ಕರಿಮೆಣಸು ರೋಗ ಬಾರದಂತೆ ತಡೆಯಲು ಏನು ಮಾಡಬೇಕು?
ಮಳೆಗಾಲ ಬಂದಿದೆ. ಇನ್ನು ಅಡಿಕೆ ಕರಿಮೆಣಸು ಬೆಳೆಗಾರರಿಗೆ ಬೆಳೆ ಉಳಿಸಿಕೊಳ್ಳುವುದೇ ಚಿಂತೆ. ಕೆಲವರು ಒಂದು ಬಾರಿ ಔಷಧಿ ಸಿಂಪಡಿಸಿದ್ದಾರೆ. ಕೆಲವರು ಸಿಂಪರಣೆ ಮಾಡಿಯೇ ಇಲ್ಲ. ಇತ್ತಂಡಕ್ಕೂ ಒಂದೇ ಚಿಂತೆ ರೋಗ ಬರಬಹುದೇ ಎಂದು. ಅಡಿಕೆ ಬೆಳೆಗೆ ರೋಗ ಹೇಗೆ ಬರುತ್ತದೆಯೋ ಹಾಗೆಯೇ ಅಡಿಕೆಯ ಮಿಶ್ರ ಬೆಳೆಯಾದ ಕರಿಮೆಣಸಿಗೆ ಮಳೆಗಾಲದಲ್ಲಿ ರೋಗ ಸಾಧ್ಯತೆ ಹೆಚ್ಚು. ರೋಗ ತಡೆಯುವ ವಿಧಾನಗಳನ್ನು ಚಾಚೂ ತಪ್ಪದೆ ಅನುಸರಿಸಿದರೆ ರೋಗ ಸಾಧ್ಯತೆಯನ್ನು ಕಡಿಮೆ ಮಾಡಬಹುದು. ಮಳೆಗಾಲ ಪ್ರಾರಂಭದಲ್ಲಿ ಕರಿಮೆಣಸಿಗೆ ಬರುವ ಪ್ರಮುಖ ರೋಗ ಎಂದರೆ…