ಬಾಳೆ ನೆಡುವಾಗ ಥಿಮೆಟ್ ಬದಲು ಇದನ್ನು ಹಾಕಿ.

banana bunch

ಬಾಳೆ ಬೆಳೆಯಲ್ಲಿ  ಪ್ರಮುಖ ಸಮಸ್ಯೆಯಾದ ಕಾಂಡ – ಗಡ್ಡೆ  ಕೊರಕ ಹುಳದ ನಿಯಂತ್ರಣಕ್ಕೆ ಫೋರೇಟ್ ಮುಂತಾದ ವಿಷದ ಬದಲು ಜೈವಿಕ ಪರಿಹಾರ ಸುರಕ್ಷಿತ. 
ಬಾಳೆ ಗೊನೆ ಹಾಕುವ ಸಮಯದಲ್ಲಿ ಅದಕ್ಕೆ ದಿಂಡು ಹುಟ್ಟಿಕೊಳ್ಳುತ್ತದೆ.  ದಿಂಡು ಬರುವ ತನಕ ಬಾಳೆಗೆ ಅಂತಹ ಕೀಟ ಸಮಸ್ಯೆ ಇಲ್ಲ. ಯಾವಾಗ ಗೊನೆ ಹಾಕುತ್ತದೆಯೋ ಆಗ ಮುನ್ಸೂಚನೆ ಇಲ್ಲದೆ ಕಾಂಡ ಕೊರಕ ಹುಳದ ತೊಂದರೆ ಉಂಟಾಗುತ್ತದೆ. ಈ ಕಾಂಡ ಕೊರಕ ಹುಳ ಬಾಧೆ ಇಲ್ಲದ ಬಾಳೆ ತಳಿಗಳೇ ಇಲ್ಲ. ಇದಕ್ಕೆ ಎಲ್ಲರೂ ವಿಷ ರಾಸಾಯನಿಕ ಬಳಸುತ್ತಾರೆ. ಇದರ ಬದಲು . ಜೈವಿಕ ಕೀಟನಾಶಕವನ್ನು ನೆಡುವಾಗ ಹಾಕಿದರೆ ಅದರ ತೊಂದರೆ ಉಂಟಾಗದು ಎನ್ನುತ್ತಾರೆ ಅಧ್ಯಯನ ನಡೆಸಿದ ವಿಜ್ಞಾನಿಗಳು.

stem notice this symptom

  • ಬಾಳೆಗೆ ಶಕ್ತಿ ಕೊಡುವ ಅಂಗ ಅದರ ದಿಂಡು.
  • ಈ ದಿಂಡು ಹಾಳಾದರೆ ಬಾಳೆಯ ಬೆಳೆವಣಿಗೆ ನಿಂತಂತೆ.
  • ಮೊದಲು ಎಲೆ  ಕೆಳಭಾಗದ ಎಲೆಗಳು ಹಣ್ಣಾಗುತ್ತದೆ.
  • ಕ್ರಮೇಣ ಮೇಲಿನ ಎಲೆಗಳು ಹಳದಿಯಾಗಲಾರಂಭಿಸುತ್ತದೆ.
  • ಗೊನೆಯಲ್ಲಿ ಕಾಯಿಗಳು ಬೆಳವಣಿಗೆಯಾಗುವುದು ನಿಲ್ಲುತ್ತದೆ.
  • ಕೆಲವೇ ದಿನಗಳಲ್ಲಿ ಗೊನೆ ಕಾಂಡಕ್ಕೆ ಜೋತು ಬೀಳುತ್ತದೆ.

ಬಾಳೆಯ ಗೊನೆ ಬೆಳೆಯದಿರಲು ಕಾರಣ:

Stem eating larvae

  • ಬಾಳೆಯ ದಂಟಿಗೆ ಹಾನಿಯಾದಾಗ ಬಾಳೆ ಕಾಯಿಗಳ ಬೆಳವಣಿಗೆ ನಿಲ್ಲುತ್ತದೆ.
  • ಬಾಳೆಯ ಗಡ್ಡೆಗೆ ಮೊದಲು ಒಂದು ಜಾತಿಯ ಕಪ್ಪು ಮೂತಿಯ ಹುಳ ಪ್ರವೇಶವಾಗುತ್ತದೆ.
  • ಅಲ್ಲಿ ಮೊಟ್ಟೆ ಇಡುತ್ತದೆ.  ಮೊಟ್ಟೆ ಮರಿಗಳಾಗಿ ಕಾಂಡದ ಮೇಲೆ ಹೋಗಿ ದಿಂಡನ್ನು ತಿನ್ನಲು ಪ್ರಾರಂಭಿಸುತ್ತದೆ.
  • ಅಲ್ಲಿಯೇ ಅದು ಪ್ಯೂಪೆ ಹಂತವನ್ನೂ ಮುಗಿಸಿ ಮತ್ತೆ ದುಂಬಿಯಾಗಿ ಹೊರ ಬರುತ್ತದೆ.
  • ದಿಂಡನ್ನು ತಿನ್ನುವ ಕಾರಣ ಬಾಳೆ ಕಾಯಿಯ ಬೆಳವಣಿಗೆ ನಿಲ್ಲುತ್ತದೆ.
  • ಬಾಳೆ ಗೊನೆಗೆ ಎಲ್ಲಾ ಆಹಾರವೂ ದಿಂಡಿನ ಮೂಲಕವೇ ಸರಬರಾಜು ಆಗುವುದು.
  • ಅದು ನಿಂತರೆ ಬಾಳೆ ಬೆಳವಣಿಗೆ ಆಗಲಾರದು.

weevil adult

  • ಪ್ರಾರಂಭಿಕ ಹಂತದಲ್ಲಿ ಹುಳ ಹಾನಿ ಮಾಡಿದರೆ ಗೊನೆ ಯಾವ ಉಪಯೋಗಕ್ಕೂ ಬಾರದೆ ಎಳೆಯದರಲ್ಲೇ  ಒಣಗಿ ಹಾಳಾಗುತ್ತದೆ.
  • ಹೆಚ್ಚಿನ ಸಂಧರ್ಭಗಳಲ್ಲಿ ಗೊನೆ ಹೊರಗೆ ಬರುವ ಮುಂಚೆ ಸುಳಿ ಒಣಗುತ್ತದೆ.
  • ಇದಕ್ಕೆ ಕಾರಣ ಹುಳ ದಿಂಡಿಗೆ ಹಾನಿ ಮಾಡಿರುವುದು.
  • ಬಾಳೆ ಗೊನೆ ಬೆಳೆಯುತ್ತಿರುವಾಗ, ಕೊನೆ ಹಂತದಲ್ಲಿ ಬಾಧಿತವಾದರೆ  ಸ್ವಲ್ಪ ಗೊನೆ ಬೆಳವಣಿಗೆ ಆಗಬಹುದು.
  • ಬಹುತೇಕ ರೈತರು ತಮ್ಮ ಬಾಳೆಯ ಗೊನೆ ಪುಷ್ಟಿಯಾಗುವುದಿಲ್ಲ ಎನ್ನುತ್ತಾರೆ.
  • ಇಂತವರು ಸೂಕ್ಷ್ಮ ವಾಗಿ ಗಮನಿಸಿದರೆ  ಬಾಳೆಯ ಕಾಂಡ ಅಥವಾ ಗಡ್ಡೆಯಲ್ಲಿ ಹುಳ ಬಾಧಿಸಿರುವುದು ಕಂಡು ಬರುತ್ತದೆ.

Damage by larvae

ಜೈವಿಕ ನಿಯಂತ್ರಣ ಸುರಕ್ಷಿತ:

  •  ಕಾಂಡ ಕೊರಕ ದುಂಬಿಯ ನಿಯಂತ್ರಣಕ್ಕೆ ಹೆಚ್ಚಿನ ವಾಣಿಜ್ಯ ಬಾಳೆ ಬೆಳೆಗಾರರು ಬುಡಕ್ಕೆ ಕ್ಲೋರೋಫೆರಿ ಫೋಸ್ ಅಥವಾ ಥಿಮೆಟ್ ಹಾಕುತ್ತಾರೆ.
  • ಇದರ ಉಳಿಕೆಗಳು ಬಾಳೆ ಕಾಯಿಯ ಮೂಲಕ ತಿನ್ನುವವರಿಗೆ ತಲುಪುತ್ತದೆ.
  • ವಾಣಿಜ್ಯಿಕವಾಗಿ ಬೆಳೆ ಬೆಳೆಯುವಾಗ ಮುನ್ನೆಚ್ಚರಿಕೆಯಾಗಿ ಇದಕ್ಕೆ ಪರಿಹಾರ  ಕೈಗೊಳ್ಳದೆ ಇದ್ದರೆ ಬಾಳೆ ಬೆಳೆಯೇ ನಷ್ಟವಾಗಬಹುದು.
  • ಹುಳ ಬಾಧಿಸಿದ ನಂತರ ಪರಿಹಾರ ಕ್ರಮ ಪ್ರಯೋಜನ ನೀಡುವುದಿಲ್ಲ.
  • ಅದಕ್ಕಾಗಿ ಹುಳ/ದುಂಬಿ ಇರಲಿ, ಇಲ್ಲದಿರಲಿ  ರಾಸಾಯನಿಕ ಕೀಟ ನಾಶಕ ಕ್ರಮ ಕೈಗೊಂಡೇ ತೀರುತ್ತಾರೆ.
  • ವಿಷ ರಾಸಾಯನಿಕದ ಬದಲಾಗಿ ಜೈವಿಕವಾಗಿ ಈ ಹುಳವನ್ನು ನಾಶಮಾಡಬಹುದು ಎಂಬುದನ್ನು  ವಿಜ್ಞಾನಿಗಳು ಪ್ರಯೋಗ ನಡೆಸಿ ಕಂಡು ಕೊಂಡಿದ್ದಾರೆ. ಇದಕ್ಕೆ ಬವೇರಿಯಾ ಬಾಸಿಯಾನ ಎಂಬ ಹುಳಕ್ಕೆ ರೋಗ ತರಬಲ್ಲ ಜೀವಾಣು (Entamopathogenic Beauveria bassiana) ಅನ್ನು ಬಾಳೆ ಗಡ್ಡೆ ನೆಡುವಾಗಲೇ ಉಪಚಾರ ಮಾಡಿ ನೆಟ್ಟದ್ಡೇ ಆದರೆ ಅದಕ್ಕೆ ಕಾಂಡ ಕೊರಕ ಹುಳದ ತೊಂದರೆ ಉಂಟಾಗುವುದಿಲ್ಲ.
  • ಬಹುತೇಕ ಕಾಂಡ ಕೊರಕ ಹುಳು ಬರುವುದು ನೆಡು ಸಾಮಾಗ್ರಿಗಳ ಮೂಲಕ.
  • ಗಡ್ಡೆ ನಾಟಿ ಮಾಡುವವರಲ್ಲಿ ಇದು ಮೊದಲ ಬೆಳೆಗೆ ತೊಂದರೆ ಮಾಡಬಹುದು.
  • ಅಂಗಾಂಶ ಕಸಿಯ ಬಾಳೆಯಲ್ಲಿ ಮೊದಲ ಬೆಳೆಗೆ ಹಾನಿ  ತೊಂದರೆ ಕಡಿಮೆ.
  • ಎರಡನೇ ಬೆಳೆಗೆ ಬಂದೇ ಬರುತ್ತದೆ.
  • ಜೈವಿಕವಾಗಿ ನಿಯಂತ್ರಣ ಕ್ರಮ ಕೈಗೊಳ್ಳುವುದರಿಂದ ಯಾರಿಗೂ ಯಾವ ಹಾನಿಯೂ ಇಲ್ಲ.
  • ಖರ್ಚೂ ಕಡಿಮೆಯಾಗುತ್ತದೆ.
  • ಈ ಜೀವಾಣು ಕಾಂಡ ಕೊರಕ ಹುಳದ ದೇಹದ ಒಳ ಸೇರಿ ಅದನ್ನು ಸಾಯುವಂತೆ ಮಾಡುತ್ತದೆ.

ಬೆವೇರಿಯಾ ಬಾಸಿಯಾನಾ ಜೈವಿಕ ಕೀಟನಾಶಕವು ಬರೇ  ಬಾಳೆಯ ಗಡ್ಡೆ ಕೊರಕ ಮಾತ್ರವಲ್ಲದೆ ಇನ್ನೂ ಬೇರೆ ಬೇರೆ  ಕೀಟಗಳ ನಿಯಂತ್ರಣಕ್ಕೆ Beauveria bassiana can be used  to control a number of pests such as termites, whiteflies, and many other insects. Its use in the control of malaria-transmitting mosquitos is under investigation. ಬಳಸಬಹುದು.
ಇದು ಸುರಕ್ಷಿತ  ಜೈವಿಕ ಕೀಟನಾಶಕ. ಇದನ್ನು ಕೃಷಿ ವಿಶ್ವ ವಿಧ್ಯಾನಿಲಯಗಳ ಸೂಕ್ಷ್ಮ ಜೀವಿ ಶಾಸ್ತ್ರ ವಿಭಾಗಗಳಲ್ಲಿ ತಯಾರಿಸಿ ಕೊಡುತ್ತಾರೆ. ಹಲವಾರು ಖಾಸಗಿ ಕಂಪೆನಿಗಳೂ ತಯಾರಿಸಿಕೊಡುತ್ತವೆ. ಬಳಕೆ ಸುಲಭ. ತುಂಬಾ ಮಿತವ್ಯಯವೂ ಆಗಿರುತ್ತದೆ. ರೈತರು ಸಾಧ್ಯವಾದಷ್ಟು ವಿಷ ರಾಸಾಯನಿಕಗಳ ಬಳಕೆಯನ್ನು ಕಡಿಮೆ ಮಾಡಿ ಜೈವಿಕ ಪರಿಹಾರದ ಕಡೆಗೆ ಬದಲಾಗುವುದು ಉತ್ತಮ.
ವಿ. ಸೂ: ಬವೇರಿಯಾ ಬಾಸಿಯಾನ ಎಂಬ ಉತ್ಪನ್ನವು ಆನ್ ಲೈನ್ ನಲ್ಲೂ ಲಭ್ಯವಿರುತ್ತದೆ. ಅಗತ್ಯವಿದ್ದವರು ಎಲ್ಲೂ ಸಿಗದಿದ್ದಲ್ಲಿ ನಮ್ಮಲ್ಲಿ ವಿಚಾರಿಸಿರಿ.

error: Content is protected !!