ಬೀಜ – ಸಸಿ ಖರೀದಿಸುವಾಗ ಈ ವಿಚಾರಗಳನ್ನು ತಪ್ಪದೆ ತಿಳಿದುಕೊಳ್ಳಿ.

ಹಿರಿಯರು ಹೇಳುವುದುಂಟು , ಪರವೂರಿನ ಸುಭಗನಿಗಿಂತ ( ನಯ ವಿನಯದ ವ್ಯಕ್ತಿ) ಊರಿನ ಕಳ್ಳನಾದರೂ ಆಗಬಬಹುದು ಎಂದು. ಇದು ನಿಜ. ರೈತರು ಖರೀದಿ ಮಾಡುವ ಸಸಿ, ಬೀಜ  ಇವುಗಳನ್ನು ಗೊತ್ತು ಪರಿಚಯ ಇರುವವರಿಂದಲೇ ಖರೀದಿ ಮಾಡಿ. ನಾಳೆ ಮೋಸವಾದರೆ ಅವರು ನಿಮ್ಮ ಕಣ್ಣು ಮುಂದೆಯೇ ಇರುತ್ತಾರೆ. ನೆಡು ಸಾಮಾಗ್ರಿಗಳಾದ ಬೀಜ, ಸಸಿಗಳ ವ್ಯವಹಾರ ಎಂದರೆ ಬಲವಾದ ನಂಬಿಕೆ. ಇದು ದೇವರಿಗೆ ನಮಸ್ಕರಿಸಿ ಆಶೀರ್ವಾದ ಬೇಡುವುದಕ್ಕಿಂತಲೂ ಮಿಕ್ಕಿದ ನಂಬಿಕೆಯ ವ್ಯವಹಾರ. ಒಬ್ಬ ರೈತ ಒಂದು ಬೀಜ ಅಥವಾ ಸಸಿಯನ್ನು…

Read more
root puller

ಕಳೆ ಗಿಡಗಳನ್ನು ಬೇರು ಸಮೇತ ತೆಗೆಯಬಹುದಾದ ಸಾಧನ.

    ಕೃಷಿ ಹೊಲದಲ್ಲಿ ಯಾವಾಗಲೂ ಕಳೆ ಸಸ್ಯಗಳು ಸಹಜವಾಗಿ ಹುಟ್ಟಿಕೊಳ್ಳುತ್ತಲೇ ಇರುತ್ತವೆ. ಬೆಳೆದಂತೆ ಅದನ್ನು ಬೇರು ಸಹಿತ ತೆಗೆಯಲು ಸಾಧ್ಯವಾಗುವುದಿಲ್ಲ. ಅಂಥಹ ಕಳೆ ಸಸ್ಯಗಳನ್ನು ಬೇರು ಸಹಿತ ಯಾವ ಶ್ರಮದ ಅಗತ್ಯವೂ ಇಲ್ಲದೆ ತೆಗೆಯಬಹುದಾದ ಸಾಧನವನ್ನು  ಸಾಗರದ ಹೆಗಡೆ ಡೈನಾಮಿಕ್ಸ್ ಪ್ರೈ ಲಿಮಿಟೆಡ್ ಇವರು ಅಭಿವೃದ್ಧಿಪಡಿಸಿದ್ದಾರೆ. ಕೆಲವು ಸಾಧಾರಣ ಗಾತ್ರದ ಗಿಡಗಳನ್ನು ಕೀಳಲು ಹಾರೆ, ಗುದ್ದಲಿ ಮುಂತಾದ ಸಾಧನಗಳು ಬೇಕಾಗಿಲ್ಲ. ಇವುಗಳಿಂದ ಕೀಳಿಸುವ ಶ್ರಮಕ್ಕಿಂತ ತುಂಬಾ ಕಡಿಮೆ ಶ್ರಮದಲ್ಲಿ ಯುಕ್ತಿ ಆಧಾರಿತ ಸಾಧನದಲ್ಲಿ ಅದನ್ನ್ನು ತೆಗೆಯಬಹುದು. ಮುಖ್ಯವಾಗಿ…

Read more

ಸರಳ ವಿನ್ಯಾಸದ ಬಹು ಉಪಯೋಗಿ ಡ್ರೈಯರ್.

ಕೃಷಿ ಎಂದದೆ ಮಳೆಗಾಲದಲ್ಲಿ ಏನಾದರೂ ಒಣಗಿಸುವುದು ಇದ್ದೇ ಇರುತ್ತದೆ. ಅಂಗಡಿಯಿಂದ ತರುವ ಕೊತ್ತಂಬರಿ ಮೆಣಸು, ಮುಂತಾದವುಗಳನ್ನು ತೊಳೆದು ಒಣಗಿಸಿಯೇ ಬಳಸಬೇಕಾಗುತ್ತದೆ. ಮಳೆಗಾಲದಲ್ಲಿ ಇದು ತುಂಬಾ ಕಷ್ಟವಾಗುತ್ತದೆ. ಇಂಥ ಉದ್ದೇಶಕ್ಕೆ ಹಾಗೂ ಹಣ್ಣು ಹಂಪಲು, ಜಾಯೀಕಾಯಿ, ಕರಿಮೆಣಸು ಮುಂತಾದ ಆಹಾರ ವಸ್ತುಗಳು ಹಾಗೂ ಬೆಳೆಗಳಾದ ಅಲ್ಪ ಸ್ವಲ್ಪ ಕೊಬ್ಬರಿ, ಅಡಿಕೆ ಮುಂತಾದವುಗಳನ್ನು ಒಣಗಿಸಲು ಅವರರವರ ಅವಶ್ಯಕತೆಗೆ ಅನುಗುಣವಾಗಿ ಡ್ರೈಯರ್ ಗಳನ್ನು ಹೊಂದುವುದು ಉತ್ತಮ. ಇದರ ಒಂದು ವಿನ್ಯಾಸ ಇಲ್ಲಿ ಕೊಡಲಾಗಿದೆ. ಡ್ರೈಯರುಗಳಲ್ಲಿ ಅನುಕೂಲಕ್ಕೆ ತಕ್ಕುದಾಗಿ ಬೇರೆ ಬೇರೆ ಪ್ರಮಾಣ…

Read more

ಕೊರೋನಾ ಪರಿಣಾಮ- ಶೇಂಗಾ ಬೆಳೆಯ ಸುಗ್ಗಿ.

ಒಂದು ಕಾಲದಲ್ಲಿ ದೇಶದಲ್ಲೇ ಚಿತ್ರದುರ್ಗ ಶೇಂಗಾ ಬೆಳೆಯಲ್ಲಿ ಮುಂಚೂಣಿಯಲ್ಲಿರುವ ಜಿಲ್ಲೆಯಾಗಿತ್ತು. ಇಲ್ಲಿನ ಚಳ್ಲಕೆರೆ ತಾಲೂಕಿನಲ್ಲಿ ಎಲ್ಲಿ ನೋಡಿದರಲ್ಲಿ  ಶೇಂಗಾ ಹೊಲಗಳು, ಮತ್ತು ದೇಶದಲ್ಲೇ ಅತ್ಯಧಿಕ ಪ್ರಮಾಣದ ಶೇಂಗಾ ಎಣ್ಣೆ ಮಿಲ್ಲುಗಳಿದ್ದ ಈ ತಾಲೂಕು ಕ್ರಮೇಣ ತನ್ನ ವೈಭವವನ್ನು ಗತ ಕಾಲಕ್ಕೆ ಸೇರಿಸಿತ್ತು. ಈಗ ಮತ್ತೆ ಈ ವೈಭವ ಮರುಕಳಿಸಿದೆ. ಚಿತ್ರದುರ್ಗದ  ಚಳ್ಳಕೆರೆಯಲ್ಲಿ ಈ ವರ್ಷ 95 % ಕ್ಕೂ ಹೆಚ್ಚು ಶೆಂಗಾ ಬಿತ್ತನೆಯಾಗಿದೆ. ಎಲ್ಲೆಲ್ಲಿ ನೋಡಿದರೂ ಶೇಂಗಾ ಹೊಲಗಳೇ ಕಾಣಿಸುತ್ತಿವೆ.ಅದರ ಸೌಂದರ್ಯವನ್ನು ನೋಡುವುದೇ ಒಂದು ಅನಂದ. ಪ್ರಕೃತಿಯ…

Read more

ಅಡಿಕೆ ಉತ್ಪಾದನೆ ಹೆಚ್ಚುತ್ತಿದೆ- ಮಿಶ್ರ ಬೆಳೆಗೆ ಗಮನ ಕೊಡಿ.

ನಾಗಾಲೋಟದಿಂದ ಹೆಚ್ಚುತ್ತಿರುವ ಅಡಿಕೆ ತೋಟಗಳು ಎಷ್ಟು ಸಮಯದ ತನಕ ರೈತರ ಬದುಕನ್ನು ಆಧರಿಸಬಲ್ಲವು ತಿಳಿಯದು. ಕೆಲವೇ ಸಮಯದಲ್ಲಿ ಬೆಲೆ ಕುಸಿತವಾದರೂ ಆಗಬಹುದು ಇಂತಹ ಸಂದರ್ಭದಲ್ಲಿ ನಮ್ಮ ಬದುಕಿನ ಬಧ್ರತೆಗೆ ಮಿಶ್ರ ಬೆಳೆ ಅಥವಾ ಬದಲಿ ಬೆಳೆ ಬೇಕೇ ಬೇಕು. ಅಡಿಕೆ ಯಿಂದ  ಬರುವಷ್ಟು ಬರಲಿ. ಕೈ ಬಿಟ್ಟಾಗ ಮಿಶ್ರ ಬೆಳೆ ನಮ್ಮನ್ನ ಆಧರಿಸುವಂತಿರಲಿ. ಒಂದು  ಕಾಲದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಅಡಿಕೆ ಬೆಳೆಯುವುದರಲ್ಲಿ ಪ್ರಥಮ ಸ್ಥಾನದಲ್ಲಿತ್ತು. ಕ್ರಮೇಣ  ಇಲ್ಲಿ  ಬೆಳೆ ಪ್ರದೇಶ ಕಡಿಮೆಯಾಗದಿದ್ದರೂ ಸಹ ಅವಕಾಶದ ಮಿತಿಯಿಂದಾಗಿ…

Read more
ಅನನಾಸು ಹಣ್ಣು

ಸಾವಯವ ಅನನಾಸು ಬೆಳೆ- ಸುಲಭ. ಹೇಗೆ?

ಸಾವಯವ ಅನನಾಸು ಬೆಳೆ ಏನೂ ಕಷ್ಟದ್ದಲ್ಲ. ಇದು  ಬರಸಹಿಷ್ಣು ಸಸ್ಯ. ಆದುದರಿಂದ ಇದನ್ನು ನೀರು ಗೊಬ್ಬರ ಇಲ್ಲದೆ ಸಾವಯವ ವಿಧಾನದಲ್ಲೇ ಬೆಳೆಯಬಹುದು.  ಆದರೆ ಕೆಲವು ಜನ ಇದಕ್ಕೆ ಒಂದಷ್ಟು ರಾಸಾಯನಿಕ ಬಳಕೆ ಮಾಡುತ್ತಾರೆ, ಕಾರಣ ಇಷ್ಟೇ  ಗ್ರಾಹಕರಿಗೆ ನೋಟ ಚೆನ್ನಾಗಿರುವ, ದೊಡ್ದದಾದ ಹಣ್ಣು ಬೇಕು. ಗ್ರಾಹಕರ ಓಲೈಕೆಗಾಗಿ ಬೆಳೆಗಾರರು ರಾಸಾಯನಿಕ ಬಳಸುತ್ತಾರೆ. ಇದನ್ನು ಬಳಸದೆ ಬೆಳೆಯಲು ಯಾವುದೇ ಕಷ್ಟ ಇಲ್ಲ. ಅನನಾಸು ಬೆಳೆಗೆ ಪ್ರಮುಖವಾಗಿ ಬೇಕಾಗುವುದು, ಉತ್ತಮ ಬೆಳಕು. ನೀರು ಹೆಚ್ಚು ಬೇಡ. ಇಬ್ಬನಿಯ ನೀರಿನಲ್ಲೂ ಬದುಕುತ್ತದೆ. ಇದರ…

Read more

ಬೆಳೆಗಳಿಗೆ ಸುಣ್ಣ ಯಾಕೆ ಕೊಡಬೇಕು ಗೊತ್ತೇ?

ಬೆಳೆ ಬೆಳೆಸುವ ಮಣ್ಣಿಗೆ ಸುಣ್ಣ ಹಾಕುವುದು ಹಸಿರು ಕ್ರಾಂತಿಯ ತರುವಾಯ ಬಂದ ಪದ್ಧತಿ. ಮಣ್ಣಿಗೆ ಸುಣ್ಣ ಹಾಕಿದಾಗ ಮಣ್ಣಿನ ಸ್ಥಿತಿಗತಿ ಬದಲಾವಣೆಯಾಗುತ್ತದೆ. ಈ ಬದಲಾವಣೆ ಅಲ್ಲಿ ಬೆಳೆಯುವ ಸಸ್ಯಗಳಿಗೆ ಮಣ್ಣಿನ ಮೂಲಕ  ಪೋಷಕಾಂಶಗಳನ್ನು ಸಮರ್ಪಕವಾಗಿ ಬಳಕೆ ಮಾಡುವುದಕ್ಕೆ ಸಹಕರಿಸುತ್ತದೆ. ಸಸ್ಯಗಳಿಗೆ ಬರೇ ಸಾರಜಕನ, ರಂಜಕ ಮತ್ತು ಪೊಟ್ಯಾಶ್ ಎಂಬ ಮೂರು ಮುಖ್ಯ ಪೋಷಕಗಳು ಬೇಕು. ಅದರ ಜೊತೆಗೆ ದ್ವಿತೀಯ ಮಧ್ಯಮ ಪೋಷಕಗಳಾದ ಕ್ಯಾಲ್ಸಿಯಂ ಗಂಧಕ, ಮತ್ತು ಮೆಗ್ನೀಶಿಯಂ ಸಹ ಅಗತ್ಯವಾಗಿ ಬೇಕಾಗುತ್ತದೆ. ಇವು ಮುಖ್ಯ ಪೋಷಕಗಳಷ್ಟು ಪ್ರಮಾಣದಲ್ಲಿ…

Read more
ನೆಲಕ್ಕೆ ಸುಣ್ಣ ಎರಚುವುದು

ಹೊಲಕ್ಕೆ ಸುಣ್ಣ ಹಾಕುವ ಕ್ರಮ ಮತ್ತು ಅದರ ಫಲ.

ಸಸ್ಯ ಬೆಳವಣಿಗೆಗೆ ಸಹಾಯಕವಾಗುವ ದ್ವಿತೀಯ ಪೋಷಕಗಳಲ್ಲಿ  ಸುಣ್ಣ ಒಂದನ್ನೇ ಕೊಟ್ಟರೆ ಸಾಲದು. ವರ್ಷಂಪ್ರತೀ ನಷ್ಟವಾಗುವ ಸುಣ್ಣ ಮತ್ತು ಮೆಗ್ನೀಶಿಯಂ ಎರಡನ್ನೂ ಕೊಡಬೇಕು. ಆಗಲೇ ಅದರ ಪೂರ್ಣ ಪ್ರಯೋಜನ. ಈ ಎರಡೂ ಪೋಷಕಗಳೂ ಮಳೆಗೆ ಕೊಚ್ಚಿಕೊಂಡು ಮತ್ತು ಬೆಳೆ ಬೆಳೆದಾಗ ಪಡೆಯುವ ಫಸಲು ಮತ್ತು ಉದುರಿದ ಎಲೆಗಳಿಂದ  ನಷ್ಟವಾಗುವ ಪೋಷಕಗಳು. ಸುಣ್ಣವನ್ನು ಮಣ್ಣಿಗೆ ಕೊಡುವುದರಿಂದ ಭೌತಿಕ, ರಾಸಾಯನಿಕ ಮತ್ತು ಜೈವಿಕ ಮೂರೂ   ಪರಿಣಾಮಗಳೂ ಉನ್ನತ ಮಟ್ಟಕ್ಕೆ ಏರಿ ಮಣ್ಣಿನ ಆರೋಗ್ಯ ಸುಸ್ಥಿತಿಯಲ್ಲಿರುತ್ತದೆ ಮಣ್ಣು ಗುಳಿಗೆಯಾಕಾರಕ್ಕೆ ಪರಿವರ್ತನೆಯಾಗುತ್ತದೆ. ಪೋಷಕಗಳು ಲಭ್ಯ…

Read more
areca nut plants

ಅಡಿಕೆಗಿಡ ನೆಡುವಾಗ ಟ್ರೆಂಚ್ ಪದ್ದತಿ ಬೇಡ- ಗಿಡ ಸೊರಗುತ್ತದೆ.

ಅಡಿಕೆ, ಮುಂತಾದ ಸಸ್ಯಗಳಿಗೆ ತಂತು ( Fiber roots) ಬೇರು ಮಾತ್ರ ಇರುತ್ತದೆ. ಈ ತಂತು ಬೇರುಗಳಲ್ಲಿ  ಮತ್ತೆ ಕವಲುಗಳು ಒಡೆದು ಬೇರು ವ್ಯೂಹ ರಚನೆಯಾಗುತ್ತದೆ. ಈ ಬೇರುಗಳು ತುಂಬಾ ಮೃದುವಾಗಿರುತ್ತವೆ. ಹೆಚ್ಚಿನ ತೇವ, ಅಧಿಕ ಬಿಸಿಯನ್ನು ತಡೆದುಕೊಳ್ಳಲಾರವು. ಆದ ಕಾರಣ ನಾವು ಟ್ರೆಂಚ್ ಪದ್ದತಿಯಲ್ಲಿ ಅಡಿಕೆ ಸಸಿ ನೆಟ್ಟರೆ ಅದರ ಬೇರುಗಳಿಗೆ ತೊಂದರೆಯಾಗಿ ಬೆಳವಣಿಗೆಗೆ ಅನನುಕೂಲವಾಗುತ್ತದೆ. ಸಸ್ಯಗಳ ಬೆಳವಣಿಗೆಗೆ ಬೇರುಗಳೇ ಸರ್ವಾಧಾರ. ಬೇರುಗಳ ರಕ್ಷಣೆ ಮತ್ತು ಅವುಗಳ ಪ್ರಸರಣಕ್ಕೆ ಎಷ್ಟು ಅನುಕೂಲ ಮಾಡಿಕೊಡುತ್ತೇವೆಯೋ ಅಷ್ಟು ಆ…

Read more
ಬಾಳೆ ಎಲೆ ವೈರಾಣು ರೋಗ ಚಿನ್ಹೆ- Virus diseae symptom

ಬಾಳೆಯ ಎಲೆ ಹೀಗೆ ಆದರೆ ಅದು ಯಾರಿಂದಲೂ ಸರಿಪಡಿಸಲು ಸಾಧ್ಯವಿಲ್ಲ..

ಬಾಳೆ ಹಾಗೆಯೇ ಇನ್ನೂ ಕೆಲವು ಬೆಳೆಗಳಲ್ಲಿ ವೈರಾಣು ರೋಗ ಬಂದಿತೆಂದರೆ ಅದನ್ನು ಉಳಿಸಿದರೆ ಬೇರೆ ಬಾಳೆಗೆ ಹರಡುತ್ತದೆ. ಇದನ್ನು  ಮುಂಚಿತವಾಗಿ ಗುರುತಿಸಿ ಅದನ್ನು ನಾಶ ಮಾಡುವುದರಲ್ಲೇ ಇರುವುದು ಬಾಳೆಯ ರೋಗ ಮುಕ್ತ ಬೇಸಾಯ ಕ್ರಮ. ನೀವು ನೆಟ್ಟ ಬಾಳೆಯ ಎಲೆಗಳು  ಸಹಜವಾಗಿ ಇರದೆ ಎಲೆಗಳ ಮೂಡುವಿಕೆ ಗುಚ್ಚದ ತರಹ ಆಗಿ, ಯಾವುದೂ ಪೂರ್ಣವಾಗಿ ಬಿಡಿಸಿಕೊಳ್ಳದಿದ್ದರೆ ಅದು ನಂಜಾಣು ರೋಗ. ಕೆಲವು ಎಲೆಗಳು ಸಹಜವಾಗಿ ಬಂದು ನಂತರ ಬರುವ ಎಲೆಗಳು ಶಕ್ತಿ ಕಳೆದುಕೊಂಡು ಹಳದಿಯಾಗಿ ಮೂಡಿತೆಂದರೆ ಅದು ಸಹ…

Read more
error: Content is protected !!