಗಲೇ ಮಳೆ ಸಿಂಚನ ಅಗಲಾರಂಭಿಸಿದೆ. ಇದು ಮುಂದೆಯೂ ಇದೇ ರೀತಿ ಮುಂದುವರಿಯಲಿದೆ.