ಕೃಷಿ ಮಾಡುವಾಗ ಲಾಭದ ಬೆಳೆಗಳ ಜೊತೆಗೆ ಕೃಷಿ ಆಧಾರಿತ ಉಪಕಸುಬುಗಳಾದ ಹೈನುಗಾರಿಕೆ, ಕೊಳಿ ಸಾಕಾಣಿಕೆ, ಆಡು ಮತ್ತು ಕುರಿ ಸಾಕಾಣಿಕೆ ಮುಂತಾದವುಗಳನ್ನು ಮಾಡಿಕೊಂಡರೆ ಅದು ಸುಸ್ಥಿರ.
- ರೈತರು ತಮ್ಮಲ್ಲಿರುವ ಸಂಪನ್ಮೂಲಗಳನ್ನು ಆಧರಿಸಿ ಮಣ್ಣಿಗೆ ಹವಾಮಾನಕ್ಕೆ ಹೊಂದಿಕೊಳುವಂತೆ ಬೆಳೆ ಮತ್ತು ಕೃಷಿ ಪೂರಕ ಕಸುಬುಗಳನ್ನು ಅಳವಡಿಸಿಕೊಳ್ಳಬೇಕು.
- ಇಂಥ ಇಂತಹ ಕೃಷಿ ಪದ್ದತಿಗೆ ಮಿಶ್ರಕ್ರೃಷಿ ಅಥವಾ ಸಮಗ್ರಕ್ರೃಷಿ ಪದ್ದತಿ ಎಂದು ಕರೆಯುತ್ತಾರೆ.
ಬೇಕಾಗುವ ಸಂಪನ್ಮೂಲಗಳು:
- ಈ ಕೃಷಿ ಪದ್ದತಿ ಅಳವಡಿಸಲು ರೈತನಿಗೆ ಬೇಕಾಗುವುದು ಲಭ್ಯವಿರುವ ನೀರು, ಜಮೀನು, ಕುಟುಂಬದ ಆಳುಗಳು.
- ಜಮೀನಿನಲ್ಲಿ ಉತ್ಪಾದಿಸಿದ ವಸ್ತುಗಳ ಸಮರ್ಪಕ ಬಳಕೆ ಆಗುತ್ತದೆ.
- ಈ ಪದ್ದತಿಯಲ್ಲಿ ಬೆಳೆ ಮತ್ತು ಉಪಕಸುಬುಗಳ ಮಧ್ಯ ಪೂರಕವಾದ ಸಂಬಂಧವಿರುವುದರಿಂದ ಅಧಿಕ ನಿವ್ವಳ ಲಾಭಗಳಿಸಬಹುದು.
- ಹೆಚ್ಚಿನ ಉದ್ಯೋಗ ಸೃಷ್ಟಿಯಾಗಿ ನಿರುದ್ಯೊಗ ಸಮಸ್ಯೆದೂರವಾಗುತ್ತದೆ.
- ದುಡಿಯುವ ಕೈಗಳಿಗೆ ಕೆಲಸ ಸಿಗುತ್ತದೆ.
- ಮಣಿನ ಆರೊಗ್ಯ ಸುಧಾರಣೆಯಾಗುತ್ತದೆ,ಜೊತೆಗೆ ಬೇಸಾಯದ ವೆಚ್ಚ ಕಡಿಮೆಯಾಗುತ್ತದೆ.
- ವರ್ಷವಿಡೀ ಆದಾಯದ ಮೂಲ ಇರುತ್ತದೆ.
ಏನೆಲ್ಲಾ ಮಾಡಬಹುದು:
![ಸಮಗ್ರ ಕೃಷಿ ಪದ್ದತಿ ಕೃಷಿ ಜೊತೆಗೆ ಜೇನು ಸಾಕಾಣಿಕೆ ಲಾಭದಾಯಕ- Agriculture and bee keeping](https://kannada.krushiabhivruddi.com/wp-content/uploads/2021/04/Picture-534-FILEminimizer.jpg)
- ರೈತ ತನ್ನ ಬೆಳೆಗಳ ಜೊತೆಗೆ ಎರೆಹುಳು ಗೊಬ್ಬರ ತಯಾರಿಸುವುದು, ಹ್ಯೆನುಗಾರಿಕೆ ಮತ್ತು ಜ್ಯೆವಿಕ ಅನಿಲ ಘಟಕ ಮುಂತಾದವುಗಳನ್ನು ಅಳವಡಿಸಿಕಂಡಾಗ, ಹ್ಯೆನುಗಾರಿಕೆಯಿಂದ ದನಗಳ ಸಗಣಿ,ಮೂತ್ರಇತ್ಯಾದಿ ಕಸ ಕಡ್ಡಿ ಬೆಳೆ ಅವಶೇಷಗಳನ್ನು ಎರೆಹುಳು ತಯಾರಿಕೆಗೆ ಉಪಯೋಗಿಸಬಹುದು.
- ಎರೆಹುಳು ಗೊಬ್ಬರವನ್ನು ಮರಳಿ ಮಣ್ಣಿಗೆ ಹಾಕಿ ಬೆಳೆ ಉತ್ಪಾದಕತೆ ಹೆಚ್ಚಿಸಿ ರಾಸಾಯನಿಕ ಗೊಬ್ಬರಗಳ ಬಳಕೆಯನ್ನು ಕಡಿಮೆ ಮಾಡಬಹುದು.
- ದನಗಳ ಸಗಣಿಯನ್ನು ಗೋಬರಗ್ಯಾಸ ಘಟಕಕ್ಕೆ ಉಪಯೋಗಿಸಿ ಅದರಿಂದ ಬಂದ ಅನಿಲವನ್ನು ಅಡುಗೆ ಮನೆಗೆ ಮತ್ತು ದೀಪ ಉರಿಸಲು ಉಪಯೋಗಿಸಬಹುದು
- ಅನಿಲ ಘಟಕದಿಂದ ಹೊರಬಂದ ಸಗಣಿ ಅಂಶವನ್ನು ಗೊಬ್ಬರವಾಗಿ ಬೆಳೆ ಬೆಳೆಯಲು ಮತ್ತು ಕಾಂಪೋಸ್ಟ ತಯಾರಿಕೆಗೆ ಬಳಸಬಹುದು.
ಕೃಷಿ ಪೂರಕ ಕಸುಬುಗಳು:
![ಸಮಗ್ರ ಕೃಷಿ ಪದ್ದತಿ ಕೃಷಿ ಜೊತೆಗೆ ಕೋಳಿ ಸಾಕಾಣಿಕೆ ಲಾಭದಾಯಕ- Agriculture and poultry farming](https://kannada.krushiabhivruddi.com/wp-content/uploads/2021/04/DSCN0910-FILEminimizer.jpg)
- ಕೋಳಿ ಸಾಕಾಣಿಕೆ. ಅಣಬೆ ಬೇಸಾಯ,ಹ್ಯೆನುಗಾರಿಕೆ, ಆಡು ಕುರಿ ಸಾಕಣೆ ,ರೇಶ್ಮೆ ವ್ಯವಸಾಯ,ಮೀನುಗಾರಿಕೆ, ಜೇನುಸಾಕಣೆ ,ಅಜೋಲ್ಲ,ಪಶು ಮೇವು ತಯಾರಿಕೆ ಮುಂತಾದವುಗಳ ಬಗ್ಗೆ ತರಬೇತಿ ಪಡೆದು ಅದನ್ನು ಅಳವಡಿಸಿಕೊಂಡರೆ ಬಹಳ ಲಾಭವಿದೆ.
- ನಾವು ತರಬೇತಿ ಪದೆದು ಬೇರೆಯವರಿಗೂ ತರಬೇತಿ ಕೊಡಬಹುದು.
- ಸಣ್ಣ ಮತ್ತು ಅತಿ ಸಣ್ಣ ಹಿಡುವಳಿದಾರರು ಕಡಿಮೆ ಜಮೀನಿನಲ್ಲಿ ಹೊಂದಿಕೊಳ್ಳುವಂತೆ ಉಪಕಸುಬುಗಳನ್ನು ಆಯ್ಕೆ ಮಾಡಿಕೊಳ್ಳಬೇಕು.
- ಇದಲ್ಲದೆ ಇಂಥ ಹತ್ತಾರು ಕಸುಬುಗಳನ್ನು ಆಯ್ಕೆ ಮಾಡಬಹುದು.
- ಲಾಭ ಬರುವ ಉಪಕಸುಬುಗಳನ್ನು ದೊಡ್ಡ ಪ್ರಮಾಣದಲ್ಲಿ ಹಮ್ಮಿಕೊಳ್ಳಬಹುದು.
- ಬೆಳೆ ಪದ್ದತಿಯ ಉತ್ಪನ್ನಗಳು ಉಪಕಸುಬುಗಳಲ್ಲಿ ಮತ್ತು ಉಪಕಸುಬುಗಳ ಉತ್ಪನ್ನಗಳು ಬೆಳೆ ಉತ್ಪಾದನೆಯಲ್ಲಿ ಉಪಯೋಗಿಸಲ್ಪಡುವುದರಿಂದ ತಾಂತ್ರಿಕತೆಯಲ್ಲಿ ಪರಿಸ್ಥಿತಿಗೆ ತಕ್ಕಂತೆ ಹೊದಾಣಿಕೆ ಅಗತ್ಯ.
ಹ್ಯೆನುಗಾರಿಕೆ ಮತ್ತು ಕೋಳಿಸಾಗಾಣಿಕೆಯಿಂದ ಬರುವ ಸಾವಯವಗೊಬ್ಬರವನ್ನು ಬೆಳೆ ಉತ್ಪಾದನೆಯಲ್ಲಿ ಬಳಸಿ ರಸ ಗೊಬ್ಬರಗಳ ಪ್ರಮಾಣವನ್ನು ನಿರ್ಧಿಷ್ಟ ಪ್ರಮಾಣದಲ್ಲಿ ಕಡಿಮೆ ಮಾಡಬಹುದು.
![ಆಡು ಸಾಕಾಣಿಕೆಯಿಂದ ಕೃಷಿಗೂ ಗೊಬ್ಬರ ಲಾಭ.ಆದಾಯವೂ ಇದೆ. Agriculture and goat farming](https://kannada.krushiabhivruddi.com/wp-content/uploads/2021/04/DSCN5072-FILEminimizer0.jpg)
ಒಣ ಭೂಮಿ ಕೃಷಿಯೊಂದಿಗೆ:
- ಒಣ ಬೇಸಾಯ ಪ್ರದೇಶಗಳಲ್ಲಿ ಮಳೆ ಕಡಿಮೆ,ಆದ್ದರಿಂದ ನೀರಿನಕೊರತೆ ಸಾಮಾನ್ಯ.
- ಮಳೆ ನೀರು ಶೇಖರಣೆಗಾಗಿ ಕೃಷಿ ಹೊಂಡಗಳನ್ನು ನಿರ್ಮಿಸಬೇಕು.
- ಹನಿ ನೀರಾವರಿ ಪದ್ದತಿ ಬಳಸುವುದು ಉತ್ತಮ. ಹಿಂಗಾರಿನಲ್ಲಿಕುಸುಬೆ+ಕಡಲೆ(1:3), ಸಜ್ಜೆ+ಶೇಂಗಾ ಮತ್ತು ಸೂರ್ಯಕಾಂತಿ+ಶೇಂಗಾ ಬೆಳೆ ಪದ್ದತಿಗಳು ಲಾಭದಾಯಕ
- ಇವುಗಳ ಜೊತೆಗೆ ದಾಳಿಂಬೆ ಗಿಡ, ಬಾರೆ, ಚಿಕ್ಕುಇತ್ಯಾದಿ ಬೆಳೆಯಬಹುದು.
- ಬದುಗಳ ಮೇಲೆ ಮೇವಿನ ಗಿಡಗಳನ್ನು ಬೆಳೆದು ಹೈನುಗಾರಿಕೆಯನ್ನು ಮಾಡಬಹುದು.
ಮಲೆನಾಡು ಕರಾವಳಿಯಲ್ಲಿ:
- ಉತ್ತರಕನ್ನಡ, ಶಿವಮೋಗ್ಗ,ಹಾಸನ,ಕೊಡಗು, ಉಡುಪಿ ಜಿಲ್ಲೆಗಳಲ್ಲಿ ಭತ್ತ,ಕಬ್ಬು ಮತ್ತು ತೋಟಗಾರಿಕೆ ಬೆಳೆಗಳಾದ ಅಡಿಕೆ,ತೆಂಗು,ಮೆಣಸು ಇತ್ಯಾದಿ ಲಾಭದಾಯಕ ಬೆಳೆಗಳಾಗಿವೆ.
- ಇವುಗಳ ಜೊತೆಗೆ ಮೀನು ಸಾಕಾಣಿಕೆ, ರೇಷ್ಮೆ, ಜೇನು ಸಾಕಾಣಿಕೆ, ಅಜೋಲ್ಲ, ಹೈನುಗಾರಿಕೆ, ತರಕಾರಿ ಬೆಳೆಗಳು,ಅನಾನಾಸು ಕೃಷಿ ಮುಂತಾದ ಮುಂತಾದವುಗಳನ್ನು ಮಾಡಿದರೆ ಆರ್ಥಿಕವಾಗಿ ಸಶಕ್ತರಾಗಬಹುದು.
- ಭತ್ತ ಬೆಳೆಯುವ ಪ್ರದೇಶಗಳಲ್ಲಿ ಅದರ ಜೊತೆಗೆ ಅಣಬೆ ಬೇಸಾಯ, ಕೋಳಿ ಸಾಕಾಣೆ ಮಾಡುವುದರಿಂದ ರೈತನ ಆದಾಯವನ್ನು15-20% ಹೆಚ್ಚಿಸಬಹುದು.
- ರಾಸಾಯನಿಕಗೊಬ್ಬರದ ಬಳಕೆಯನ್ನು ಕಡಿಮೆ ಮಾಡಿ ವೆಚ್ಚ ತಗ್ಗಿಸಬಹುದು.
- ಅರೆಮಲೆನಾಡು ಪ್ರದೇಶಗಳಾದ ಧಾರವಾಡ,ಹಾವೇರಿ, ಬೆಳಗಾವಿ ಜಿಲ್ಲೆಗಳ ಬಹು ಭಾಗಗಳಲ್ಲಿ ಮೆಣಸಿನಕಾಯಿ+ಜಯಧರ ಹತ್ತಿ, ತೊಗರಿ+ಸೊಯಾ/ಅವರೆ/ಶೇಂಗಾ/ಕಡಲೆ, ತೊಗರಿ+ಶೇಂಗಾ/ಬಟಾಣಿ–ಜೊಳ, ಗೊವಿನಜೊಳ+ತೊಗರಿ, ಬಿಟಿ ಹತ್ತಿ ಬೆಳೆ ಪದ್ದತಿಗಳು ಲಾಭದಾಯಕವಾಗಿವೆ.
- ಕುರಿ ಆಡು ಸಾಕಣೆ ಇದಕ್ಕೆ ಪೂರಕವಾಗಿರುತ್ತದೆ. ರೇಶ್ಮೆ ವ್ಯವಸಾಯ ಇದ್ದರೆ ಅದರ ಜೊತೆಗೆ ಆಡು ಕುರಿ ಸಾಕನೆಯನ್ನೂ ಮಾಡಬಹುದು..
ಇತ್ತೀಚಿನ ದಿನಗಳಲ್ಲಿ ಮಿಶ್ರ ಕೃಷಿ/ ಕೃಷಿ ಪೂರಕ ಕಸುಬುಗಳ ಮೂಲಕ ರೈತ ತನ್ನ ಆದಾಯವನ್ನು ಹೆಚ್ಚು ಮಾಡಿಕೊಳ್ಳಲೇ ಬೇಕಾಗುತ್ತದೆ. ಒಂದೇ ಬೆಳೆಯನ್ನು ಅವಲಂಭಿಸಿದ್ದರೆ ಅದು ಎನಾದರೂ ಮಾರುಕಟ್ಟೆ, ಹವಾಮಾನ ವೈಪರೀತ್ಯ ಇನ್ನಿತರ ಕಾರಣಗಳಿಂದ ಹಾಳಾದರೆ ಉಳಿದ ಕೃಷಿ/ಕಸುಬು ಅವನ ಕೈ ಹಿಡಿಯುತ್ತದೆ. ಇದರ ಬಗ್ಗೆ ಸಲಹೆ ಮತ್ತು ತಾಂತ್ರಿಕ ಮಾಹಿತಿಗೆ ಸಾಕಷ್ಟು ವ್ಯವಸ್ಥೆಗಳು ಇವೆ. ಇದಕ್ಕೆ ಸರಕಾರದ ಪ್ರೋತ್ಸಾಹವೂ ಇದೆ.
ಲೇಖಕರು: 1) ಶೃತಿಎಸ್. ಎಮ್ಎಂ.ಎಸ್ಸಿ (ಅಗ್ರಿ) ಕೃ.ವಿ.ವಿ.ಧಾರಾವಾಡ. ಮತ್ತು 2) ಮಾನಸ ಎಲ್.ಪಿ. ಎಂ.ಎಸ್ಸಿ (ಅಗ್ರಿ) ಕೃ.ವಿ.ವಿ.ಧಾರಾವಾಡ.