ದ್ರಾಕ್ಷಿ ಥಿನ್ನಿಂಗ್ ಮಾಡಿ – ಗುಣಮಟ್ಟ ಹೆಚ್ಚಿಸಿ.

by | Feb 10, 2020 | Grape (ದ್ರಾಕ್ಷಿ) | 0 comments

ದ್ರಾಕ್ಷಿ ಗೊಂಚಲಿನಲ್ಲಿ ಎಲ್ಲಾ ಒಂದೇ ಗಾತ್ರದ  ಹಣ್ಣುಗಳಿದ್ದರೆ ತುಂಬಾ ಆಕರ್ಷಕವಾಗಿರುತ್ತದೆ. ಅದು ಉತ್ತಮ ಬೆಲೆಗೆ ಮಾರಾಟವಾಗುತ್ತದೆ. ಎಲ್ಲದಕ್ಕೂ  ಗಾತ್ರ ಮತ್ತು ನೋಟವೇ ಮುಖ್ಯ. ಇದು ತನ್ನಷ್ಟಕ್ಕೇ ಆಗುವುದಲ್ಲ. ಬೆಳೆಗಾರರು ಅದಕ್ಕೆ ಬೇಕಾದ ಥಿನ್ನಿಂಗ್ ಮಾಡಿದರೆ ಮಾತ್ರ ಹೀಗೆ ಇರುತ್ತದೆ.

  • ದ್ರಾಕ್ಷಿ ಗೊಂಚಲಿನಲ್ಲಿ ಹೆಚ್ಚಿನ ಹೂವುಗಳು ಪರಾಗಸ್ಪರ್ಶಕ್ಕೊಳಗಾಗಿ ಕಾಯಿಕಚ್ಚುತ್ತವೆ.
  • ಎಲ್ಲವೂ ಕಾಯಿಯಾದರೆ ಕೆಲವು ಬಟಾಣಿ ಗಾತ್ರ , ಮತ್ತೆ ಕೆಲವು ಇನ್ನೂ ಸಣ್ಣ ಗಾತ್ರ ಕೆಲವು ಯೋಗ್ಯ ಗಾತ್ರ, ಹೀಗೆ ಕಾಯಿಗಳಲ್ಲೆಲ್ಲಾ ಆಕಾರ ವೆತ್ಯಾಸ ಇರುತ್ತದೆ.
  • ಹೀಗೆ ಆದರೆ ಒಟ್ಟಾರೆಯಾಗಿ ದ್ರಾಕ್ಷಿ ಗೊಂಚಲು ಹೆಚ್ಚು ಕಾಣಬಹುದಾದರೂ ಲಾಭವಾಗಲಿಕ್ಕಿಲ್ಲ.
  • ಬಹುತೇಕ ಯೋಗ್ಯವಲ್ಲದ ಹಣ್ಣೂಗಳೇ ಇರುವ ಕಾರಣ ಬೆಲೆ- ಬೇಡಿಕೆಯೂ ಕಡಿಮೆಯಾಗುತ್ತದೆ.
  • ಇದನ್ನು ಸರಿಪಡಿಸಲು ದ್ರಾಕ್ಷಿ ಗೊಂಚಲಿನಲ್ಲಿ ಪ್ರೂನಿಂಗ್ ಮಾಡಿ ಎಷ್ಟು ಆ ಗೊಂಚಲಿನಲ್ಲಿ ಕಾಯಿ ಉಳಿಸಬಹುದೋ ಅಷ್ಟನ್ನು ಮಾತ್ರ ಉಳಿಸಬೇಕು.
  • ಗೊಂಚಲಿನ ಸಾಮರ್ಥ್ಯಕ್ಕಿಂತ ಹೆಚ್ಚು ಕಾಯಿಗಳಾದಲ್ಲಿ ಅದರಲ್ಲಿ ಗುಣಮಟ್ಟ ಇರುವುದಿಲ್ಲ.

ಥಿನ್ನಿಂಗ್ ಹೇಗೆ:

  • ಒಂದು ಮೂಲ ದ್ರಾಕ್ಷಿ ಗೊಂಚಲಿನಲ್ಲಿ ಬೇರೆ ಬೇರೆ ಕವಲು ಗೊಂಚಲುಗಳಿರುತ್ತವೆ.
  • ಪ್ರತೀ ಕವಲು ಗೊಂಚಲಿನಲ್ಲಿ 4 ಕ್ಕಿಂತ ಹೆಚ್ಚು ಕಾಯಿಗಳನ್ನು ಉಳಿಸಬಾರದು.
  • 3 ಕಿಂತ ಕಡಿಮೆ ಇದ್ದರೆ ಗಾತ್ರ ದೊಡ್ದದಾಗಬಹುದಾದರೂ ಇಳುವರಿ ಕಡಿಮೆಯಾಗಲೂಬಹುದು.
  • ಹೆಚ್ಚು ಕಾಯಿಗಳಿದ್ದಾಗ ಗೊಂಚಲಿನಲ್ಲಿ ಹಣ್ಣುಗಳು ಬಿರಿಯುತ್ತವೆ ಮತ್ತು ಕೊಳೆಯುತ್ತವೆ.
  • ಕೆಲವು ತಳಿಗಳಲ್ಲಿ ಮತ್ತು ಅವರ ಬೇಸಾಯ ಕ್ರಮದಲ್ಲಿ ಗೊಂಚಲಿನ ಗಾತ್ರವೇ ಕಿರಿದಾಗಿ, ಅದರ ಕವಲು ಗೊಂಚಲಿನ ಉದ್ದವೂ ಕಡಿಮೆ ಇರುತ್ತದೆ.
  • ಬೇಸಾಯ ಕ್ರಮದಲ್ಲಿ ಹೀಗಾದರೆ ಸೂಕ್ತ ಬೇಸಾಯ ಕ್ರಮವನ್ನು ಅನುಸರಿಸಿ ಅದನ್ನು ಸರಿಪಡಿಸಬೇಕು.
  • ತಳಿ ಹೊಂದಿಕೊಂಡು ಒಂದು ಗೊಂಚಲು 300 ರಿಂದ 700 ಗ್ರಾಮ್ ತನಕದ ಹಣ್ಣಿನ ತೂಕವನ್ನು ಹೊಂದಿರಬಹುದು.
  • ಎಲೆ ಅಗಲವಾಗಿದ್ದು, ಬಳ್ಳಿಯ ಆರೋಗ್ಯ ಉತ್ತಮವಾಗಿದ್ದರೆ 600 – 700 ಗ್ರಾಂ ತನಕದ ಹಣ್ಣು ಗೊಂಚಲನ್ನು ಉಳಿಸಬಹುದು.
  • ಆರೋಗ್ಯವಂತ ಬಳ್ಳಿಯಲ್ಲಿ ಕನಿಷ್ಟ 10- 12 ರಷ್ಟಾದರೂ ಎಲೆಗಳಿರಬೇಕು. 15 ಕ್ಕಿಂತ ಹೆಚ್ಚು ಇರಬಾರದು.
  • ಗೊಂಚಲಿನಲ್ಲಿ ಹಣ್ಣುಗಳು ಬಟಾಣಿ ಕಾಳಿನಷ್ಟು ದೊಡ್ಡದಾಗುವ ಸಮಯದಲ್ಲಿ ಆ ಬಳ್ಳಿಯ ತುದಿಯನ್ನು ಚಿವುಟುವುದರಿಂದ ಗೊಂಚಲಿಗೆ ಆಹಾರ ಪೂರೈಕೆ ಹೆಚ್ಚು ದೊರೆತು, ಕಾಯಿ ಪುಷ್ಟಿಯಾಗುತ್ತದೆ.
ಈ ಹಂತದಲ್ಲಿ ಥಿನ್ನಿಂಗ್ ಮಾಡಬೇಕು

ಈ ಹಂತದಲ್ಲಿ ಥಿನ್ನಿಂಗ್ ಮಾಡಬೇಕು

ಯಾವಾಗ ವಿರಳಗೊಳಿಸಬೇಕು:

  • ಕಾಯಿಗಳ ಗಾತ್ರ ಬಟಾಣಿ ಕಾಳಿನಷ್ಟು ಇದ್ದಾಗ ಸಣ್ಣ ಸಣ್ಣ ಗಾತ್ರದ ಕಾಯಿಗಳನ್ನು ತೆಗೆದು ವಿರಳಗೊಳಿಸಬೇಕು.
  • ಆ ನಂತರ ಮಾಡಬಾರದು.ಈ ಸಮಯದಲ್ಲಿ ಇತರ ಕಾಯಿಗಳಿಗೆ ಗಾಯವಾಗಬಾರದು.
  • ಹಣ್ಣುಗಳನ್ನು ತಿನ್ನುವ ಉದ್ದೇಶಕ್ಕೆ ಬಳಕೆ ಮಾಡುವುದಿದ್ದರೂ, ಮಣಕ ಮಾಡುವುದಕ್ಕೆ ಬಳಕೆ ಮಾಡುವುದಿದ್ದರೂ ಕಾಯಿಗಳನ್ನು ವಿರಳಗೊಳಿಸುವುದು ಮುಖ್ಯ.
  • ಹೆಚ್ಚಿನವರು ಮಣಕ( ಒಣಗಿಸುವಿಕೆಗೆ ) ಥಿನ್ನಿಂಗ್ ಮಾಡುವುದಿಲ್ಲ. ಇದರಿಂದ ಗುಣಮಟ್ಟ ಬರುವುದಿಲ್ಲ.
  • ಗೊಂಚಲಿನ ಕೆಳ ಭಾಗದಲ್ಲಿ ಸಣ್ಣ ಗಾತ್ರದ ಹಣ್ಣುಗಳು ಹೆಚ್ಚು ಇರುವ ಕಾರಣ ಕೆಳಭಾಗದ 1/3 ಅಥವಾ 1/4 ಭಾಗವನ್ನು ಕತ್ತರಿಸಿ ತೆಗೆಯಬೇಕು.

ಕಾಯಿ ಪುಷ್ಟಿಯಾಗಿಸುವುದು:

ಥಿನ್ನಿಂಗ್ ಮಾಡದಿದ್ದರೆ ಕಾಯಿಗಳು ಒಳ್ಳೆಯ ಗಾತ್ರ ಬರಲಾರದು

ಥಿನ್ನಿಂಗ್ ಮಾಡದಿದ್ದರೆ ಕಾಯಿಗಳು ಒಳ್ಳೆಯ ಗಾತ್ರ ಬರಲಾರದು

  • ಬಳ್ಳಿಯ ಎಲೆಗನುಗುಣವಾಗಿ ಕಾಯಿ ಬಿಡಬೇಕು. ಎಲೆಗಳ ಗಾತ್ರ ಹೆಚ್ಚಿಸಲು ಪೊಟಾಶಿಯಂ ಮತ್ತು ಸಾರಜನವನ್ನು ಒದಗಿಸಿ ಸಾಕಷ್ಟು ನೀರನ್ನು ಕೊಡಬೇಕು.
  • ಒಂದು ಎಲೆಗೆ 8 ಹಣ್ಣುಗಳು ಎಂದು ಲೆಕ್ಕ. ಹಣ್ಣುಗಳ ಗಾತ್ರವನ್ನು ಹೆಚ್ಚಿಸಲು ಸೂಕ್ತ ಸಮಯದಲ್ಲಿ ಜಿಬ್ಬರಲಿಕ್ ಆಮ್ಲವನ್ನು ಸಿಂಪಡಿಸಬೇಕು.
  • ಹೂ ಅರಳಿ ಮುಗಿದ ನಂತರ ಮತ್ತು ಪ್ರೂನಿಂಗ್ ಮಾಡಿದ 25 ರಿಂದ 30 ದಿನಗಳ ಅವಧಿಯಲ್ಲಿ ಜಿಬ್ಬರಲಿಕ್ ಆಮ್ಲದ ಸಿಂಪರಣೆ ಮಾಡಬೇಕು.
  • ಗಾತ್ರ ಹೆಚ್ಚಳಕ್ಕೆ ಮತ್ತು ಉದ್ದ ಹೆಚ್ಚಳಕ್ಕೆ ಜಿಬ್ಬರಲಿಕ್ ಆಮ್ಲ ಸಹಕಾರಿಯಾದರೂ ಈ ರಾಸಾಯನಿಕಗಳನ್ನು ತಪ್ಪಾಗಿ ಬಳಸಿದರೆ ತೊಂದರೆಯೂ ಆಗುತ್ತದೆ.
  • ಕಾಯಿ ಕಚ್ಚುವ ಹಂತದಿಂದ ಜೋಳದ ಕಾಳಿನಷ್ಟು ಗಾತ್ರಕ್ಕೆ ಬರುವ ತನಕ ಜಿಬ್ಬರಲಿಕ್ ಆಮ್ಲ ಸಿಂಪಡಿಸಬಾರದು.
  • ಜಿಬ್ಬರಲಿಕ್ ಆಮ್ಲ ಹಣ್ಣುಗಳಿಗೆ ಸಮಪ್ರಮಾಣದಲ್ಲಿ  ದೊರೆಯುವಂತೆ ಸಿಂಪರಣೆ ಮಾಡಬೇಕು.
  • ಸಲ್ಫೇಟ್ ಆಫ್ ಪೊಟ್ಯಾಶ್  (SOP) ಕೊಡುವುದರಿಂದ ಗೊಂಚಲಿನ ಗಾತ್ರ ಹೆಚ್ಚತ್ತದೆ.
  • ಗುಣಮಟ್ಟ ಉತ್ತಮವಾಗುತ್ತದೆ. ಇದನ್ನು ಬ್ಯಾಕ್ ಪ್ರೂನಿಂಗ್ ಮಾಡಿ 60- 90 ದಿನದಲ್ಲಿ ಕೊಡಬೇಕು.

ದ್ರಾಕ್ಷಿ ಬೆಳೆಗೆ ಅಧಿಕ ಬಂಡವಾಳ ಹಾಕಿ ಕೃಷಿ ಮಾಡುತೇವೆ. ಅದರಲ್ಲಿ ಅಷ್ಟೇ ಉತ್ಪತ್ತಿಯೂ ಬರಬೇಕು. ಹಣ್ಣುಗಳ ನೊಟ ಮತ್ತು ಗುಣಮಟ್ಟ ಉತ್ತಮವಾಗಿದ್ದರೆ ಅದಕ್ಕೆ ಉತ್ತಮ ಬೆಲೆಯೂ, ಮಾರುಕಟ್ಟೆಯೂ ಲಭ್ಯ.

0 Comments

Submit a Comment

Your email address will not be published. Required fields are marked *

Get in Touch

For all kinds of inquiries, regarding the Krushiabhivruddi website and its other media channels, including corporate advertising contact us on 

support@krushiabhivruddi.com
+91-9663724066

ಒಂದು ಎಕ್ರೆಯಲ್ಲಿ ಮಿಶ್ರ ಬೆಳೆಯಿಂದ ಕನಿಷ್ಟ 3 ಲಕ್ಷ ಆದಾಯ ಗಳಿಸುವ ರೈತ.

Categories

error: Content is protected !!