180 ಕ್ಕೂ ಹೆಚ್ಚು ಹಲಸಿನ ತಳಿ ತೋಟ

180 ಕ್ಕೂ ಹೆಚ್ಚು ಹಲಸು ತಳಿಗಳ ಖಜಾನೆ

ರಾಜ್ಯ ಹೊರ ರಾಜ್ಯಗಳ ವಿಶಿಷ್ಟ ಗುಣದ ಸುಮಾರು 180 ಕ್ಕೂ ಹೆಚ್ಚು ತಳಿಗಳನ್ನು ತಮ್ಮ ಹೊಲದಲ್ಲಿ ಬೆಳೆಸಿ, ಸಂರಕ್ಷಿಸಿದ ಬೆಂಗಳೂರು, ಹೇಸರಘಟ್ಟದ ಭಾರತೀಯ ತೋಟಗಾರಿಕಾ ಸಂಶೋಧನಾ ಕೇಂದ್ರದ  IIHR  ಸಾಧನೆ ಪ್ರಶಂಸಾರ್ಹ. ಇಲ್ಲಿ ತಳಿಗಳ ಸಂಗ್ರಹ ಇದ್ದರೆ  ಸೇಫ್. ಹಲಸಿನ ಹಣ್ಣಿಗೆ ಈಗ ಹೆಚ್ಚಿನ ಮಹತ್ವ ಬಂದಿದೆ. ಆರೋಗ್ಯಕ್ಕೆ ಉತ್ತಮ ಎಂಬ ಕಾರಣಕ್ಕೆ  ಹಲಸು ತಿನ್ನುವರು, ಬೆಳೆಸುವವರು ಹೆಚ್ಚಾಗಿದ್ದಾರೆ. ಹಲಸಿನ ಮೌಲ್ಯ ವರ್ಧಿತ ಉತ್ಪನ್ನಗಳು ಹೆಚ್ಚಿವೆ. ಹಲಸು ನಮ್ಮಲ್ಲಿ ಅನಾದಿ ಕಾಲದಿಂದಲೂ ಇದ್ದ ಹಣ್ಣು. ಅದರ ಮರಮಟ್ಟಿನ…

Read more
ಹೊಸ ಅಡಿಕೆ ತೋಟ

ಈಗ ಹೊಸ ಅಡಿಕೆ ತೋಟ ಮಾಡಬೇಡಿ- ಹಳೆ ತೋಟ ಚೆನ್ನಾಗಿ ಸಾಕಿ.

ಅಡಿಕೆಗೆ ದರ ಏರಿಕೆಯಾದಾಗ  ರೈತರು ಮಾಡಬೇಕಾಗ ಕೆಲಸ ಇರುವ ತೋಟಕ್ಕೆ ಹೆಚ್ಚು ಆರೈಕೆ ಮಾಡಿ, ಅದರಲ್ಲಿ ಹೆಚ್ಚು ಫಲಪಡೆಯುವುದು ಹೊರತು ಹೊಸ ತೋಟ ಮಾಡುವುದಲ್ಲ. ಅಡಿಕೆ ಬೆಳೆಯುವ ಆಸಕ್ತರಿಗಾಗಿ ಕೊಟ್ಯಾಂತರ ಸಂಖ್ಯೆಯ ಅಡಿಕೆ ಸಸಿಗಳು ಕಾಯುತ್ತಿವೆ. ಅಡಿಕೆ ಬೆಳೆಗಾರರನ್ನು ಗುರಿಯಾಗಿಟ್ಟುಕೊಂಡು  ನಾನಾನಮೂನೆಯ ಗೊಬ್ಬರ ತಯಾರಕರು ರಂಗಕ್ಕೆ ಇಳಿದಿದ್ದಾರೆ. ಬರೇ ಕರ್ನಾಟಕ ಮಾತ್ರವಲ್ಲ. ಮಹಾರಾಷ್ಟ್ರ, ಗುಜರಾತ್, ತಮಿಳುನಾಡು, ಕೇರಳ, ಆಂದ್ರ ಪ್ರದೇಶಗಳ ರೈತರೂ  ಅಡಿಕೆ ಬೆಳೆಯಲು ಮುಂದಾಗಿದ್ದಾರೆ. ಈ ವರ್ಷದಷ್ಟು ಬಿತ್ತನೆ ಅಡಿಕೆ ಈ ತನಕ ಮಾರಾಟ ಆಗಲಿಲ್ಲ,…

Read more
ಅಡಿಕೆ

ವರ್ಷಾಂತ್ಯದಲ್ಲೂ ಸ್ಥಿರತೆ ಉಳಿಸಿಕೊಂಡ ಅಡಿಕೆ ಧಾರಣೆ- ಮುಂದೆ ಇದೆ ಚಾನ್ಸ್.

ಸಾಮಾನ್ಯವಾಗಿ ಮಾರ್ಚ್ ವರ್ಷಾಂತ್ಯದಲ್ಲಿ ದರ ಇಳಿಕೆ ಸಾಮಾನ್ಯ. ಆದರೆ ಈ ವರ್ಷ ಹಾಗೆ ಆಗದೆ ಸ್ಥಿರತೆ ಕಾಯ್ದುಕೊಳ್ಳಲಾಗಿದೆ. ಹಾಗಾಗಿ ಮುಂದಿನ ತಿಂಗಳಲ್ಲಿ ಚಾಲಿ- ಕೆಂಪಡಿಕೆ ಎರಡೂ ಏರಿಕೆ ಆಗಲಿದೆ. ಅಡಿಕೆ ಮಾರುಕಟ್ಟೆಯಲ್ಲಿ ಏರಿಕೆಯ ಸೂಚನೆ ದರ ಸ್ಥಿರತೆಯಲ್ಲಿ ಗಮನಿಸಬಹುದು.  ಚಾಲಿ ಎರಡು ತಿಂಗಳಿಂದ ಸ್ಥಿರವಾಗಿತ್ತು. ಈಗ  ಸಾಗರ, ಹೊಸನಗರ, ಇಲ್ಲೆಲ್ಲಾ ಸಿಪ್ಪೆ ಗೋಟಿಗೆ ಬೇಡಿಕೆ ಬರಲಾರಂಭಿಸಿದೆ. ಶಿರಸಿ, ಸಿದ್ದಾಪುರ, ಯಲ್ಲಾಪುರದಲ್ಲಿ ಚಾಲಿ ದರ ಏರಿಕೆ ಪ್ರರಾಂಭವಾಗಿದೆ. ಸಿಪ್ಪೆ ಗೋಟು ದರ ಏರಿಕೆ ಚಾಲಿಗೆ ಬೇಡಿಕೆಯ ಸೂಚನೆಯಾಗಿದ್ದು, ಚಾಲಿ…

Read more
ಆಮಟೆ ಕಾಯಿ ಒಡೆದದ್ದು

ಅಮಟೆ- ಇದಕ್ಕೆ ಭಾರೀ ಔಷಧೀಯ ಗುಣ ಇದೆ.  

ನಮ್ಮ ಹಿರಿಯರ ಆಹಾರಾಭ್ಯಾಸಗಳಲ್ಲಿ ಬಹಳ  ಶಿಸ್ತು, ಪೌಷ್ಠಿಕತೆ , ಔಷಧೀಯ ಮಹತ್ವ ಇತ್ತು. ಋತುಮಾನ ಆಧಾರಿತ ಆಹಾರವಸ್ತುಗಳನ್ನೇ ಬಳಸುವುದು ಅವರ ಕ್ರಮ. ಇಂತಹ ಆಹಾರಗಳಲ್ಲಿ  ಕೆಸು, ಅಮಟೆ, ಮಾವು, ಕುಡಿ,ಸೊಪ್ಪು ಮುಂತಾದವು ಸೇರಿವೆ. ಹಿರಿಯರು  ಉಚಿತವಾಗಿ   ಲಭ್ಯವಿರುತ್ತಿದ್ದ  ವಸ್ತುಗಳಿಗೇ ಹೆಚ್ಚಿನ ಮಹತ್ವ ನೀಡುತ್ತಿದ್ದರು. ಅದು ಉಚಿತವಾಗಿದ್ದರೂ ಆರೋಗ್ಯಕ್ಕೆ ಉತ್ತಮವಾಗಿತ್ತು. ಈಗ ನಾವು ದುಡ್ಡು ಕೊಟ್ಟು ಖರೀದಿಸುವ ವಸ್ತುಗಳಲ್ಲಿ  ಆರೋಗ್ಯವನ್ನು  ಗಮನಿಸುವುದೇ ಇಲ್ಲ. ಹಿಂದೆ ಮಳೆಗಾಲವೆಂಬ ಕಷ್ಟದ ಸಮಯದಲ್ಲಿ  ಅಡುಗೆಗೆ ಅಗ್ಗದಲ್ಲಿ ದೊರೆಯುವ ಹುಳಿ ಕಾಯಿ ಇದಾಗಿತ್ತು.  ಏನಿದು…

Read more
ಮಾವು ಸ್ಪೆಶಲ್ ಬಳಸಿದ ಮಾವು

ಮಾವು ಬೆಳೆಯುವವರು ಇದನ್ನು ಬಳಸಿದರೆ ಭಾರೀ ಫಲಿತಾಂಶ.

ಮಾವು ಬೆಳೆಯುವವರು ಎಷ್ಟೇ ಹೂ ಬಿಟ್ಟರೂ ಬಹಳಷ್ಟು ಕಾಯಿಗಳನ್ನು ಕಳೆದುಕೊಳ್ಳುವುದು ಸಾಮಾನ್ಯ. ಬಲಿಯುವ ತನಕ ಉದುರಿ ಹಾಳಾಗುವ  ಪ್ರಮಾಣ ಅರ್ಧಕ್ಕರ್ಧ. ಇದಕ್ಕೆಲ್ಲಾ ಕಾರಣ ಸಸ್ಯದ ಧಾರಣಾ ಸಾಮರ್ಥ್ಯ. ಸಸ್ಯಕ್ಕೆ ಶಕ್ತಿ ಇದ್ದರೆ ಹೆಚ್ಚು ಫಲವನ್ನು ಆಧರಿಸುತ್ತದೆ. ಇಲ್ಲವಾದರೆ ರೋಗ, ಕೀಟಗಳ ಮೂಲಕ, ಶಾರೀರಿಕ ಅಸಮತೋಲನದ ಮೂಲಕ ಉದುರಿ ನಷ್ಟವಾಗುತ್ತದೆ. ಅದನ್ನು ಸರಿಪಡಿಸಲು ಒಂದು ಪೋಷಕಾಂಶ ಮಿಶ್ರಣದ ಸಿಂಪರಣೆ  ಮಾಡಬಹುದು. ಇದು ಗರಿಷ್ಟ ಪ್ರಮಾಣದಲ್ಲಿ ಕಾಯಿಗಳನ್ನು ಉಳಿಸುತ್ತದೆ. ಮಾವು ಸ್ಪೆಷಲ್  Mango special ಎಂಬ ಪೋಷಕಾಂಶ ಮಿಶ್ರಣ, ಸಸ್ಯ…

Read more
arecanut spray

ಮಿಡಿ ಅಡಿಕೆ ಉದುರುತ್ತಿದೆಯೇ ? ಈ ಸಿಂಪರಣೆ ಮಾಡಿ.

ಮಿಡಿ ಅಡಿಕೆ ಉದುರುವ ಸಮಸ್ಯೆ ಇದ್ದಲ್ಲಿ ಅದಕ್ಕೆ ಕೀಟನಾಶಕ , ಶಿಲೀಂದ್ರ ನಾಶಕ ಸಿಂಪರಣೆ  ಮಾಡುವ ಮುಂಚೆ ಒಮ್ಮೆ ಅಥವಾ ಎರಡು ಬಾರಿ ಪೋಷಕಾಂಶ ಸಿಂಪರಣೆ ಮಾಡಿ. ಬಹುತೇಕ ಮಿಡಿ ಉದುವುದು ಆಹಾರದ ಕೊರತೆಯಿಂದ. ಸುಮ್ಮನೆ ಕೀಟನಾಶಕ, ಶಿಲೀಂದ್ರ ನಾಶಕ ಬಳಸಿ ಖರ್ಚು ಮಾಡುವ ಬದಲು ಮಿತ ಖರ್ಚಿನಲ್ಲಿ ಇದನ್ನು ಮಾಡಿ ನೊಡಿ. ಒಂದು ಇನ್ಟಂಟ್ ಆಹಾರವಾಗಿ ಇದು ಕೆಲಸ ಮಾಡಿ ಮಿಡಿ ಉದುರುವುದನ್ನು ಕಡಿಮೆ ಮಾಡುತ್ತದೆ. . ಯಾವುದೇ ಬೆಳೆಯಲ್ಲಿ ಎಳೆ ಕಾಯಿಗಳು ಉದುರುವುದು, ರೋಗ…

Read more
ಸಿಹಿಯಾದ ಕಲ್ಲಂಗಡಿ

ಹಣ್ಣು ಹಂಪಲಿನಲ್ಲಿ ಸಿಹಿ ಅಂಶ ಹೆಚ್ಚಿಸುವಿಕೆ.

ಯಾವುದೇ ಹಣ್ಣು ಹಂಪಲುಗಳಿದ್ದರೂ ಅದರ ಸಹಜವಾದ ರುಚಿ ಇದ್ದರೆ ಅದು ತಿನ್ನಲು ಇಷ್ಟವಾಗುತ್ತದೆ. ಬಹುತೇಕ ಹಣ್ಣು ಹಂಪಲುಗಳ ರುಚಿ ಸಿಹಿ. ಸಿಹಿ ಸಾಕಷ್ಟು ಇಲ್ಲದಿದ್ದರೆ ಇದನ್ನು ತಿನ್ನುವವರಿಗೆ ಅದು ರುಚಿ ಎನಿಸದು. ಸಿಹಿ ಅಂಶ ಹಣ್ಣು ಹಂಪಲಿಗೆ ಹೇಗೆ ಸೇರಿಕೊಳ್ಳುತ್ತದೆ. ಹೆಚ್ಚು ಸಿಹಿ ಬರಲು ಯಾವ ಪೋಷಕ ಹೆಚ್ಚು ಕೊಡಬೇಕು, ಯಾವುದನ್ನು ಕಡಿಮೆ ಮಾಡಬೇಕು ಈ ಬಗ್ಗೆ  ಇಲ್ಲಿದೆ ಮಾಹಿತಿ. ಸಮರ್ಪಕ ಬಿಸಿಲು, ವಾತಾವರಣ, ಹಾಗೂ ಸಾಂದರ್ಭಿಕ ಪೋಷಕಾಂಶ ನಿರ್ವಹಣೆಯಿಂದ ಹಣ್ಣು ಹಂಪಲುಗಳಲ್ಲಿ ಸಿಹಿ ಅಂಶ ಹೆಚ್ಚುತ್ತದೆ….

Read more
ಉತ್ತಮ ಇಳುವರಿ ಅಡಿಕೆ

ಅಡಿಕೆ – ತಳಿ ಬೆರಕೆ ಆದರೆ ಇಳುವರಿ ಹೆಚ್ಚುತ್ತದೆ.

ತಳಿ ಯಾವುದೇ ಇದ್ದರೂ ಬರೇ ಒಂದೇ ತಳಿಯನ್ನು ನೆಡುವ  ಬದಲು ಸ್ವಲ್ಪ ಪ್ರಮಾಣದಲ್ಲಿ ಬೇರೆ ತಳಿಗಳನ್ನೂ ಮಿಶ್ರಣ ಮಾಡಿದರೆ ಪರಾಗ ಸ್ಪರ್ಶಕ್ಕೆ ಅನುಕೂಲವಾಗಿ ಇಳುವರಿ ಹೆಚ್ಚು ಬರುತ್ತದೆ. ಯಾವಾಗಲು ಬೆರಕೆ ತಳಿಗಳಿದ್ಡಲ್ಲಿ   ನೈಸರ್ಗಿಕವಾಗಿ ತಳಿ ಅಭಿವ್ರುದ್ಧಿಯೂ ಆಗುತ್ತದೆ. ಇದು ತೆಂಗು, ಅಡಿಕೆಗೆರಡಕ್ಕೂ ಅನುಕೂಲ. ಅಡಿಕೆ ಬೆಳೆಸಲು ಈಗ  ಪ್ರಾದೇಶಿಕ ಇತಿಮಿತಿಗಳು ದೂರವಾಗಿ ಬಯಲು ಸೀಮೆಯಲ್ಲೂ ಬೆಳೆ ಬೆಳೆಯಲಾಗುತ್ತಿದೆ.  ರಾಜ್ಯದಲ್ಲಿ ಬಹುತೇಕ ಜಿಲ್ಲೆಗಳಲ್ಲಿ ಅಡಿಕೆ  ಬೆಳೆ ಇದೆ.ಕರಾವಳಿ ಪ್ರದೇಶಕ್ಕೆ ಚಾಲಿಗೆ ಸೂಕ್ತವಾದ ತಳಿಗಳನ್ನು ಆಯ್ಕೆ ಮಾಡಬೇಕು. ಮಲೆನಾಡು ಮತ್ತು…

Read more

ಸಾವಯವ ಅಂಶ ಇಲ್ಲದಿದ್ದರೆ ಬೆಳೆ ಬರಲಾರದು.

ಕೃಷಿ ಮಾಡುವಾಗ ರಾಸಾಯನಿಕ ಗೊಬ್ಬರ ಒಂದನ್ನೇ ಮಣ್ಣಿಗೆ ಕೊಡುತ್ತಾ ಇದ್ದರೆ, ನಿಧಾನವಾಗಿ ಮಣ್ಣಿನ ರಚನೆ ಕೆಳಮಟ್ಟಕ್ಕೆ ಇಳಿಯುತ್ತದೆ. ಮಣ್ಣಿನ ರಚನೆ ವ್ಯತ್ಯಾಸವಾದರೆ ರಸಗೊಬ್ಬರಗಳು ಕೆಲಸ ಮಾಡುವುದಿಲ್ಲ. ಯಾವುದೇ ರಸ ಗೊಬ್ಬರಗಳನ್ನು ನೇರವಾಗಿ ಸಸ್ಯಗಳು ಬಳಕೆ ಮಾಡಿಕೊಳ್ಳಲಾರವು. ಮಣ್ಣಿನ ಜೀವಾಣುಗಳ ಸಹಕಾರದಿಂದ ಅವು ಸಸ್ಯಗಳಿಗೆ ಲಭ್ಯವಾಗುತ್ತದೆ. ಮಣ್ಣಿನಲ್ಲಿ ಜೀವಾಣುಗಳು ಇದ್ದರೆ ಅದು ಜೀರ್ಣಕ್ಕೊಳಪಡುತ್ತದೆ. ಫಲವತ್ತತೆ ಕಡಿಮೆಯಾದ ಮಣ್ಣಿನಲ್ಲಿ ಜೀವಾಣುಗಳ ಸಂಖ್ಯೆ ಕಡಿಮೆಯಾಗುತ್ತದೆ. ಆಗ ರಸ ಗೊಬ್ಬರಗಳ ಕ್ಷಮತೆಯೂ ಕಡಿಮೆಯಾಗುತ್ತದೆ. ಆದ ಕಾರಣ ಅಧಿಕ ಇಳುವರಿಗೆ  ಅಗತ್ಯವಿದ್ದರೆ ರಸಗೊಬ್ಬರ ಹಿತ…

Read more
ಅಡಿಕೆ

ಅಡಿಕೆ ಧಾರಣೆ ಏನಾಗಬಹುದು? ಯಾಕೆ ಏನೂ ಸಂಚಲನ ಇಲ್ಲ ?

ಅಡಿಕೆ ಧಾರಣೆ ಕಳೆದ ಎರಡು ತಿಂಗಳಿಂದ ನಿಂತ ನೀರಿನ ತರಹ ಮುಂದುವರಿದಿದೆ. ಯಾವ ಏರಿಕೆಯೂ ಇಲ್ಲ. ಇಳಿಕೆಯೂ ಇಲ್ಲ. ಕರಾವಳಿಯ ಅಡಿಕೆ ಬೆಳೆಗಾರರು ಅಡಿಕೆ ಕೊಡುವುದನ್ನು ಕಡಿಮೆಮಾಡಿದ್ದಾರೆ. ಕೆಂಪಡಿಕೆ ಮಾಡುವ ಕಡೆಯೂ ಜನ ದರ ಏರಿಕೆಗೆ ಕಾಯುತ್ತಿದ್ದಾರೆ. ಮಾರುಕಟ್ಟೆಗೆ ಬರುವ ಅಡಿಕೆ ಪೂರ್ತಿ ಚೇಣಿ ಮಾಡಿದವರ ಕಮಿಟ್ಮೆಂಟ್ ಹಾಗೂ ಮುಂದಿನ ಚೇಣಿ ವಹಿಸಿಕೊಳ್ಳುವುದಕ್ಕೇ ಬೇಕಾದ  ಫಂಡ್ ಕ್ರೋಡೀಕರಣಕ್ಕೆ ಎಂಬ ಸುದ್ದಿಗಳಿವೆ. ಇಷ್ಟಕ್ಕೂ ಮುಂದೆ ಅಡಿಕೆ ಧಾರಣೆ ಏನಾಗಬಹುದು, ಏನಾದರೂ ಸಂಚಲನ ಉಂಟಾಗಬಹುದೇ ಎಂಬ ಕುತೂಹಲ ಎಲ್ಲರದ್ದೂ. ಅಡಿಕೆ…

Read more
error: Content is protected !!