ಸಾವಯವ ಗೊಬ್ಬರದಿಂದ ಇಳುವರಿಯ ಅಡಿಕೆ ಮರ

ಅಡಿಕೆ – ಈ ಸಾವಯವ ಗೊಬ್ಬರಗಳಿಂದ ಅಧಿಕ ಇಳುವರಿ ಸಾಧ್ಯ.

ಅಡಿಕೆ ಇರಲಿ ಅಥವಾ ಇನ್ಯಾವುದೇ ಬೆಳೆಯಿರಲಿ, ರಸ  ಗೊಬ್ಬರಗಳ ಬದಲು ನೈಸರ್ಗಿಕ ಸಸ್ಯ ಜನ್ಯ ವಸ್ತುಗಳನ್ನೇ ಬಳಸಿಯೂ  ಉತ್ತಮ ಇಳುವರಿ ಪಡೆಯಬಹುದು. ಸಾಮಾನ್ಯ ಇಳುವರಿಗೆ ನಾವು ಸಾಂಪ್ರದಾಯಿಕವಾಗಿ ಬಳಸುತ್ತಾ ಬಂದಿರುವ ಕೊಟ್ಟಿಗೆ ಗೊಬ್ಬರ, ಕುರಿ ಆಡು ಗೊಬ್ಬರಗಳು ಸಾಕು. ಅಧಿಕ ಇಳುವರಿ ಬೇಕಾದರೆ ಸಸ್ಯ ಜನ್ಯ ಗೊಬ್ಬರ , ಪ್ರಾಣಿಜನ್ಯ ಸಾವಯವ  ವಸ್ತುಗಳನ್ನು ಬಳಸಬೇಕಾಗುತ್ತದೆ. ಉತ್ಪಾದನಾ ವೆಚ್ಚ ಮಾತ್ರ ಸ್ವಲ್ಪ ಹೆಚ್ಚಾಗಬಹುದು. ರಸ ಗೊಬ್ಬರಗಳು ಒಮ್ಮೆಗೆ  ಉತ್ತಮ ಫಲಿತಾಂಶ ಕೊಡಬಹುದು. ಆದರೆ ಅದು ಧೀರ್ಘ ಕಾಲದ ತನಕ…

Read more
ಪೌಷ್ಟಿಕ ಸೊಪ್ಪು ಕೊಡಿ

ಕುರಿ – ಮೇಕೆ ಗೊಬ್ಬರ ಯಾಕೆ ಉತ್ತಮ?

ಹೆಚ್ಚಿನ ರೈತರು ಸಾವಯವ ಗೊಬ್ಬರವಾಗಿ ಬಳಸುವ  ಕುರಿ, ಮೇಕೆ ಹಿಕ್ಕೆಯಲ್ಲಿ ಏನು ಇದೆ ಎಂಬುದರ ಪೂರ್ಣ ಮಾಹಿತಿ ಇಲ್ಲಿದೆ. ಕುರಿ, ಮೇಕೆಗಳ ಹಿಕ್ಕೆ ಒಂದು ಉತ್ತಮ ಬೆಳೆ ಪೋಷಕ ಗೊಬ್ಬರ ಮಾತ್ರವಲ್ಲ ,ಮಣ್ಣಿನ ತರಗತಿಯನ್ನು  ಉತ್ತಮ ಪಡಿಸುವ ಸಾವಯವ ವಸ್ತು ಎಂದರೆ ಅತಿಶಯೋಕ್ತಿಯಲ್ಲ. ಸಾವಯವ ಗೊಬ್ಬರ ಎಂದರೆ ಅದು ದೊಡ್ದ ಪ್ರಮಾಣದ್ದಾಗಿರಬೇಕು. ಹೆಚ್ಚು ಸಮಯ ಮಣ್ಣಿನಲ್ಲಿ ಉಳಿದು, ಸೂಕ್ಷ್ಮಾಣು ಜೀವಿಗಳಿಗೆ ಆಹಾರವಾಗಿ ನಿಧಾನವಾಗಿ ಲಭ್ಯವಾಗುತ್ತಾ ಇರಬೇಕು. ಇಂತಹ ಗೊಬ್ಬರಗಳಲ್ಲಿ ಕೊಟ್ಟಿಗೆ ಗೊಬ್ಬರ, ಸೊಪ್ಪು ಸದೆಗಳನ್ನು ಒಟ್ಟು ಸೇರಿಸಿ…

Read more
poultry farm

ಕೋಳಿ ಗೊಬ್ಬರದಲ್ಲಿ ಏನಿದೆ? ಪ್ರಯೋಜನ ಏನು?.

ರೈತರು ತಮ್ಮ ಬೆಳೆ ಪೋಷಣೆಗಾಗಿ ಬಳಕೆ ಮಾಡುವ ಕೋಳಿ ಹಿಕ್ಕೆಯ ಗೊಬ್ಬರದಲ್ಲಿ ಏನಿದೆ, ಇದರ ಫಲಿತಾಂಶ ಏನು ಎಂಬುದರ ಪೂರ್ಣ ಪರಿಚಯ ಇಲ್ಲಿದೆ. ಕೋಳಿ ಗೊಬ್ಬರದ ಬಳಕೆಗೆ ಬಹಳ ಹಿಂದಿನ ಇತಿಹಾಸ ಇದೆ.ಇತ್ತೀಚಿನ 20-30 ವರ್ಷಗಳಿಂದೀಚೆಗೆ ಕೋಳಿ ಸಾಕಾಣಿಕೆ ಭಾರೀ ವಾಣಿಜ್ಯಿಕವಾದ ನಂತರ ಕೋಳಿ ಸಾಕಾಣಿಕಾ ಶೆಡ್ ಗಳಿಂದ ಗೊಬ್ಬರ ತಂದು ಬೆಳೆಗಳಿಗೆ ಬಳಸುವಿಕೆ ಪ್ರಾರಂಭವಾಯಿತು. ಅದಕ್ಕೂ ಹಿಂದೆ ಸಾಮಾನ್ಯವಾಗಿ ಪ್ರತೀ ಮನೆಗಳಲ್ಲೂ ಅಲ್ಪ ಸ್ವಲ್ಪ ಕೋಳಿಗಳನ್ನು ಸಾಕುತ್ತಿದ್ದರು. ಅವುಗಳ ಕಾಲಿನ ಬುಡಕ್ಕೆ ಮರ ಸುಟ್ಟ ಬೂದಿ…

Read more
ಉಪ್ಪು ಹಾಕುವ ಭಾಗ

ತೆಂಗಿನ ಮರಗಳಿಗೆ ಉಪ್ಪು ಹಾಕಿದರೆ ಏನು ಪ್ರಯೋಜನ.

ತೆಂಗಿನ ಮರದ ಬುಡಕ್ಕೆ ಉಪ್ಪು ಹಾಕುವ ಬಗ್ಗೆ ತಿಳಿದುಕೊಳ್ಳಲು ಕೂತೂಹಲವೇ? ಇಲ್ಲಿದೆ ಇದರ ಕುರಿತಾಗಿ ಸಂಪೂರ್ಣ ಮಾಹಿತಿ. ನಮ್ಮ ಹಿರಿಯರು ಅದರಲ್ಲೂ ಕರಾವಳಿ ಭಾಗದ ತೆಂಗು ಬೆಳೆಗಾರರು ತೆಂಗಿನ ಮರದ ಬುಡಕ್ಕೆ ವರ್ಷಕ್ಕೊಮ್ಮೆ 2 ಸೇರು ಉಪ್ಪು ಹಾಕುತ್ತಿದ್ದರು. ಇದಕ್ಕೆ ಇವರು ಕೊಡುತ್ತಿದ್ದ ಕಾರಣ ಉಪ್ಪು ಹಾಕಿದರೆ ಮಣ್ಣಿನಲ್ಲಿ ತೇವಾಂಶ ಉಳಿಯುತ್ತದೆ ಎಂದು. ಹಿಂದೆ ಈಗಿನಂತೆ ತೆಂಗಿಗೆ ನೀರು ಉಣಿಸುವ ಪದ್ದತಿ ಕಡಿಮೆ ಇತ್ತು. ಆಗ ಬೇಸಿಗೆಯಲ್ಲಿ ತೇವಾಂಶವನ್ನು ಇದು ಉಳಿಸಿ ತೆಂಗನ್ನು ರಕ್ಷಿಸುತ್ತದೆ ಎನ್ನುತ್ತಿದ್ದರು. ಇದಲ್ಲದೆ …

Read more
ಎಲೆ ಹಳದಿಯಾಗುವುದಕ್ಕೆ ಒಂದು ಕಾರಣ ಗಂಧಕದ ಕೊರತೆ.Yellowing of leaves is one of sulphur deficiency symptom

ಗಂಧಕ- ಬೆಳೆಗಳಿಗೆ ಅಗತ್ಯವಾಗಿ ಬೇಕಾಗುವ ಪೋಷಕಾಂಶ.

ಬಹಳ ರೈತರು ತಮ್ಮ ಅಡಿಕೆ ಮರದ ಗರಿಗಳು ಹಳದಿಯಾಗಿವೆ, ಮರದ ಸುಳಿಗಳು ಸಣ್ಣದಾಗುತ್ತಿವೆ. ತೆಂಗಿನ  ಮರದಲ್ಲಿ ಕಾಯಿ ಆಗುತ್ತಿಲ್ಲ. ರಸ ಹೀರುವ ಕೀಟಗಳ ಸಮಸ್ಯೆ ಎಂದೆಲ್ಲಾ  ಹೇಳುತ್ತಾರೆ. ಇದಕ್ಕೆ ಒಂದದು ಕಾರಣ ಗಂಧಕ ಎಂಬ ಅಗತ್ಯ ಪೋಷಕದ ಕೊರತೆ. ಬೆಳೆಗಳಲ್ಲಿ ಎಲೆಗಳು (Chlorosis)ಹಳದಿಯಾಗುವುದು, ಬೇರಿನ ಬೆಳವಣಿಗೆ ಕುಂಠಿತವಾಗುವುದು, ರೋಗ, ಕೀಟಗಳಿಗೆ ಬೇಗ ತುತ್ತಾಗುವುದು ಮುಂತಾದ ಕೆಲವು ಸಮಸ್ಯೆಗಳಿಗೆ  ಗಂಧಕದ ಕೊರತೆಯು ಒಂದು ಕಾರಣ. ಪ್ರತೀಯೊಂದು ಬೆಳೆಯೂ ಗಂಧಕವನ್ನು  ಅಪೇಕ್ಷಿಸುತ್ತದೆ. ರೈತರು ಸಲ್ಫೇಟ್ ರೂಪದ ಗೊಬ್ಬರವನ್ನು ಬೆಳೆಗಳಿಗೆ ಕೊಡುತ್ತಿದ್ದರೆ…

Read more

ಬೆಳೆಗಳಿಗೆ ಸುಣ್ಣ ಯಾಕೆ ಕೊಡಬೇಕು ಗೊತ್ತೇ?

ಬೆಳೆ ಬೆಳೆಸುವ ಮಣ್ಣಿಗೆ ಸುಣ್ಣ ಹಾಕುವುದು ಹಸಿರು ಕ್ರಾಂತಿಯ ತರುವಾಯ ಬಂದ ಪದ್ಧತಿ. ಮಣ್ಣಿಗೆ ಸುಣ್ಣ ಹಾಕಿದಾಗ ಮಣ್ಣಿನ ಸ್ಥಿತಿಗತಿ ಬದಲಾವಣೆಯಾಗುತ್ತದೆ. ಈ ಬದಲಾವಣೆ ಅಲ್ಲಿ ಬೆಳೆಯುವ ಸಸ್ಯಗಳಿಗೆ ಮಣ್ಣಿನ ಮೂಲಕ  ಪೋಷಕಾಂಶಗಳನ್ನು ಸಮರ್ಪಕವಾಗಿ ಬಳಕೆ ಮಾಡುವುದಕ್ಕೆ ಸಹಕರಿಸುತ್ತದೆ. ಸಸ್ಯಗಳಿಗೆ ಬರೇ ಸಾರಜಕನ, ರಂಜಕ ಮತ್ತು ಪೊಟ್ಯಾಶ್ ಎಂಬ ಮೂರು ಮುಖ್ಯ ಪೋಷಕಗಳು ಬೇಕು. ಅದರ ಜೊತೆಗೆ ದ್ವಿತೀಯ ಮಧ್ಯಮ ಪೋಷಕಗಳಾದ ಕ್ಯಾಲ್ಸಿಯಂ ಗಂಧಕ, ಮತ್ತು ಮೆಗ್ನೀಶಿಯಂ ಸಹ ಅಗತ್ಯವಾಗಿ ಬೇಕಾಗುತ್ತದೆ. ಇವು ಮುಖ್ಯ ಪೋಷಕಗಳಷ್ಟು ಪ್ರಮಾಣದಲ್ಲಿ…

Read more
ನೆಲಕ್ಕೆ ಸುಣ್ಣ ಎರಚುವುದು

ಹೊಲಕ್ಕೆ ಸುಣ್ಣ ಹಾಕುವ ಕ್ರಮ ಮತ್ತು ಅದರ ಫಲ.

ಸಸ್ಯ ಬೆಳವಣಿಗೆಗೆ ಸಹಾಯಕವಾಗುವ ದ್ವಿತೀಯ ಪೋಷಕಗಳಲ್ಲಿ  ಸುಣ್ಣ ಒಂದನ್ನೇ ಕೊಟ್ಟರೆ ಸಾಲದು. ವರ್ಷಂಪ್ರತೀ ನಷ್ಟವಾಗುವ ಸುಣ್ಣ ಮತ್ತು ಮೆಗ್ನೀಶಿಯಂ ಎರಡನ್ನೂ ಕೊಡಬೇಕು. ಆಗಲೇ ಅದರ ಪೂರ್ಣ ಪ್ರಯೋಜನ. ಈ ಎರಡೂ ಪೋಷಕಗಳೂ ಮಳೆಗೆ ಕೊಚ್ಚಿಕೊಂಡು ಮತ್ತು ಬೆಳೆ ಬೆಳೆದಾಗ ಪಡೆಯುವ ಫಸಲು ಮತ್ತು ಉದುರಿದ ಎಲೆಗಳಿಂದ  ನಷ್ಟವಾಗುವ ಪೋಷಕಗಳು. ಸುಣ್ಣವನ್ನು ಮಣ್ಣಿಗೆ ಕೊಡುವುದರಿಂದ ಭೌತಿಕ, ರಾಸಾಯನಿಕ ಮತ್ತು ಜೈವಿಕ ಮೂರೂ   ಪರಿಣಾಮಗಳೂ ಉನ್ನತ ಮಟ್ಟಕ್ಕೆ ಏರಿ ಮಣ್ಣಿನ ಆರೋಗ್ಯ ಸುಸ್ಥಿತಿಯಲ್ಲಿರುತ್ತದೆ ಮಣ್ಣು ಗುಳಿಗೆಯಾಕಾರಕ್ಕೆ ಪರಿವರ್ತನೆಯಾಗುತ್ತದೆ. ಪೋಷಕಗಳು ಲಭ್ಯ…

Read more

ನಿಮ್ಮ ಹೊಲದಲ್ಲಿ ರಂಜಕ ಎಷ್ಟು ಲಭ್ಯ ಸ್ಥಿತಿಯಲ್ಲಿದೆ- ತಿಳಿಯುವುದು ಹೀಗೆ.

ಎಲ್ಲದಕ್ಕೂ ತಜ್ಞರನ್ನು ಸಂಪರ್ಕಿಸಿ  ಮಾರ್ಗದರ್ಶನ ಪಡೆಯುವ ಬದಲು  ನಾವೇ ಒಂದಷ್ಟು ತಜ್ಞತೆಯನ್ನು ಸಂಪಾದಿಸುವುದು ಉತ್ತಮ. ಈ ನಿಟ್ಟಿನಲ್ಲಿ ನಾವು ಬೆಳೆಗಳಿಗೆ ಬಳಕೆ ಮಾಡುವ ರಂಜಕ ಗೊಬ್ಬರ  ಸಸ್ಯಗಳಿಗೆ ದೊರೆಯುತ್ತದೆಯೇ ಎಂದು ತಿಳಿಯುವ ಸರಳ ವಿಧಾನಗಳು ಇವೆ. ನಿಮ್ಮ ಹೊಲದ ದ್ವಿದಳ ಸಸ್ಯಗಳು, ಅಧಿಕ ಪ್ರಮಾಣದಲ್ಲಿ ಹುಲ್ಲು ಬೆಳೆಯುತ್ತದೆಯೋ ಅಲ್ಲಿ ರಂಜಕ ಅಂಶ ಇದೆ ಎಂದರ್ಥ. ಇದು ನಿಖರವಾದ ಲಕ್ಷಣ ಅಲ್ಲದಿದ್ದರೂ ಬಹುತೇಕ ಇದು ರಂಜಕದ ಲಭ್ಯತೆಯನ್ನು ಸೂಚಿಸುತ್ತದೆ. ರಂಜಕಾಂಶ ಎಂಬುದು ಫಲಾಪೇಕ್ಷೆ ಇದ್ದು ಬೆಳೆ ಬೆಳೆಯುವಾಗ ನಿರೀಕ್ಷಿತ…

Read more
ಸಾಗುವಾನು ಮರದ ಬುಡದ ಮಣ್ನು -soil of teak tree base

ಸಾಗುವಾನಿ ಮರದ ಬುಡದ ಮಣ್ಣು ಬಂಗಾರ.

ನಿಮ್ಮಲ್ಲಿ ಸಾಗುವಾನಿ ಮರ ಇದೆಯೇ , ಅದರ ಬುಡದಲ್ಲಿ ಬಿದ್ದ ತರಗೆಲೆಯ ಅಡಿಯ ಮಣ್ಣನ್ನು ಒಮ್ಮೆ ಗಮನ ಇಟ್ಟು ನೋಡಿ. ಇದು ಫಲವತ್ತಾದ ರಸಸಾರ ತಟಸ್ಥ ಇರುವ ಮೆಕ್ಕಲು ಮಣ್ಣಾಗಿರುತ್ತದೆ. ಸಾಗುವಾನಿ ಮರದ ಎಲೆಗಳು ಮಣ್ಣನ್ನು ಫಲವತ್ತಾಗಿಸುತ್ತದೆ, ಹಾಗೆಯೇ ಮಣ್ಣಿನ pH  ಅನ್ನು ಸರಿಮಾಡಿಕೊಡುತ್ತದೆ. ಸಾಗುವಾನಿ ಮರದ ಬುಡದಲ್ಲಿ ಎಲ್ಲಾ ನಮೂನೆಯ ಸೂಕ್ಷ್ಮ ಜೀವಿಗಳು ಇರುತ್ತವೆ ಎಂಬುದಾಗಿ ಕೇರಳದ ಅರಣ್ಯ ಸಂಶೊಧಾನ ಸಂಸ್ಥೆಯ ವಿಜ್ಞಾನಿಗಳು ಹೇಳುತ್ತಾರೆ. ಇದರ ಎಲೆಯ ಗಾತ್ರ, ಅದರ ತೂಕ, ಅದು ಕರಗುವ ವೇಗ…

Read more

ಸಾರಜನಕ ಗೊಬ್ಬರ ನಮ್ಮ ಹೊಲದಲ್ಲೇ ಇದೆ ಗೊತ್ತೇ?

ಸಾರಜನಕ  ಗೊಬ್ಬರವಾಗಿ ರಾಸಾಯನಿಕ ರೂಪದ ಯೂರಿಯಾ, ಅಮೋನಿಯಂ ಸಲ್ಫೇಟ್ ಅಥವಾ ನೈಟ್ರೇಟ್ ಮುಂತಾದವುಗಳನ್ನೇ  ಬಳಸಬೇಕಾಗಿಲ್ಲ. ನಿಸರ್ಗ ಸಾರಜನಕ ಸತ್ವದ ಖಣಜ. ನಮ್ಮ ತುರ್ತು ಅವಶ್ಯಕತೆಗಾಗಿ ರಾಸಾಯನಿಕ ವಿಧಾನದ ಮೂಲಕ ಸಾರಜನಕ ಗೊಬ್ಬರವನ್ನು ಉತ್ಪಾದಿಸಿದ್ದು. ನಮ್ಮ ಸುತ್ತಮುತ್ತ ಇರುವ ಸಸ್ಯ ಮತ್ತು ಸಾವಯವ ವಸ್ತುಗಳಲ್ಲಿ  ನೈಸರ್ಗಿಕ ಸಾರಜನಕ ಸಾಕಷ್ಟು ಇದೆ. ಮಣ್ಣಿನಲ್ಲಿ ಸಾಕಷ್ಟು ಸಾರಜನಕದ ಅಂಶ ಇದೆಯಾದರೂ ನಾವು ಯಾಕೆ ಬೇರೆ ಮೂಲದಿಂದ ಸಾರಜನಕವನ್ನು ಬಳಸುತ್ತಿದ್ದೇವೆ ಎಂಬುದು ಎಲ್ಲರ ಭಾವನೆ. ಇದು ಸತ್ಯ. ಕಾರಣ ಇಷ್ಟೇ ಇವು ಬೇರೆ…

Read more
error: Content is protected !!