ಶ್ರೀಗಂಧದ ಗಿಡ

ಶ್ರೀಗಂಧದಿಂದ ಕೋಟಿ ಆದಾಯ ಯಾರು ಗಳಿಸಬಹುದು?

ಉಳಿದೆಲ್ಲಾ ಬೆಳೆಗಳಲ್ಲಿ ನಾವು ಸಂಪಾದಿಸಿದ್ದು ಶೂನ್ಯ. ಶ್ರೀಗಂಧದಲ್ಲಿಯಾದರೂ ಕೈತುಂಬಾ ಆದಾಯ ಪಡೆಯಬಹುದೆಂಬ ಹಂಬಲದಲ್ಲಿ  ರೈತರು ಈ ಬೆಳೆಯ ಹಿಂದೆ ಬಿದ್ದಿದ್ದಾರೆ. ಶ್ರೀಗಂಧ ಬೆಳೆಸುವ ಸುದ್ದಿ ಕೇಳಿದರೆ ಸಾಕು ಜನರ ಕಿವಿ ನೆಟ್ಟಗಾಗುತ್ತದೆ. ಈ ಬೆಳೆಯಲ್ಲಿ ಕೋಟಿಗೂ ಹೆಚ್ಚು ಸಂಪಾದಿಸಬಹುದು ಎಂಬ ಸಂಗತಿ ಯಾರ ಕಿವಿಯನ್ನೂ ನೆಟ್ಟಗೆ ಮಾಡದೆ ಇರದು. ನಮ್ಮ ದೇಶವೂ ಸೇರಿದಂತೆ  ಹೊರ ದೇಶಗಳಲ್ಲೂ ಈಗ ಶ್ರೀಗಂಧ ಬೆಳೆ  ಬೆಳೆಯುತ್ತಿದೆ. ಶ್ರೀಗಂಧ ಈಗ ರೈತರು ಬೆಳೆಸಬಹುದಾದ ಬೆಳೆಯಾಗಿದೆ. ಇದನ್ನು ಬೆಳೆಸಲು ಪರವಾನಿಗೆ ಬೇಡ. ಅದನ್ನು ಕಡಿದು…

Read more
ಮುತ್ತಿನ ಸರ

ಕೃಷಿಕರು ಮುತ್ತು ಉತ್ಪಾದಿಸಿ ಆದಾಯಗಳಿಸಬಹುದು.

ನಿಮ್ಮ ಕೃಷಿ ಹೊಲದಲ್ಲಿ  ನೀರಾವರಿಯ ಬಾವಿ ಇದೆಯೇ,  ಅಥವಾ ನಿಮ್ಮ ಸುಪರ್ದಿಯಲ್ಲಿ  ದೊಡ್ದ  ಕೆರೆ ಇದೆಯೇ ಹಾಗಿದ್ದರೆ, ಅಲ್ಲಿ  ಕೃಷಿಗೆ ಪೂರಕವಾಗಿ ಅತ್ಯಂತ ಲಾಭದಾಯಕವಾದ ವೃತ್ತಿ “ಮುತ್ತಿನ ಉತ್ಪಾದನೆ” ಮಾಡಬಹುದು. ಹಿಂದೆ ರಾಜ ಮಹಾರಾಜರ ಕಾಲದಲ್ಲಿ ಅವರ ಆಸ್ಥಾನದಲ್ಲಿ  ಮಾತ್ರ  ರಾಶಿ ರಾಶಿ ಮುತ್ತುಗಳಿತ್ತು. ಆಗ ಬೇರೆಯವರಿಗೆ ಅದನ್ನು ಹೊಂದುವ ಸಾಮರ್ಥ್ಯವೂ ಇರಲಿಲ್ಲ. ರಾಜಾಧಿಪಥ್ಯ ಕೊನೆಗೊಂಡ  ನಂತರ, ಎಲ್ಲರೂ ಮುತ್ತು ಹೊಂದುವ ಸ್ಥಿತಿಗೆ ಬಂದರು. ಆಗ ಅದರ ಬೇಡಿಕೆ ಹೆಚ್ಚಾಯಿತು. ಬೆಲೆಯೂ ಹೆಚ್ಚಾಯಿತು. ಮುತ್ತು ಸಾಮಾನ್ಯ ಬೆಲೆಯ…

Read more
ಬಸವನ ಹುಳ

ಬಸವನ ಹುಳು ನಿಯಂತ್ರಣ

ಕೆಲವು ವರ್ಷಗಳ ಹಿಂದೆ ಶಿವಮೊಗ್ಗದ ಬಿದ್ರಳ್ಳಿಯಲ್ಲಿ ಕಂಡಿದ್ದ ಈ ಬಸವನ ಹುಳ ಈಗ ಎಲ್ಲೆಡೆಯಲ್ಲೂ ಕಂಡು ಬರುತ್ತಿದೆ. ರೈತರು ಇದರಿಂದ ಬೇಸತ್ತಿದ್ದಾರೆ. ಕೊಲ್ಲುತ್ತಾರೆ. ಮತ್ತೆ ಹುಟ್ಟುತ್ತದೆ. ಯಾವ ರೀತಿ ನಿಯಂತ್ರಣ ಎಂದೇ ಗೊತ್ತಾಗುವುದಿಲ್ಲ. ಇವು ಮರದ ಮೇಲೆಲ್ಲಾ ಏರಿಕೊಂಡು ಕುಳಿತಿವೆ. ಹಗಲು ನಾಲ್ಕು– ಐದು ಇದ್ದರೆ, ಕತ್ತಾಲಾದರೆ ಮರದ ತುಂಬಾ  ಏರಿ ಬಿಡುತ್ತವೆ. ಇವು ದೊಡ್ಡ ಗಾತ್ರದ  ಬಸವನ ಹುಳುಗಳು. ಇವು ಅಡಿಕೆ ಮರದ ಎಳೆ ಎಲೆಗಳನ್ನು ಮತ್ತು ಪಕ್ಕದಲ್ಲಿರುವ  ಇತರ ಗಿಡಗಳ ಎಳೆ ಎಲೆಗಳನ್ನು ತಿನ್ನುತ್ತವೆ. …

Read more
ಕರಂಡೆ ಕಾಯಿ

ಆರೋಗ್ಯಕರ ಉಪ್ಪಿನಕಾಯಿಗೆ -ಕರಂಡೆ

ಹಿಂದೆ ಬೇಕಾಬಿಟ್ಟಿಯಾಗಿ ಸಿಗುತ್ತಿದ್ದ ಕರಂಡೆ ಕಾಯಿ/ ಹಣ್ಣುಗ ಳು ಈಗ  ಮಾಯವಾಗಿವೆ. ಹಿಂದೆ  ಕರಂಡೆ ಬೇಕಿದ್ದರೆ  ಒಂದು ತಾಸು ಗುಡ್ಡಕ್ಕೆ  ಹೋದರೆ ಅಲ್ಲಿ  ಬೇಕಾದರೂ ಕರಂಡೆ ಕಾಯಿ ತರುತ್ತಿದ್ದರು. ಈಗ ಹಳ್ಳಿಯ ಜನ ಪೇಟೆಗೆ ಕರಂಡೆ ಕಾಯಿ ತರಲು ಹೋಗುವಂತಾಗಿದೆ. ಈಗ ಯಾವ ಗುಡ್ದದಲ್ಲೂ ಕರಂಡೆ ಗಿಡಗಳೇ ಕಾಣಿಸುತ್ತಿಲ್ಲ. ಕರಂಡೆಯ ಉಪ್ಪಿನಕಾಯಿ ಧೀರ್ಘ ಬಾಳ್ವಿಕೆ ಬರುವಂತದ್ದು. ಕರಂಡೆ ಹಿನ್ನೆಲೆ: ಕರಂಡೆ (Karronda) ಸಸ್ಯ ಗುಡ್ಡದಲ್ಲಿ ನೀರಿಲ್ಲದೆ ಬೆಳೆಯುವ ಪೊದೆ. ಇದು ಬಹುವಾರ್ಷಿಕ ಸಸ್ಯವಾಗಿದ್ದು, ಕುರುಚಲು ಗಿಡಗಳು ಬೆಳೆಯುವ ಗುಡ್ದದಲ್ಲಿ ಮುಳ್ಳಿನ…

Read more
ಸಂಪಿಗೆ ಹಣ್ಣು

ಸಂಪಿಗೆ ಹಣ್ಣು – ತಾತ್ಸಾರ ಬೇಡ ಇದು ಹೃದಯ ರಕ್ಷಕ

ಮಕ್ಕಳಾಟಿಕೆಯಲ್ಲಿ ಕಾಡು ಗುಡ್ಡಗಳಲ್ಲಿ ಹಿರಿಯರ ಜೊತೆಗೆ ಸುತ್ತಾಡಿ ತಿನ್ನುತ್ತಿದ್ದ  ಹಣ್ಣು  ಹಂಪಲುಗಳು ಎಷ್ಟೊಂದು ರುಚಿ. ಆ ಭಾಗ್ಯ ಹೊಸ ತಲೆಮಾರಿಗೆ ಇಲ್ಲ. ಮನೆ , ಪೇಟೆ, ಮಾಲುಗಳನ್ನು ಬಿಟ್ಟರೆ ಮತ್ತೇನೂ ಅರಿಯದ ಮುಗ್ಧ ಮಕ್ಕಳು ಮಕ್ಕಳಾಟಿಕೆಯೆ ಯಾವ  ಸುಖವನ್ನೂ ಅನುಭವಿಸಿಲ್ಲ. ಈ ಚಟುವಟಿಕೆ ಅವರ ಆರೋಗ್ಯವನ್ನೂ ಉಳಿಸಿಲ್ಲ. ಮಕ್ಕಳ  ಪ್ರೀತಿಯ  ಹಣ್ಣುಗಳು: ನಾವು ಮಕ್ಕಳಾಟಿಕೆಯಲ್ಲಿ  ಮಾಡಿದ ಕಾರುಬಾರುಗಳು ಅಷ್ಟಿಷ್ಟಲ್ಲ. ಶಾಲೆಗೆ ಹೋದರೂ ನಮಗೆ ಚಿಂತೆ ಬೇರೊಂದರ ಮೇಲೆ. ಶಾಲೆ ಹೋಗುವಾಗಲೂ , ಶಾಲೆ ಬಿಟ್ಟು ಬರುವಾಗಲೂ, ದಾರಿ…

Read more
ಬೆಳೆಗಳಿಗೆ ಹಾನಿ ಮಾಡುವ ಮಂಗ

ಮಂಗಗಳ ಹಾವಳಿ ಹೆಚ್ಚಾಗಲು ಕಾರಣ ಇದು.

ಪರಿಸರದಲ್ಲಿ ಯಾವುದು ಇದ್ದರೆ ಎಲ್ಲದಕ್ಕೂ ಒಳ್ಳೆಯದು ಎಂಬುದು ಪ್ರಕೃತಿಗೆ ಗೊತ್ತಿದೆ. ನಾವು ಪ್ರಕೃತಿಗೆ ಪಾಠ ಕಲಿಸಲು ಹೋಗಿ ಅದು ನಮಗೆ ಪಾಠ ಹೇಳಿದೆ. ತಿನ್ನಲು ಅಹಾರವಿಲ್ಲದೆ ಮಂಗಗಳು ತೋಟಕ್ಕೆ ಬಂದಿವೆ. ಇನ್ನಾದರೂ ಅಕೇಶಿಯಾ, ಮಹಾಘನಿ, ಮಾಂಜಿಯಂ ಮುಂತಾದ ಮರಮಟ್ಟು ಬೆಳೆಸುವುದನ್ನು ಬಿಟ್ಟು ಬಿಡಿ. ಈ ಮರಗಳಿದ್ದಲ್ಲಿ ಮಂಗಗಳಿಗೆ ಆಹಾರ ಇಲ್ಲ. ಅವು ನಮ್ಮತೋಟಕ್ಕೆ ಧಾಳಿ ಮಾಡುತ್ತವೆ.  ಏನು ನಡೆಯುತ್ತಿದೆ: ಕೃಷಿಕರು ಬದುಕಿಗಾಗಿ ಕೃಷಿ ಮಾಡುವವರು. ಅವರ ತಾಳ್ಮೆಗೂ ಒಂದು ಮಿತಿ ಇದೆ. ಇಗ ಮಾನವೀಯತೆಯನ್ನು ಬದಿಗಿಟ್ಟು ಕೃಷಿಕರು…

Read more
ತೋಟದ ಒಳಗೆ ಗ್ಲೆರಿಸೀಡಿಯಾ

ಗ್ಲೆರಿಸೀಡಿಯಾ – ಯೂರಿಯಾ ಗೊಬ್ಬರ ಕೊಡುವ ಗಿಡ.

ಪ್ರಕೃತಿಯಲ್ಲಿ ಎಲ್ಲವೂ ಇದೆ. ಆದರೆ ನಮಗೆ ಗೊತ್ತಾಗುವುದಿಲ್ಲ. ರೈತರು ಸೂಕ್ಷ್ಮವಾಗಿ ಪ್ರಕೃತಿಯನ್ನು ಗಮನಿಸಬೇಕು. ಆಗ ಅವರಿಗೆ ಹಲವಾರು  ಸಂಗತಿಗಳು, ಹಾಗೆ ತಪ್ಪು ತಿಳುವಳಿಕೆಗಳು ಪರಿಹಾರವಾಗುತ್ತವೆ. ಸಾರಜನಕ ಏನು? ಸಾರಜನಕ ಗೊಬ್ಬರ ಎಂಬುದು ಸಸ್ಯಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಬೇಕಾಗುವ ಪೋಷಕ. ಈ ಪೋಷಕವು ಹೆಚ್ಚಿನ ಸಾವಯವ ವಸ್ತುಗಳಲ್ಲಿ ಇರುತ್ತದೆ. ಇದನು ಕೃತಕವಾಗಿ ಯೂರಿಯಾ ರೂಪದಲ್ಲಿ ಒದಗಿಸಲಾಗುತ್ತದೆ. ಸಾರಜನಕ ಎಂಬುದು ವಾತಾವರಣದಲ್ಲಿ ಅನಿಲ ರೂಪದಲ್ಲಿ ಇರುವ ಮೂಲವಸ್ತುವಾಗಿದ್ದು   ಪ್ರೊಟೀನು ರಚನೆಯಲ್ಲಿ ಅತಿ ಮುಖ್ಯ ಭಾಗವಾಗಿರುತ್ತದೆ. ಸಸ್ಯಗಳು ಈ ಸಾರಜನಕವನ್ನು ನೇರವಾಗಿ…

Read more
pruned plant and yield

ಸೀಬೆ ಬೆಳೆಯಲ್ಲಿ ಅಧಿಕ ಇಳುವರಿಗೆ ಪ್ರೂನಿಂಗ್ ಮಾಡಿ.

ಹಣ್ಣಿನ ಸಸ್ಯಗಳಿಗೆ  ಟೊಂಗೆ ಪ್ರೂನಿಂಗ್  ಮಾಡುವುದರಿಂದ ಇಳುವರಿ ಹೆಚ್ಚಳವಾಗುತ್ತದೆ. ದ್ರಾಕ್ಷಿ , ದಾಳಿಂಬೆ, ಅಂಜೂರ ಮುಂತಾದ ಬೆಳೆಗಳನ್ನು ಬೆಳೆಸುವ ರೈತರು ಇದನ್ನು ಹಿಂದಿನಿಂದಲೂ ಅನುಸರಿಸುತ್ತಾ ಬಂದಿದ್ದಾರೆ. ಈಗ ಮಾವು, ಗೇರು, ಸೀತಾಫಲ, ಸೀಬೆ ಮುಂತಾದ ಬೆಳೆಗಳನ್ನು ಬೆಳೆಸುವವರೂ ಪ್ರೂನಿಂಗ್ ಮಾಡಿ ಇಳುವರಿ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಯಾಕೆ ಸೀಬೆಗೆ ಪ್ರೂನಿಂಗ್: ಫಲ ಬಿಡುವ ಹಣ್ಣು ಹಂಪಲಿನ ಸಸ್ಯಗಳನ್ನು  ಅದರಷ್ಟಕ್ಕೇ  ಬೆಳೆಯಲು ಬಿಟ್ಟರೆ ಅದರಲ್ಲಿ ಸಸ್ಯ ಬೆಳವಣಿಗೆಯೇ ಹೆಚ್ಚಳವಾಗುತ್ತದೆ. ಸಸ್ಯ ಬೆಳವಣಿಗೆಯನ್ನು ಟೊಂಗೆ ಸವರುವ ಮೂಲಕ ನಿಯಂತ್ರಿಸಿದಾಗ ಸಸ್ಯ ಬೆಳವಣಿಗೆಗೆ ಒಮ್ಮೆ…

Read more
ಅಡಿಕೆ ಎಲೆ ಅಡಿಯಲ್ಲಿ ಬಿಳಿ ನೊಣ

ಅಡಿಕೆಗೂ ಬಂತು ಬಿಳಿ ನೊಣ

ಒಮ್ಮೆ ನಿಮ್ಮ ಅಡಿಕೆ ಮರದ ಗರಿಯ ಅಡಿ ಭಾಗವನ್ನು  ಪರಾಂಬರಿಸಿ ನೋಡಿ. ಅಲ್ಲಲ್ಲಿ ಬಿಳಿ ಬಿಳಿ ಕಾಣಿಸುತ್ತದೆಯಲ್ಲವೇ? ಒಂದು ವೇಳೆ ಹಗಲು ಕಾಣದಿದ್ದರೆ ರಾತ್ರೆ ಟಾರ್ಚ್ ಲೈಟ್  ಬಿಟ್ಟು ನೋಡಿ. ಖಂಡಿತವಾಗಿಯೂ ಕಾಣಿಸುತ್ತದೆ. ಇದು  ಬೊರ್ಡೋ ಹೊಡೆದು ಆದರ ಅವಶೇಷ ಎಂದು ತಿಳಿಯದಿರಿ. ಆ ಕೆಳಭಾಗದ ಗರಿಗಳು  ಆಗಲೇ  ಉದುರಿ ಹೋಗಿವೆ. ಇದು  ಬಿಳಿ ನೊಣ ಎಂಬ ರಸ ಹೀರುವ ಕೀಟ, ಅಡಿಕೆಯ ಕೆಳ ಭಾಗದ ಗರಿಯಲ್ಲಿ ವಾಸ್ತವ್ಯ ಮಾಡಿರುವುದು. ಇದು ಇತ್ತೀಚಿನೆ ಬೆಳವಣಿಗೆ. ಬಹುಷಃ ಯಾರೂ…

Read more
ರಾಸಾಯನಿಕ ಗೊಬ್ಬರ ಬಳಸಿ ಇಳುವರಿ

ರಾಸಾಯನಿಕ ಗೊಬ್ಬರಗಳಿಂದ ನೈಜ ತೊಂದರೆ ಏನು?

ಕೆಲವು ರಾಸಾಯನಿಕ ಗೊಬ್ಬರಗಳ ವಿರೋಧಿಗಳು  ಹುಟ್ಟಿಕೊಂಡು  ಉಳಿದ ರೈತರಿಗೆ ತುಂಬಾ ದ್ವಂದ್ವ ಉಂಟಾಗಿದೆ. ಇದು ಒಂದು ರೈತ ಕಳಕಳಿ ವಿಚಾರವೊ ಅಥವಾ ಒಂದು ಅಪರೋಕ್ಷ  ವ್ಯವಹಾರ ದಂಧೆಯೋ ಗೊತ್ತಾಗುತ್ತಿಲ್ಲ. ಕೃಷಿಕ ಸಮುದಾಯದಲ್ಲಿ ರಾಸಾಯನಿಕ ಬಳಕೆ ಮಾಡುವವರನ್ನು ಅಸ್ಪೃಷ್ಯರ ತರಹ ಕಾಣುವವರೂ ಸೃಷ್ಟಿಯಾಗಿದ್ದಾರೆ.   ರಾಸಾಯನಿಕ ಗೊಬ್ಬರ ಎಂದ ಮಾತ್ರಕ್ಕೆ ಅದರ ವಿರೋಧಿಗಳು ಮೈಮೇಲೆ ಬಂದವರಂತೆ ಮಾತನಾಡಬೇಕಾಗಿಲ್ಲ. ಇದು ಅವರರವರ ವೈಯಕ್ತಿಕ ಆಯ್ಕೆ. ಆದರೆ ಬರೇ ರಾಸಾಯನಿಕ ಮಾತ್ರ ಬಳಸುವುದರಿಂದ ಮಣ್ಣಿನ ರಚನೆ ಹಾಳಾಗುತ್ತದೆ. ಹಾಗಾಗಿ ರಸಗೊಬ್ಬರ ಹಾಕುವವರು ಸಾವಯವ…

Read more
error: Content is protected !!