ಬಾಳೆ- ಈ ರೀತಿ ಆದರೆ ಆ ಬಾಳೆಯನ್ನು ತೆಗೆದು ಬಿಡಿ

by | Sep 8, 2021 | Fruit Crop (ಹಣ್ಣಿನ ಬೆಳೆ), Banana (ಬಾಳೆ) | 0 comments

ಬಾಳೆಯನ್ನು ಎಲ್ಲರೂ ಬೆಳೆಯುತ್ತಾರೆ.ಕೆಲವರು ಮನೆ ಹಿತ್ತಲಿನ ಬೆಳೆಯಾಗಿ ಬೆಳೆದರೆ ಮತ್ತೆ ಕೆಲವರು ವಾಣಿಜ್ಯಿಕವಾಗಿ ತೋಟ ಮಾಡಿ ಬೆಳೆಯುತ್ತಾರೆ. ಇವರೆಲ್ಲರಿಗೂ ಅತೀ ದೊಡ್ದ ಸಮಸ್ಯೆ ಎಂದರೆ ಬಾಳೆ ಸಸ್ಯದ ಎಲೆ ಗುಛ್ಛವಾಗುವಿಕೆ. ಇದರ ಪ್ರಾರಂಭಿಕ ಚಿನ್ಹೆ ಮತ್ತು ಪತ್ತೆ ಹೀಗೆ.

  • ನಮ್ಮಲ್ಲಿ ಬಹಳಷ್ಟು ಜನ ಕೇಳುವುದುಂಟು. ಈ ರೀತಿ ಗುಚ್ಚ ತಲೆ ಅದದ್ದಕ್ಕೆ  ಏನು ಪರಿಹಾರ ಎಂದು?
  • ಇದಕ್ಕೆ  ಪರಿಹಾರ ಇಲ್ಲ. ಇದು ಒಂದು ವೈರಾಣು ರೋಗವಾಗಿದೆ.
  • ಇದು ಬಂದರೆ ತಕ್ಷಣ ಗುರುತಿಸಿ ಆ ಬಾಳೆಯ ಎಲ್ಲಾ ಬಾಗಗಳನ್ನೂ ತೆಗೆದು ಸ್ವಚ್ಚ ಮಾಡಿ.
  • ಇಲ್ಲವಾದರೆ ಅದು ಬೇರೆ ಬಾಳೆಗೆ ಪ್ರಸಾರವಾಗುತ್ತದೆ.ಕೊನೆಗೆ ಹಿತ್ತಲಲ್ಲಿ ಬಾಳೆಯೇ ಇಲ್ಲದಾದರೂ ಅಚ್ಚರಿ ಇಲ್ಲ.

ಏನಿದು ರೋಗ:

  • ಬಾಳೆ ಬೆಳೆಗೆ ಆರ್ಥಿಕವಾಗಿ ಗಣನೀಯವಾಗಿ ಹಾನಿ ಮಾಡುವ ವೈರಸ್ ಖಾಯಿಲೆ ಬನಾನಾ ಬಂಚೀ ಟಾಪ್ .
  • ಬಾಳೆಯ ಎಲೆ ಗುಚ್ಚ ರೋಗ ಎಂದು ಕರೆಯಲ್ಪಡುವ ಈ ರೋಗ  ಬಂದರೆ  ಬಾಳೆಯ ಕತೆ ಮುಗಿಯಿತು.
  • ಬಾಳೆಯ ಎಲೆಯಲ್ಲದೆ,ಅದರ ಕಾಂಡದಲ್ಲಿ (Bract music virus) ಅಸಹಜ ಬಣ್ಣ ಮತ್ತು ಬೆಳವಣಿಗೆ ಆಗುವುದು ಸಹ ಒಂದು ನಂಜಾಣು ರೋಗ. ಇದು ಮೊಳಕೆ ಬರುವಾಗ, ಬೆಳೆಯುತ್ತಿರುವಾಗ, ಗೊನೆ ಹಾಕುವ ಸಮಯದಲ್ಲಿ ಯಾವಾಗಲೂ ಗೋಚರಕ್ಕೆ ಬರಬಹುದು.
  • ಬಾಳೆಯೆ ಬೆಳವಣಿಗೆಯ ಯಾವುದೇ ಹಂತದಲ್ಲಿ ಇದು ಬರಬಹುದು.
  • ಈ ರೋಗವು ಒಂದು ಜಾತಿಯ ಎಫಿಡ್ ಪೆಂಟಲೋನಿಯಾ ನೆಗ್ರೋವೋಸಾ ( pentalonia nigronervosea) ದಿಂದ  ಪ್ರಸಾರವಾಗುತ್ತದೆ.
ರೋಗಕ್ಕೆ ತುತ್ತಾದ ಬಾಳೆ ಕಂದುಗಳ ಬಣ್ಣ
ರೋಗಕ್ಕೆ ತುತ್ತಾದ ಬಾಳೆ ಕಂದುಗಳ ಬಣ್ಣ

ಚಿನ್ಹೆಗಳು:

  • ಈ ರೋಗ ತಗಲುತ್ತಿರುವಾಗ ಬಾಳೆ ಗಿಡಗಳು ಗಿಡ್ಡವಾಗಿ ಗುಚ್ಚದಂತೆ ಎಲೆಗಳನ್ನು ಬಿಡುತ್ತಿರುತ್ತದೆ.
  • ಪ್ರಾರಂಭದಲ್ಲಿ ಶಕ್ತಿ ಹೀನ ಅಥವಾ ಮುರುಟು ಎಲೆ ಹೊರ ಬರುತ್ತಿದೆ ಎಂದರೆ ರೋಗದ ಸಂಶಯ ವ್ಯಕ್ತಪಡಿಸಬಹುದು.
  •  ಎಲೆಗಳು ಬರುವ ಕ್ರಮವು ಸರಿಯಾಗಿರುವುದಿಲ್ಲ.
  • ಎಲೆಗಳ ಅಗಲವು ಕಡಿಮೆಯಾಗಿರುತ್ತದೆ
ಹೂ ಗೊಂಚಲಿನಲ್ಲಿ ರೋಗದ ಲಕ್ಷಣ
ಹೂ ಗೊಂಚಲಿನಲ್ಲಿ ರೋಗದ ಲಕ್ಷಣ
  • ಸಾಮಾನ್ಯವಾಗಿ ಎಲೆಗಳು ಒಂದರ ನಂತರ ಒಂದರಂತೆ  ಬರುವುದುತ್ತವೆ,
  • ಗಾತ್ರದಲ್ಲಿ ಒಂದರಿಂದ ಒಂದು ದೊಡ್ದದಾಗಿರುತ್ತದೆ.
  • ಈ ರೋಗ ಬಂದಾಗ ಎಲೆಗಳು ಸಣ್ಣದಾಗಲಾರಂಭಿಸುತ್ತವೆ.
  • ತೀವ್ರವಾದಂತೆ ಹೆಚ್ಚು ಅನಿಯಮಿತವಾಗಿ ಬರತೊಡಗುತ್ತದೆ.
  • ಕಂದುಗಳ ಬಣ್ಣ ಮತ್ತು ಲಕ್ಷಣ ಬದಲಾಗಿರುತ್ತದೆ.
ವೈರಸ್ ರೋಗ ತಗಲಿದ ಬಾಳೆಯ ಎಲೆ ದಂಟುಗಳಲ್ಲಿ ಈ ಲಕ್ಷಣ ಇರುತ್ತದೆ.
ವೈರಸ್ ರೋಗ ತಗಲಿದ ಬಾಳೆಯ ಎಲೆ ದಂಟುಗಳಲ್ಲಿ ಈ ಲಕ್ಷಣ ಇರುತ್ತದೆ.
  • ಎಲೆಯನ್ನು ಹಿಚುಕಿ ಹುಡಿ ಮಾಡುವಷ್ಟು ಶಕ್ತಿ ಕಳಕೊಂಡಿರುತ್ತದೆ.
  • ಎಲೆ ಬಣ್ಣ ತಿಳಿ ಹಸುರು ಬಣ್ಣಕ್ಕೆ ತಿರುಗುತ್ತದೆ. 
  • ಎಲೆ ದಂಟಿನಲ್ಲಿ ಕೆಂಪು ಗೆರೆ ಕಂಡು ಬರುತ್ತದೆ.
  •  ಗೊನೆ  ಹಾಕುವ ಸಮಯದಲ್ಲಿ  ಬಂದರೆ ಗೊನೆ  ಮೇಲ್ಮುಖವಾಗಿ ಬಿಡುತ್ತದೆ.
  • ಹೂ ಗೊಂಚಲು ಬಿಡುವಾಗ ನಂಜಾಣು ರೋಗ ಬಾಧಿಸಿದಲ್ಲಿ  ಆ ಹೂಗೊಂಚಲಿನ  ಎಲೆಗಳು ಅಸಹಜ ಬಣ್ಣದಲ್ಲಿ ಇರುತ್ತವೆ.
  • ಒಂದೊಂದಾಗಿ  ಎಲೆ ಬಿಡಿಸಿಕೊಳ್ಳುವ ಬದಲು ಎಲ್ಲವೂ ಬಿಡಿಸಿಕೊಳ್ಳುತ್ತದೆ.
  • ಗೊನೆ  ಹಾಕಿದ ನಂತರ ಬಂದರೆ ಕಾಯಿಯ ಗಾತ್ರ ಸಣ್ಣದಾಗುತ್ತದೆ.
  • ಕಾಯಿಗೆ ಶಕ್ತಿ ಇಲ್ಲದೆ ರುಚಿಯೂ ಇಲ್ಲದೆ ಕಾಯಿಯಲ್ಲಿ  ಅಸಹಜತೆ ಕಾಣಿಸುತ್ತದೆ,
  • ಈ ರೋಗಕ್ಕೆ ನಿರೋಧಕ ಶಕ್ತಿ ಪಡೆದ ತಳಿಗಳೇ ಇಲ್ಲ. ನಾವು ಬೆಳೆಸುವ ಎಲ್ಲಾ ಬಾಳೆಗೂ ಈ ರೋಗ ಬರುತ್ತದೆ.
ವೈರಸ್ ರೋಗದ ಪ್ರಾರಂಭಿಕ ಲಕ್ಷಣ
ವೈರಸ್ ರೋಗದ ಪ್ರಾರಂಭಿಕ ಲಕ್ಷಣ

ನಾವು ಏನು ಮಾಡುತ್ತೇವೆ?

  • ಬಾಳೆಯನ್ನು ಬೆಳೆಸುತ್ತೇವೆ. ಅದರ ಸುಳಿ ಭಾಗವನ್ನು ಗಮನಿಸುವುದೇ  ಇಲ್ಲ.
  • ಗಡ್ಡೆ ಮೂಲದಿಂದಲೋ ಅಥವಾ ಇನ್ಯಾವುದದರೂ ರೋಗ ಪೀಡಿತ ಬಾಳೆಯ ರಸ ಸ್ಪರ್ಶದಿಂದ ರೋಗ ತಗಲಿದ್ದು ಗಮನಕ್ಕೆ  ಬರುವುದಿಲ್ಲ.
  •  ಗಮನಿಸಿದರೂ ವಾಸಿಯಾಗಬಹುದು ಎಂದು ಹಾಗೆಯೇ ಬಿಡುತ್ತೇವೆ.
  • ಕೀಟ ನಾಶಕ ಹಾಕುತ್ತೇವೆ.
  • ಇದು ಯಾವುದೂ ಪ್ರಯೋಜನ ಇಲ್ಲ.
ಮಾಮೂಲು ಬಂಚಿ ಟಾಪ್  ರೋಗ
ಮಾಮೂಲು ಬಂಚಿ ಟಾಪ್ ರೋಗ

ಹೆಚ್ಚು ಸಮಯ ಇದನ್ನು ಬಿಟ್ಟರೆ ಇದರ ರಸ ಹೀರಿದ ಕೀಟ ಮತ್ತೊಂದು ಆರೋಗ್ಯವಂತ ಗಿಡದ ರಸ ಹೀರುವಾಗ ಅದಕ್ಕೆ ಈ ರೋಗ ತಗಲುತ್ತದೆ. ಒಂದು ಕಾಲದಲ್ಲಿ ಈ ರೋಗದಿಂದ ಬಾಳೆ ಬೆಳೆ ನಾಶವಾದ ವರದಿಯೂ ಇದೆ.

ಗೊನೆ ಹಾಕುವ  ಸಮಯದಲ್ಲಿ ವೈರಸ್ ರೋಗ ತಗಲಿದಾಗ ಹೀಗೆ ಆಗುತ್ತದೆ.
ಗೊನೆ ಹಾಕುವ ಸಮಯದಲ್ಲಿ ವೈರಸ್ ರೋಗ ತಗಲಿದಾಗ ಹೀಗೆ ಆಗುತ್ತದೆ.

ಏನು ಮಾಡಬೇಕು:

  •  ತಕ್ಷಣ ಅದನ್ನು ಕಿತ್ತು ತೆಗೆಯಬೇಕು ಮತ್ತು ಅದನ್ನು ಹೂಳಬೇಕು.
  • ಬಾಳೆ  ತೆಗೆಯಲು ಬಳಸಿದ ಹಾರೆ ಗುದ್ದಲಿಯಿಂದ ಮತ್ತೊಂದು ಆರೋಗ್ಯವಂತ ಬಾಳೆಯನ್ನು ಸ್ಪರ್ಶಿಸಬಾರದು.  ಸ್ವಲ್ಪ ಬೆಂಕಿಗೆ ಹಿಡಿದು ಬಿಸಿ ಮಾಡಬೇಕು.
  • ತೋಟವನ್ನು ಹುಲ್ಲು ಇತ್ಯಾದಿ ತೆಗೆದು ಸ್ವಚ್ಚವಾಗಿಡಬೇಕು. ಎಫೀಡ್ ಹಾವಳಿಗೆ ರೋಗರ್,ಮೊನೋಕ್ರೋಟೋಫೋಸ್ ಸಿಂಪಡಿಸಬೇಕು ಎನ್ನುತ್ತಾರೆಯಾದರೂ ಇವುಗಳಿಗೆ ಕೀಟಗಳು ನಿರೋಧಕ ಶಕ್ತಿ ಹೊಂದಿದೆ ಎನ್ನಲಾಗುತ್ತಿದೆ.
  • ಇದರ ಬದಲಿಗೆ ಇಮಿಡಾ ಕ್ಲೋಫ್ರಿಡ್ ಕೀಟನಾಶಕದ ಸಿಂಪರಣೆ ಸೂಕ್ತ.  ಕೀಟ ನಾಶಕ, ಸಿಂಪಡಿಸಬೇಕು.
  • ರೋಗ ಬರದಿರುವಂತೆ ಆರೋಗ್ಯವಂತ ಕಂದನ್ನು ಆಯ್ಕೆ  ಮಾಡಬೇಕು. ರೋಗ ಇಲ್ಲದಲ್ಲಿಂದ ನೆಡು ಸಾಮಾಗ್ರಿ ತರಬೇಕು.
  • ಈ ರೋಗ ಬಾರದಂತೆ ತಡೆಯುವುದು ಬಹುಷಃ ಅಸಾಧ್ಯ. ಗಡ್ಡೆ ಮೂಲದಿಂದ ಬರುತ್ತದೆ.
  • ಒಂದರಿಂದ ಮತ್ತೊಂದಕ್ಕೆ ಹರಡುತ್ತದೆ.
  • ಒಂದು ವೇಳೆ ನಾವು ಉತ್ತಮ ನೆಡು ಸಾಮಾಗ್ರಿ ತಂದಿದ್ದರೂ  ಅದಕ್ಕೂ ಹೇಗಾದರೂ ಈ ರೋಗ ತಗಲಬಹುದು. 
  • ಆದ  ಕಾರಣ ನಿರ್ವಹಣೆಯಿಂದ ಹರಡುವುದನ್ನು ತಡೆಯಬಹುದು.

 ಬಾಳೆ ಬೆಳೆಸುತ್ತೀರೆಂದಾದರೆ  ನಿಮಗೆ ಬಾಳೆಗೆ ಬರುವ ಈ ವೈರಸ್ ರೋಗ ಲಕ್ಷಣಗಳ ಬಗ್ಗೆ ಗೊತ್ತಿರಬೇಕು. ಇದನ್ನು ತಕ್ಷಣ ಗುರುತಿಸಿ ತೆಗೆದರೆ ಉಳಿದ ಬಾಳೆ ಸೇಫ್.

0 Comments

Submit a Comment

Your email address will not be published. Required fields are marked *

Get in Touch

For all kinds of inquiries, regarding the Krushiabhivruddi website and its other media channels, including corporate advertising contact us on 

support@krushiabhivruddi.com
+91-9663724066

ಒಂದು ಎಕ್ರೆಯಲ್ಲಿ ಮಿಶ್ರ ಬೆಳೆಯಿಂದ ಕನಿಷ್ಟ 3 ಲಕ್ಷ ಆದಾಯ ಗಳಿಸುವ ರೈತ.

Categories

error: Content is protected !!