ಕಬ್ಬು ಬೆಳೆಗೆ ಪೊಟ್ಯಾಶ್ ಗೊಬ್ಬರದ ಮಹತ್ವ

by | Apr 15, 2020 | Sugarcane (ಕಬ್ಬು) | 0 comments

ಕಬ್ಬಿನ ಬೆಳೆಗೆ ಪೊಟ್ಯಾಶಿಯಂನ ಅವಶ್ಯಕತೆ ಹೆಚ್ಚು.  ಪೊಟ್ಯಾಶಿಯಂ ಸತ್ವ ಕೊರತೆಯಾದ ಕಬ್ಬಿನ ಬೆಳೆಗೆ ಬೆಲೆ ಇಲ್ಲ.ಅದು ಕಬ್ಬು ಎನ್ನಿಸಿಕೊಳ್ಳಲಾರದು.ಸಾರಜನಕ ಕೊಡಿ. ರಂಜಕ ಕೊಡಿ ಆದರೆ ಪೊಟ್ಯಾಶಿಯಂ ಕೊಟ್ಟಾಗ  ಮಾತ್ರ ಅದರ ಪ್ರತಿಫಲ ಲಭ್ಯ. ಇದು ಅತ್ಯಧಿಕ ಪ್ರಮಾಣದಲ್ಲಿ ಬೇಕಾಗುವ ಪೊಷಕಾಂಶ.

  • ಹಿಂದೆ ನಮ್ಮಲ್ಲಿ ಸಕ್ಕರೆ ತಯಾರಿಕೆ ಇರಲಿಲ್ಲ. ಬೆಲ್ಲವೇ ಹೆಚ್ಚು.
  • ಉತ್ತಮ ಬೆಲ್ಲ ದೊರೆಯಬೇಕಾದರೆ  ಮಣ್ಣಿಗೆ ಬೂದಿ ಅಂಶ ಯಥೇಚ್ಚವಾಗಿ ಬೇಕು ಎಂದು ಹೊಲಕ್ಕೆ ರವದಿ ಮತ್ತು ಇನ್ನಿತರ ತ್ಯಾಜ್ಯಗಳನ್ನು ಹಾಕಿ ಅದನ್ನು ಸುಟ್ಟು ಪೊಟ್ಯಾಶಿಯಂ ಸತ್ವವನ್ನು ಹೊಂದಿಸಿಕೊಳ್ಳುತ್ತಿದ್ದರು.
  • ಕ್ರಮೇಣ ಪೊಟ್ಯಾಶ್ ಸತ್ವವನ್ನು ಒದಗಿಸುವ ರಾಸಾಯನಿಕ ಪೋಷಕ ಬಂತು.
  • ಅದನ್ನು ಕೆಲವು ನಿರ್ದಿಷ್ಟ ಹಂತದಲ್ಲಿ ಬೆಳೆಗಳಿಗೆ ಬಳಸಿದಾಗ ಕಬ್ಬಿನಲ್ಲಿ ಸಕ್ಕರೆ ರಿಕವರಿ ಉತ್ತಮವಾಗುತ್ತದೆ.
ಸಮತೋಲನ  ಪ್ರಮಾಣದ ಪೋಷಕಾಂಶ ಬಳಸಿ ಬೆಳೆದ ಕಬ್ಬು

ಸಮತೋಲನ ಪ್ರಮಾಣದ ಪೋಷಕಾಂಶ ಬಳಸಿ ಬೆಳೆದ ಕಬ್ಬು

ಪೊಟ್ಯಾಶಿಯಂ ನ ಪಾತ್ರ:

  • ಒಂದು ಎಕ್ರೆ  ಕಬ್ಬು ಬೆಳೆಸಿ  100 ಟನ್ ಇಳುವರಿ ಪಡೆಯುವ  ಗುರಿ ಇದ್ದರೆ ಆ ಹೊಲಕ್ಕೆ ಸುಮಾರು 80 ಕಿಲೋ ಪೊಟ್ಯಾಶ್ ಬೇಕಾಗುತ್ತದೆ.
  •   ಯಾವ ಹೊಲದಲ್ಲಿ ಕಬ್ಬನ್ನು ಮತ್ತೆ ಮತ್ತೆ ಬೆಳೆಯಲಾಗುತ್ತದೆಯೋ ಅಂತಹ ಹೊಲಕ್ಕೆ  ಪೊಟ್ಯಾಶಿಯಂ ಪೋಷಕದ ಕೊರತೆ ಉಂಟಾಗುತ್ತದೆ.
  • 40:30:80  ಕಬ್ಬಿನ ಬೆಳೆಗೆ ಅಗತ್ಯವಾಗಿ  ಬೇಕಾಗುವ  NPK ಪ್ರಮಾಣ.

ಜೀವ ಕೋಶದ ರಚನೆ, ಆಹಾರ ಜೀರ್ಣವಾಗುವುದು, ದ್ಯುತಿ ಸಂಶ್ಲೇಷಣೆ ಕ್ರಿಯೆ, ಸಸಾರಜನಕದ ಸಂಯೋಜನೆ , ಸಕ್ಕರೆಯ ಚಲನೆ, ನೀರಿನ ಬಳಕೆ, ಸಮರ್ಪಕ ಬೇರು ವೃದ್ದಿ ಮತ್ತು ಇನ್ನೂ ಹಲವಾರು ಅಗತ್ಯ ಸಸ್ಯ ಚಟುವಟಿಕೆಗೆ ಪೊಟ್ಯಾಶಿಯಂ ಅವಶ್ಯಕವಾಗಿ ಬೇಕು.  

  • ಕಬ್ಬಿನ ಸಸ್ಯದಲ್ಲಿ ಬೇರೆ ಬೇರೆ ಭಾಗಗಳಲಿ ಪೊಟ್ಯಾಶಿಯಂ ನ ಸತ್ವ ಹೆಚ್ಚು ಕಡಿಮೆ ಪ್ರಮಾಣದಲ್ಲಿ ಇರುತ್ತದೆ.
  • ನಾಟಿ ಮಾಡುವ ಸಮಯದಲ್ಲಿ ಮೊದಲ 6 ತಿಂಗಳ ತನಕ  ಪೊಟ್ಯಾಶ್ ಪ್ರಮಾಣ ಹೆಚ್ಚುತ್ತಾ ಹೋಗುತ್ತದೆ.
  • ಆ ನಂತರ ಅದು ಎಲ್ಲಿ ಬೇಕೋ ಅಲ್ಲೆಲ್ಲಾ ಉಳಿದು ಸಕ್ಕರೆ ಪ್ರಮಾಣ ಹೆಚ್ಚಲು ನೆರವಾಗುತ್ತದೆ. 
  • ಪೊಟ್ಯಾಶಿಯಂ ಒಂದು ಎಲೆ ಬೆಳೆದು  ಹಣ್ಣಾಗುವಾಗ ನಂತರದ ಎಲೆಗೆ ಬಂದು ಸೇರುತ್ತದೆ.
ಪೊಟ್ಯಾಶಿಯಂ  ಬೇಕಾದಶ್ಟು ಸಿಕ್ಕಾಗ ದಂಟು ಹೀಗೆ ಬೆಳೆಯುತ್ತದೆ

ಪೊಟ್ಯಾಶಿಯಂ ಬೇಕಾದಶ್ಟು ಸಿಕ್ಕಾಗ ದಂಟು ಹೀಗೆ ಬೆಳೆಯುತ್ತದೆ

  • ಕಬ್ಬಿನಲ್ಲಿ ತುದಿ ಭಾಗದ ಎಲೆಗಳಲ್ಲಿ ಪೊಟ್ಯಾಶಿಯಂ ಅಂಶ ಹೆಚ್ಚು ಇರುತ್ತದೆ.
  • ಅದಕ್ಕಾಗಿಯೇ ಕಬ್ಬು ಕಠಾವು ಮಾಡುವಾಗ ತುದಿ  ಭಾಗವನ್ನು ಕತ್ತರಿಸಿ ಹೊಲಕ್ಕೆ ಹಾಕಿ, ಅದನ್ನು ಸರಿಯಾಗಿ ಕಳಿಯಿಸಿ ಕಾಂಪೋಸ್ಟು ಮಾಡಿದರೆ ಬೆಳೆಗೆ ಸಾಕಷ್ಟು ಪೊಟ್ಯಾಶಿಯಂ ಲಭ್ಯವಾಗುತ್ತದೆ.
  • ಇದರಲ್ಲಿ 5.10% ತನಕ ಪೊಟಾಶಿಯಂ ಸತ್ವ ಇರುತ್ತದೆ.

ಕಬ್ಬಿನಲ್ಲಿ ಎಲ್ಲೆಲ್ಲಿ ಪೊಟ್ಯಾಶಿಯಂ ಇದೆ:

  • ಕಬ್ಬಿನ ಚಿಗುರು ಮತ್ತು ವಿಭಜ್ಯೋತಕಗಳಲ್ಲಿ ಪೊಟ್ಯಾಶಿಯಂ ಅಂಶ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ. 
  • ಬೆಳೆಯುವ ಎಲೆಗಳ ಕವಚದಲ್ಲಿ  ಮತ್ತು ಮುದುಡಿಕೊಂಡ ಕವಚದಲ್ಲಿ ಮತ್ತು ಬೆಳೆದ ಎಲೆಗಳಲ್ಲೂ ಪೊಟ್ಯಾಶ್ ಅಂಶ ಶೇಖರಣೆಯಾಗಿರುತ್ತದೆ.

ಗುಣಮಟ್ಟದ ಕಬ್ಬಿಗೆ ಪೊಟ್ಯಾಶಿಯಂ:

  • ಪೊಟ್ಯಾಶಿಯಂ ಸತ್ವವು  ಕೋಶಗಳನ್ನು ಗಟ್ಟಿ ಮಾಡುತ್ತದೆ.
  • ಸಸಿಗಳ ಊತಕಗಳ ಹೊರಚರ್ಮವನ್ನು ಗಟ್ಟಿಗೊಳಿಸಿ ಸಸ್ಯಗಳು ರೋಗಕ್ಕೆ ತುತ್ತಾಗದಂತೆ ತಡೆಯುತ್ತದೆ.
  • ಬೇರು ಹೆಚ್ಚುತ್ತದೆ.ನೀರನ್ನು ಆಳದಿಂದಲೂ ತೆಗೆದುಕೊಳ್ಳುತ್ತದೆ.
  • ಆಹಾರವನ್ನು ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹಿಸುತ್ತದೆ.
  • ನೀರು ಕಡಿಮೆ ಸಾಕಾಗುತ್ತದೆ. 

ಕೊರತೆ ಆದಾಗ:

  • ಕಬ್ಬಿನ ಬೆಳೆಗೆ ಪೊಟ್ಯಾಶ್ಯಂ ಯಾವುದೇ ಕಾರಣಕ್ಕೂ ಕೊರತೆ ಆಗ ಕೂಡದು.
  • ಆಗ ದ್ಯುತಿಸಶ್ಲೇಷಣ ಕ್ರಿಯೆಗೆ ಅಡ್ಡಿಯಾಗುತ್ತದೆ.
  • ಎಲೆಗಳ ಗಾತ್ರ ಮತ್ತು ಸಂಖ್ಯೆ ಕಡಿಮೆಯಾಗುತ್ತದೆ.
  • ಬೇಗ ಮಾಗುತ್ತದೆ.  ಕಡಿಮೆ ಬೆಳೆವಣಿಗೆಯನ್ನು ಹೊಂದಿ, ಹಳದಿ ಬಣ್ಣಕ್ಕೆ ತಿರುಗುತ್ತದೆ.
  • ವಯಸ್ಸಾದ ಎಲೆಗಳು ಕಿತ್ತಳೆ ಹಳದಿ ಬಣ್ಣದಲ್ಲಿ ಇರುತ್ತವೆ.  ಎಲೆಗಳು ಸರಿಯಾಗಿ ಬಿಡಿಸಿಕೊಳ್ಳದೆ ಇರುತ್ತವೆ.

ಎಷ್ಟು ಪೊಟ್ಯಾಶ್ ಬೇಕು:

ಕಬ್ಬು ಬೆಳೆ ಹೀಗೆ ಚೆನ್ನಾಗಿ ಬೆಳೆಯಲು ಅಗತ್ಯವಾಗಿ ಪೊಟ್ಯಾಶ್ ಬೇಕು

  • ಕಬ್ಬಿನ ಬೆಳೆಯ ಬಹುತೇಕ ತ್ಯಾಜ್ಯಗಳನ್ನು ಮರು ಬಳಕೆ ಮಾಡಿದರೆ 25 ರಿಂದ40% ಪೊಟ್ಯಾಶಿಯಂ ಕಡಿಮೆ ಮಾಡಬಹುದು.
  • ಕಾಕಂಬಿಯನ್ನು ಬಳಸಿದರೂ ಸಹ ಇಷ್ಟೇ ಪ್ರಮಾಣ ಕಡಿಮೆ ಮಾಡಬಹುದು.
  • ಪೊಟ್ಯಾಶಿಯಂ ನೀರಿನಲ್ಲಿ ಕರಗುವುದರಿಂದ ಕಾಕಂಬಿಯಲ್ಲಿ ಉಳಿಯುತ್ತದೆ.
  • ಆದ ಕಾರಣ  ಕಾಕಂಬಿಯನ್ನು  ಸಾಧ್ಯವಾದಷ್ಟು ಬಳಸಿ.
  • ಇದನ್ನು  ಬಳಸದೇ ಇದ್ದರೆ ಎಕ್ರೆಗೆ 75-80 ಕಿಲೋ ಗ್ರಾಂ ಪೊಟ್ಯಾಶಿಯಂ ಶಿಫಾರಸು ಮಾಡಲಾಗಿದೆ. 
  • ಸಾಕಷ್ಟು ಪ್ರಮಾಣದಲ್ಲಿ ಸಾರಜನಕ ಇದ್ದಾಗ ಮಾತ್ರ ಪೊಟ್ಯಾಶಿಯಂ ನ ಸದುಪಯೋಗ ಆಗುತ್ತದೆ. 
  • ಸಾರಜನಕದ ಜೊತೆಗೆ ಪೊಟ್ಯಾಶ್ ಕೊಡಬೇಕು.
  • ಕಬ್ಬಿನ ಸಸ್ಯದಲ್ಲಿ 7 ನೇ ಎಲೆಯ ಕೆಳಗಿನ ಎಲೆಗಳು ಬಾಡಿದಂತಿದ್ದರೆ ಪೊಟ್ಯಾಶ್ ಕಡಿಮೆಯಿದೆ ಎಂದರ್ಥ.  
  • ಪೊಟ್ಯಾಷ್ ಕಡಿಮೆಯಾದಾಗ ನೀರು ಎಷ್ಟು ಪೂರೈಕೆ ಮಾಡಿದರೂ ಎಲೆಗಳಲ್ಲಿ ಕೊರತೆಯಾದಂತೆ  ಕಾಣಿಸುತ್ತದೆ.
  • ಸೂಕ್ತ  ಪ್ರಮಾಣದಲ್ಲಿ ಪೊಟ್ಯಾಷ್ ಪೂರೈಸಿದಲ್ಲಿ ಕಬ್ಬಿನ ಸಕ್ಕರೆ ಪ್ರಮಾಣ ಉತ್ತಮವಾಗಿರುತ್ತದೆ.
  • ತೂಕ ಬರುತ್ತದೆ. ಉತ್ತಮ ಬೆಲೆಯೂ ಬರುತ್ತದೆ.

  ಯಾವ  ಪೊಟ್ಯಾಶ್  ಉತ್ತಮ :

  • ಪ್ರಾರಂಭಿಕ ಹಂತದಲ್ಲಿ ಮ್ಯುರೇಟ್ ಆಫ್ ಪೊಟ್ಯಾಷ್ ಗೊಬ್ಬರವನ್ನು ಕೊಡುವುದು ಅಗ್ಗವಾಗುತ್ತದೆ.
  • ಆದರೆ ಪೊಟ್ಯಾಶ್ ಇಳಿದು ಹೋಗಿ ನಷ್ಟವಾಗುವ ಕಾರಣ ವಿಭಜಿತ ಕಂತುಗಳಲ್ಲಿ ಕೊಡುವುದು ಸೂಕ್ತ.
  • ಬೆಳೆ ಮಾಗಲು 2- 3 ತಿಂಗಳು ಇರುವ ತನಕವೂ ಪೊಟ್ಯಾಷ್ ಗೊಬ್ಬರವನ್ನು  ಕೊಡುತ್ತಿರಬೇಕು.
  • ಕೊನೆಯ ಹಂತದಲ್ಲಿ ಸಲ್ಫೇಟ್ ಆಫ್ ಪೊಟ್ಯಾಷ್ SOP  ಗೊಬ್ಬರವನ್ನು ಕೊಡಿ.
  • ಎರಡೂ ಗೊಬ್ಬರವನ್ನು ಹನಿ ನೀರಾವರಿಯ ಮೂಲಕ ಒದಗಿಸಬಹುದು.

ಪೊಟ್ಯಾಶಿಯಂ  ಪೋಷಕವನ್ನು ಕೊಟ್ಟ ಕಬ್ಬಿನಲ್ಲಿ ಇಳುವರಿ ಹೆಚ್ಚಿ, ಬೆಳೆದ ರೈತರಿಗೆ ಲಾಭವನ್ನು ತಂದು ಕೊಡುತ್ತದೆ.

0 Comments

Submit a Comment

Your email address will not be published. Required fields are marked *

Get in Touch

For all kinds of inquiries, regarding the Krushiabhivruddi website and its other media channels, including corporate advertising contact us on 

support@krushiabhivruddi.com
+91-9663724066

ಒಂದು ಎಕ್ರೆಯಲ್ಲಿ ಮಿಶ್ರ ಬೆಳೆಯಿಂದ ಕನಿಷ್ಟ 3 ಲಕ್ಷ ಆದಾಯ ಗಳಿಸುವ ರೈತ.

Categories

error: Content is protected !!