ಹೀಗೆ ಬೆಳೆ ಬೆಳೆದರೆ ಕೀಟ- ರೋಗ ಇಲ್ಲ.

by | Feb 4, 2020 | Crop Management (ಬೆಳೆ ನಿರ್ವಹಣೆ) | 0 comments

ಬೆಳೆಗಳ  ಮೇಲೆ  ಬಿಳಿ ಬಟ್ಟೆಯ ತರಹದ ಪಾಲಿಮರ್ ಹೊದಿಕೆಯನ್ನು ಹೊದಿಸಿ ಬೆಳೆ  ಬೆಳೆಸುವುದು ಆಧುನಿಕ ಸಾವಯವ ಬೇಸಾಯ ತಾಂತ್ರಿಕತೆ. ಇಲ್ಲಿ ಹೊರಗಡೆಯಿಂದ ಬರುವ ಕೀಟ – ರೋಗಗಳು ಒಳಗೆ ಸುಳಿಯಲಾರವು. ಇದರೊಳಗಿನ ವಾತಾವರಣ ಸಸ್ಯಗಳಿಗೆ ಅನುಕೂಲವಾಗಿದ್ದು, ಗುಣಮಟ್ಟದ ಇಳುವರಿ ಬರುತ್ತದೆ.


Click to WhatsApp and build your website now!

ಕ್ರಾಪ್ ಕವರ್ ಏನು?

  • ಬೆಳೆ ಬೆಳೆಯುವಾಗ ಸಸ್ಯದ ಮೇಲೆ  ಹೊದಿಸುವ ಒಂದು ಬಟ್ಟೆ ತರಹದ ವಸ್ತು. ನೋಡಲು ಬಟ್ಟೆ ತರಹವೇ ಇರುವ  ಇದನ್ನು spun polyester. ನಿಂದ  ತಯಾರಿಸುತ್ತಾರೆ.
  • ನಾವು ಪ್ಲಾಸ್ಟಿಕ್ ಕೈಚೀಲದ ಬದಲಿಗೆ ಉಪಯೋಗಿಸುವ ಹೊಸ  ರೀತಿಯ ಚೀಲಕ್ಕೆ  ಉಪಯೋಗಿಸುವ ಸಾಮಾಗ್ರಿಯಿಂದ ಇದನ್ನು ತಯಾರಿಸುತ್ತಾರೆ.
  • ಇದು ವಾತಾವರಣದಲ್ಲಿ ಬಿಸಿಲಿಗೆ ನಿಧಾನವಾಗಿ ಹುಡಿಯಾಗಿ  ಕರಗುವಂತದ್ದು.
  • ಇದನ್ನು ಬೆಳೆ ಬೆಳೆಯುವಾಗ ಸಸ್ಯದ ಮೇಲೆ, ಫಲದ ಮೇಲೆ ಹೊದಿಸಿದರೆ ಕೀಟ ನಿಯಂತ್ರಣ ಕಷ್ಟವಿಲ್ಲ.
  • ಸನ್ ಸ್ಕೋರ್ಚ್, ಇಬ್ಬನಿಯ ಹಾನಿ  ಹಾಗೆಯೇ ಇನ್ನಿತರ  ಗಾಳಿ ಮೂಲಕ ಹರಡುವ ರೋಗಗಳಿಂದ ಯಾವುದೇ ಕೀಟ ನಾಶಕ , ರೋಗ ನಾಶಕಗಳಿಲ್ಲದೆ ರಕ್ಷಣೆ ಪಡೆಯಬಹುದು.

ಇದು ಅನಿವಾರ್ಯ:

  • ರೈತರಿಗೆ ರಾಸಾಯನಿಕ ಕೀಟನಾಶಕ , ರೋಗ ನಾಶಕ ಬಳಸಬೇಡಿ ಎಂದು ಸರಕಾರವೂ ಸೇರಿದಂತೆ ಬುದ್ಧಿ ಜೀವಿಗಳೆಲ್ಲಾ ಉಪದೇಶ ಮಾಡುತ್ತಾರೆ.
  • ಆದರೆ ಅದನ್ನು ಬಳಸದೆ ಹೇಗೆ ಬೆಳೆ ಸಂರಕ್ಷಣೆ  ಮಾಡುವುದು ಎಂದು ಹೇಳಲು ಎಲ್ಲರೂ ವಿಫಲರಾಗುತ್ತಾರೆ.
  • ರೈತರು ಉಪದೇಶ ಮಾಡುವವರ ಸ್ವರಕ್ಕೆ ಸುಳ್ಳು ತಾಳ ಹಾಕುತ್ತಾರೆ.

ವಾಸ್ತಾವವಾಗಿ ಬೆಳೆ ಬೆಳೆಸಿ ಅದರಲ್ಲೇ ಅವನು ಬದುಕು ಕಾಣಬೇಕಾದರೆ ಕೀಟ ನಾಶಕ, ರೋಗನಾಶಕ, ರಸಗೊಬ್ಬರ ಬಳಸಲೇ ಬೇಕಾಗುತ್ತದೆ.  ಹೇಳುವುದಕ್ಕೂ ಮಾಡುವುದಕ್ಕೂ  ಯಾವಾಗಲೂ ಭಿನ್ನತೆ ಇದ್ದೇ ಇರುತ್ತದೆ.

  • ರೈತರು ಬೆಳೆ ಬೆಳೆಸುವಾಗ ಎದುರಿಸುವ ಕೀಟ ಸಮಸ್ಯೆ ಹಲವಾರು.
  • ಸಣ್ಣ ಸಣ್ಣ ನೊಣಗಳಿಂದ ಹಿಡಿದು ಪತಂಗ , ಹಕ್ಕಿಗಳ ವರೆಗೂ ರೈತನು ಬೆಳೆದ ಬೆಳೆಯಲ್ಲಿ ಪಾಲು ಕೇಳುವವುಗಳು.
  • ಇವುಗಳ ನಷ್ಟವನ್ನು ಗಣನೀಯ ಪ್ರಮಾಣದಲ್ಲಿ ಕಡಿಮೆ ಮಾಡಲು ಬೆಳೆ ಹೊದಿಕೆಗಳು ನೆರವಾಗುತ್ತವೆ.

ಬೆಳೆಗಳಿಗೆ ಹೊದಿಕೆ ಬಳಕೆ ಮಾಡಿದಾಗ ಅದರ ಒಳಗೆ ಯಾವುದೇ ಸಣ್ಣ – ದೊಡ್ದ ಕೀಟ ಒಳಗೆ  ಹೋಗುವುದಿಲ್ಲ.   ಇದು ಬಿಳಿ ಬಣ್ಣದಲ್ಲಿದ್ದು  ಬೆಳೆಗಳಿಗೆ  ಸೂರ್ಯ ಕಿರಣದ ಘಾಸಿಯನ್ನು ತಡೆಯುತ್ತವೆ.

  • ಕೆಲವು ಗಾಳಿಯ ಮೂಲಕ ಹರಡುವ ರೋಗಗಳಿವೆ.
  • ಅದನ್ನು ಸಸ್ಯಗಳಿಗೆ ಸೋಂಕದಂತೆ  ಇದು ತಡೆಯುತ್ತದೆ.
  • ಇಬ್ಬನಿ ಬೀಳುವುದರಿಂದ ಬೆಳೆಗಳಲ್ಲಿ ಎಲೆ ಮುರುಟುವಿಕೆ, ಕೊಳೆಯುವಿಕೆ ಮುಂತಾದ ಕೆಲವು ಸಮಸ್ಯೆಗಳು ಉಂಟಾಗುತ್ತವೆ.
  • ಈ ಇಬ್ಬನಿಯನ್ನು  ಸಸ್ಯದ ಮೇಲೆ ಬೀಳದಂತೆ ತಡೆಯಲು ಸಹ ಈ ಬೆಳೆ ಹೊದಿಕೆಗಳು ರಕ್ಷಣೆ  ನಿಡುತ್ತವೆ.

ಹೊದಿಕೆಯನ್ನು ಹಾಕಿ ಬೆಳೆ ಬೆಳೆದರೆ ಕೀಟ ನಾಶಕ ಬಳಸಬೇಕಾಗಿಲ್ಲ. ರೋಗನಾಶಕ ಬಳಸಬೇಕಾಗಿಲ್ಲ. ನುಶಿ, ಹೇನು ಮುಂತಾದ  ಕೀಟಗಳು ಫಲದ ಮೇಲೆ ಕುಳಿತಾಗ ಆಗುವ  ಅಂದ  ಕೆಡುವಿಕೆ ಉಂಟಾಗುವುದಿಲ್ಲ. ಆದ ಕಾರಣ ಉತ್ಪನ್ನಗಳ ಗುಣಮಟ್ಟ ಉತ್ಕೃಷ್ಟವಾಗಿರುತ್ತದೆ.

ಖರ್ಚು ಎಷ್ಟು?

  • ಕ್ರಾಪ್ ಕವರ್ ಗಳು ಮೀಟರಿಗೆ 5 -6- 7  ರೂ ಬೆಲೆಯಲ್ಲಿ ಲಭ್ಯವಿದೆ. ಅಳತೆ 1ಮೀಟರು,  5ಅಡಿ , 8 ಅಡಿ ಮುಂತಾದ  ಅಳತೆಯಲ್ಲಿ  ಲಭ್ಯವಿರುತ್ತದೆ.
  • ಇದನ್ನು ಒಂದು ಎಕ್ರೆಗೆ ಹೊದಿಸಲು ಬೆಳೆ ಹೊಂದಿ ಸುಮಾರು 10-15  ಸಾವಿರ ತನಕ ಖರ್ಚು ಬೀಳುತ್ತದೆ.
  • ಅಷ್ಟು ಬಂಡವಾಳವನ್ನು ಕೀಟನಾಶಕ ಮತ್ತು ಹಾನಿಯಾಗದೆ ಉಳಿಯುವ ಬೆಳೆಗಳಿಂದ ಪಡೆಯಬಹುದು ಎಂಬುದು ತಂತ್ರಜ್ಞರ ಅಭಿಪ್ರಾಯ.
  • ಇದನ್ನು ಪುನರ್ ಬಳಕೆ ಮಾಡಬಹುದು ಕೂಡಾ.
  • ಇದರಲ್ಲಿ ಬಿಳಿ ಬಣ್ಣ ಅಲ್ಲದೆ ನೀಲಿ  ಹಾಗೂ ಹಳದಿ ಬಣ್ಣದವುಗಳೂ ಲಭ್ಯವಿದೆ.

ಯಾವ ಯಾವ ಬೆಳೆಗೆ ಹೊದಿಸಬಹುದು;

  • ಬಾಳೆ ಗೊನೆಗೆ ಇದನ್ನು ಹೊದಿಸಿದರೆ ರಪ್ತು ಯೋಗ್ಯ ಕಾಯಿ ದೊರೆಯುತ್ತದೆ. ಯಾವುದೇ ಕಲೆಗಳು ಇರುವುದಿಲ್ಲ.
  • ದಾಳಿಂಬೆ ಗಿಡಗಳಿಗೆ ಹೊದಿಸಿದರೆ ಪತಂಗದ ತೊಂದರೆ ಇಲ್ಲ. ಸನ್  ಸ್ಕಾರ್ಚ್ ಇಲ್ಲ, ಮೈಟ್, ಹಿಟ್ಟು ತಿಗಣೆ  ಇಲ್ಲದೆ ಆಕರ್ಷಕವಾದ ಹಣ್ಣು ದೊರೆಯುತ್ತದೆ. ಗಿಡಕ್ಕೇ ಹೊದಿಸಬಹುದು. ಕ್ಕಾಅಯಿಗೂ ಕಟ್ಟಬಹುದು.
  • ಮಾವು, ಅಂಜೂರ, ದ್ರಾಕ್ಷಿ ಬೆಳೆಯಲ್ಲೂ  ಇದನ್ನು ಬಳಕೆ ಮಾಅಡುತ್ತರೆ.
  • ತರಕಾರಿ ಬೆಳೆಗಳಲ್ಲಿ ಸ್ವ ಪರಾಗ ಸ್ಪರ್ಷದ ತಳಿಗಳನ್ನು ಬೆಳೆಸಿದರೆ ದುಪ್ಪಟ್ಟು ಇಳುವರಿ ಪಡೆಯಬಹುದು.
  • ಕಲ್ಲಂಗಡಿ ಬೆಳೆಯಲ್ಲೂ ಇದನ್ನು  ಬಳಸುತ್ತಾರೆ.

ಇದರ ಒಳಗೆ ಬೆಳೆದ  ಉತ್ಪನ್ನ ಶುದ್ಧ ಸಾವಯವ  ಉತ್ಪನ್ನವಾಗಿರುತ್ತದೆ.  ನಿಜವಾಗಿಯೂ ಕೀಟ – ರೋಗ ನಾಶಕ ಬಳಕೆ ಮಾಡದೇ ಉತ್ತಮ ಇಳುವರಿ ಪಡೆಯಲು ಈ ತಂತ್ರಜ್ಞಾನ ಸಹಾಯಕ. ಮಹಾರಾಷ್ಟ್ರದಲ್ಲಿ ಹಲವಾರು ರೈತರು ಇದರನ್ನು ಬಳಸಿ ಬೆಳೆ ಬೆಳೆಯುತ್ತಿದ್ದಾರೆ.

 
 

0 Comments

Submit a Comment

Your email address will not be published. Required fields are marked *

Get in Touch

For all kinds of inquiries, regarding the Krushiabhivruddi website and its other media channels, including corporate advertising contact us on 

support@krushiabhivruddi.com
+91-9663724066

ಒಂದು ಎಕ್ರೆಯಲ್ಲಿ ಮಿಶ್ರ ಬೆಳೆಯಿಂದ ಕನಿಷ್ಟ 3 ಲಕ್ಷ ಆದಾಯ ಗಳಿಸುವ ರೈತ.

Categories

error: Content is protected !!