ಗರಿ ಕತ್ತರಿಸಿ- ಅಡಿಕೆ ಸಸಿ ಬೆಳೆವಣಿಗೆ ಹೆಚ್ಚಿಸಿ.

by | Feb 13, 2020 | Arecanut (ಆಡಿಕೆ) | 0 comments

ಅಡಿಕೆ ಸಸಿ ಬೆಳೆಸುವಾಗ ಮೊದಲೆರಡು  ವರ್ಷ ಉತ್ತಮವಾಗಿ ಬೆಳೆಸಿದರೆ ಅದರ ಭವಿಷ್ಯವೇ ಬದಲಾಗುತ್ತದೆ. ಮೊದಲ ಎರಡು ವರ್ಷ  ಬೆಳೆವಣಿಗೆ  ಉತ್ತೇಜಿಸಲು ಎಲೆ ಪ್ರೂನಿಂಗ್  ಸಹಕಾರಿ. ಇದನ್ನು ಕೆಲವು ರೈತರು ಮಾಡಿ ನೋಡಿದ್ದಾರೆ.

  • ಹಿಂದೊಂಮ್ಮೆ ಅಡಿಕೆ ಸಸ್ಯದ ಗರಿ ಕತ್ತರಿಸಿ ಸಸ್ಯವನ್ನು ಕುಬ್ಜವಾಗಿಸಬಹುದು ಎಂಬ ಪ್ರಚಾರ ಬಹಳ ಸುದ್ದಿಯಾಗಿತ್ತು.
  • ಆದರೆ ಅದರ ಹಿಂದೆ ಹೋದಾಗ ತಿಳಿದದ್ದು ಸಸಿ ಗಿಡ್ಡವಾಗುವುದಲ್ಲ.
  • ಸಸ್ಯ ಬೆಳವಣಿಗೆ ಸ್ವಲ್ಪ ಹೆಚ್ಚಳವಾಗುವುದು.
  • ಹಾಗೆಂದು ಎಲೆಗಳನ್ನೆಲ್ಲಾ ಕತ್ತರಿಸುವುದಲ್ಲ.
  • ಹಿತ ಮಿತ ಪ್ರೂನಿಂಗ್ ಅಷ್ಟೇ.

 ಮನುಷ್ಯ ಸಣ್ಣ ಪ್ರಾಯದಲ್ಲಿ  ಚೆನ್ನಾಗಿ ಬೆಳೆದರೆ ಮುಂದೆ ಅದೇ ಅವನಿಗೆ  ಆರೋಗ್ಯಕರ ಬೆಳವಣಿಗೆಗೆ ಅಡಿಪಾಯವಾಗುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವ ಸತ್ಯ. ಅದೇ ರೀತಿಯಲ್ಲಿ ಸಸ್ಯಗಳೂ ಸಹ. ಸಸಿ ನೆಟ್ಟು ಬಿಟ್ಟರೆ ಮುಗಿಯಲಿಲ್ಲ. ಅದನ್ನು ಮಕ್ಕಳನ್ನು ಸಾಕಿದಂತೆ  ಎಳವೆಯಲ್ಲಿ  ಬೆಳೆಸಬೇಕು.

  • ಹೇಗೆ ಬೆಳೆಸುವುದು ಎನ್ನುತ್ತೀರಾ?
  • ಬರೇ ಗೊಬ್ಬರ ಕೊಡುವುದು ಒಂದರಿಂದಲೇ ಸಸ್ಯವನ್ನು ಉತ್ತಮವಾಗಿ ಬೆಳೆಸಲಿಕ್ಕೆ ಆಗುವುದಿಲ್ಲ.
  • ಅದರ  ಜೊತೆಗೆ ಕೆಲವು ನಿರ್ವಹಣೆ ಕ್ರಮವನ್ನೂ ಪಾಲಿಸಿದರೆ  ಮಾತ್ರ ಬೆಳವಣಿಗೆ  ಉತ್ತಮವಾಗುತ್ತದೆ.

ಏನು ಮಾಡಬೇಕು:

  • ಅಡಿಕೆ  ಸಸ್ಯವನ್ನು ನೆಟ್ಟು ಆರು  ತಿಂಗಳ ತನಕ ಉತ್ತಮ ಬಸಿಗಾಲುವೆ ಮತ್ತು ಪೋಷಕಗಳನ್ನು ಕೊಟ್ಟು ಬೆಳೆಸಿರಿ.
  •   6 ತಿಂಗಳ ನಂತರ ಸುಳಿ ಭಾಗದ ಎರಡು ಎಲೆಯನ್ನು ಬಿಟ್ಟು ಕೆಳಭಾಗದ 2 ಎಲೆಯನ್ನು  ಅರ್ಧ ಪಾಲು ಕತ್ತರಿಸಿರಿ.
  • ಆಗ ಅದಕ್ಕೆ  ಬಳಕೆಯಾಗುವ ಪೋಷಕಗಳು  ಉಳಿತಾಯವಾಗುತ್ತದೆ.
  • ಹೊಸ ಎಲೆಯ ಬೆಳವಣಿಗೆ ಅದು ದೊರೆಯುತ್ತದೆ ಮತ್ತು ಅದರ ಬೆಳವಣಿಗೆ  ಶೀಘ್ರವಾಗುತ್ತದೆ.
  • ಗಿಡ ದೊಡ್ದದಾದ ನಂತರ ಇದನ್ನು ಮಾಡಬೇಕಾಗಿಲ್ಲ.
  • ಗಾಳಿ ಬೆಳಕು ಇರುವಲ್ಲಿ ಹೆಚ್ಚು ಪ್ರಯೋಜನಕಾರಿ.

ಅಹಿಂಸಾತ್ಮ್ಕವಾಗಿ ಇಷ್ಟು ಮಾತ್ರ ಕತ್ತರಿಸಬೇಕು

ಇದು ಹೇಗೆ:

  • ತೀರಾ ಎಳೆ ಸಸ್ಯದ ಗರಿಯನ್ನು ಕತ್ತರಿಸಬೇಡಿ. 5 ಕ್ಕಿಂತ ಹೆಚ್ಚು ಎಲೆ ಇದ್ದಾಗ ಮಾತ್ರ  ಕತ್ತರಿಸುವಿಕೆ ಪ್ರಾರಂಭಿಸಿ.
  • ಕತ್ತರಿಸುವಾಗ ಅರ್ಧ ಭಾಗ ಮಾತ್ರ  ಕತ್ತರಿಸಿ. ಬುಡದಿಂದ ಕತ್ತರಿಸಬೇಡಿ.
  • ಕೊಡಬೇಕಾದ ಎಲ್ಲಾ ಗೊಬ್ಬರಗಳನ್ನು  ಕೊಡಲೇ ಬೇಕು.
  • ಇದು  ಹೊಸ ಸುಳಿಗೆ  ಹೆಚ್ಚು ಆಹಾರ ದೊರೆಯುವಂತೆ ಮಾಡುತ್ತದೆ ಮತ್ತು ಅದಕ್ಕೆ ಶಕ್ತಿಯನ್ನು ಒದಗಿಸುತ್ತದೆಯೇ ವಿನಹ ಬೇರೇನೂ ಇಲ್ಲ.

ಇದು 1990  ನೇ ಇಸವಿಯಿಂದಲೂ ಬಳಕೆಯಲ್ಲಿದ್ದ ವಿಧಾನ. ಇದನ್ನು ಶಿರಸಿಯ ದಿವಂಗತ ಭೈರುಂಬೆ  ಜಿ ಎಂ ಹೆಗಡೆಯವರು ಮಾಡುತ್ತಿದ್ದರು. ಈಗ ಕೆಲವರು ಹೀಗೆ ಮಾಡುತ್ತಾರೆ.

ಅಡಿಕೆ  ಬೆಳೆಸುವವರು ಈ ರೀತಿ ಸಸ್ಯ ಬೆಳವಣಿಗೆಯನ್ನು ನಿಯಂತ್ರಿಸುದರಿಂದ  ಬೇಗ ಸಸ್ಯ ಬೆಳವಣಿಗೆ ಪಡೆಯಬಹುದು.

 
 
 
 
;
 
 

0 Comments

Submit a Comment

Your email address will not be published. Required fields are marked *

Get in Touch

For all kinds of inquiries, regarding the Krushiabhivruddi website and its other media channels, including corporate advertising contact us on 

support@krushiabhivruddi.com
+91-9663724066

ಒಂದು ಎಕ್ರೆಯಲ್ಲಿ ಮಿಶ್ರ ಬೆಳೆಯಿಂದ ಕನಿಷ್ಟ 3 ಲಕ್ಷ ಆದಾಯ ಗಳಿಸುವ ರೈತ.

Categories

error: Content is protected !!