ಶಹಬ್ಬಾಸ್ ಹೇಳಬೇಕು ಈ ರೈತರ ಬುದ್ದಿವಂತಿಕೆಗೆ

ಹಿರಿಯಡ್ಕದ  ಸುರೇಶ್ ನಾಯಕ್ ಇವರು ಕಳೆದ 8 ವರ್ಷಗಳಿಂದ  ಕಲ್ಲಂಗಡಿ   ಬೆಳೆಸುತ್ತಿದ್ದಾರೆ.  ಕಲ್ಲಂಗಡಿ  ಬೇಸಾಯದಲ್ಲಿ ಹೊಸ ಹೊಸ ಪದ್ದತಿಯನ್ನು ಅಳವಡಿಸಿಕೊಂಡು ಇತರರಿಗೆ ಮಾದರಿಯಾಗಿ ಕೃಷಿ ಮಾಡಿದವರು.  1 ಎಕ್ರೆಯಿಂದ ಪ್ರಾರಂಭಿಸಿ ಈಗ 14 ಎಕ್ರೆ ತನಕ ಬೆಳೆ ಬೆಳೆಸುತ್ತಾರೆ.  ಈ ವರ್ಷ ಕೊರೋನಾ ಮಹಾ ಮಾರಿಯಿಂದ ಹಣ್ಣು ಹಂಪಲು ಬೆಳೆದ ರೈತರು ಸಂಕಷ್ಟ ಅನುಭವಿಸಿದಂತೆ ಇವರೂ ಒಮ್ಮೆ ಕಂಗಾಲಾಗಿದ್ದರೂ ಹೇಗಾದರೂ ಅದರಲ್ಲಿ ಗೆದ್ದೇ ಬಿಟ್ಟರು.

ಸಂಗ್ರಹ ಚಿತ್ರ

ಮಾಡಿದ್ದೇನು:

  • ಬೆಳೆ ಬೆಳೆಯುವ ರೈತರಿಗೆ ಮಾರಾಟ ಮಾಡುವುದೂ ಗೊತ್ತಿರಬೇಕು.
  • ಹಲವಾರು  ಸಲ ಮಾರಾಟ ವ್ಯವಸ್ಥೆಯಲ್ಲಿ ಕೋಪಗೊಂಡು ಜಾತ್ರೆ , ಸಮಾರಂಭಗಳಲ್ಲಿ  ಇವರು ತಮ್ಮ ಉತ್ಪನ್ನವನ್ನು ನೇರವಾಗಿ ರೈತರಿಗೆ ಮಾರಾಟ ಮಾಡಿದ್ದುಂಟು.

  • 3 ವರ್ಷದ  ಹಿಂದೆ ಮಂದರ್ತಿ ಜಾತ್ರೆಯಲ್ಲಿ ಮೂರು ದಿನಗಳ ಕಾಲ ಮೊಕ್ಕಾಂ ಹೂಡಿ  ಗ್ರಾಹಕರಿಗೆ   ಕಡಿಮೆ ಬೆಲೆಯಲ್ಲಿ ಕಲ್ಲಂಗಡಿ ಮಾರಿದ್ದೂ ಉಂಟು.
  • ನಿನ್ನೆ ಇವರು ತನ್ನ ಬೆಳೆಯನ್ನು ಗ್ರಾಹಕರಿಗೆ ನೇರವಾಗಿ ಮಾರಾಟ ಮಾಡುವ ಬಗ್ಗೆ  ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಟಣೆಯನ್ನು ಕೊಟ್ಟಿದ್ದರು.

ಈ  ದಿನ 2-04-2020 ಒಂದೇ ದಿನ  ಇವರು ತನ್ನ ಕಟಾವಿಗೆ ಸಿದ್ದವಾದ ಒಂದು ಬ್ಲಾಕ್ ಸುಮಾರು 2  ಎಕ್ರೆಯ ಕಲ್ಲಂಗಡಿಯನ್ನು ಬೆಳೆಗ್ಗೆ 8 ಗಂಟೆಯಿಂದ ಸಂಜೆ 5 ಗಂಟೆ ಒಳಗೆ  ನೇರವಾಗಿ  ಗ್ರಾಹಕರಿಗೆ ಮಾರಾಟ ಮಾಡಿ ಐತಿಹಾಸಿಕ  ದಾಖಲೆಯನ್ನು ಮಾಡಿದ್ದಾರೆ.

  • ನೂರಾರು ಜನ ಗ್ರಾಹಕರು ಕಲ್ಲಂಗಡಿ ಒಯ್ದಿದ್ದಾರೆ.
  • ಸುರೇಶ್ ಇವರು ತನ್ನ ಜೀವಮಾನದ ಅನುಭವದಲ್ಲಿ ಇಂತದ್ದನ್ನು ಕಂಡಿಲ್ಲ ಎನ್ನುತ್ತಾರೆ.
  • ಸುಮಾರು 9 ಗಂಟೆಗೆ ತಮ್ಮ ಕಲ್ಲಂಗಡಿ ಹೊಲ ಇರುವ  ಹಿರಿಯಡಕದ ಸಮೀಪದ ಬೊಮ್ಮರಬೆಟ್ಟುವಿನಲ್ಲಿ ಕಾರುಗಳಿಂದ ಇಡೀ  ರಸ್ತೆಯೇ ಜ್ಯಾಮ  ಆದ ವಿದ್ಯಮಾನವನ್ನು ಸುರೇಶ್  ನಾಯಕ್ ಮೊದಲಾಗಿ ಹೇಳುತ್ತಾರೆ.

ಎಲ್ಲೆಲ್ಲಿಂದ ಜನ ಬಂದರು:

ಹೊಲ ಖಾಲಿ
  •  ಸಾಮಾಜಿಕ ಮಾಧ್ಯಮದಲ್ಲಿ ಸುದ್ದಿ ಬಂದರೆ  ಕೇಳಬೇಕೇ.
  • ಜನ  ಲಾಕ್ ಡೌನ್ ಅನ್ನು ಯಾವುದೇ ರೀತಿಯಲ್ಲಿ ಭಂಗ ಮಾಡದೆ, ಒಬ್ಬೊಬ್ಬರೇ ಕಾರಿನಲ್ಲಿ ಹೋಗಿ ತಮಗೆ ತಮ್ಮ ಕುಟುಂಬ ಮತ್ತು ನೆಂಟರಿಷ್ಟರಿಗೆ ಬೇಕಾಗುವಷ್ಟು  ಕಲ್ಲಂಗಡಿ ಒಯ್ದರು.
  • ಉಡುಪಿ, ಮಣಿಪಾಲ, ಕಾರ್ಕಳ, ಬೈಲೂರು, ಪೆರ್ಡೂರು, ಹೆಬ್ರಿ, ಬಂಟಕಲ್ಲು ಇಲ್ಲಿಂದೆಲ್ಲಾ ಜನ  ಬಂದದ್ಡೇ ಬಂದದ್ದು.
  • ಸುಮಾರು 40 ಟನ್ ಗೂ ಅಧಿಕ ಕಲ್ಲಂಗಡಿ ಮಾರಾಟವಾಯಿತು ಎನ್ನುತ್ತಾರೆ.
  • ಇವರು ಮಾರಿದ ಬೆಲೆ ಕಿಲೋ 10 ರೂ. ಅವರವರು ತಮಗೆ  ಬೇಕಾದುದನ್ನು ಆಯ್ಕೆ  ಮಾಡಿಕೊಂಡು ಹೋದರು.
  •   ವ್ಯಾಪಾರಿಗಳೂ ಸಹ 7-8-10 ತನಕ ಕೊಳ್ಳುತ್ತಾರೆ .
  • ಆದರೆ ಗ್ರಾಹಕರಿಗೆ ಈ ಲಾಕ್ ಡೌನ್ ನೆಪದಲ್ಲಿ ಕಿಲೋ 30 ರೂ. ಗಳಿಗೆ ಮಾರಾಟ ಮಾಡುತ್ತಾರೆ.
  • ನಮ್ಮಲ್ಲಿ ಕಲ್ಲಂಗಡಿ ಕೊರೋನಾಗೆ ಹಾಳು ಹಾಗಾಗಿ ಜನ ಒಯ್ಯುವುದಿಲ್ಲ ಎಂದು ಬೆಲೆ ಕಡಿಮೆ ಮಾಡುತ್ತಾರೆ.
  • ಗ್ರಾಹಕರಿಗೆ ಲಾಕ್ ಡೌನ್ ನಿಂದ ಕಲ್ಲಂಗಡಿ ಒಟ್ಟು ಹಾಕುವುದೇ ಸಮಸ್ಯೆ . ಹಾಗಾಗಿ ದರ 30 ಎನ್ನುತ್ತಾ ಮಾರಾಟ ಮಾಡುತ್ತಾರೆ.
  • ಈ ಸಲ ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ಕಲ್ಲಂಗಡಿ ಕೊಟ್ಟ ತೃಪ್ತಿ ಇದೆ.
  • ನನಗೆ ಬೆಳೆ ಬೆಳೆಸಿದ ಖರ್ಚು ಬಂದಿದೆ ಎಂದ ಸಂತೋಷ ಇದೆ ಎನ್ನುತ್ತಾರೆ.
  • ತಮ್ಮ ಈ ಕಾರ್ಯಕ್ಕೆ ಬೆಂಬಲ ನೀಡಿದ ಹಲವಾರು ರೈತರ ಗ್ರೂಪ್ ಗಳಿಗೆ ಕೃತಜ್ಞತೆ ಹೇಳುತ್ತಾರೆ.

ಕಲ್ಲಂಗಡಿ ಕೊರೋನಾಕ್ಕೆ ಹಾಳೇ?

  • ಖಂಡಿತವಾಗಿಯೂ  ಹಾಳಲ್ಲ. ಇದೆಲ್ಲಾ ಜನ ಹುಟ್ಟು ಹಾಕಿದ ವದಂತಿಗಳು.
  • ಕಲ್ಲಂಗಡಿಯನ್ನು ಕಳಪೆ ಐಸ್ ಹಾಕಿ ಜ್ಯೂಸ್ ಮಾಡಿ ಕುಡಿದರೆ ಗಂಟಲು  ನೋವು ಬರಬಹುದು.
  • ಕೆಲವರಿಗೆ ಗಂಟಲು ನೋವು ಬರುವುದು ಬೇಗ.
  • ಅಂತವರಿಗೆ ಬಿಸಿಲಿಗೆ ಹೋಗಿ ತಕ್ಷಣ  ಕಲ್ಲಂಗಡಿ ತಿಂದರೆ ಗಂಟಲು ಕೆರೆತ ಉಂಟಾಗಬಹುದು.  
  • ಕಲ್ಲಂಗಡಿಯನ್ನು ಪ್ರಿಝ್ ನಲ್ಲಿ ಇಟ್ಟು ತಿನ್ನಬೇಡಿ.
  • ಶರೀರ ತಣ್ಣಗಾದ  ಮೇಲೆ ಅಂದರೆ ಬಿಸಿಲಿಗೆ ಹೋಗಿ ಬಂದು ಬೆವರೆಲ್ಲಾ ಆರಿದ ನಂತರ ತಿಂದರೆ, ಯಾರಿಗೂ ಗಂಟಲು ನೋವು ಬರಲಾರದು.
  • ನೀರೇ ಹಚ್ಚಿನ ಪ್ರಮಾಣದಲ್ಲಿ ಇರುವುದು.  ಜೊತೆಗೆ ವಿಟಮಿನ್ ಎ , ವಿಟಮಿನ್ ಬಿ ಕಾಂಪ್ಲೆಕ್ ಮತ್ತು ವಿಟಮಿನ್  ಸಿ , ಕ್ಯಾಲ್ಸಿಯಂ,ಕಬ್ಬಿಣ, ಮೆಗ್ನೀಶಿಯಂ, ಹಾಗೂ ಇನ್ನಿತರ ಪೋಷಕಗಳು ಇರುತ್ತವೆ.
  • ಅದು ಮನುಷ್ಯ ಶರೀರಕ್ಕೆ ಬೇಕಾದ ಪೋಷಕಗಳು. ಹಣ್ಣಿನಲ್ಲಿರುವ ನೀರು ಸಸ್ಯ ಶರೀರದ ಒಳಗೆ ಹೋಗಿ ತುಂಬಿದ ನೀರು
  •  ಅದು ಶುದ್ಧ ನೀರೇ ಆಗಿರುತ್ತದೆ.
  • ಕಲ್ಲಂಗಡಿಯನ್ನು ತಿನ್ನುವಾಗ ಸ್ವಲ್ಪ  ಉಪ್ಪು ಸೇರಿಸಿದರೆ ಯಾವ ಸಮಸ್ಯೆಯೂ ಇಲ್ಲ.

ರೈತರೊಬ್ಬರು ತಾನು ಬೆಳೆದ ಉತ್ಪನ್ನವನ್ನು ಹೇಗಾದರೂ ತಿನ್ನುವ ಗ್ರಾಹಕರಿಗೆ ತಲುಪಿಸಿದರು. ಅದನ್ನು ಹೊಲದಲ್ಲಿ ಮಣ್ಣು ಮಾಡಲಿಲ್ಲ. ಇದು ಮೆಚ್ಚಬೇಕಾದ ಸಂಗತಿ. ಜೈ ಕಿಸಾನ್.

 

One thought on “ಶಹಬ್ಬಾಸ್ ಹೇಳಬೇಕು ಈ ರೈತರ ಬುದ್ದಿವಂತಿಕೆಗೆ

  1. ನಿಜವಾಗಿ ಒಳ್ಳೆಯ ಪ್ರಯತ್ನ sir ರೈತ ಅದು ಮಾಡಬೇಕು ಇದು ಮಾಡಬೇಕು ಏಳೂವವ್ರೇ ಹೆಚ್ಚು but ನೀವು ಸಾದಿಸಿ ತೋರಿಸಿದ್ದೀರಿ ನಿಮಗೆ ಧನ್ಯವಾದಗಳು sir keep it up

Leave a Reply

Your email address will not be published. Required fields are marked *

error: Content is protected !!