ಬಾಳೆಯನ್ನು ಎಲ್ಲರೂ ಬೆಳೆಯುತ್ತಾರೆ.ಕೆಲವರು ಮನೆ ಹಿತ್ತಲಿನ ಬೆಳೆಯಾಗಿ ಬೆಳೆದರೆ ಮತ್ತೆ ಕೆಲವರು ವಾಣಿಜ್ಯಿಕವಾಗಿ ತೋಟ ಮಾಡಿ ಬೆಳೆಯುತ್ತಾರೆ. ಇವರೆಲ್ಲರಿಗೂ ಅತೀ ದೊಡ್ದ ಸಮಸ್ಯೆ ಎಂದರೆ ಬಾಳೆ ಸಸ್ಯದ ಎಲೆ ಗುಛ್ಛವಾಗುವಿಕೆ. ಇದರ ಪ್ರಾರಂಭಿಕ ಚಿನ್ಹೆ ಮತ್ತು ಪತ್ತೆ ಹೀಗೆ.
- ನಮ್ಮಲ್ಲಿ ಬಹಳಷ್ಟು ಜನ ಕೇಳುವುದುಂಟು. ಈ ರೀತಿ ಗುಚ್ಚ ತಲೆ ಅದದ್ದಕ್ಕೆ ಏನು ಪರಿಹಾರ ಎಂದು?
- ಇದಕ್ಕೆ ಪರಿಹಾರ ಇಲ್ಲ. ಇದು ಒಂದು ವೈರಾಣು ರೋಗವಾಗಿದೆ.
- ಇದು ಬಂದರೆ ತಕ್ಷಣ ಗುರುತಿಸಿ ಆ ಬಾಳೆಯ ಎಲ್ಲಾ ಬಾಗಗಳನ್ನೂ ತೆಗೆದು ಸ್ವಚ್ಚ ಮಾಡಿ.
- ಇಲ್ಲವಾದರೆ ಅದು ಬೇರೆ ಬಾಳೆಗೆ ಪ್ರಸಾರವಾಗುತ್ತದೆ.ಕೊನೆಗೆ ಹಿತ್ತಲಲ್ಲಿ ಬಾಳೆಯೇ ಇಲ್ಲದಾದರೂ ಅಚ್ಚರಿ ಇಲ್ಲ.
ಏನಿದು ರೋಗ:
- ಬಾಳೆ ಬೆಳೆಗೆ ಆರ್ಥಿಕವಾಗಿ ಗಣನೀಯವಾಗಿ ಹಾನಿ ಮಾಡುವ ವೈರಸ್ ಖಾಯಿಲೆ ಬನಾನಾ ಬಂಚೀ ಟಾಪ್ .
- ಬಾಳೆಯ ಎಲೆ ಗುಚ್ಚ ರೋಗ ಎಂದು ಕರೆಯಲ್ಪಡುವ ಈ ರೋಗ ಬಂದರೆ ಬಾಳೆಯ ಕತೆ ಮುಗಿಯಿತು.
- ಬಾಳೆಯ ಎಲೆಯಲ್ಲದೆ,ಅದರ ಕಾಂಡದಲ್ಲಿ (Bract music virus) ಅಸಹಜ ಬಣ್ಣ ಮತ್ತು ಬೆಳವಣಿಗೆ ಆಗುವುದು ಸಹ ಒಂದು ನಂಜಾಣು ರೋಗ. ಇದು ಮೊಳಕೆ ಬರುವಾಗ, ಬೆಳೆಯುತ್ತಿರುವಾಗ, ಗೊನೆ ಹಾಕುವ ಸಮಯದಲ್ಲಿ ಯಾವಾಗಲೂ ಗೋಚರಕ್ಕೆ ಬರಬಹುದು.
- ಬಾಳೆಯೆ ಬೆಳವಣಿಗೆಯ ಯಾವುದೇ ಹಂತದಲ್ಲಿ ಇದು ಬರಬಹುದು.
- ಈ ರೋಗವು ಒಂದು ಜಾತಿಯ ಎಫಿಡ್ ಪೆಂಟಲೋನಿಯಾ ನೆಗ್ರೋವೋಸಾ ( pentalonia nigronervosea) ದಿಂದ ಪ್ರಸಾರವಾಗುತ್ತದೆ.
ಚಿನ್ಹೆಗಳು:
- ಈ ರೋಗ ತಗಲುತ್ತಿರುವಾಗ ಬಾಳೆ ಗಿಡಗಳು ಗಿಡ್ಡವಾಗಿ ಗುಚ್ಚದಂತೆ ಎಲೆಗಳನ್ನು ಬಿಡುತ್ತಿರುತ್ತದೆ.
- ಪ್ರಾರಂಭದಲ್ಲಿ ಶಕ್ತಿ ಹೀನ ಅಥವಾ ಮುರುಟು ಎಲೆ ಹೊರ ಬರುತ್ತಿದೆ ಎಂದರೆ ರೋಗದ ಸಂಶಯ ವ್ಯಕ್ತಪಡಿಸಬಹುದು.
- ಎಲೆಗಳು ಬರುವ ಕ್ರಮವು ಸರಿಯಾಗಿರುವುದಿಲ್ಲ.
- ಎಲೆಗಳ ಅಗಲವು ಕಡಿಮೆಯಾಗಿರುತ್ತದೆ
- ಸಾಮಾನ್ಯವಾಗಿ ಎಲೆಗಳು ಒಂದರ ನಂತರ ಒಂದರಂತೆ ಬರುವುದುತ್ತವೆ,
- ಗಾತ್ರದಲ್ಲಿ ಒಂದರಿಂದ ಒಂದು ದೊಡ್ದದಾಗಿರುತ್ತದೆ.
- ಈ ರೋಗ ಬಂದಾಗ ಎಲೆಗಳು ಸಣ್ಣದಾಗಲಾರಂಭಿಸುತ್ತವೆ.
- ತೀವ್ರವಾದಂತೆ ಹೆಚ್ಚು ಅನಿಯಮಿತವಾಗಿ ಬರತೊಡಗುತ್ತದೆ.
- ಕಂದುಗಳ ಬಣ್ಣ ಮತ್ತು ಲಕ್ಷಣ ಬದಲಾಗಿರುತ್ತದೆ.
- ಎಲೆಯನ್ನು ಹಿಚುಕಿ ಹುಡಿ ಮಾಡುವಷ್ಟು ಶಕ್ತಿ ಕಳಕೊಂಡಿರುತ್ತದೆ.
- ಎಲೆ ಬಣ್ಣ ತಿಳಿ ಹಸುರು ಬಣ್ಣಕ್ಕೆ ತಿರುಗುತ್ತದೆ.
- ಎಲೆ ದಂಟಿನಲ್ಲಿ ಕೆಂಪು ಗೆರೆ ಕಂಡು ಬರುತ್ತದೆ.
- ಗೊನೆ ಹಾಕುವ ಸಮಯದಲ್ಲಿ ಬಂದರೆ ಗೊನೆ ಮೇಲ್ಮುಖವಾಗಿ ಬಿಡುತ್ತದೆ.
- ಹೂ ಗೊಂಚಲು ಬಿಡುವಾಗ ನಂಜಾಣು ರೋಗ ಬಾಧಿಸಿದಲ್ಲಿ ಆ ಹೂಗೊಂಚಲಿನ ಎಲೆಗಳು ಅಸಹಜ ಬಣ್ಣದಲ್ಲಿ ಇರುತ್ತವೆ.
- ಒಂದೊಂದಾಗಿ ಎಲೆ ಬಿಡಿಸಿಕೊಳ್ಳುವ ಬದಲು ಎಲ್ಲವೂ ಬಿಡಿಸಿಕೊಳ್ಳುತ್ತದೆ.
- ಗೊನೆ ಹಾಕಿದ ನಂತರ ಬಂದರೆ ಕಾಯಿಯ ಗಾತ್ರ ಸಣ್ಣದಾಗುತ್ತದೆ.
- ಕಾಯಿಗೆ ಶಕ್ತಿ ಇಲ್ಲದೆ ರುಚಿಯೂ ಇಲ್ಲದೆ ಕಾಯಿಯಲ್ಲಿ ಅಸಹಜತೆ ಕಾಣಿಸುತ್ತದೆ,
- ಈ ರೋಗಕ್ಕೆ ನಿರೋಧಕ ಶಕ್ತಿ ಪಡೆದ ತಳಿಗಳೇ ಇಲ್ಲ. ನಾವು ಬೆಳೆಸುವ ಎಲ್ಲಾ ಬಾಳೆಗೂ ಈ ರೋಗ ಬರುತ್ತದೆ.
ನಾವು ಏನು ಮಾಡುತ್ತೇವೆ?
- ಬಾಳೆಯನ್ನು ಬೆಳೆಸುತ್ತೇವೆ. ಅದರ ಸುಳಿ ಭಾಗವನ್ನು ಗಮನಿಸುವುದೇ ಇಲ್ಲ.
- ಗಡ್ಡೆ ಮೂಲದಿಂದಲೋ ಅಥವಾ ಇನ್ಯಾವುದದರೂ ರೋಗ ಪೀಡಿತ ಬಾಳೆಯ ರಸ ಸ್ಪರ್ಶದಿಂದ ರೋಗ ತಗಲಿದ್ದು ಗಮನಕ್ಕೆ ಬರುವುದಿಲ್ಲ.
- ಗಮನಿಸಿದರೂ ವಾಸಿಯಾಗಬಹುದು ಎಂದು ಹಾಗೆಯೇ ಬಿಡುತ್ತೇವೆ.
- ಕೀಟ ನಾಶಕ ಹಾಕುತ್ತೇವೆ.
- ಇದು ಯಾವುದೂ ಪ್ರಯೋಜನ ಇಲ್ಲ.
ಹೆಚ್ಚು ಸಮಯ ಇದನ್ನು ಬಿಟ್ಟರೆ ಇದರ ರಸ ಹೀರಿದ ಕೀಟ ಮತ್ತೊಂದು ಆರೋಗ್ಯವಂತ ಗಿಡದ ರಸ ಹೀರುವಾಗ ಅದಕ್ಕೆ ಈ ರೋಗ ತಗಲುತ್ತದೆ. ಒಂದು ಕಾಲದಲ್ಲಿ ಈ ರೋಗದಿಂದ ಬಾಳೆ ಬೆಳೆ ನಾಶವಾದ ವರದಿಯೂ ಇದೆ.
ಏನು ಮಾಡಬೇಕು:
- ತಕ್ಷಣ ಅದನ್ನು ಕಿತ್ತು ತೆಗೆಯಬೇಕು ಮತ್ತು ಅದನ್ನು ಹೂಳಬೇಕು.
- ಬಾಳೆ ತೆಗೆಯಲು ಬಳಸಿದ ಹಾರೆ ಗುದ್ದಲಿಯಿಂದ ಮತ್ತೊಂದು ಆರೋಗ್ಯವಂತ ಬಾಳೆಯನ್ನು ಸ್ಪರ್ಶಿಸಬಾರದು. ಸ್ವಲ್ಪ ಬೆಂಕಿಗೆ ಹಿಡಿದು ಬಿಸಿ ಮಾಡಬೇಕು.
- ತೋಟವನ್ನು ಹುಲ್ಲು ಇತ್ಯಾದಿ ತೆಗೆದು ಸ್ವಚ್ಚವಾಗಿಡಬೇಕು. ಎಫೀಡ್ ಹಾವಳಿಗೆ ರೋಗರ್,ಮೊನೋಕ್ರೋಟೋಫೋಸ್ ಸಿಂಪಡಿಸಬೇಕು ಎನ್ನುತ್ತಾರೆಯಾದರೂ ಇವುಗಳಿಗೆ ಕೀಟಗಳು ನಿರೋಧಕ ಶಕ್ತಿ ಹೊಂದಿದೆ ಎನ್ನಲಾಗುತ್ತಿದೆ.
- ಇದರ ಬದಲಿಗೆ ಇಮಿಡಾ ಕ್ಲೋಫ್ರಿಡ್ ಕೀಟನಾಶಕದ ಸಿಂಪರಣೆ ಸೂಕ್ತ. ಕೀಟ ನಾಶಕ, ಸಿಂಪಡಿಸಬೇಕು.
- ರೋಗ ಬರದಿರುವಂತೆ ಆರೋಗ್ಯವಂತ ಕಂದನ್ನು ಆಯ್ಕೆ ಮಾಡಬೇಕು. ರೋಗ ಇಲ್ಲದಲ್ಲಿಂದ ನೆಡು ಸಾಮಾಗ್ರಿ ತರಬೇಕು.
- ಈ ರೋಗ ಬಾರದಂತೆ ತಡೆಯುವುದು ಬಹುಷಃ ಅಸಾಧ್ಯ. ಗಡ್ಡೆ ಮೂಲದಿಂದ ಬರುತ್ತದೆ.
- ಒಂದರಿಂದ ಮತ್ತೊಂದಕ್ಕೆ ಹರಡುತ್ತದೆ.
- ಒಂದು ವೇಳೆ ನಾವು ಉತ್ತಮ ನೆಡು ಸಾಮಾಗ್ರಿ ತಂದಿದ್ದರೂ ಅದಕ್ಕೂ ಹೇಗಾದರೂ ಈ ರೋಗ ತಗಲಬಹುದು.
- ಆದ ಕಾರಣ ನಿರ್ವಹಣೆಯಿಂದ ಹರಡುವುದನ್ನು ತಡೆಯಬಹುದು.
ಬಾಳೆ ಬೆಳೆಸುತ್ತೀರೆಂದಾದರೆ ನಿಮಗೆ ಬಾಳೆಗೆ ಬರುವ ಈ ವೈರಸ್ ರೋಗ ಲಕ್ಷಣಗಳ ಬಗ್ಗೆ ಗೊತ್ತಿರಬೇಕು. ಇದನ್ನು ತಕ್ಷಣ ಗುರುತಿಸಿ ತೆಗೆದರೆ ಉಳಿದ ಬಾಳೆ ಸೇಫ್.