ಅಡಿಕೆ ಮಾರುಕಟ್ಟೆ ಸ್ಥಿರ

ಅಡಿಕೆ ಮಾರುಕಟ್ಟೆ ಸ್ಥಿರ : ಕುಸಿಯುವ ಭೀತಿ ಇಲ್ಲ.

ಎಪ್ರೀಲ್ ತಿಂಗಳಲ್ಲಿ ಅಡಿಕೆ ಮಾರುಕಟ್ಟೆ ಸ್ವಲ್ಪ ಚೇತರಿಕೆ ಆಗಬಹುದು ಎಂಬ ಊಹನೆ ಇತ್ತು. ಊಹನೆಯಂತೆ ಹಳೆ ಚಾಲಿ ಮತ್ತು ಪಟೋರಾ ಅಡಿಕೆ ದರ ಸ್ವಲ್ಪ ಏರಿತಾದರೂ ಹೊಸ ಅಡಿಕೆ ದರ ಸ್ಥಿರವಾಗಿಮುಂದುವರಿದಿದೆ. ಅಡಿಕೆ ಉತ್ಪಾದನೆ ಜಾಸ್ತಿ ಇದೆ ಎಂಬ ಮಾಹಿತಿಗಳ ನಡುವೆ, ದರ ಕುಸಿಯುವ ಭೀತಿ ಇಲ್ಲ ಎಂಬುದಾಗಿ ವರ್ತಕರ ಹೇಳಿಕೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷದ ಧಾರಣೆ ಸ್ವಲ್ಪ ಏರಿಕೆಯಲ್ಲೇ ಇದೆ. ಕಳೆದ ವರ್ಷದಷ್ಟು ಇಳಿಕೆಯ ಅಂಜಿಕೆಯೂ ಇಲ್ಲ. ಒಟ್ಟಿನಲ್ಲಿ ಅಡಿಕೆ ಆಮದು ಆಗುವ…

Read more
ಬೇರು ಹುಳ ಪೀಡಿತ ಅಡಿಕೆ ತೋಟ

ಬೇರು ಹುಳ ನಿಯಂತ್ರಣಕ್ಕೆ ಜೈವಿಕ ನಿಯಂತ್ರಕ –EPN.

ಜೈವಿಕವಾಗಿ ಕೆಲವು ಕೀಟಗಳನ್ನು ನಿಯಂತ್ರಿಸಲು ಸಾಧ್ಯ. ಅದರಲ್ಲಿ ಒಂದು EPN.  ಇದು ಬೇರು ಹುಳಗಳನ್ನೇ ಆಶ್ರಯಿಸಿ ಬದುಕಿ, ಅದನ್ನು ಕೊಲ್ಲುತ್ತದೆ. ಇದರ ಬಳಕೆ ಸುಲಭ. ಇದನ್ನು ರೈತರೇ ಉತ್ಪಾದಿಸುವ ತಂತ್ರಜ್ಝಾನವನ್ನು  CPCRI ಹೇಳಿಕೊಡುತ್ತದೆ. ಅಡಿಕೆ ತೆಂಗು, ಕಬ್ಬು ಬೆಳೆಗಾರರು ಬೇರು ಹುಳದ ಸಮಸ್ಯೆಗೆ ಯಾವುದು ಉತ್ತಮ ಪರಿಹಾರ ಎಂಬ ಹುಡುಕಾಟದಲ್ಲಿದ್ದಾರೆ. ಇತ್ತೀಚೆಗೆ ಈ ಹುಳ  ನಿಯಂತ್ರಣಕ್ಕೆ ಜೈವಿಕ ಪರಿಹಾರ ಉತ್ತಮವಾಗಿ ಕೆಲಸ ಮಾಡುತ್ತದೆ ಎಂದು ತಿಳಿಯಲಾಗಿದೆ. ಇದರಲ್ಲಿ ಒಮ್ದು ಎಂಟಮೋ ಪಥೋಜೆನಿಕ್ ನಮಟೋಡ್ (EPN) Entomopathogenic Nematodes ಇದನ್ನು ಬಳಸಿ…

Read more
ಹುಲುಸಾಗಿ ಬೆಳೆದ ನೀಲಗಿರಿ ಮರಗಳು

ನೀಲಗಿರಿ- ಹಾಳೂ ಅಲ್ಲ – ತೀರಾ ಒಳ್ಳೆಯದೂ ಅಲ್ಲ.

ನೀಲಗಿರಿಯ ನೆಡುತೋಪುಗಳು ಪ್ರಾರಂಭವಾಗಿ ಸುಮಾರು 150  ವರ್ಷ ಕಳೆದಿದೆ. ಈಗ ಪ್ರಾರಂಭವಾಗಿದೆ ಈ ಮರದಿಂದ ನೀರು ಬರಿದಾಗುತ್ತದೆ ಎಂದು. ನಿಜಕ್ಕೂ ನೀರು ಬರಿದಾಗುವುದು ಹೌದೇ?ಅಥವಾ ಇದು ಒಂದು  ಅಪ ಪ್ರಚಾರವೇ ಸ್ವಲ್ಪ ಚರ್ಚೆ ಮಾಡೋಣ. ತಜ್ಜರ ಪ್ರಕಾರ ಇದು  ಹಾಳೂ ಅಲ್ಲ- ತೀರಾ ಒಳ್ಳೆಯದೂ ಅಲ್ಲ. ನೀಲಗಿರಿ ಮರ ಏನು: ನೀಲಗಿರಿ Eucalyptus ಎಂಬ ಮರ ಬಹಳ ವೇಗವಾಗಿ ಬೆಳೆಯುವ ಮರ. ಆಸ್ಟ್ರೇಲಿಯಾ ಮೂಲದ ಈ ಮರವನ್ನು  1790 ರಲ್ಲಿ  ಕರ್ನಾಟಕದ ರಾಜ್ಯದ ನಂದಿ ಬೆಟ್ಟಗಳಲ್ಲಿ ಬೆಳೆಸಲಾಯಿತು….

Read more
ಬೊರ್‍ವೆಲ್ ಕೆಲಸ

ಬೋರ್ವೆಲ್ ಗೆ ಪಂಪು ಇಳಿಸುವ ಬಗ್ಗೆ ಮಾಹಿತಿ.

ಇಂದು ಕೃಷಿ ನೀರಾವರಿಗೆ, ಮನೆಬಳಕೆಯ ನೀರಿಗೆ ಎಲ್ಲದಕ್ಕೂ ಬೋರ್ವೆಲ್ ಮೂಲವೇ ಆದಾರ. ಕೊಳವೆ ಬಾವಿಯನ್ನು ತೋಡುವಾಗ ನೀರು ಸಿಗುತ್ತದೆ.  ಆದರೆ ಬಾವಿಯೊಳಗೆ ನೀರು ಎಷ್ಟು ಇದೆ, ಎಷ್ಟು ತೆಗೆಯಲು ಸಾಧ್ಯ ಎಂಬುದನ್ನು ಮೇಲಿನಿಂದು ನೋಡಿ ಲೆಕ್ಕಾಚಾರ ಹಾಕಲಿಕ್ಕೆ ಆಗುವುದಿಲ್ಲ. ಪಂಪು ಇಳಿಸಿ ನೀರನ್ನು ಹೊರ ತರಬೇಕು. ಎಷ್ಟು ಆಳಕ್ಕೆ ಪಂಪು ಇಳಿಸಬೇಕು.  ಎಷ್ಟು ಅಶ್ವ ಶಕ್ತಿ ಇವೆಲ್ಲದರ ಮಾಹಿತಿ ಇಲ್ಲಿದೆ. ಹೆಚ್ಚಿನವರು ಕೊಳವೆ ಬಾವಿ ತೋಡುತ್ತಾರೆ. ಸುಮಾರು 500 ಅಡಿ ಹೋಗಿದೆ, ಪಂಪು ಎಷ್ಟು ಇಳಿಸಬೇಕು ಎಂಬ…

Read more
ಗೇರು ಹಣ್ಣುಗಳನ್ನು ಸ್ವಚ್ಚ ಮಾಡುತ್ತಿರುವುದು

ಗೇರು ಕೃಷಿಗೆ  ರೈತರಿಂದ ಗುಡ್ ಭೈ – ತೀರಾ ನಷ್ಟದ ಬೆಳೆ

ಒಂದು ಕಾಲದಲ್ಲಿ ಕರಾವಳಿಯ ಎಲ್ಲಾ ಭಾಗಗಳಲ್ಲಿ ಗೇರು ಬೆಳೆ ನಳನಳಿಸುತ್ತಿತ್ತು.  ಎಂತೆಂತಹ ಮರಗಳು, ಬುಟ್ಟಿ ಬುಟ್ಟಿ ಗೇರು ಹಣ್ಣುಗಳು. ಇಂದು ಆ ವೈಭವ ಇಲ್ಲ.ಗೇರು ಮರದಲ್ಲಿ ಹಣ್ಣು ಆದರೂ ಕೊಯ್ಯುವ ಗೋಜಿಗೇ ಹೋಗದ ಜನ, ಕೊಯ್ದ ಮಜೂರಿ ಹುಟ್ಟದ ನಷ್ಟದ ಬೆಳೆಯಾಗಿ, ಗೇರು ಕೃಷಿಗೆ ರೈತರು ಈಗಾಗಲೇಗುಡ್ ಭೈ ಹೇಳುತ್ತಿದ್ದಾರೆ.. ಸದ್ಯವೇ  ಗೇರು ಬೆಳೆ ಎಂಬುದು ನಮ್ಮಲ್ಲಿ ಗತ ವೈಭವವಾದರೂ ಅಚ್ಚರಿ ಇಲ್ಲ.   ಗೇರು ಮರಗಳಿಂದ (Cashew) ಕೊಕ್ಕೆ ಹಾಕಿ ಹಣ್ಣು ಕೊಯ್ಯುವುದು, ಹೆಕ್ಕುವುದು, ಬೀಜ ಪ್ರತ್ಯೇಕಿಸುವುದು,…

Read more
ಸಾವಯವ ರಸಗೊಬ್ಬರ – ರಾಸಾಯನಿಕ ಗೊಬ್ಬರಕ್ಕೆ ಪರ್ಯಾಯ.

ಸಾವಯವ ರಸಗೊಬ್ಬರ – ರಾಸಾಯನಿಕ ಗೊಬ್ಬರಕ್ಕೆ ಪರ್ಯಾಯ.

ಸಾವಯವ ರಸಗೊಬ್ಬರ ಎಂದರೆ ಅದು ರಾಸಾಯನಿಕ ಗೊಬ್ಬರಗಳಿಗೆ ಸಮನಾದ ಫಲಿತಾಂಶವನ್ನು ಕೊಡುವಂತಹ ಸಾವಯವ ಮೂಲವಸ್ತುಗಳನ್ನು ಸೇರಿಸಿ ತಯಾರಿಸಿದ ಗೊಬ್ಬರ. ರಸ ಗೊಬ್ಬರ, ರಾಸಾಯನಿಕ ಗೊಬ್ಬರ ಬೇರೆ ಬೇರೆ. ರಸ ಗೊಬ್ಬರ ಎಂಬುದು ಹೆಚ್ಚು ಸಾತ್ವಾಂಶಗಳ ಯಾವುದೇ ಮೂಲವಸ್ತುಗಳ ಮೂಲಕ ತಯಾರಿಸಬಹುದು. ‘ರಸ’ ಎಂದರೆ ಹೆಚ್ಚು ಸತ್ವ ಉಳ್ಳ ತಯಾರಿಕೆ.   ರಾಸಾಯನಿಕ ಮಾತ್ರವಲ್ಲ, ಸಾವಯವ ಮೂಲದಲ್ಲೂ ರಸಗೊಬ್ಬರ ತಯಾರಿಸಬಾರದು ಎಂದಿಲ್ಲ. ತಯಾರಿಸಬಹುದು. ಇದು ಹೊಸ ತಂತ್ರಜ್ಞಾನವಂತೂ ಅಲ್ಲ. ಮರೆತು ಹೋಗಿರಬಹುದು ಅಥವಾ ಕಷ್ಟ ಎಂದು ಬಿಟ್ಟಿರಬಹುದು. ಸಾವಯವ…

Read more
ಮಳೆಗಾಲಕ್ಕೆ ಮುಂಚೆ ಬಸಿಗಾಲುವೆ ಸ್ವಚ್ಚ ಮಾಡಬೇಕಾದದ್ದು ಅಗತ್ಯ ಕೆಲಸ

ಮಳೆಗಾಲಕ್ಕೆ ಮುಂಚೆ ಅಡಿಕೆ ತೋಟದಲ್ಲಿ ಮಾಡಬೇಕಾದ ಅಗತ್ಯ ಕೆಲಸಗಳು.

ಇನ್ನೇನು ಮಳೆಗಾಲ ಬರುವುದಕ್ಕೆ ಹೆಚ್ಚು ಸಮಯ ಇಲ್ಲ. ಅಡಿಕೆ ತೋಟದಲ್ಲಿ ಈಗ ನೀವು ಮಾಡಬೇಕಾದ ಕೆಲವು ಕೆಲಸಗಳು ತೋಟದ ಫಲವತ್ತತೆಯನ್ನು ಹೆಚ್ಚಿಸುತ್ತದೆ. ಮಳೆಗಾಲದಲ್ಲಿ ಯಾವ ಕೆಲಸವನ್ನೂ ಓರಣವಾಗಿ ಮಾಡಲು ಸಾಧ್ಯವಾಗುವುದಿಲ್ಲ. ಈ ಸಮಯದಲ್ಲಿ ಕೆಲಸಗಾರರ ಲಭ್ಯತೆಯೂ ಕಡಿಮೆ ಇರುತ್ತದೆ. ಇದಕ್ಕಿಂತೆಲ್ಲಾ ಮುಖ್ಯವಾಗಿ ಮಳೆಗಾಲದಲ್ಲಿ ಮಾಡಲೇ ಬಾರದ ಕೆಲವು ಕೆಲಸಗಳಿವೆ ಅದನ್ನು ಈಗಲೇ ಮಾಡುವುದು ಬಹಳ ಒಳ್ಳೆಯದು. ಈ ಸಮಯದಲ್ಲಿ  ಕಳೆ ತೆಗೆಯುವುದು, ಬಸಿ ಗಾಲುವೆ ಸ್ವಚ್ಚ ಮಾಡುವುದು ಮಾಡಿದರೆ ಉದುರಿ ಹೆಕ್ಕಲು ಸಿಕ್ಕದ ಅಡಿಕೆ ಸಿಗುತ್ತದೆ. ಅದರಿಂದ…

Read more
ಅಡಿಕೆ -ದರ ಎರಿಕೆ

ಅಡಿಕೆ -ದರ ಏರಿಕೆಗೆ ಮುಹೂರ್ತ ಕೂಡಿ ಬರುವ ಮುನ್ಸೂಚನೆ.

ಈ ಹಿಂದೆ ನಾವು ಕೆಲವು ವರ್ತಕರು ಮತ್ತು  ಅನುಭವಿಗಳ ಹೇಳಿಕೆಯಂತೆ ಊಹಿಸಿದ್ದ ಬೆಲೆ ಏರಿಕೆಯ  ಕಾಲ ಈಗ ಕೂಡಿ ಬರುವ ಸೂಚನೆ ಕಾಣುತ್ತಿದೆ. ನಿನ್ನೆ ಪಟೋರಾ ಅಡಿಕೆಗೆ 20 ರೂ, ಜಂಪ್. ಇಂದು ಹಳೆ ಅಡಿಕೆಗೆ 10 ರೂ. ಜಂಪ್. ಇನ್ನೇನು ಮುಂದಿನ ವಾರದ ಒಳಗೆ ಚಾಲಿ ಮತ್ತು ಕೆಂಪಡಿಕೆ ಎರಡೂ ಏರಿಕೆ ಪ್ರಾರಂಭವಾಗುವ ಮುನ್ಸೂಚನೆ ಇದೆ. ದರ ಏರಿಕೆಯ ಮುಹೂರ್ತ ಖಾಸಗಿ ವ್ಯಾಪಾರಿಗಳಿಂದ ಪ್ರಾರಂಭವಾಗಿದೆ. ಈಗ ಏರಿಕೆ ಆಗುವುದು ಮುಂದಿನ ಮಳೆಗಾಲದ ಹಂಗಾಮಿಗೆ ದಾಸ್ತಾನು ಮಾಡಿಕೊಳ್ಳುವುದಕ್ಕೆ…

Read more
areca palm

ಮಳೆ ಬಂತೆಂದು ಚಿಂತೆ ಮಾಡಬೇಡಿ. ಇದರಿಂದ ಬೆಳೆ ನಷ್ಟ ಆಗದು.

ಈಗ ಮಳೆ ಬಂದು ಅಡಿಕೆಯಲ್ಲಿ ಮುಂದಿನ ಫಸಲು ಕಡಿಮೆಯಾಗಿ ನಷ್ಟ ಆಗಬಹುದು ಎಂದು ಆತಂಕದಲ್ಲಿರುವ ಬೆಳೆಗಾರರಿಗೆ ಇದು ಕಿವಿ ಮಾತು.ಬೆಳೆ ನಷ್ಟ ಆಗದು. ಅನುಕೂಲವೇ ಆಗುವುದು. ಎಪ್ರೀಲ್ ತಿಂಗಳಲ್ಲಿ ಮಳೆ ಬರುವುದು ಇತ್ತೀಚಿನ ದಿನಗಳಲ್ಲಿ ಅಪರೂಪವಾದರೂ ಹಿಂದೆ ಬಹುತೇಕ ವಿಶೇಷ ದಿನಗಳ ಸಂದರ್ಭದಲ್ಲಿ ಮಳೆ ಆಗುತ್ತಿತ್ತು. ಕಳೆದ ವರ್ಷ ಇದಕ್ಕಿಂತಲೂ ಬೇಗ ಮಳೆ  ಬಂದಿದೆ. ಆದರೆ  ಫಸಲಿಗೆ ತೊಂದರೆ ಆಗಿರಲಿಲ್ಲ.  ಈ ವರ್ಷ ಎಪ್ರೀಲ್ ನಲ್ಲಿ ಮಳೆ ಧಾರಾಕಾರವಾಗಿ ಬಂದಿದೆ. ತಾಪಮಾನ  ತುಂಬಾ ಇಳಿಕೆಯಾಗಿದೆ. ಇಂತಹ ವಾತಾವರಣದಿಂದ…

Read more
ಹಳ್ಳಿಯ ಮನೆಗಳಲ್ಲಿ ರಾಶಿ ರಾಶಿ ದುಂಬಿ

ಹಳ್ಳಿಯ ಮನೆಗಳಿಗೆಲ್ಲಾ ನುಗ್ಗಿದೆ- ‘ಕೆಲ್ಲು’ ಎಂಬ ಈ ಅನಾಹುತಕಾರಿ ದುಂಬಿ.

ಹಳ್ಳಿಗಳಲ್ಲಿ, ಹಳ್ಳಿಗೆ ತಾಗಿದ ಪಟ್ಟಣಗಳಲ್ಲಿ ಈಗ ಬೆಳಕಿನ ದೀಪವನ್ನು ಹುಡುಕಿ ಬರುವ ಹಿಂಡು ಹಿಂಡು ದುಂಬಿಗಳು (ಕೆಲ್ಲು) ಜನರಲ್ಲಿ ಆತಂಕವನ್ನು ಉಂಟು ಮಾಡಿದೆ. ಕೆಲವು ಜನ ಇದು ಯಾವುದೋ ಮಾರಿ. ದೆವ್ವದ ಉಪಟಳ ಎಂದು ಮಾತಾಡುತ್ತಿದ್ದಾರೆ. ವಾಸ್ತವವಾಗಿ ಇದು ನಾವೇ ಮಾಡಿಕೊಂಡ ಆವಾಂತರ. ಬಹುತೇಕ ಎಲ್ಲಾ ಮನೆಗಳಲ್ಲೂ ಇದು ಇದೆ. ರಸ್ತೆ ಸಂಚರಿಸುವಾಗ ಮೈಗೆ ತಾಗಿ ಮನೆ ಮನೆಗೆ ಪ್ರಸಾರವಾಗುತ್ತಿದೆ.ಮನೆಯ ಕಿಟಕಿ ಬಾಗಿಲು ಸಂದು, ಬಟ್ಟೆ ಬರೆ, ಪುಸ್ತಕಗಳು, ಹಂಚಿನ ಛಾವಣಿಯ ರೀಪು ಪಕ್ಕಾಸುಗಳಲ್ಲಿ, ಗೊಡೆ ಸಂದುಗಳಲ್ಲಿ,…

Read more
error: Content is protected !!