ಹಲ್ಲಿಲ್ಲದ್ದ ರೈತನಿಗೆ ಕಡಲೆ ತಿನ್ನಿಸುವ ವೆಬಿನಾರ್ ಗಳು.

ಮಾರ್ಚ್ ತಿಂಗಳ ನಂತರ ಬಂದ ಒಂದು ಹೊಸ ಅವತಾರ, ವೆಬಿನಾರ್ ಗಳು. ಬೇರೆ ಕ್ಷೇತ್ರಗಳ ವಿಷಯ ನಮಗೆ ಅನಗತ್ಯ. ಆದರೆ ಕೃಷಿ ಕ್ಷೇತ್ರದಲ್ಲಿ ಈ ವೆಬಿನಾರ್ಗಳ ಬಗ್ಗೆ ಕೆಲವೊಂದು ವಿಚಾರಗಳನ್ನು ರೈತರಿಗೆ ತಿಳಿಯಬಯಸುತ್ತೇವೆ. ಇದು ರೋಗಿ ಬಯಸಿದ್ದೂ ಹಾಲು, ವೈದ್ಯ ಕೊಟ್ಟದ್ದೂ ಹಾಲು ಎಂಬಂತಾಗಿದೆ. ಮೇಲುನೋಟಕ್ಕೆ ಇದು ರೈತರ ಸೇವೆ ಎಂದು ಕಂಡರೂ ಇದರಲ್ಲಿ ಕೆಲವು ಪೇಪರ್ ವರ್ಕ್ ಮತ್ತು ಹಣ ಖರ್ಚು ಮಾಡುವ ದಂಧೆ ಇರಲೂ ಬಹುದು. ವೆಬಿನಾರ್ ಎಂದರೆ ಕೇವಲ ಸಂಬಂಧಿಸಿದವರು  ಮಾತ್ರ ತಮ್ಮ…

Read more
ಮಣ್ಣಿನ ಆರೋಗ್ಯ ತಿಳಿಯಲು ಅದರ ಪರೀಕ್ಷೆ

ಮಣ್ಣಿನ ಆರೋಗ್ಯ ತಿಳಿಯಲು ಅದರ ಪರೀಕ್ಷೆ .

ಮಣ್ಣು ಅದರಷ್ಟಕ್ಕೇ ಇದ್ದರೆ ಅಂದರೆ ಕಾಡು , ಮರಮಟ್ಟು ಬೆಳೆಯುತ್ತಾ ಇದ್ದರೆ ಅದರ ಆರೋಗ್ಯ ಸ್ಥಿತಿ ವ್ಯತ್ಯಾಸ ಆಗುವುದಿಲ್ಲ. ಬೆಳೆ ಬೆಳೆಸುವಾಗ ಬಳಸುವ ಬೆಳೆ ಪೋಷಕಗಳು ಮಣ್ಣಿನ ಗುಣವನ್ನು ಸ್ವಲ್ಪ ಮಟ್ಟಿಗೆ ವ್ಯತ್ಯಾಸ ಮಾಡುತ್ತವೆ. ಇದನ್ನು ಮಣ್ಣಿನ ಆರೋಗ್ಯ ಕೆಡುವುದು ಎಂದು ಹೇಳಬಹುದು. ಮಣ್ಣಿನ ಆರೋಗ್ಯ ಗುಣದ ಮೇಲೆ ನಾವು ಬೆಳೆಸುವ ಬೆಳೆಯ ಪ್ರತಿಫಲ ಇರುತ್ತದೆ. ಇದನ್ನು ತಿಳಿದು ಕೃಷಿ ಮಾಡಿದರೆ ನಿರೀಕ್ಷೆಯ ಫಲಿತಾಂಶ ಲಭ್ಯವಾಗುತ್ತದೆ. ಮಣ್ಣು ಸೃಷ್ಠಿಯ ಅತ್ಯದ್ಬುತ ಕೊಡುಗೆ. ಮಣ್ಣಿಲ್ಲದೆ ಯಾವಜೀವಿಯೂ ಬದುಕಲಾರದು, ಮಣ್ಣಿನಿಂದ…

Read more
method of green leaf mulching

ಹೊಲಕ್ಕೆ ಈ ಸೊಪ್ಪುಗಳನ್ನು ಹಾಕಿದರೆ ಗೊಬ್ಬರ ಉಳಿಸಬಹುದು.

ಮೆದು ಸ್ವರೂಪದ ಹಸುರು ಸೊಪ್ಪು ಅಧಿಕ ಸಾರಗಳನ್ನು ಒಳಗೊಂಡಿರುತ್ತದೆ. ಹೆಚ್ಚಾಗಿ ದ್ವಿದಳ ಜಾತಿಯವು ಉತ್ಕೃಷ್ಟ. ಇಂತಹ ಸಸ್ಯಗಳಲ್ಲಿ ಕೆಲವು ಅಲ್ಪಾವಧಿಯ ಸಸ್ಯಗಳು  ಮತ್ತು ಕೆಲವು ಧೀರ್ಗಾವಧಿಯ ಮರಮಟ್ಟುಗಳು. ಇದನ್ನು ನಾವು ಗುರುತಿಸಿ ಬೆಳೆಸಿ ಬಳಸಬೇಕು. ಇವು ಮಣ್ಣಿಗೆ ಹೊಸ ಜೀವ ಚೈತನ್ಯವನ್ನು ಕೊಡುತ್ತವೆ. ಬೆಳೆ ಉತ್ತಮವಾಗುತ್ತದೆ. ಬಹಳ ಜನ ತಮ್ಮ ಹೊಲಕ್ಕೆ ಬೇರೆ ಬೇರೆ ಸಾವಯವ ಗೊಬ್ಬರಗಳನ್ನು ಬಳಕೆ ಮಾಡುತ್ತಾರೆ. ಕೆಲವರು ಒಣ ತರೆಗೆಲೆ ಹಾಗೂ ಒಣ ತ್ಯಾಜ್ಯಗಳನ್ನು ಬಳಕೆ ಮಾಡುತ್ತಾರೆ. ಇದರಲ್ಲಿ ಹಾನಿ ಏನೂ ಇಲ್ಲವಾದರೂ…

Read more

ಸಾವಯವ ಗೊಬ್ಬರ ನೀವೇ ಮಾಡುವುದು ಉತ್ತಮ.

ಸಾವಯವ ಗೊಬ್ಬರ ತಯಾರಿಸುವುದು  ನಮಗೇನೂ ಹೊಸತಲ್ಲ.  ಹತ್ತಿಪ್ಪತ್ತು ವರ್ಷದ  ಹಿಂದೆ ಇದನ್ನು ನಾವು ಕೊಂಡು ತರುತ್ತಿರಲಿಲ್ಲ. ನಮ್ಮಲ್ಲೇ ತಯಾರಿಸುತ್ತಿದ್ದೆವು. ಈಗ ನಮಗೆ ಹೊರಗಿನ ವಸ್ತು ಸುಂದರವಾಗಿ ಕಾಣುವ ಕಾರಣ ಅದಕ್ಕೆ ಮಾರು ಹೋಗುತ್ತಿದ್ದೇವೆ.  ನಮ್ಮಲೇ ಎಲ್ಲಾ ಪರಿಕರಗಳು ಇರುವಾಗ  ಯಾಕೆ ಬೇರೆ ಕಡೆಯಿಂದ ಗೊಬ್ಬರಗಳನ್ನು ತರಬೇಕು. ಯಾವ  ತಯಾರಕರಲ್ಲೂ ಮೂಲವಸ್ತುಗಳು ಅವರ  ಬಳಿ ಇಲ್ಲ. ಅವರೂ ಬೇರೆ ಕಡೆಯಿಂದ ತಂದು  ಹೊಸ ಚೀಲದಲ್ಲಿ ತುಂಬಿ ನಮಗೆ ಮಾರಾಟ ಮಾಡುವುದು. ಸಾವಯವ ಗೊಬ್ಬರ ನಾವು ಮಾಡಿದರೆ  ಚಿನ್ನ. ಕೊಂಡು…

Read more
leaf de composing on field

ತೋಟಕ್ಕೆ ಸೊಪ್ಪು ಹಾಕಿ- ಮಣ್ಣಿನ ಆರೋಗ್ಯ ಹೆಚ್ಚಿಸಿ.

ತೋಟಕ್ಕೆ, ಗದ್ದೆಗೆ  ಹಾಗೆಯೇ ಇನ್ನಿತರ ಬೆಳೆಗಳಿಗೆ ಅನಾದಿ ಕಾಲದಿಂದಲೂ  ರೈತರು ಸೊಪ್ಪು ಹಾಕುತ್ತಿದ್ದರು. ಸೊಪ್ಪು ಹಾಕುವುದರಿಂದ ತುಂಬಾ ಪ್ರಯೋಜನ ಇದೆ. ಇದು ಉತ್ತಮ ಬೇಸಾಯ ಕ್ರಮ.ಮಣ್ಣಿನ ಸೂಕ್ಷ್ಮಾಣು ಜೀವಿಗಳ ಉತ್ತಮ ಕಾರ್ಯಚಟುವಟಿಕೆಗೆ ನೆರವಾಗಲು ಹಸುರೆಲೆ ಗೊಬ್ಬರ ಸಹಾಯಕ. ಸೊಪ್ಪು ಎಂದರೆ ಹಸುರೆಲೆ ಗೊಬ್ಬರ. ಹಸುರೆಲೆಗಳಲ್ಲಿ ಮುಖ್ಯ ಹಾಗೂ ಲಘು ಪೋಷಕಾಂಶಗಳು ಇರುವ ಕಾರಣ ಇದು ಕರಗಿ ಮಣ್ಣಿಗೆ ಸೇರಿ ಪೋಶಕಾಂಶಗಳನ್ನು ಬಿಡುಗಡೆ ಮಾಡುತ್ತದೆ. ಸಾಮಾನ್ಯವಾಗಿ ಮಳೆಗಾಲದಲ್ಲಿ ಹಸಿ ಸೊಪ್ಪನ್ನು ಹಾಕುತ್ತಾರೆ. ಅದು ಮಳೆಗಾಲ ಕಳೆಯುವಾಗ ಕರಗಿ ಗೊಬ್ಬರವಾಗುತ್ತದೆ….

Read more
ಸಲ್ಫೇಟ್ ಆಫ್ ಪೊಟ್ಯಾಶ್ SOP

ನಿಮ್ಮ ಬೆಳೆಗೆ ಯಾವ ರಂಜಕ ಗೊಬ್ಬರ ಸೂಕ್ತ.

ರಂಜಕ ಎಂಬುದರ ಮೂಲ ಶಿಲೆ ಅಥವಾ ಖನಿಜ.  ಇದರ ಅಧಾರದಲ್ಲಿ ರಾಸಾಯನಿಕ ಮೂಲದಲ್ಲಿ ರಂಜಕ ಗೊಬ್ಬರವನ್ನು ತಯಾರಿಸಲಾಗುತ್ತದೆ. ರಂಜಕ ಎಂಬ ಧಾತುವನ್ನು ಸಸ್ಯಗಳು ನೇರವಾಗಿ ಬಳಕೆ ಮಾಡುವುದೇ ಇಲ್ಲ. ಇದು ಒಂದು ಸ್ವತಂತ್ರ ಪೊಷಕ ಅಲ್ಲ. ಇದನ್ನು ಮಣ್ಣಿನಲ್ಲಿರುವ ರಂಜಕ ಕರಗಿಸಿ ಕೊಡುವ ಬ್ಯಾಕ್ಟೀರಿಯಾ, ಶಿಲೀಂದ್ರಗಳು ಸಸ್ಯಗಳಿಗೆ  ಲಭ್ಯವಾಗುವಂತೆ ಮಾಡುತ್ತವೆ. ರಂಜಕ ಗೊಬ್ಬರದಲ್ಲಿ ಮೂರು  ವಿಧ. ಎರಡು ಬಗೆಯವು ನೀರಿನಲ್ಲಿ ಕರಗುವ ರೂಪದ ರಂಜಕ ಮತ್ತು ಒಂದು  ನೀರಿನಲ್ಲಿ ಕರಗದ ರೂಪದ ರಂಜಕ.  ಮಾರುಕಟ್ಟೆಯಲ್ಲಿ ಲಭ್ಯವಿರುವ  ಸಿಂಗಲ್…

Read more
Farmer harvesting the watermelon

ರೈತರೇ ಹೆಚ್ಚು ಬೆಳೆಸಲು ಹೋಗದಿರಿ- ಪರಿಸ್ಥಿತಿ ಸರಿಯಾಗಿಲ್ಲ…

ಹಿರಿಯರು ಒಂದು ಮಾತು ಹೇಳುತ್ತಾರೆ, ನಿಮ್ಮ ತಲೆಗೆ ನಿಮ್ಮದೇ ಕೈ ಎಂದು. ನಾವು ಬದುಕಲು ನಾವೇ ದುಡಿಯಬೇಕು. ಇದು ಸರಿ ಎಲ್ಲಾ ಕ್ಷೇತ್ರಗಳಲ್ಲೂ ಹೀಗೇನೇ. ಆದರೆ ಕೃಷಿ ಕ್ಷೇತ್ರ ಇದಕ್ಕಿಂತ ಭಿನ್ನ. ಇಲ್ಲಿ ನಾವು ಎಷ್ಟೂ ದುಡಿಯಬಹುದು. ಆದರೆ ಆ ದುಡಿಮೆಗೆ  ಪ್ರತಿಫಲ ಕೊಡುವವರು ಬೇರೆಯವರು. ಇದರಿಂದಾಗಿ ಕೃಷಿ ಕ್ಷೇತ್ರ ಇನ್ನು ಕೆಲವು ವರ್ಷ ಕಾಲ ಮಂಕಾಡೆ ಮಲಗುವ ಸಾಧ್ಯತೆ ಇದೆ. ಕೊರೋನಾ ಉಳಿದೆಲ್ಲಾ ಕ್ಷೇತ್ರಗಳನ್ನು ಬಾದಿಸಿದ್ದು, ಅತ್ಯಲ್ಪ. ಒಂದು ಉದ್ದಿಮೆ ಉತ್ಪಾದನೆ ಮಾಡದಿದ್ದರೆ, ಏನೂ ಆಗುವುದಿಲ್ಲ….

Read more
ನಾವೇ ಮಣ್ಣು ಪರೀಕ್ಷಿಸುವ ವಿಧಾನ

ಮಣ್ಣು ಪರೀಕ್ಷೆ ನೀವೇ ಮಾಡುವುದು ಹೀಗೆ.

ಮಣ್ಣು ಬೆಳೆ ಉತ್ಪಾದನೆಗೆ ಒಂದು ಶಕ್ತಿ.  ಇದರ ಬೌತಿಕ ಗುಣಧರ್ಮ , ಜೈವಿಕ ಗುಣದರ್ಮ, ರಾಸಾಯನಿಕ ಗುಣ ಸರಿಯಾಗಿದ್ದರೆ ಅದರಲ್ಲಿ ಬೆಳೆಯುವ ಬೆಳೆ ಉತ್ತಮ ಫಲವನ್ನು ಕೊಡುತ್ತದೆ. ಮಣ್ಣಿನ ಬೌತಿಕ ಗುಣಧರ್ಮಗಳ ಮೇಲೆ ಮಣ್ಣು ಹೇಗಿದೆ, ಇದರಲ್ಲಿ ಫಸಲು ಹೇಗೆ ಪಡೆಯಬಹುದು ಎಂಬುದನ್ನು ನಿರ್ಧರಿಸಬಹುದು. ಬಹಳಷ್ಟು ಜನ ರೈತರ ಹೊಲದಲ್ಲಿ ಬೆಳೆಗಳು ಕೈಕೊಡುವುದಕ್ಕೆ ಮೂಲ ಕಾರಣ ಅವರ ಹೊಲದ ಮಣ್ಣಿನ  ಗುಣಧರ್ಮ. ಮಣ್ಣು ಸಸ್ಯ ಬೆಳವಣಿಗೆಗೆ ಅನುಕೂಲಕರವಾಗಿದ್ದರೆ ಮಾತ್ರ ಎಲ್ಲವೂ ಸುಲಭ. ಜಮೀನಿನಲ್ಲಿ ಅಗೆಯುವಾಗ ಯಾವ ರೀತಿಯ…

Read more
ಹೂ ಬೆಳೆದವರಿಗೂ ನಷ್ಟ ಮಾರುವವರಿಗೂ ನಷ್ಟ

ಕೃಷಿ ಕ್ಷೇತ್ರವನ್ನು ಬಗ್ಗು ಬಡಿಯಲಿದೆ ಕೊರೋನಾ ಮಹಾಮಾರಿ.

ಈಗಾಗಾಲೇ ಹಣ್ಣು ಹಂಪಲು, ಹೂವು, ತರಕಾರಿ ಬೆಳೆದ ರೈತರು ಭಾರೀ ನಷ್ಟ ಅನುಭವಿಸಿದ್ದಾರೆ. ಸದ್ಯವೇ ಹಾಲಿಗೆ ಬೇಡಿಕೆ ಕಡಿಮೆಯಾದ ಕಾರಣ ಹಾಲಿನ ಬೆಲೆಯೂ ಇಳಿಮುಖವಾಗುವ ಸೂಚನೆ ಇದೆ. ನಷ್ಟ ಭರ್ತಿಗಾಗಿ ಮತ್ತೆ ಅದೇ ಬೆಳೆ ಬೆಳೆಯುವ ಬದಲು ಆಹಾರ ಬೆಳೆಗಳ ಕಡೆಗೆ ಗಮನಹರಿಸುವುದು ಉತ್ತಮ. ಪರಿಸ್ಥಿತಿ ಸುಧಾರಣೆಯಾದ ನಂತರ ಇಂತಹ ಬೆಳೆಗಳನ್ನು ಬೆಳೆಸುವುದು ಸೂಕ್ತ.  ಕೊರೋನಾ ಮಹಾಮಾರಿ ಪ್ರಾರಂಭವಾಗಿ 3 ತಿಂಗಳು ಕಳೆದಿದೆ ಅಷ್ಟೇ . ಈ ತನಕ ಕೆಲವು ಬೆಳೆಗಾರರಿಗೆ ನಷ್ಟವಾಯಿತು. ಅದು ಮುಗಿದ ಸುದ್ದಿಯಾಯಿತು….

Read more
ಹೂ ಗೊಂಚಲು ಚೆನ್ನಾಗಿ ಬರಲು ರಂಜಕ ಗೊಬ್ಬರ

ಹೂವು ಗೊಂಚಲು ಚೆನ್ನಾಗಿ ಬರಲು ರಂಜಕ ಗೊಬ್ಬರ ಅಗತ್ಯ.

ಕರಾವಳಿ ಮಲೆನಾಡಿನಲ್ಲಿ ಅಡಿಕೆ , ತೆಂಗು, ಕರಿಮೆಣಸು ಬೆಳೆಗಾರರು  ಕೊಳೆ ರೋಗಕ್ಕೆ ರಾಮಬಾಣವಾಗಿ ಬಳಸಿದ್ದ ಪೊಟ್ಯಾಶಿಯಂ ಫೋಸ್ಪೋನೇಟ್ ಎಂಬ ತಯಾರಿಕೆಯಲ್ಲಿ ಇದ್ದದ್ದು ಬಹುಪಾಲು ರಂಜಕ. ಇದು ಸಸ್ಯಗಳಿಗೆ ರೋಗ ನಿರೋಧಕ ಶಕ್ತಿ ಕೊಡುವ  ತಾಕತ್ತು ಇದೆ. ಸರಿಯಾದ ಪ್ರಮಾಣದಲ್ಲಿ ಇದನ್ನು ಕೊಟ್ಟರೆ ಅದು ಫಸಲು ಹೆಚ್ಚಳಕ್ಕೂ ಸಹಾಯಕ. ಸಸ್ಯಕ್ಕೆ ಜೀವ ಕೊಡುತ್ತದೆ: ಒಂದು ಸಸ್ಯ ಬದುಕಬೇಕಾದರೆ ಅದಕ್ಕೆ ಬೇರು ಬರಲೇ ಬೇಕು. ಈ ಬೇರು ಬರಲು ಪ್ರೇರಣೆ ಕೊಡುವ ಪೊಷಕ ಎಂದರೆ ಅದು ರಂಜಕ. ಇದು ಸಸ್ಯಗಳಿಗೆ…

Read more
error: Content is protected !!