ಕಡಿಮೆ ನೀರಿನಲ್ಲಿ ಅಧಿಕ ಫಸಲು

ಅಡಿಕೆ ಮರಕ್ಕೆ ನೀರು ಎಷ್ಟು ಬೇಕು? ಹೆಚ್ಚು ಕೊಟ್ಟರೆ ಏನಾಗುತ್ತದೆ?

ಅಡಿಕೆ ಮರಕ್ಕೆ ನೀರು ಹೆಚ್ಚು ಬೇಕು ಎನ್ನುತ್ತಾರೆ ಅದು ತಪ್ಪು. ಹೆಚ್ಚು ನೀರು ಕೊಟ್ಟರೆ ಬೆಳೆ ಕಡಿಮೆ. ಯಾವುದೇ ಸಸ್ಯವಿರಲಿ ಅದಕ್ಕೆ ನೀರು ಬೇಡ. ಮಣ್ಣು ಹಸಿಯಾಗಿದ್ದರೆ ಸಾಕು. ಆಗ ಮರದ ಆರೋಗ್ಯ ಹಾಕಿದ ಗೊಬ್ಬರ ಎಲ್ಲವೂ ಸಮರ್ಪಕವಾಗಿ ಲಭ್ಯವಾಗುತ್ತದೆ. ಅಡಿಕೆ ಬೆಳೆಗಾರರು ಹೆಚ್ಚಾಗಿ ತೋಟಕ್ಕೆ  ಸ್ಪ್ರಿಂಕ್ಲರ್ ನೀರಾವರಿ ಮಾಡುತ್ತಾರೆ. ಮಳೆಗಾಲದ ತರಹವೇ ಅಥವಾ ಅದಕ್ಕಿಂತ ಹೆಚ್ಚಾಗಿ ನೆಲವನ್ನು ತೇವವಾಗಿ ಇಡುತ್ತಾರೆ. ಇದರಿಂದಾಗಿ ರೋಗ ರುಜಿನಗಳು ಹೆಚ್ಚಾಗುತ್ತದೆ. ಸುಳಿ ಕೊಳೆ, ಕಾಯಿ ಕೊಳೆ, ಮಿಡಿ ಉದುರುವುದೂ ಆಗುತ್ತದೆ….

Read more
10:26:26 ಗೊಬ್ಬರ

10:26:26 ಗೊಬ್ಬರ ಬಳಸುವವರು ಅಗತ್ಯವಾಗಿ ಗಮನಿಸಿ.

ಬಹಳ ಜನ  ರೈತರು ತಮ್ಮ ಬೆಳೆಗಳಿಗೆ 10:26:26 ರಸಗೊಬ್ಬರ ಬಳಸುತ್ತಿದ್ದು, ಅದನ್ನೊಂದೇ  ಬಳಕೆ ಮಾಡಿದರೆ ಏನಾಗುತ್ತದೆ ಎಂಬುದರ  ವಿಸ್ತೃತ ಮಾಹಿತಿ ಇಲ್ಲಿದೆ. ಅಡಿಕೆ ಬೆಳೆಗಾರರ ನೆಚ್ಚಿನ ಪೋಷಕಾಂಶಗಳ ಆಯ್ಕೆಯಲ್ಲಿ 10:26:26 ಎಂಬ ರಸಗೊಬ್ಬರವೂ ಒಂದು. ಸೊಸೈಟಿಗಳಲ್ಲಿ, ಗೊಬ್ಬರ ಮಾರಾಟದ ಅಂಗಡಿಯಲ್ಲಿ ಅತ್ಯಧಿಕ ಪ್ರಮಾಣದಲ್ಲಿ ದಾಸ್ತಾನು ಇರುವ ಗೊಬ್ಬರವೂ ಇದೇ. ಅಡಿಕೆ ಬೆಳೆಗಾರರು ಇರುವ ಪ್ರದೇಶಗಳಲ್ಲಿ ಇದರಷ್ಟು ಅಧಿಕ ಪ್ರಮಾಣದಲ್ಲಿ ಮಾರಾಟವಾಗುವ ರಸ ಗೊಬ್ಬರ ಬೇರೊಂದಿರಲಿಕ್ಕಿಲ್ಲ. ಈ ಗೊಬ್ಬರದ ಬಳಕೆಯಿಂದ ತೊಂದರೆ ಇಲ್ಲ. ಆದರೆ ಇದನ್ನೊಂದೇ ಬಳಕೆ ಮಾಡಿದರೆ …

Read more

ಸಾವಯವ ತ್ಯಾಜ್ಯ ಹುಡಿ ಮಾಡಬೇಕೇ? ಯಂತ್ರ ಬಾಡಿಗೆಗೆ ಇದೆ.

ಸಾವಯವ ತ್ಯಾಜ್ಯಗಳಾದ ತೆಂಗಿನ ಗರಿ, ಅಡಿಕೆ ಗರಿ ,ಸೊಪ್ಪು ಸದೆ ಇತ್ಯಾದಿಗಳನ್ನು  ಹುಡಿ ಮಾಡಿ ಬಳಕೆ ಮಾಡಿದರೆ ಅದು ವೇಗವಾಗಿ ಕರಗಿ ಗೊಬ್ಬರವಾಗುತ್ತದೆ. ಹೀಗೆ ಹುಡಿ ಮಾಡಲು ಯಂತ್ರಗಳು ಇವೆ. ಈ ಯಂತ್ರಗಳು ಭಾರೀಪ್ರಮಾಣದ ತ್ಯಾಜ್ಯಗಳನ್ನು  ಕೆಲವೇ ಗಂಟೆಗಳಲ್ಲಿ ಹುಡಿ ಮಾಡಿಕೊಡುತ್ತದೆ. ಪ್ರಸ್ತುತ ರೈತಾಪಿ ವರ್ಗದ ಜನರಿಗೆ ಸರ್ಕಾರವು ರಸಗೊಬ್ಬರದ ದರ ಏರಿಕೆ ಆಗಿರುವಂತಹ ಹಿನ್ನೆಲೆಯಲ್ಲಿ ದೇಶದ ಕೃಷಿ ಸಂಶೋಧನಾ ಅಧ್ಯಯನ ನಡೆಸಿ ಸಾವಯವ ಕೃಷಿಯನ್ನು ಅವಲಂಬಿಸಿದರೆ ಹೆಚ್ಚಿನ ಆದಾಯವನ್ನು ಗಳಿಸಬಹುದೆಂದು ಎಲ್ಲ ಪ್ರಗತಿಪರ ರೈತರು ಸಾವಯವ ಕೃಷಿಯನ್ನು…

Read more
ಫಲವತ್ತಾದ ಮಣ್ಣು

ಫಲವತ್ತತೆ ಕಳೆದುಕೊಳ್ಳುತ್ತಿರುವ ಕೃಷಿ ಭೂಮಿ- ಭವಿಷ್ಯದ ಆತಂಕ.

ನಮ್ಮ ದೇಶದ 50% ಕ್ಕೂ ಹೆಚ್ಚಿನ ಕೃಷಿ ಭೂಮಿ ಸಾರ ಕಳೆದುಕೊಂಡು  ಬರಡಾಗುತ್ತಿರುವುದು ಭಾರತ ಸರಕಾರದ ಅಧ್ಯಯನಗಳಿಂದ ತಿಳಿದು ಬಂದಿದೆ. ಅಧ್ಯಯನದ ವರದಿ ಇರಲಿ. ನಮಗೆಲ್ಲಾ ಈ ವಿಚಾರ ಗಮನಕ್ಕೆ ಬಂದಿರುವಂತದ್ದೇ. ನಮ್ಮ ಕೃಷಿ ಭೂಮಿಯಲ್ಲಿ ಬೆಳೆ ಏನೋ ಹಿಂದಿಗಿಂತ ಹೆಚ್ಚು ಬರಬಹುದು. ಆದರೆ ಖರ್ಚು ಮಾತ್ರ ದಿನದಿಂದ ದಿನಕ್ಕೆ  ಹೆಚ್ಚಾಗುತ್ತಿದೆ. ಇತರ  ಬೆಳೆ ನಿರ್ವಹಣೆ ಸಮಸ್ಯೆಗಳೂ ಹೆಚ್ಚಾಗುತ್ತಿದೆ. ಇದಕ್ಕೆ ಕಾರಣ ಬೇರೆ ಏನೂ ಅಲ್ಲ. ಮಣ್ಣು ತನ್ನ ಸಾರವನ್ನು ಸ್ವಲ್ಪ ಸ್ವಲ್ಪವೇ ಕಳೆದುಕೊಳ್ಳುತ್ತಿದೆ. ಇದು ಗಂಭೀರ…

Read more
ಬೆಳೆ ವಿಮೆಯ ನಿರೀಕ್ಷೆಯಲ್ಲಿ ರೈತ

ಬೆಳೆ ವಿಮೆ – ಅಗತ್ಯವಾಗಿ ಮಾಡಿಸಿ.

ಭಾರತ ಸರಕಾರದ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯನ್ನು (PMPBY or WBCIS) ರೈತರು ತಪ್ಪದೇ ಮಾಡಿಸಿಕೊಳ್ಳಿ ಮತ್ತು ಪ್ರಯೋಜನವನ್ನು ಪಡೆಯಿರಿ. ಕೃಷಿ ಮತ್ತು ಹವಾಮಾನ ಪರಸ್ಪರ ಹೊಂದಾಣಿಕೆಯಲ್ಲಿ ಮುಂದುವರಿದರೆ ಎಲ್ಲವೂ ಅನುಕೂಲಕರವಾಗಿಯೇ ಇರುತ್ತದೆ. ಆದರೆ ಯಾವ ರೈತನ ಕೈಯಲ್ಲೂ, ಯಾವ ಸರಕಾರದ ಕೈಯಲ್ಲೂ ಅದನ್ನು ಹೊಂದಾಣಿಕೆಗೆ ತರಲು ಸಾಧ್ಯವಾಗುತ್ತಿಲ್ಲ. ಪ್ರಕೃತಿ ಮನಸ್ಸು ಮಾಡಿದರೆ ಎಲ್ಲವೂ ಸರಿ ಇರುತ್ತದೆ.ಇದು ನಮಗೆ ಅರಿವಿಗೆ ಬರುವುದಿಲ್ಲ. ಯಾವಾಗಲೂ ಏನೂ ಆಗಬಹುದು. ಆದ ಕಾರಣ ಎಷ್ಟೋ ನಷ್ಟ ಆಗುತ್ತದೆ.ಲಾಭವೂ ಆಗುತ್ತದೆ. ಹಾಗೆ…

Read more

ಕಡ್ಡಾಯವಾಗಿ ತೆರಿಗೆ ಪಾವತಿಸುವ ಏಕೈಕ ನಾಗರೀಕರು -ರೈತರು

ಎಲ್ಲರ ದೃಷಿಯಲ್ಲಿ ರೈತರು  ಸರಕಾರದ ಸವಲತ್ತು ಪಡೆಯುವವರು ಎಂದು ಗುರುತಿಸಲ್ಪಟ್ಟವರು. ಆದರೆ ವಾಸ್ತವ ಇವರು ಟ್ಯಾಕ್ಸ್ ಕಟ್ಟುವವರು. ಸಮಾಜ ರೈತ ಎಂದರೆ ಸರಕಾರದ ಕಡಿಮೆ ಬಡ್ಡಿ ದರದ ಸಾಲಪಡೆಯುವವ. ಕೇಂದ್ರ ಸರಕಾರದ ಬಳುವಳಿಯಾದ ಕಿಸಾನ್ ಸಮ್ಮಾನ್ ಯೋಜನೆಯ ಹಣ ಪಡೆಯುವವ. ಸಬ್ಸಿಡಿ, ಸವಲತ್ತು  ಪಡೆಯುವ. ಎಂದು ತಿಳಿದಿದ್ದಾರೆ. ವಾಸ್ತವವಾಗಿ ಸರಕಾರ ಇವರಿಗೆ ಕೊಡುವುದೇನಿದ್ದರೂ ಕಿತ್ತುಕೊಂಡದ್ದರ 10%  ಮಾತ್ರ.  ರೈತ ಎಂದರೆ ಸರಕಾರವನ್ನು ಸಾಕುವವ. ದೇಶದ ಆರ್ಥಿಕತೆಗೆ ರೈತನ ಕೊಡುಗೆ ಸಣ್ಣದಲ್ಲ. ಇದನ್ನು ಎಲ್ಲರಿಗೂ ತಿಳಿಸಿ. ರೈತನನ್ನು ಮೊದಲ…

Read more
error: Content is protected !!