ಅಡಿಕೆಗೆ ಸಿಂಪರಣೆ

ಅಡಿಕೆಗೆ ಬಳಸುತ್ತಿರುವ ಕೀಟ- ಶಿಲೀಂದ್ರ ನಾಶಕ ಕೆಲಸ ಮಾಡುವುದಿಲ್ಲವಂತೆ. 

ಭಾರತ ಸರಕಾರದ ಕೃಷಿ ಮಂತ್ರಾಲಯವು ಕೆಲವು ಕೀಟನಾಶಕಗಳನ್ನು ಬ್ಯಾನ್ ಮಾಡುವ ಬಗ್ಗೆ ಪ್ರಸ್ತಾಪ ಎತ್ತಿದೆ. ಕಾರಣ ಅವು ಕೆಲಸ ಮಾಡುವುದಿಲ್ಲವಂತೆ. ಸುಮಾರು 27 ಬೆಳೆಸಂರಕ್ಷಗಳನ್ನು ಬ್ಯಾನ್ ಮಾಡಲು ಮುಂದಾಗಿದೆ. ಹೌದು ನಾವು ಅಡಿಕೆ ಮಿಳ್ಳೆ ಉದುರದಂತೆ ತಡೆಯಲು ಬಳಸುವ ಕೆಲವು ಕೀಟನಾಶಕ, ಶಿಲೀಂದ್ರ ನಾಶಕಗಳೂ ಸೇರಿದಂತೆ  ಬಹಳಷ್ಟು ಕೃಷಿ ಒಳಸುರಿಗಳು ಬಳಸಿಯೂ  ಕೆಲಸ ಮಾಡದೆ ನಮ್ಮ ಜೇಬು ಖಾಲಿ ಮಾಡಿದ್ದಷ್ಟೇ. ಅದೆಷ್ಟೋ ರೈತರು ಬೆಳೆಗಳಿಗೆ ಬರುವ ರೋಗಕ್ಕೆ, ಕೀಟಕ್ಕೆ ಔಷಧಿ ಸಿಂಪಡಿಸುತ್ತಾರೆ. ಒಂದನ್ನು ಸಿಂಪಡಿಸಿ ಫಲಿತಾಂಶ ಸಿಗದಿದ್ದರೆ…

Read more
ಫಲವತ್ತಾದ ಮೇಲ್ಮಣ್ಣು

ಮೇಲ್ಮಣ್ಣು ಉಳಿದರೆ ಮಾತ್ರ ಕೃಷಿ ಲಾಭದಾಯಕ .

ಮೇಲುಮಣ್ಣು ಉತ್ತಮವಾಗಿದ್ದರೆ ಮಾತ್ರ ಕೃಷಿ ಕೈ ಹಿಡಿದೀತು. ಒಂದು ವೇಳೆ ಮೇಲು ಮಣ್ಣು ಕೊಚ್ಚಣೆ ಅಧಿಕವಾಗಿದ್ದರೆ ಅಲ್ಲಿ ಕೃಷಿ ಮಾಡುವುದು ಲಾಭದಾಯಕವಲ್ಲ.ಮೇಲು ಮಣ್ಣು ಉಳಿಸಲು ಮತ್ತು ರಚನೆಯಾಗುವ ರೀತಿಯ ಬೇಸಾಯ ಕ್ರಮಗಳನ್ನು ಅನುಸರಿಸುವುದು ಕೃಷಿಕರ ಆದ್ಯ ಕರ್ತವ್ಯ.       ಮೇಲು ಮಣ್ಣು ಹೇಗಿರುತ್ತದೆ: ಒಂದು ಹಿಡಿ ಮಣ್ಣು ಕೈಯಲ್ಲಿ ಹಿಡಿದರೆ ಅದು ಲಾಡಿನಂತೆ ಉಂಡೆ ಕಟ್ಟಲು ಬರಬೇಕು. ಅಂಟು ಆಂಟಾದ ಕಪ್ಪು ಮಿಶ್ರ ಬಣ್ಣದ, ಅರೆ ಬರೆ ಸಾವಯವ ವಸ್ತುಗಳು ಕೊಳೆಯುತ್ತಿರುವ ಸ್ಥಿತಿಯಲ್ಲಿ ಮೇಲು ಮಣ್ಣು…

Read more
ಹುಳ ಇರುವ ಬದನೆಕಾಯಿ

ಬದನೆಯಲ್ಲಿ ಹುಳ ಹೇಗೆ ಆಗುತ್ತದೆ.

ತರಕಾರಿ ಬೆಳೆಗಳಲ್ಲಿ ಬದನೆ, ಬೆಂಡೆ ಮುಂತಾದವುಗಳಿಗೆ  ಕಾಯಿ ಕೊರಕ ಎಂಬ ಹುಳು ತೊಂದರೆ ಮಾಡುತ್ತದೆ. ಒಂದು ಪತಂಗ ಕಾಯಿಯ ಮೇಲೆ  ಮೊಟ್ಟೆ ಇಟ್ಟು, ಅದು ಮರಿಯಾಗಿ ಹುಳವಾಗುವುದು. ಬದನೆ ಬೆಳೆಯಲ್ಲಿ ಪ್ರಮುಖ ಸಮಸ್ಯೆ ಕಾಯಿ ಮತ್ತು ಚಿಗುರು ಕೊರಕ ಹುಳು. ಇದರ ಹೆಸರು Leucinodes orbonalis ಈ ದಿನ ಸರಿ ಇದ್ದ ಗಿಡ ನಾಳೆ ಬಾಡುತ್ತದೆ. ಒಂದು ಗಿಡಕ್ಕೆ ಪ್ರಾರಂಭವಾದರೆ  ಮತ್ತೆ ಹೆಚ್ಚುತ್ತಾ  ಹೋಗುತ್ತದೆ. ಕಾಯಿ ಕೊರಕವೂ ಇಂದು ಚೆನ್ನಾಗಿದ್ದ ಕಾಯಿಯಲ್ಲಿ ನಾಳೆ ಸಣ್ಣ ತೂತು ಕಂಡು…

Read more
ಮಾವಿನ ಹಣ್ಣು ಈ ರೀತಿ ಆದರೆ ಅದು ಕೊಳೆಯುವ ಪ್ರಾರಂಭಿಕ ಹಂತ

ಮಾವಿನ ಕಾಯಿ ಹಣ್ಣಾಗುವಾಗ ಕೊಳೆಯುವುದಕ್ಕೆ ಏನು ಕಾರಣ?

ಮಾವಿನ ಹಣ್ಣಿನ ತೊಟ್ಟಿನ ಭಾಗ ಮೊದಲು ಮೆತ್ತಗಾಗಿ ಕೊಳೆಯುತ್ತದೆ. ಹಣ್ಣು ಮೇಲ್ಮೈಯಲ್ಲಿ ಅಲ್ಲಲ್ಲಿ ತಪ್ಪು ಕಲೆಗಳಾಗಿ ಕೊಳೆಯುತ್ತದೆ.  ಮಾವಿನ ಹಣ್ಣು ನೋಡುವಾಗ ಅದನ್ನು ತಿನ್ನಲು ಹೇಸಿಗೆಯೆನಿಸುತ್ತದೆ. ಇದು ಯಾಕೆ ಹೀಗಾಗುತ್ತದೆ ಎಂಬುದರ ಬಗ್ಗೆ ಬಹಳಷ್ಟು ರೈತರಿಗೆ ಗೊತ್ತೇ ಇಲ್ಲ.  ಇದು ರಾಸಾಯನಿಕ ಬಳಸಿ ಬೆಳೆದರೂ ಆಗುತ್ತದೆ. ಸಾವಯವದಲ್ಲಿ ಬೆಳೆದರೂ ಆಗುತ್ತದೆ. ಇದನ್ನು ಕೆಲವು ಕ್ರಮಗಳ ಮೂಲಕ ನಿಯಂತ್ರಣ ಮಾಡಬಹುದು. ಇದು ಮಾವಿನ ಹಣ್ಣಿನ ಸೀಸನ್. ಕೆಲವರ ಮನೆಯಂಗಳದ ಮಾವಿನ ಮರದಲ್ಲಿ ಕಾಯಿ ಇದೆ. ಕೆಲವರು ಅಂಗಡಿಯಿಂದ ಒಯ್ಯುತ್ತಾರೆ. …

Read more

ಅನನಾಸು ಗಾತ್ರ ದೊಡ್ದದಾಗಬೇಕೇ ಹೀಗೆ ಮಾಡಿ.

ಬಹಳ ಜನ ಅನನಾಸು ದೊಡ್ದದಾಗುವುದಕ್ಕೆ ಅದರ ಜುಟ್ಟಿಗೆ ರಾಸಾಯನಿಕ ಹಾಕಬೇಕು ಎಂದು ತಿಳಿದಿದ್ದಾರೆ. ಅದು ತಪ್ಪು.  ಸರಳ ಕ್ರಮದಲ್ಲಿ ಜುಟ್ಟನ್ನು ಸಣ್ಣದು ಮಾಡಿ, ಕಾಯಿ ದೊಡ್ಡದಾಗುವಂತೆ ಮಾಡಬಹುದು. ಅನನಾಸು ಬೆಳೆದವರು  ಮಾರಾಟ ಮಾಡುವಾಗ ಜುಟ್ಟು ದೊಡ್ದದಿದ್ದರೆ ಕೊಳ್ಳುವವ ಕೇಳುತ್ತಾನೆ, ಕಾಯಿಗೆಷ್ಟು ಬೆಲೆ, ಜುಟ್ಟಿಗೆಷ್ಟು ಬೆಲೆ ಎಂದು. ಜುಟ್ಟು ಸಣ್ಣದಿದ್ದರೆ ಬೆಲೆ ಹೆಚ್ಚು. ಜುಟ್ಟು ದೊಡ್ಡದಾದರೆ ಬೆಲೆ ಕಡಿಮೆ. ಜುಟ್ಟು ದೊಡ್ಡದಾಗುವುದು, ಸಣ್ಣದಾಗುವುದು ಬಿಸಿಲು ಮತ್ತು ನೆರಳಿನ ಕಾರಣದಿಂದ. ದೊಡ್ಡದಾದ ಜುಟ್ಟನ್ನು ಚಿವುಟುವ ಮೂಲಕ ಸಣ್ಣದಾಗುವಂತೆ ಮಾಡಬಹುದು. ಇದಕ್ಕೆ…

Read more
ಬಾಳೆ ಸುಳಿ ಕೊಳೆಯುವಿಕೆ

ಬಾಳೆಯಲ್ಲಿ ಸುಳಿ ಹೀಗೆ ಆಗುವುದು ಯಾವ ಕಾರಣಕ್ಕೆ?.

ಚೆನ್ನಾಗಿ ಬೆಳೆಯುತ್ತಿರುವ ಬಾಳೆಯಲ್ಲಿ ಇದ್ದಕ್ಕಿದ್ದಂತೆ ಸುಳಿ ಭಾಗ ಕಪ್ಪಗಾಗುತ್ತದೆ, ಮುರಿದು ಬೀಳುತ್ತದೆ. ನಂತರ ಅದು ಕೊಳೆತು ಹೋಗುತ್ತದೆ. ಇದು ಎಲ್ಲಾ ಕಡೆ ಕಂಡುಬರುವ ಸಮಸ್ಯೆಯಾಗಿದ್ದು, ಇಂತಹ ಬಾಳೆ ಸರಿ ಮಾಡಲಾಗದಿದ್ದರೂ ಅದರ ಕಂದನ್ನು ಸರಿಮಾಡಬಹುದು. ಕೆಳಸ್ಥರದ ಎಲೆಗಳೆಲ್ಲಾ ಸರಿಯಾಗಿದ್ದು, ತುದಿ ಭಾಗದ ಸುಳಿ ಎಲೆ, ಗಿಡ್ಡವಾಗಿ ಕೊಳೆಯುವ ಒಂದು ಸಮಸ್ಯೆ ಎಲ್ಲಾ ಬಾಳೆ  ಬೆಳೆಗಾರರೂ ಗಮನಿಸಿದ್ದು. ಇದು ಮಳೆಗಾಲದಲ್ಲಿ ಮತ್ತು ಇಬ್ಬನಿ ಬೀಳುವ ಸಮಯದಲ್ಲಿ  ಹೆಚ್ಚು. ಇದರ ನಿಯಂತ್ರಣ ಹೀಗೆ.  ಬಾಳೆ ಬೆಳೆಸುವವರ ಹಿಡಿತದಲ್ಲಿಲ್ಲದ ಸಮಸ್ಯೆ ಎಂದರೆ…

Read more
ದಾಳಿಂಭೆ ಪ್ಯಾಕಿಂಗ್

ಹಣ್ಣು ಹಂಪಲುಗಳನ್ನು ಹೀಗೆ ಪ್ಯಾಕಿಂಗ್ ಮಾಡಿ – ಹಾಳಾಗದು.

ಪಪ್ಪಾಯಿಯ ಬಲಿತ ಕಾಯಿಯನ್ನು ಕೊಯ್ದು ಕಾಗದ ಸುತ್ತಿ ಪ್ಯಾಕಿಂಗ್ ಮಾಡಲಾಗುತ್ತದೆ. ಅದೇ ರೀತಿಯಲ್ಲಿ ಮಾವನ್ನು  ಭತ್ತದ ಹುಲ್ಲಿನಲ್ಲಿ ಪ್ಯಾಕಿಂಗ್ ಮಾಡುತ್ತಾರೆ. ಕಾರಣ ಹಣ್ಣು ಹಂಪಲುಗಳು ಹಣ್ಣಾಗುವ ಸಮಯದಲ್ಲಿ ಏಕ ರೀತಿಯ ತಾಪಮಾನ ಇರಬೇಕು. ಅದು ತಂಪೂ ಆಗಬಾರದು. ಬಿಸಿಯೂ ಆಗಬಾರದು. ಹಣ್ಣು ಆಗುವ ತನಕ ಇದನ್ನು ಕಾಯ್ದುಕೊಂಡರೆ  ಹಾಳಾಗದೇ ಹಣ್ಣಾಗುತ್ತದೆ. ಹಣ್ಣು ಹಂಪಲುಗಳಿಗೆ ಒಂದು  ಸಣ್ಣ ನೊಣ ( ಕಣ್ಣಿನ ಸುತ್ತ ಹಾರುವಂತದ್ದು) ಕುಳಿತರೆ ಸಾಕು ಅದು ಬೇಗ ಹಾಳಾಗುತ್ತದೆ. ಅದನ್ನು ತಡೆಯಲು ಈ ರಕ್ಸಣೆ ಅಗತ್ಯ. …

Read more

ಕೀಟಗಳ ನಿಯಂತ್ರಣಕ್ಕೆ ಹೀಗೆ ಮಾಡಿದರೆ ತುಂಬಾ ಅನುಕೂಲ.

 ಬಲೆ ಬೆಳೆ ಎಂದರೆ ಒಂದು ಬೆಳೆಗೆ ಬರುವ ಕೀಟವನ್ನು ಮತ್ತೊಂದು ಬೆಳೆಯ ಮೂಲಕ ಬಂಧಿಸುವುದು. ಕೀಟಗಳಿಗೆ ಬೇಕಾದಷ್ಟು ಅಹಾರ ಕೊಟ್ಟು ಅವುಗಳನ್ನು ಅಲ್ಲೇ ಬಂಧಿಸುವುದು ಎಲ್ಲದಕ್ಕೂ ಕೀಟ  ನಾಶಕ ಪರಿಹಾರ ಅಲ್ಲ. ಅದು ಸಮಂಜಸ ಪರಿಹಾರವೂ ಅಲ್ಲ. ನಾವು ಕೈಯಿಂದ ಕೊಯ್ಯುವುದು ಸಾಧ್ಯವಿದ್ದರೆ ಅದರಿಂದಲೇ  ಕೊಯಿಲು ಮಾಡಬೇಕು. ನಾವು ಈಗ ಕೊಕ್ಕೆ ಅನಿವಾರ್ಯವಾದಂತೆ  ವರ್ತಿಸುತ್ತೇವೆ. ಹುಳ ಬಿದ್ದಿದೆ ಯಾವ ಕೀಟ ನಾಶಕ ಸಿಂಪಡಿಸಬೇಕು ಎಂದು ಕೇಳುತ್ತೇವೆಯೇ ವಿನಹ ಏನು ಮಾಡಬೇಕು ಎಂದು ಕೇಳುತ್ತಿಲ್ಲ. ತಜ್ಞರ ಬಳಿಗೆ ರೈತರು ಹೋಗುವುದಿಲ್ಲ….

Read more
ಸ್ಥಳೀಯ ಹಸುವಿನ ಸಗಣಿಯ ಅಥವಾ ಗೋಮಯ

ವೈಜ್ಞಾನಿಕವಾಗಿಯೂ ಸಾಬೀತಾದ ಸ್ಥಳೀಯ ಹಸು ಸಗಣಿಯ ಈ ಉಪಯೋಗಗಳು.

ಪ್ರಪಂಚದಲ್ಲಿ ಕೇವಲ 12 ಗಂಟೆ ಒಳಗೆ ನಾವು ಕೊಡುವ ಹಸಿ, ಒಣ ಹುಲ್ಲನ್ನು ತಿಂದು ಜೀರ್ಣಿಸಿ ಅದನ್ನು ಸಗಣಿ ರೂಪದ ಗೊಬ್ಬರವಾಗಿ ಬುಟ್ಟಿಯಷ್ಟು ಇದ್ದುದನ್ನು ಬೊಗಸೆ ಯಷ್ಟಕ್ಕೆ ಪರಿವರ್ತಿಸಿಕೊಡುವ ಒಂದು ಜೀವಂತ ಗೊಬ್ಬರ ಮಾಡುವ ಯಂತ್ರ ಇದ್ದರೆ ಅದು ಹಸು/ಎಮ್ಮೆ/ಆಡು, ಕುರಿ ಮಾತ್ರ. ಅದರಲ್ಲೂ ನಮ್ಮ ಸುತ್ತಮುತ್ತ ಅನಾದಿ ಕಾಲದಿಂದ ಸಾಕಣೆಯಲ್ಲಿದ್ದ  ಸ್ಥಳೀಯ ಹಸುವಿನ ಈ ಸಗಣಿಯಲ್ಲೇ ಉಪಯೋಗ ಹೆಚ್ಚು.  ದೇಸೀ ಹಸು ಅಥವಾ ಸ್ಥಳೀಯ ನಾಟಿ ಹಸು ಅಥವಾ ಮೇಯಲು ಬಿಟ್ಟು  ಸಾಕುವ ಹಸುಗಳ ಸಗಣಿಯನ್ನು…

Read more
ಮೇಯುತ್ತಿರುವ ಸ್ಥಳೀಯ ತಳಿ ದನ, ಮತ್ತು ಎಮ್ಮೆ

ಸ್ಥಳೀಯ ತಳಿಯ ಜಾನುವಾರುಗಳ ಸಗಣಿಯಲ್ಲಿ ಯಾಕೆ ವಿಶೇಷ ಶಕ್ತಿ ಅಡಗಿದೆ?

ಸ್ಥಳೀಯ ತಳಿಗಳ ಜಾನುವಾರುಗಳ ಸಗಣಿ ಬಗ್ಗೆ ಹೇಳಿದರೆ ಕೆಲವರಿಗೆ ಇದು ಕ್ಷುಲ್ಲಕ ವಿಚಾರವೆನಿಸಬಹುದು, ಇನ್ನು ಕೆಲವರಿಗೆ ಉತ್ಪ್ರೇಕ್ಷೆಯೂ ಆಗಬಹುದು.ಸತ್ಯವೆಂದರೆ ನಮ್ಮ ಹಿರಿಯರೆಲ್ಲಾ ಇದರ ಗುಣಗಳನ್ನು ನಂಬಿದವರು. ಇತ್ತೀಚೆಗೆ ನಾವು ಇದನ್ನು ಮರೆತಿದ್ದೇವೆ. ನಿಜವಾಗಿ ಹಸುವಿನ ಸಗಣಿಯಲ್ಲಿ ಕೆಲವು ವಿಶೇಷ ಶಕ್ತಿ ಇದೆ ಎಂಬುದಂತೂ ಸತ್ಯ. ದೇಶಿ ತಳಿ ಜಾನುವಾರುವಿನ ಸಗಣಿ ಶ್ರೇಷ್ಟ. ಮೂತ್ರವೂ ಹಾಗೆಯೇ. ಇದು ಈಗ ಚರ್ಚೆಯಾಗುತ್ತಿರುವ  ವಿಷಯ. ಯಾಕೆ ಶ್ರೇಷ್ಟ , ಅದರ ಹಿನ್ನೆಲೆ ಏನು? ಶ್ರೇಷ್ಟತೆಗೆ  ಮೂಲ ಕಾರಣ ಯಾವುದು? ಈ ವಿಷಯಕ್ಕೆ…

Read more
error: Content is protected !!