ಮಿಡತೆಗಳಿಗೆ ಅಂಜಬೇಕಾಗಿಲ್ಲ.

ಜನರಲ್ಲಿ ಭಯ ಮೂಡಿಸಿದ ಮಿಡತೆ ಹಾವಳಿ ಬಗ್ಗೆ ಹಿರಿಯ ಕೀಟ ಶಾಸ್ತ್ರಜ್ಞ, ಕರಾವಳಿ ಕರ್ನಾಟಕದ ಕೃಷಿ ತೋಟಗಾರಿಕಾ ವಲಯ ಸಂಶೋಧನಾ ಕೇಂದ್ರದ ಮುಖ್ಯಸ್ಥರಾದ ಶ್ರೀ ಎಸ್ ಯು ಪಾಟೀಲ್ ರವರು ಹೇಳುವ ಮಾತುಗಳು ಇವು. ಮೇಲಿನ ಧ್ವನಿ ಮುದ್ರಿಕೆಯಲ್ಲಿ ಈ ವಿಚಾರದ ಬಗ್ಗೆ ಶ್ರೀಯುತರು ವಿವರವಾಗಿ ಹೇಳಿದ್ದಾರೆ. ಈ ಮಿಡತೆಗಳಿಂದ ಯಾವ ಹಾನಿಯೂ ಉಂಟಾಗದು ಭಯಪಡುವ ಅಗತ್ಯ ಇಲ್ಲ.ಮಹಾರಾಷ್ಟ್ರ ದಾಟಿ ಬರುವುದೇ ಸಂದೇಹ. ಮಿಡತೆಗಳಲ್ಲಿ ಉದ್ದ ಮೀಸೆಯವು ಪರಭಕ್ಷಕಗಳು. ಗಿಡ್ಡ ಮೀಸೆಯವು ಮಾತ್ರ ಸ್ವಲ್ಪ ಹಸುರನ್ನು ತಿನ್ನುವವುಗಳು….

Read more

ಮಿಡತೆಗಳು – ನಮ್ಮ ತಲೆಯೊಳಗೆ ಹೊಕ್ಕಿದ ಹುಳಗಳು!

ಉತ್ತರ ಭಾರತದ ಹರ್ಯಾಣ, ಉತ್ತರ ಪ್ರದೇಶ, ಪಂಜಾಬ್, ರಾಜಸ್ಥಾನ , ಮಧ್ಯಪ್ರದೇಶ ಮುಂತಾದ ಕಡೆ ಮಿಡತೆಗಳು ರೈತರ ಹೊಲಕ್ಕೆ ಧಾಳಿ ಮಾಡಿ ದ ವರದಿ ಇದೆ. ಈಗ ಅದು ಮಹಾರಾಷ್ಟ್ರದ  ನಾಗ್ಪುರ ಸುತ್ತಮುತ್ತ  ಇದೆಯಂತೆ. ಇನ್ನು ಇದು ಮಹಾರಾಷ್ಟ್ರದ ಗಡಿಯಾದ ಗುಲ್ಬರ್ಗಾಕ್ಕೆ ಬಂದರೆ ಏನು ಗತಿ ಎಂದು ರೈತರು ಆತಂಕದಲ್ಲಿದ್ದಾರೆ. ಅಂತದ್ದೇನೂ ಆಗುವುದಿಲ್ಲ. ಮೂಲದಲ್ಲಿ ಇದ್ದಷ್ಟು ಸಂಖ್ಯೆ ಮುಂದುವರಿದಂತೆ ಕಡಿಮೆಯಾಗಿದೆ. ಇನ್ನು ಕರ್ನಾಟಕಕ್ಕೆ ಬಂದಾಗ ಅದರ ಸಂಖ್ಯೆ ತುಂಬಾ ಕಡಿಮೆಯಾಗಬಹುದು.  ಈ ಮಿಡತೆಗೆಳು ನಾವು ಕರೆಯುವ ಗ್ರಾಸ್…

Read more
ಬೋರ್ಡೋ ದ್ರಾವಣ ಸಿಂಪಡಿಸಿದ ಮರ

ಬೋರ್ಡೋ ದ್ರಾವಣ ತಾಯಾರಿಕೆ ವಿಧಾನ ಇದು.

ಸುಣ್ಣ ಮತ್ತು ಮೈಲು ತುತ್ತೆಯನ್ನು ಸರಿಯಾದ ಪ್ರಮಾಣದಲ್ಲಿ ಮಿಶ್ರಣ ಮಾಡಿ ತಯಾರಿಸುವ ದ್ರಾವಣಕ್ಕೆ ಬೋರ್ಡೋ  ದ್ರಾವಣ (Bordeaux mixture )ಎಂದು ಹೆಸರು. ಇದು  ಕೊಳೆಯುವ ರೋಗಕ್ಕೆ ಕಾರಣವಾದ  ಶಿಲೀಂದ್ರದ ಬೀಜಾಣುಗಳನ್ನು ಮೊಳಕೆಯೊಡೆಯದಂತೆ  ಪ್ರತಿಬಂಧಿಸುವ ಶಕ್ತಿಯನ್ನು ಹೊಂದಿದೆ. ಪ್ರಾನ್ಸ್ ದೇಶದ ಬೊರ್ಡೋ ಎಂಬ ಪ್ರದೇಶದಲ್ಲಿ ದ್ರಾಕ್ಷಿ ತೋಟಗಳಲ್ಲಿ ಸಸ್ಯಾಣುಗಳಿಂದ ಉಂಟಾಗುವ ರೋಗವನ್ನು ನಿಯಂತ್ರಿಸಲು ಈ ಸಾಮಾಗ್ರಿಗಳ ಪಾಕವನ್ನು ಬಳಸಲಾಗುತ್ತಿತ್ತಂತೆ. ಅದನ್ನು ಮೈಸೂರು ಪ್ರಾಂತ್ಯದಲ್ಲಿ ಅಡಿಕೆ ಬೆಳೆಯುವ ಪ್ರದೇಶಗಳಲ್ಲಿ ಪರಿಚಯಿಸಿದವರು  ಲೆಸ್ಲಿ ಸಿ ಕೋಲ್ ಮನ್ Leslie Charles Coleman…

Read more
ಉಳುಮೆ ರಹಿತ ತೆಂಗಿನ ತೋಟ

ತೆಂಗಿನ ಮರದ ರಸ ಸೋರುವಿಕೆಗೂ ಉಳುಮೆಗೂ ಏನು ಸಂಬಂಧ?

ತೆಂಗಿನ ಮರಕ್ಕೆ ಅತೀ ದೊಡ್ಡ ರೋಗ ಎಂದರೆ ಕಾಂಡದಲ್ಲಿ ರಸ ಸೋರುವಿಕೆ. ರಸ ಸೋರುವಿಕೆ ಪ್ರಾರಂಭವಾಗಿ ಕೆಲವು ವರ್ಷಗಳ ನಂತರ ಮರ ಕಾಯಿ ಬಿಡುವುದು ನಿಲ್ಲಿಸುತ್ತದೆ. ನಿಧಾನವಾಗಿ ಮರ ಕೃಶವಾಗುತ್ತಾ ಬರುತ್ತದೆ. ಇದಕ್ಕೆ ಮೂಲ ಕಾರಣ ಮರದ ಬೇರು ಸಮೂಹಕ್ಕೆ ತೊಂದರೆ ಮಾಡಿರುವುದೇ ಆಗಿರುತ್ತದೆ. ಮರದ ಬುಡ  ಭಾಗ ಉಳುಮೆ ಮಾಡುವಾಗ ಬೇರುಗಳಿಗೆ ಗಾಯ ಅಗಿ ಈ ತೊಂದರೆ ಉಂಟಾಗುತ್ತದೆ. ಪ್ರತೀಯೊಬ್ಬ ತೆಂಗು ಬೆಳೆಯುವವರೂ ತೆಂಗಿನ ಮರದ ಬೇರು ವ್ಯವಸ್ಥೆ ಹೇಗೆ ಇದೆ. ಯಾಕೆ ಅದಕ್ಕೆ ಗಾಯ…

Read more
stump planted teak

ಸಾಗುವಾನಿ ಬೆಳೆಸಲು ಈ ಕಡ್ಡಿ ಸಾಕು.

ಕೇರಳದ ಮಲಪ್ಪುರಂ ಜಿಲ್ಲೆಯ ನೆಲಂಬೂರು ಒಂದು ಅರಣ್ಯ ಪ್ರದೇಶ ಎಂದೇ ಹೇಳಬಹುದು. ಇದು ಪಶ್ಚಿಮ ಘಟ್ಟದ ತಪ್ಪಲು. ಸ್ವಲ್ಪ ಮುಂದೆ ಹೋದರೆ ತಮಿಳುನಾಡಿನ ಗಡಿ. ಅದನ್ನು ದಾಟಿದರೆ  ಕರ್ನಾಟಕದ ಬಂಡೀಪುರ. ಈ ಬೆಟ್ಟ ಗುಡ್ಡಗಳ ಪ್ರದೇಶದುದ್ದಕ್ಕೂ ನೈಸರ್ಗಿಕವಾಗಿ ಬೆಳೆದ ಮರಮಟ್ಟುಗಳು, ನೆಟ್ಟು ಬೆಳೆಸಿದ ಸಾಗುವಾನಿಯ ಮರಮಟ್ಟುಗಳು, ಹೇರಳವಾಗಿ ಕಾಣಸಿಗುತ್ತವೆ. ಇಲ್ಲೆಲ್ಲಾ ಇರುವುದು ಸಾಗುವಾನಿ ( ತೇಗದ) ಬೇರು ತುಂಡು (stump) ನೆಟ್ಟ ಮರಗಳು. ಪ್ರಾರಂಭ: ಅದು ಬ್ರೀಟೀಷರ ಕಾಲ 1840 ರಲ್ಲಿ ಇವರು ತ್ರಿಕಾಲಿಯೂರು ದೇವಸ್ವಂ Thrikkaliyur…

Read more
ರಸಸಾರ pH ಸರಿ ಇರುವ ಮಣ್ಣು ಹೀಗಿರುತ್ತದೆ.

ಮಣ್ಣಿನ pH ಸ್ಥಿತಿ ಅವಲಂಭಿಸಿ ಫಸಲು ಮತ್ತು ಆರೋಗ್ಯ.

ಮಣ್ಣಿನ ಆರೋಗ್ಯ ಸ್ಥಿತಿಯನ್ನು ಅಳೆಯುವ ಮಾಪಕ pH (Potential of Hydrogen)  ಮೌಲ್ಯ. pH ಮೌಲ್ಯ ತಟಸ್ಥವಾಗಿದ್ದರೆ (ಸಮಸ್ಥಿತಿ)   ಅದು ಸಹನಾ ಸ್ಥಿತಿ ಯುಳ್ಳ ಮಣ್ಣು ಎನ್ನಿಸುತ್ತದೆ.   ಬೆಳೆ ಬೆಳೆಯುವ ಮಣ್ಣು  ಸಮಸ್ಥಿತಿಯಲ್ಲಿದ್ದರೆ ( nutral) ಅಲ್ಲಿ ಬೆಳೆಯುವ ಬೆಳೆಗೆ ನಾವು ಕೊಡುವ ಎಲ್ಲಾ ಪೋಷಕಗಳೂ ಸಮರ್ಪಕವಾಗಿ ದೊರೆತು  ಬೆಳೆಯಲ್ಲಿ ಫಸಲು ಉತ್ತಮವಾಗುತ್ತದೆ. ಮಣ್ಣಿನ ಆರೋಗ್ಯ ಸಹ ಉತ್ತಮವಾಗಿದ್ದು,  ರೋಗ ಕೀಟ ಬಾಧೆಯೂ ಕಡಿಮೆಯಾಗುತ್ತದೆ. ಬಹುತೇಕ ನಾವೆಲ್ಲಾ ತಾಂಬೂಲ ತಿಂದು ಬಲ್ಲವರು. ತಾಂಬೂಲ  ಜಾಗಿಯುವಾಗ  ವೀಳ್ಯದೆಲೆ, ಸುಣ್ಣ…

Read more
ಹತ್ತಾರು ಲಕ್ಷ ಬೆಲೆಬಾಳುವ ಸಾಗುವಾನಿ ಮರ.

ಸಾಗುವಾನಿಯೂ ಶ್ರೀಗಂಧಕ್ಕೆ ಸಮನಾದ ಮರ.

ಶ್ರೀಗಂಧ ಚಿನ್ನ ಚಿನ್ನವೇ. ಆದರೆ ನಮಗೆ ಅದನ್ನು ಉಳಿಸಿ ಅನುಭವಿಸುವ ಭಾಗ್ಯ ಬೇಕು! ಶ್ರೀಗಂಧ ಬೆಳೆಸಿ ಕೋಟಿ ನಿರೀಕ್ಷೆಯಲ್ಲಿ ನಿರಂತರ ಜೇಬಿನಲ್ಲಿ ಕೆಂಡ ಇಟ್ಟುಕೊಂಡು ಜೀವನ ಕಳೆಯುವ  ಬದಲು ಇದ್ಯಾವುದರ ಭಯವೂ ಇಲ್ಲದೆ ಸಾಗುವಾನಿ ಬೆಳೆಸಿ ಬದುಕಬಹುದು. ಕೋಟಿಯಲ್ಲದಿದ್ದರೂ ಲಕ್ಷಾಂತರ ಆದಾಯ ಕೊಡಬಲ್ಲ ಬೆಳೆ ಸಾಗುವಾನಿ ಮರ. ಇದು ರೈತರೆಲ್ಲರ ಗಮನದಲ್ಲಿ ಇರಬೇಕು. ಸಾಗುವಾನಿ ಅರವನ್ನು ಯಾರೂ ಕದ್ದುಕೊಂಡು ಹೋದಾರು ಎಂಬ ಭಯ ಇಲ್ಲ. ನೀವು ಇಚ್ಚಿಸಿದವರಿಗೆ ಮಾರಬಹುದು. ಎಷ್ಟು ಬೆಳೆಯಿತೋ ಅಷ್ಟು ಮೌಲ್ಯ ಹೆಚ್ಚಾಗುತ್ತದೆ. ಅಸಾಮಾನ್ಯ…

Read more
ಇಂತಹ ಬೆಳೆ ಬೆಳೆಯುವಾಗ ರಾಸಾಯನಿಕ ಪೊಷಕಗಳು ಬೇಕಾಗುತ್ತದೆ.

ಸಾವಯವ ಬಾಳೆ ಬೇಸಾಯ ಅಸಾಧ್ಯವಲ್ಲ.

ಸಾವಯವ ವಿಧಾನದಲ್ಲಿ ಬಾಳೆ ಬೆಳೆಸುವುದಾದರೆ ಆಗಾಗ ಪೋಷಕಗಳನ್ನು ಕೊಡುತ್ತಾ ತೀವ್ರ ನಿಗಾದಲ್ಲಿ ಬೆಳೆ ಬೆಳೆಸಬೇಕಾಗಿಲ್ಲ. ಬಾಳೆಗೆ ಎಷ್ಟು ಪೋಷಕಾಂಶಗಳು ಬೇಕಾಗುತ್ತದೆಯೋ ಅಷ್ಟನ್ನು ಒಂದು ಇಲ್ಲವೇ ಎರಡು ಕಂತುಗಳಲ್ಲಿ ಕೊಟ್ಟರೆ ಸಾಕು. ಭಾರೀ ಗೊನೆ ಬಾರದಿದ್ದರೂ ಸರಾಸರಿ 25  ಕಿಲೋ ತೂಕದ ಗೊನೆ ಪಡೆಯಬಹುದು. ತಿನ್ನುವ ಹಣ್ಣು ಆದ ಕಾರಣ ಸಾಧ್ಯವಾದಷ್ಟು  ರಾಸಾಯನಿಕ ಬಳಕೆ ಕಡಿಮೆ ಮಾಡಿ  ಬೆಳೆ ಬೆಳೆದರೆ ಆರೋಗ್ಯಕ್ಕೂ ಉತ್ತಮ. ಈ ನಿಟ್ಟಿನಲ್ಲಿ ಯಾವ ಯಾವ ಸಾವಯವ ಪೋಷಕಗಳನ್ನು ಬಳಸಿ ಉತ್ತಮ ಬಾಳೆ  ಗೊನೆ ಪಡೆಯಬಹುದು…

Read more

ಕೊಳೆ ರೋಗ ಬಾರದಿರುವಂತೆ ಮುನ್ನೆಚ್ಚರಿಕೆ.

ಕೊಳೆ ರೋಗಕ್ಕೆ ಕಾರಣವಾದ ಶಿಲೀಂದ್ರ ನಮ್ಮ ವಾತಾವರಣದಲ್ಲಿ ಎಲ್ಲಾ  ಕಡೆ ಬೀಜಾಣು ರೂಪದಲ್ಲಿ ಇರುತ್ತದೆ, ಇದು ಅನುಕೂಲ ಪರಿಸ್ಥಿತಿ  ಕೂಡಿ ಬಂದಾಗ ಬೀಜಾಂಕುರವಾಗುತ್ತದೆ. ಸಂತಾನಾಭಿವೃದ್ದಿ ಹೊಂದಿ ಅಡಿಕೆಯ ಎಳೆ ಕಾಯಿಗಳಿಗೆ ಹಾನಿ ಮಾಡಿ ಬೆಳೆ ನಷ್ಟಕ್ಕೆ  ಕಾರಣವಾಗುತ್ತದೆ. ಪ್ರಾರಂಭದಲ್ಲೇ ಬೀಜಾಂಕುರವನ್ನು ತಡೆದರೆ  ಪರಿಣಾಮ ಹೆಚ್ಚು. ತಜ್ಞರು ಕೊಳೆ ಔಷಧಿಯನ್ನು ಮುಂಗಾರು ಮಳೆ ಪ್ರಾರಂಭವಾಗುವ ಮುಂಚೆಯೇ ಅಡಿಕೆ ಗೊನೆಗಳಿಗೆ ಸಿಂಪರಣೆ ಮಾಡಬೇಕು ಎನ್ನುತ್ತಾರೆ. ನಾವು ಇನ್ನೂ ಅಡಿಕೆ  ಮಿಡಿಗಳು ಸಣ್ಣದಿವೆ. ಅದಕ್ಕೆ ಹೇಗಪ್ಪಾ ಔಷಧಿ ತಗಲುವುದು ಎಂದು ಸಾಧ್ಯವಾದಷ್ಟು…

Read more
ಮಾವಿನ ಹಣ್ಣು

ರಾಸಾಯನಿಕ ಬಳಸದೆ ಹಣ್ಣು ಮಾಡುವ ಸರಳ ವಿಧಾನ

ಹೆಚ್ಚಾಗಿ ಮಾವಿನ ಕಾಯಿ ಹಣ್ಣು ಮಾಡಲು ಹಿಂದಿನಿಂದಲೂ ಕ್ಯಾಲ್ಸಿಯಂ ಕಾರ್ಬೇಟ್ ಎಂಬ ಅಪಾಯಕಾರೀ ವಸ್ತುವನ್ನು ಬಳಸಲಾಗುತ್ತಿತ್ತು. ಈಗ ಹಾಗಿಲ್ಲ. ಅದರ ಬದಲಿಗೆ  ಅರೋಗ್ಯಕ್ಕೆ ಹಾನಿ ಇಲ್ಲದ ಹಣ್ಣು ಮಾಡುವ ವಿಧಾನವನ್ನು ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯವರು ಬೆಳೆಗಾರರಿಗೆ ತಿಳಿಸಿಕೊಟ್ಟಿದ್ದಾರೆ. ಇದನ್ನು ಬಹಳಷ್ಟು ಬೆಳೆಗಾರರು ಅಳವಡಿಸಿಕೊಂಡಿದ್ದಾರೆ. ನಮ್ಮ ರಾಜ್ಯದ ಮಾವಿನ ರಾಜದಾನಿ ಎಂದೇ  ಖ್ಯಾತವಾದ ಶ್ರೀನಿವಾಸಪುರದಿಂದ ಸಂಜೆ ಹೊತ್ತು ಲಾರಿಗೆ ಲೊಡ್ ಆದ ಮಾವು ಮರುದಿನ ತಲುಪಬೇಕಾದಲ್ಲಿಗೆ ತಲುಪುವಾಗ ಮೆತ್ತಗಾಗುತ್ತದೆ.  ಅದನ್ನು ಖರೀದಿಸಿವರು ಮರುದಿನ ಮಾರಾಟ ಮಾಡುವಾಗ ಬಣ್ಣ…

Read more
error: Content is protected !!