ರಸಗೊಬ್ಬರ- fertilizer broadcasting

ರಸಗೊಬ್ಬರಕ್ಕೆ ಯಾವ ಕಾರಣಕ್ಕೆ ಬೆಲೆ ಹೆಚ್ಚಳವಾಗುತ್ತದೆ ಗೊತ್ತೇ?

ಕೆಲ ದಿನಗಳ ಹಿಂದೆ ರಸ ಗೊಬ್ಬರದ ಬೆಲೆ ಹೆಚ್ಚಳವಾದ ಸುದ್ದಿ ಭಾರೀ ಸದ್ದು ಮಾಡಿತ್ತು. ಈಗ ಮತ್ತೆ ರಸಗೊಬ್ಬರದ ಬೆಲೆ ಇಳಿಕೆಯದ್ದೇ ಸುದ್ದಿ. ಆದರೆ ಇದರ ಹಿಂದಿನ ವಾಸ್ತವಿಕತೆಯ ಚಿತ್ರಣ ಇಲ್ಲಿದೆ ನೋಡಿ. ರಸಗೊಬ್ಬರ, ತಂಬಾಕು ಉತ್ಪನ್ನಗಳು ಹಾಗೆಯೇ ಅಲ್ಕೋ ಹಾಲ್, ಪೆಟ್ರೋಲಿಯಂ ಉತ್ಪನ್ನಗಳು ಬಳಸುವವರಿಗೆ ಒಂದು ಚಟದಂತೆ. ಇವುಗಳು ಭಾರತದಂತಹ ಅಧಿಕ ಜನಸಂಖ್ಯೆ ಉಳ್ಳ ದೇಶವನ್ನು ಮುನ್ನಡೆಸಲು ಬೇಕಾದಷ್ಟು ಆದಾಯ ತಂದು ಕೊಡುತ್ತದೆ. ಭಾರತ ದೇಶದಲ್ಲಿ  70% ಕ್ಕೂ ಹೆಚ್ಚು ಕೃಷಿಕರು. ಅದರಲ್ಲಿ 69% ಕೃಷಿಕರು…

Read more
Zink deficiency in plant

ಝಿಂಕ್ ಬಳಸಿದರೆ ಸಸ್ಯ ಆರೋಗ್ಯ ಮತ್ತು ಫಸಲು ಹೆಚ್ಚುತ್ತದೆ.

ಬೆಳೆಗಳು ಆರೋಗ್ಯವಾಗಿದ್ದು, ಫಲಧಾರಣಾ ಶಕ್ತಿ ಉತ್ತಮವಾಗಿ, ಪೌಷ್ಟಿಕ ಫಲ ಕೊಡಲು ಸತು ಎಂಬ ಸೂಕ್ಷ್ಮ ಪೊಷಕಾಂಶ ಅಗತ್ಯವಾಗಿ ಬೇಕು ಎನ್ನುತ್ತಾರೆ ಬೆಳೆ ತಜ್ಞರು. ಇತ್ತೀಚೆಗೆ ಬೆಳೆ ತಜ್ಞರುಗಳು ಸತುವಿನ ಬಳಕೆಗೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ. ಕೆಲವು ಗೊಬ್ಬರ ತಯಾರಕರು ತಮ್ಮ ಕೆಲವು ಗೊಬ್ಬರಗಳನ್ನು (ವಿಶೇಷವಾಗಿ ಡಿಎಪಿ) ಸತುವಿನ ಮೂಲಕ ಬ್ಲೆಂಡ್ ಮಾಡಿ ಕೊಡುತ್ತಾರೆ. ಕರ್ನಾಟಕ ಸರಕಾರದ  ಕೃಷಿ ನಿಯಮಾವಳಿ ಪ್ರಕಾರ ಇಲ್ಲಿನ ಮಣ್ಣಿಗೆ ಸೂಕ್ಷ್ಮ ಪೋಷಕಾಂಶಗಳ ಜೊತೆಗೆ ಗರಿಷ್ಟ ಪ್ರಮಾಣ (3%) ದಲ್ಲಿ ಸತು ಸೇರಿಸಿರಬೇಕು. ಕರ್ನಾಟಕದ…

Read more
ಅಡಿಕೆ ಗರಿಯಲ್ಲಿ ಸೂಕ್ಷ್ಮ ಪೋಷಕದ ಕೊರತೆ ಲಕ್ಷಣ

ಮೈಕ್ರೋ ನ್ಯೂಟ್ರಿಯೆಂಟ್ ಬಳಸಿದರೆ ಅಚ್ಚರಿಯ ಇಳುವರಿ.

ಭಾರತ ದೇಶದ ಬಹುತೇಕ ಮಣ್ಣಿನಲ್ಲಿ ಸೂಕ್ಷ್ಮಪೋಷಕಾಂಶಗಳ ಕೊರತೆ ಇದೆ. ಒಟ್ಟು ಕೃಷಿ ಭೂಮಿಯಲ್ಲಿ 49% ಸತುವಿನ ಕೊರತೆಯನ್ನೂ , 12% ಕಬ್ಬಿಣದ ಕೊರತೆಯನ್ನೂ , 5% ಮ್ಯಾಂಗನೀಸ್, ಮತ್ತು 3% ದಷ್ಟು ತಾಮ್ರದ ಕೊರತೆಯನ್ನು 33% ಬೋರಾನ್ ಮತ್ತು 11%  ಮಾಲಿಬ್ಡಿನಂ ಕೊರತೆಯನ್ನು ಹೊಂದಿದೆ ಎಂಬುದಾಗಿ ಅಧ್ಯಯನ ಹೇಳುತ್ತದೆ. ನಿಮ್ಮ ಯಾವುದೇ ಬೆಳೆಗೆ 1 ಲೀ. ನೀರಿಗೆ 1  ಗ್ರಾಂ ಪ್ರಮಾಣದಲ್ಲಿ ಮೈಕ್ರೋ ನ್ಯೂಟ್ರಿಯೆಂಟ್ ಮಿಶ್ರಣ ಮಾಡಿ ಸಿಂಪರಣೆ ಮಾಡಿ.ಆಗ ತಿಳಿಯುತ್ತದೆ ಅದರ ಮಹಿಮೆ ಏನು ಎಂಬುದು….

Read more

ರಂಜಕ ಗೊಬ್ಬರವನ್ನು ಹೀಗೆ ಕೊಟ್ಟರೆ ಉತ್ತಮ.

ರಂಜಕ ಎಂಬುದು ಚಲಿಸುವ ಪೋಷಕವಲ್ಲ. ಕೆಲವು ನೀರಿನಲ್ಲಿ ಕರಗುತ್ತದೆ. ಇನ್ನು ಕೆಲವು  ಕರಗುವುದಿಲ್ಲ. ಹೊಲದ ಮಣ್ಣಿನ ಗುಣ ಹೇಗಿದೆ ಎಂಬುದರ ಮೇಲೆ ಅದಕ್ಕೆ ಹೊಂದುವ ರಂಜಕ ಗೊಬ್ಬರವನ್ನು ಕೊಡಬೇಕು. ಹಾಗೆಯೇ ಕೊಟ್ಟ ರಂಜಕವು ಬೆಳೆಗೆ ಲಭ್ಯವಾಗುವ ಸ್ಥಿತಿಯನ್ನು ಉಂಟುಮಾಡಬೇಕು. ಬಹಳಷ್ಟು  ರೈತರು ರಂಜಕ ಪೋಷಕದ ಬಳಕೆಯನ್ನು ಕಡಿಮೆ ಮಾಡುವುದಿಲ್ಲ. ಡಿಎಪಿ ಹಾಕಿದ್ದೇನೆ ಎನ್ನುತ್ತಾರೆ. ಆದರ ಬಹಳಷ್ಟು ರೈತರ ಹೊಲದ ಮಣ್ಣು ಪರೀಕ್ಷೆಯಲ್ಲಿ ರಂಜಕ ಪೋಷಕದ ಕೊರತೆ ಕಂಡು ಬರುತ್ತದೆ. ಇದಕ್ಕೆ ಕಾರಣ ಬಳಕೆ ಕ್ರಮ ಸರಿಯಿಲ್ಲದಿರುವಿಕೆ. ಹೇಗೆ…

Read more
ಸಲ್ಫೇಟ್ ಆಫ್ ಪೊಟ್ಯಾಶ್ SOP

ನಿಮ್ಮ ಬೆಳೆಗೆ ಯಾವ ರಂಜಕ ಗೊಬ್ಬರ ಸೂಕ್ತ.

ರಂಜಕ ಎಂಬುದರ ಮೂಲ ಶಿಲೆ ಅಥವಾ ಖನಿಜ.  ಇದರ ಅಧಾರದಲ್ಲಿ ರಾಸಾಯನಿಕ ಮೂಲದಲ್ಲಿ ರಂಜಕ ಗೊಬ್ಬರವನ್ನು ತಯಾರಿಸಲಾಗುತ್ತದೆ. ರಂಜಕ ಎಂಬ ಧಾತುವನ್ನು ಸಸ್ಯಗಳು ನೇರವಾಗಿ ಬಳಕೆ ಮಾಡುವುದೇ ಇಲ್ಲ. ಇದು ಒಂದು ಸ್ವತಂತ್ರ ಪೊಷಕ ಅಲ್ಲ. ಇದನ್ನು ಮಣ್ಣಿನಲ್ಲಿರುವ ರಂಜಕ ಕರಗಿಸಿ ಕೊಡುವ ಬ್ಯಾಕ್ಟೀರಿಯಾ, ಶಿಲೀಂದ್ರಗಳು ಸಸ್ಯಗಳಿಗೆ  ಲಭ್ಯವಾಗುವಂತೆ ಮಾಡುತ್ತವೆ. ರಂಜಕ ಗೊಬ್ಬರದಲ್ಲಿ ಮೂರು  ವಿಧ. ಎರಡು ಬಗೆಯವು ನೀರಿನಲ್ಲಿ ಕರಗುವ ರೂಪದ ರಂಜಕ ಮತ್ತು ಒಂದು  ನೀರಿನಲ್ಲಿ ಕರಗದ ರೂಪದ ರಂಜಕ.  ಮಾರುಕಟ್ಟೆಯಲ್ಲಿ ಲಭ್ಯವಿರುವ  ಸಿಂಗಲ್…

Read more
ಹೂ ಗೊಂಚಲು ಚೆನ್ನಾಗಿ ಬರಲು ರಂಜಕ ಗೊಬ್ಬರ

ಹೂವು ಗೊಂಚಲು ಚೆನ್ನಾಗಿ ಬರಲು ರಂಜಕ ಗೊಬ್ಬರ ಅಗತ್ಯ.

ಕರಾವಳಿ ಮಲೆನಾಡಿನಲ್ಲಿ ಅಡಿಕೆ , ತೆಂಗು, ಕರಿಮೆಣಸು ಬೆಳೆಗಾರರು  ಕೊಳೆ ರೋಗಕ್ಕೆ ರಾಮಬಾಣವಾಗಿ ಬಳಸಿದ್ದ ಪೊಟ್ಯಾಶಿಯಂ ಫೋಸ್ಪೋನೇಟ್ ಎಂಬ ತಯಾರಿಕೆಯಲ್ಲಿ ಇದ್ದದ್ದು ಬಹುಪಾಲು ರಂಜಕ. ಇದು ಸಸ್ಯಗಳಿಗೆ ರೋಗ ನಿರೋಧಕ ಶಕ್ತಿ ಕೊಡುವ  ತಾಕತ್ತು ಇದೆ. ಸರಿಯಾದ ಪ್ರಮಾಣದಲ್ಲಿ ಇದನ್ನು ಕೊಟ್ಟರೆ ಅದು ಫಸಲು ಹೆಚ್ಚಳಕ್ಕೂ ಸಹಾಯಕ. ಸಸ್ಯಕ್ಕೆ ಜೀವ ಕೊಡುತ್ತದೆ: ಒಂದು ಸಸ್ಯ ಬದುಕಬೇಕಾದರೆ ಅದಕ್ಕೆ ಬೇರು ಬರಲೇ ಬೇಕು. ಈ ಬೇರು ಬರಲು ಪ್ರೇರಣೆ ಕೊಡುವ ಪೊಷಕ ಎಂದರೆ ಅದು ರಂಜಕ. ಇದು ಸಸ್ಯಗಳಿಗೆ…

Read more

ಸಾವಯವ ಸಾರಜನಕ ಗೊಬ್ಬರಗಳ ಮೂಲ ಇವು.

ಸಾರಜನಕ ಎಂಬುದು ರಾಸಾಯನಿಕ ರೂಪದಲ್ಲಿರುವ ಯೂರಿಯಾ, ಅಮೋನಿಯಂ ಸಲ್ಫೇಟ್ ಅಥವಾ ನೈಟ್ರೇಟ್ ಮುಂತಾದ ಮೂಲಗಳಲ್ಲೇ ಬಳಸಬೇಕಾಗಿಲ್ಲ. ನಿಸರ್ಗ ಸಾರಜನಕ ಸತ್ವದ ಖಣಜ. ನಮ್ಮ ತುರ್ತು ಅವಶ್ಯಕತೆಗಾಗಿ ರಾಸಾಯನಿಕ ವಿಧಾನದ ಮೂಲಕ ಸಾರಜನಕ ಗೊಬ್ಬರವನ್ನು ಉತ್ಪಾದಿಸಿದ್ದು. ಮಣ್ಣಿನಲ್ಲಿ ಸಾಕಷ್ಟು ಸಾರಜನಕದ ಅಂಶ ಇದೆಯಾದರೂ ನಾವು ಯಾಕೆ ಬೇರೆ ಮೂಲದಿಂದ ಸಾರಜನಕವನ್ನು ಬಳಸುತ್ತಿದ್ದೇವೆ ಎಂಬುದು ಎಲ್ಲರ ಭಾವನೆ. ಇದು ಸತ್ಯ. ಕಾರಣ ಇಷ್ಟೇ ಇವು ಬೇರೆ ಬೇರೆ ಕಾರಣಗಳಿಂದ ನಷ್ಟವಾಗುತ್ತದೆ. ಇದನ್ನು ಪೂರ್ಣ ಉಳಿಸಲು ಅಸಾಧ್ಯ. ಪ್ರಯತ್ನ ಪಟ್ಟರೆ ಗರಿಷ್ಟ…

Read more
ಸಮತೋಲನ ಗೊಬ್ಬರ ಕೊಟ್ಟ ಮರದ ಲಕ್ಷಣ

ಸಾರಜನಕ – ಸಸ್ಯ ಬೆಳವಣಿಗೆಯ ಟಾನಿಕ್.

ಬೆಳೆಗಳ ಪೋಷಣೆಗೆ ಪ್ರಮುಖ ಆಹಾರವಾಗಿ ಸಾರಜನಕ , ರಂಜಕ ಮತ್ತು ಪೊಟ್ಯಾಷ್ ಎಂಬ ಮೂರು ಪೋಷಕಗಳು ಬೇಕು. ಇದನ್ನು ರಾಸಾಯನಿಕ ಮೂಲದಲ್ಲೂ, ನೈಸರ್ಗಿಕ ಮೂಲದಲ್ಲೂ ಪಡೆಯಬಹುದು. ಸಾರಜನಕ ಯಾವುದೇ ಮೂಲದ್ದು ಇರಲಿ, ಅದನ್ನು ಸಸ್ಯಕ್ಕೆ ಬೇಕಾದಷ್ಟು ಬಳಕೆ ಮಾಡಿದರೆ ಅದು ಟಾನಿಕ್. ಇಲ್ಲವಾದರೆ ಇದು ಹಾನಿಕರ. ಸಸ್ಯ ಬೆಳವಣಿಗೆಗೆ ಸುಮಾರು 64 ಪೋಷಕಾಂಶಗಳು ಬೇಕಾಗುತ್ತವೆ. ಅದರಲ್ಲಿ ಬಹುಸಂಖ್ಯೆಯ ಪೋಷಕಗಳು ಮಣ್ಣಿನಲ್ಲಿ, ಗಾಳಿಯಲ್ಲಿ, ನೀರಿನಲ್ಲಿ ಇರುತ್ತವೆ. ಆಯ್ದ ಸುಮಾರು 16  ಪೋಷಕಾಂಶಗಳು  ಅಗತ್ಯವಾಗಿ ಬೇಕಾಗುತ್ತವೆ. ಅದರಲ್ಲಿ ಅಗ್ರ ಫಂಕ್ತಿಯದ್ದು…

Read more
ಎರಡನೇ ವರ್ಷದ ಅಡಿಕೆ ಸಸಿಗಳು

2 ವರ್ಷದ ಅಡಿಕೆ ಸಸಿಗಳಿಗೆ ಗೊಬ್ಬರದ ಪ್ರಮಾಣ.

ಮೊದಲ ವರ್ಷ ಅಡಿಕೆ ಸಸಿ ನೆಡುವಾಗ ಅಲ್ಪ ಸ್ವಲ್ಪವಾದರೂ ಕೊಟ್ಟಿಗೆ ಗೊಬ್ಬರ ಕೊಡುತ್ತೇವೆ. ಮಣ್ಣಿನಲ್ಲೂ ಸ್ವಲ್ಪ ಸಾರಾಂಶ ಇರುತ್ತದೆ. ಬೇರುಗಳೂ ಹೆಚ್ಚು ಬೆಳೆದಿರುವುದಿಲ್ಲ.  ಹಾಗಿರುವಾಗ NPK ಸಮನಾಗಿ ಇರುವ ಕಾಂಪ್ಲೆಕ್ಸ್ ಗೊಬ್ಬರ ಕೊಡುವುದು ಸಾಕಾಗುತ್ತದೆ. ಸಸಿ ಬೆಳೆದಂತೆ ಬೇರು ಹೆಚ್ಚು ಬೆಳೆದು, ಮಣ್ಣಿನಲ್ಲಿ ಸಾರಾಂಶಗಳು  ಕಡಿಮೆ ಆದಂತೆ ಗೊಬ್ಬರವನ್ನು ಹೆಚ್ಚು ಕೊಡಬೇಕಾಗುತ್ತದೆ. ಎರಡನೇ ವರ್ಷದ ತರುವಾಯ ಶಿಫಾರಸಿನಂತೆ NPK ಪ್ರಮಾಣವನ್ನು ಕೊಡುವುದರಿಂದಾ ಆರೋಗ್ಯಕರ ಬೆಳವಣಿಗೆ ಉಂಟಾಗುತ್ತದೆ. ಗೊಬ್ಬರವನ್ನು ಮಳೆಗಾಲ ಪೂರ್ವದಲ್ಲಿ ಕೊಡುವುದು ಅವಶ್ಯಕ. ಆ ನಂತರ ಮಳೆಗಾಲ…

Read more
error: Content is protected !!