ಪ್ರಧಾನಿಗಳು ದೇಶದ ಜನತೆಯಲ್ಲಿ ಕ್ಷಮೆ ಯಾಚಿಸಿದ್ದು ಯಾಕೆ?
ದೇಶದ ಪ್ರಧಾನಿಯೊಬ್ಬರು ದೇಶವಾಸಿಗಳ ಕ್ಷಮೆ ಯಾಚಿಸುವುದೆಂದರೆ ಅಂಥಃ ತಪ್ಪನ್ನೇನು ಮಾಡಿರಬಹುದು? “मैं आज देशवासियों से क्षमा मांगते हुए ” ತಪ್ಪಿಗಾಗಿ ಕ್ಷಮೆ ಕೇಳಿದ್ದೋ, ಏನು ಬೇಕಾದರೂ ಮಾಡಿಕೊಳ್ಳಿ. ನಿಮ್ಮ ತಂಟೆಗೆ ನಾವಿಲ್ಲ ಎಂದು ವಿಷಯಕ್ಕೆ ಅಂತ್ಯ ಹಾಡಿದ್ದೋ ತಿಳಿಯದು. ಪ್ರಧಾನಿಗಳಾದವರು ಸಾಮಾನ್ಯ ಜನರಂತೆ ಮನ ಬಂದಂತೆ ಮಾತಾಡುವಂತಿಲ್ಲ. ಮನಬಂದಂತೆ ನಿರ್ಧಾರ ತೆಗೆದುಕೊಳ್ಳುವಂತಿಲ್ಲ ಇದಂತೂ ಸತ್ಯ. ಸಂಯುಕ್ತ ಕಿಸಾನ್ ಮೋರ್ಚಾ ಎಂಬುದು 2020 ರಲ್ಲಿ ಹುಟ್ಟಿಕೊಂಡ ರಾಷ್ಟ ಸಂಘಟನೆ. ಕೇಂದ್ರ ಸರಕಾರ “ಕೃಷಿ ಕಾಯಿದೆ 2020” ಎಂಬ…