ಮನೆ ಮೇಲೆ ನವಿಲು

ನವಿಲುಗಳು ಹೆಚ್ಚುತ್ತಿರಲು – ಕಾರಣ ಇದು.

ಮಂಗ, ಹಂದಿ ಕಾಡು ಕೋಣ ಇವೆಲ್ಲದರ ಜೊತೆಗೆ ಈಗ ನವಿಲುಗಳೂ  ರೈತರ ಹೊಲದಲ್ಲಿ ಠಿಕಾಣಿ ಹೂಡಿವೆ  ಯಾಕೆ ಗೊತ್ತೇ? ಅಲ್ಲಿ ಅವುಗಳಿಗೆ ಜೀವ ಭಯ ಉಂಟಾಗಿದೆ !! ಇದು ಯಾವ ಪರಿಸರವಾದಿಗಳೂ  ಸುದ್ದಿ ಗದ್ದಲ ಎಬ್ಬಿಸದೇ ಇದ್ದ ಸಂಗತಿ. ಕಾಡು  ನಾಶವಾಗಿದೆ ಎಂದು ಅದಕ್ಕೆ ಬೊಬ್ಬೆ ಹಾಕುತ್ತಾರೆ. ಕಾಡಿನ ಪ್ರಾಣಿಗಳಿಗೆ ಹಿಂಸೆಯಾದರೆ ಪ್ರಾಣಿ ದಯಾ ಹೋರಾಟಗಾರರು  ಪ್ರವೇಶ ಮಾಡುತ್ತಾರೆ.  ಅರಣ್ಯ ಪ್ರಾಣಿಗಳಾದ ಮಂಗ , ಕಾಡು ಹಂದಿ, ಕೋಣಗಳಿಂದ ಬೆಳೆ ಉಳಿಸಿಕೊಳ್ಳುವರೇ  ರೈತರು ಭಾರೀ ಪ್ರಯಾಸ ಪಡುತ್ತಿದ್ದಾರೆ….

Read more
ಜೇನು ಸಂಗ್ರಹಣೆ

ಹೂವು ರಹಿತ ಜೇನು ಉತ್ಪಾದನೆ- “ಜೇನು” ಹೆಸರಿಗೆ ಕಳಂಕ.

ಜೇನು ವ್ಯವಸಾಯ ಮಾಡುವವರು ಕಡಿಮೆಯಾಗುತ್ತಿದ್ದಾರೆ. ಜೇನು ಕುಟುಂಬಗಳೂ ಕಡಿಮೆಯಾಗುತ್ತಿವೆ. ಆದರೆ ಜೇನಿನ  ವ್ಯವಹಾರ ಬೆಳೆಯುತ್ತಿದೆ. ಜೇನು ಉತ್ಪಾದನೆ ಹೆಚ್ಚುತ್ತಿದೆ. ಬಹುತೇಕ ಜೇನು ಕೃತಕ ಜೇನಾಗಿದ್ದು, ಹೂವು ಇಲ್ಲದೆ ಜೇನು ಉತ್ಪಾದಿಸಲಾಗುತ್ತದೆ. ಸಕ್ಕರೆ , ಬೆಲ್ಲದ ಪಾಕವನ್ನು ಜೇನು ನೊಣಗಳಿಗೆ ತಿನ್ನಿಸಿ ಜೇನು ಉತ್ಪಾದನೆ ಮಾಡಲಾಗುತ್ತಿದೆ. ಗ್ರಾಹಕರೇ ಎಚ್ಚರ!   ಕಾಡುಗಳು ಕಡಿಮೆಯಾಗುತ್ತಿವೆ, ಕಾಡಿನಲ್ಲಿ ಹೂವು ಬಿಡುವ ಮರಮಟ್ಟುಗಳೂ  ಕಡಿಮೆಯಾಗುತ್ತಿವೆ. ಕಾಡು ಹೊರತಾಗಿ ನಾಡಿನಲ್ಲೂ ನೈಸರ್ಗಿಕ ಹೂ ಬಿಡುವ ಮರ ಮಟ್ಟುಗಳಿಲ್ಲ. ಬರೇ  ರಬ್ಬರ್, ಅಡಿಕೆ, ತೆಂಗು ಬಿಟ್ಟರೆ…

Read more
ರೈತರು

ರೈತರನ್ನು ಸುಲಿಗೆ ಮಾಡುವ ವ್ಯವಸ್ಥೆ ಹೀಗಿದೆ !

ರೈತರು ಎಂದರೆ ಅವರು ಒಬ್ಬ ವ್ಯಾಪಾರಸ್ಥ ಕೊಟ್ಟದ್ದನ್ನು ನಂಬಿಕೆಯಲ್ಲಿ ತೆಗೆದುಕೊಳ್ಳುವ ಪ್ರವೃತ್ತಿಯವ. ಇದನ್ನು ನಗದೀಕರಣ ಮಾಡಿಕೊಳ್ಳುವವರೇ ಹೆಚ್ಚಿನವರು. ಕಳಪೆ ಗುಣಮಟ್ಟದ , ನಕಲಿ ಉತ್ಪನ್ನಗಳ ಮೂಲಕ ರೈತರನ್ನು ಸದಾ ಸುಲಿಗೆ ಮಾಡಲಾಗುತ್ತಿದೆ. Finolex ಕಂಪೆನಿಯ ಯಾವುದಾದರೂ ಸಾಮಾಗ್ರಿ ಕೇಳಿದರೆ   Phinoleks ಕೊಡುತ್ತಾರೆ. TCM ಬ್ರಾಂಡಿನ ಮೈಲು ತುತ್ತೆ ಕೇಳಿದರೆ VCM, ಕೊಡುತ್ತಾರೆ. . Jain  ಕಂಪೆನಿಯ  ಉತ್ಪನ್ನ ಕೇಳಿದರೆ Lain  ಹೆಸರಿನ ಉತ್ಪನ್ನ ಮಾತ್ರ ಅಂಗಡಿಯಲ್ಲಿ  ಲಭ್ಯವಿರುತ್ತದೆ. ನಮಗೆ ನೈಜ ಸಾಮಾಗ್ರಿ ಹುಡುಕಿಕೊಂಡು ಹೋಗಲು ಬಿಡುವಿಲ್ಲ. ನಮ್ಮ …

Read more
ಅಲಸಂದೆ ಇಳುವರಿ

ಅಲಸಂಡೆ ಬೆಳೆಯಲ್ಲಿ ಹೇನು ನಿಯಂತ್ರಣ

ಅಲಸಂಡೆ ಚಳಿಗಾಲದಲ್ಲಿ ಬೆಳೆಯಬಹುದಾದ ಉತ್ತಮ ತರಕಾರಿ ಬೆಳೆ.  ಈ ಸಮಯದಲ್ಲಿ ಇದರಲ್ಲಿ ಇಳುವರಿ ಜಾಸ್ತಿ. ಈ ಬೆಳೆಗೆ ಬರುವ ಪ್ರಮುಖ ಕೀಟ ಹೇನು.   ಇದರ  ನಿಯಂತ್ರಣ ಹೀಗೆ ಈ ಹೇನು ಸಸ್ಯದ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ, ಕಾಯಿಯ ಬೆಳವಣಿಗೆಯನ್ನು  ಕುಂಠಿತಗೊಳಿಸುತ್ತದೆ, ಹೂ ಮೊಗ್ಗು ಬರುವ ಭಾಗವನ್ನು ಸಹ ಹಾಳು ಮಾಡುತ್ತದೆ.  ಹೇನಿನ ಕಾರಣಕ್ಕೆ ಅಲಸಂಡೆಯಲ್ಲಿ ಗಣನೀಯ ಪ್ರಮಾಣದಲ್ಲಿ ಇಳುವರಿ ಕಡಿಮೆಯಾಗುತ್ತದೆ. ಸಸ್ಯ ಹೇನು ಎಂದರೇನು: ಸಸ್ಯ ಹೇನುಗಳಲ್ಲಿ ಸುಮಾರು 250 ಬಗೆಯ ಪ್ರಭೇಧಗಳಿದ್ದು, ಹೆಚ್ಚಿನವು ಬೆಳೆಗಳಿಗೆ ಹಾನಿ ಮಾಡುವವುಗಳಾಗಿವೆ….

Read more
healthy coconut palms

ತೆಂಗಿನ ಮರಕ್ಕೆ ನೀರು ಹೆಚ್ಚು ಕೊಟ್ಟರೆ ಉತ್ತಮ !

ಕೆಲವು ಪ್ರದೇಶಗಳಲ್ಲಿ ಬೇಸಿಗೆಯಲ್ಲಿ ಬಿಡುವ ಹೂ ಗೊಂಚಲಿನಲ್ಲಿ ಕಾಯಿಯೇ ಇರುವುದಿಲ್ಲ. ಒಂದೆರಡು ಎಳನೀರು ತೆಗೆಯಲೂ ಸಿಗುವುದಿಲ್ಲ. ಸಿಕ್ಕ ಎಳನೀರಿನಲ್ಲಿ ಬೊಗಸೆಯಷ್ಟೂ ನೀರು ಇರುವುದಿಲ್ಲ. ಇದಕ್ಕೆ ಕಾರಣ ಆ ಸಮಯದಲ್ಲಿ ಮರಕ್ಕೆ ಸಾಕಷ್ಟು ತೇವಾಂಶ ಲಭ್ಯವಾಗದೇ ಇರುವುದು ! ಕೆಲವು ಪ್ರದೇಶಗಳಲ್ಲಿ ಬೇಸಿಗೆ, ಮಳೆಗಾಲ ಎರಡೂ ಕಾಲಾವಧಿಯಲ್ಲೂ ಏಕ ಪ್ರಕಾರ ಕಾಯಿ ಇರುತ್ತದೆ. ಆದುದರಿಂದಲೇ ಅಂಗಡಿಗಳಲ್ಲಿ ಬೇಸಿಗೆಯಲ್ಲಿ ಎಳನೀರು ಕುಡಿಯಲು ಸಿಗುತ್ತಿದೆ. ಒಂದು ತೆಂಗಿನ ಮರಕ್ಕೆ ದಿನಕ್ಕೆ 30-40  ಲೀ. ನೀರು ಸಾಕು ಎನ್ನುತ್ತಾರೆ. ಆದರೆ ಅಷ್ಟು ನೀರು…

Read more
error: Content is protected !!