ಸ್ಟ್ರಾಬೆರಿ ಹಣ್ಣು

ನಾವೂ ಬೆಳೆಸಬಹುದೇ ಸ್ಟ್ರಾಬೆರಿ ಬೆಳೆ.

ಕೆಂಪು ಕೆಂಪಾದ ಸ್ಟ್ರಾಬೆರಿ ಹಣ್ಣೆಂದರೆ  ಎಲ್ಲರಿಗೂ  ಇಷ್ಟ. ಈ ಹಣ್ಣು  ಬೆಳೆಸಬೇಕು ತಿನ್ನಬೇಕು ಎಂಬ ತವಕ. ಆದರೆ ಇದನ್ನು ಎಲ್ಲಾ ಕಡೆ ಬೆಳೆಸಲು ಆಗುವುದಿಲ್ಲ. ಸೂಕ್ತ ವಾತಾವರಣದಲ್ಲಿ  ಮಾತ್ರ ಇದು ಉತ್ತಮವಾಗಿ ಬೆಳೆದು ಉತ್ತಮ ಹಣ್ಣುಗಳನ್ನು ನೀಡುತ್ತದೆ.  ಕೈ ಹಿಡಿದರೆ  ಮಾತ್ರ ಇದು ಭಾರೀ ಲಾಭದ ಬೆಳೆ . ನಾವೆಲ್ಲಾ ಮಾರುಕಟ್ಟೆಯಿಂದ ಖರೀದಿ ಮಾಡುವ ಸ್ಟ್ರಾಬೆರಿ ಹಣ್ಣುಗಳು  ಬರುವುದು ಮಹಾರಾಷ್ಟ್ರದ  ಮಹಾಬಲೇಶ್ವರದಿಂದ. ಇದಕ್ಕೆ ಮಹಾಬಲೇಶ್ವರ ಸ್ಟ್ರಾಬೆರಿ ಎಂಬ ಹೆಸರು.  ದೇಶದ ಬೇರೆ ಕಡೆಗಳಲ್ಲಿ ಬೆಳೆಯುತ್ತಾರೆಯಾದರೂ ಇಷ್ಟು ಪ್ರಮಾಣ…

Read more

ವೀಳ್ಯದೆಲೆ ಬೆಳೆಗಾರರ ಸಮಸ್ಯೆಗೆ ಇಲ್ಲಿದೆ ಉತ್ತರ.

ದೈನಂದಿನ ಆದಾಯ ಕೊಡಬಲ್ಲ ವೀಳ್ಯದೆಲೆಗೆ, ನೋಟದ ಮೇಲೆ ಮಾರುಕಟ್ಟೆ ನಿಂತಿದೆ.ಉತ್ತಮ ನೋಟದ ಎಲೆಗಳು  ರೋಗ  ರಹಿತ ಬಳ್ಳಿಗಳಿಂದ ಮಾತ್ರ ದೊರೆಯಬಲ್ಲುದು. ವೀಳ್ಯದೆಲೆಯು ಒಂದು ಪ್ರಮುಖತೋಟಗಾರಿಕಾ ಬೆಳೆಯಾಗಿದ್ದು. ಕರ್ನಾಟಕದಲ್ಲಿಇದರ ವಿಸ್ತೀರ್ಣ  8288 ಹೆಕ್ಟರ್ ಹಾಗೂ ಇಳುವರಿ 153600 ಮೆ.ಟನ್. ಎಲೆಗಳು ಉತ್ಪತ್ತಿಯಾಗುತ್ತಿದೆ.ಈ ಬೆಳೆಯ ಬೆಳೆವಣಿಗೆಯ ಹಂತದಲ್ಲಿ ಅನೇಕ ರೋಗಗಳು ಬಾಧೆಗೊಳಗಾಗುತ್ತವೆ. ಅವುಗಳಲ್ಲಿ ಬುಡಕೊಳೆ ರೋಗ, ದುಂಡಾಣು ಎಲೆ ಚುಕ್ಕೆ ರೋಗ ಮತ್ತುಚಿಬ್ಬುರೋಗ ಪ್ರಮುಖ ರೋಗಗಳಾಗಿವೆ. ಅವುಗಳಲ್ಲಿ ದುಡಾಂಣು ಎಲೆಚುಕ್ಕೆ ರೋಗವು ಇತ್ತೀಚಿಗೆ ಎಲ್ಲಾ ಕಡೆ ಭಾರೀ ನಷ್ಟವನ್ನು ಉಂಟು…

Read more
ಮೊಡ ಕವಿದ ವಾತಾವರಣ

ಬದಲಾದ ಹವಾಮಾನ – ಕೃಷಿಗೆ ಆತಂಕ.

ಬೇಸಿಗೆ ಕಾಲದಲ್ಲಿ ಕೆಲವು ಸಮಯದಲ್ಲಿ ಒಂದೆರಡು ದಿನ ಮೋಡ ಕವಿದ ವಾತಾವರಣ ಇರುತ್ತದೆ. ಸಾಮಾನ್ಯವಾಗಿ ಮಾವು, ಗೇರು ಹೂ ಬೀಡುವ ಸಮಯದಲ್ಲಿ  ಇದು ಹೆಚ್ಚು. ಈ ಮೋಡ ಕವಿದ  ದಿನಗಳು ಬೆಳೆಗಳಿಗೆ  ಹಾಳು. ಈ ವರ್ಷದ ಹವಾಮಾನ ಯಾಕೋ ಭಿನ್ನವಾಗಿದೆ. ಡಿಸೆಂಬರ್ ವರೆಗೂ ಮಳೆ. ಚಳಿಯಂತೂ ತೀರಾ ಕಡಿಮೆ. ಆಗಾಗ ಮೋಡ ಕವಿದ ವಾತಾವರಣ. ಕೆಲವು  ತಜ್ಞರು ಹೇಳುವಂತೆ ಮುಂದಿನ ವರ್ಷಗಳಲ್ಲಿ  ಹವಾಮಾನ ಸ್ಥಿತಿ ಸ್ವಲ್ಪ ಸ್ವಲ್ಪವೇ ಬದಲಾವಣೆ ಆಗುತ್ತಾ, ಅಕಾಲಿಕ ಮಳೆ- ಅತಿಯಾದ ಬಿಸಿಲು ಬಂದು…

Read more
ಭೂಮಿ ಉಳುತ್ತಿರುವ ರೈತ

ಹೊಸ ಭೂ ಸುಧಾರಣೆಯ ಅವಶ್ಯಕತೆ.

ಉಡುಪಿ  ಜಿಲ್ಲಾಧಿಕಾರಿಗಳು  ಕೃಷಿ ಮಾಡದೆ ಭೂಮಿಯನ್ನು ಪಾಳು ಬಿಟ್ಟವರಿಗೆ ನೋಟಿಸು ಜ್ಯಾರಿ ಮಾಡುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. ಇದು ಈಗಿನ ಕಾಲಕ್ಕೆ ಸಯೋಚಿತ ನಿರ್ಧಾರ ಎನ್ನಬಹುದು.  ಜಿಲ್ಲಾಧಿಕಾರಿಗಳ ಹೇಳಿಕೆಯನ್ನು ಜನ ತಮ್ಮ ಸಮಸ್ಯೆಗಳನ್ನು ಮುಂದಿಟ್ಟು  ವಿರೋಧಿಸಿದ್ದಾರೆ. ಜನರ ಅಭಿಪ್ರಾಯವೂ ಸತ್ಯ. ಆದರೆ ಎಲ್ಲಾ ಸಮಸ್ಯೆಗಳ ಮೂಲ ಬೇರು  ಇರುವುದು, ಪಾಳು ಬಿದ್ದ ಜಮೀನಿನಲ್ಲೇ ಎಂಬುದು ಸತ್ಯ.  ಇಂತಹ ಜಿಲ್ಲಾಧಿಕಾರಿಗಳು, ಆಡಳಿತ ಅಧಿಕಾರಿಗಳು ಮತ್ತು ಸಾಮಾಜಿಕ ಕಳಕಳಿ ಉಳ್ಳ ಜನ ಪ್ರತಿನಿಧಿಗಳು ಇದ್ದರೆ  ಭವಿಷ್ಯದಲ್ಲಿ ಕೃಷಿ ಉಳಿಯಲು ಸಾಧ್ಯ. ಬದಲಾವಣೆ…

Read more
ಸಾಗುವಾನಿ ಮರಗಳಲ್ಲಿ ಅತ್ಯಧಿಕ ಎಲೆಗಳು

ಸಾಗುವಾನಿ ಬೆಳೆದರೆ ಮಣ್ಣು ಫಲವತ್ತಾಗುತ್ತದೆ.

ಜೀವಾಣುಗಳಿಂದ ಸಮೃದ್ಧವಾದ ಮಣ್ಣು  ಇರುವುದು ಮಾನವನ ಹಸ್ತಕ್ಷೇಪ ಇಲ್ಲದ ಕಾಡಿನ ಮಣ್ಣು ಮತ್ತು ಸಾಗುವಾನು ಮರದ ಬುಡದ ಮಣ್ಣಿನಲ್ಲಿ. ಯಾಕೆಂದರೆ ಸಾಗುವಾನಿ ಮರದ ಎಲೆಗಳ ರಚನೆಯೇ ಹಾಗೆ. ಸಾಗುವಾನಿ ಮರದ ಬುಡದಲ್ಲಿ  ಬೇಸಿಗೆಯಲ್ಲಿ ನಡೆದುಕೊಂದು ಹೋದರೆ  ಚಕ್ಕುಲಿ  ಹುಡಿಯಾದ ಸದ್ದು ಕೇಳಿಸುತ್ತದೆ. ಮಳೆಗಾಲದಲ್ಲಿ ನಡೆದುಕೊಂಡು ಹೋದರೆ  ಜಾರಿ ಬೀಳಬಹುದು ಅಷ್ಟು ಪ್ರಮಾಣದ ಮೆಕ್ಕಲು ಮಣ್ಣು ಬುಡದಲ್ಲಿ ಸಂಗ್ರಹವಾಗಿರುತ್ತದೆ. ಇದು ಸಾಗುವಾನಿ ಮರದ ವೈಶಿಷ್ಟ್ಯ. ಸಾಗುವಾನಿ ಅಥವಾ ತೇಗದ ಮರ ಎಲ್ಲಾ ಪ್ರದೇಶಗಳಲ್ಲೂ ಬೆಳೆಯುವ ಮರಮಟ್ಟು. ಕೃಷಿ ಅರಣ್ಯವೂ…

Read more
ರಬ್ಬರ್ ತೋಟದಲ್ಲಿ ಜೇನು ಪೆಟ್ಟಿಗೆ

ರಬ್ಬರ್ ಜೇನು ಎಷ್ಟು ಉತ್ತಮ?

ರಬ್ಬರ್ ಮರದಲ್ಲಿ ಚಿಗುರುವ ಸಮಯದಲ್ಲಿ ಎಲೆ ಭಾಗದಲ್ಲಿ ಒಂದು ರಸ ಸ್ರವಿಸುತ್ತದೆ. ಇದು ಮಾರ್ಚ್ ತನಕವೂ ಮುಂದುವರಿಯುತ್ತದೆ.  ಈಗ ಹಿಂದಿನಂತೆ ಕಾಡು ಜೇನು ಕಡಿಮೆ. ಇರುವುದು ಬಹುತೇಕ ರಬ್ಬರ್ ಮರದ ಜೇನು.  ಜೇನು ಎಂದರೆ ಅದು ನಿಸರ್ಗದ  ವೈವಿಧ್ಯಮಯ ಹೂವುಗಳ ಮಧುವನ್ನು ಜೇನು ನೊಣ ಎಂಬ ಜೀವಿ ತನ್ನ ಶರೀರದ ಒಳಗೆ  ಹೀರಿಕೊಂಡು ಸಂಗ್ರಹಿಸಿದ ದ್ರವ. ನೊಣಗಳು  ಅದನ್ನು ತಮ್ಮ ಗೂಡಿಗೆ ತರುತ್ತವೆ. ಅಲ್ಲಿ ಸ್ವಲ್ಪ ಕಾಲ ತಮ್ಮ ದೇಹದಲ್ಲಿ ಇಟ್ಟುಕೊಂಡು ನಂತರ ಅದನ್ನು ತಾವೇ ನಿರ್ಮಿಸಿದ…

Read more
ಸೀಡ್ ಟ್ರೇ ನಲ್ಲಿ ಬೀಜ ಬಿತ್ತುವುದು

ತರಕಾರಿ ಬೆಳೆಗಾರರನ್ನು ರಕ್ಷಿಸಿದ ಸೀಡ್ ಟ್ರೇ ತಂತ್ರಜ್ಞಾನ

ಹಿಂದೆ ತರಕಾರಿ ಬೆಳೆಯುವವರು ಹೊಲದ ಸಿದ್ದತೆ ಮಾಡಿ, ಸಾಲುಗಳನ್ನು ಗುರುತು ಮಾಡಿ, ಬೀಜ ತಂದು ಬಿತ್ತನೆ ಮಾಡಿ ಜೋಪಾನವಾಗಿ ಆರೈಕೆ ಮಾಡಿ ತರಕಾರಿ ಬೆಳೆಸುತ್ತಿದ್ದರು. ಈಗ ಹಾಗಿಲ್ಲ. ನಾಳೆ ಟೊಮಾಟೋ ಅಥವಾ ಇನ್ಯಾವುದಾದರೂ ತರಕಾರಿ ಹಾಕಬೇಕೆಂದಾದರೆ ಇಂದು ಹೊಲದ ಸಿದ್ದತೆ ಮಾಡಿ, ನಾಳೆ ಸಸಿ ನೆಡಬಹುದು. ಮುಂಚಿತವಾಗಿಯೇ ಸಸಿ ಮಾಡಿಟ್ಟುಕೊಳ್ಳುವ ಸೀಡ್ ಟ್ರೇ ತಂತ್ರಜ್ಞಾನ ಇದೆ. ಇದರಲ್ಲಿ ಗಿಡ ಬೆಳೆಸಿ ಕೊಡುವವರೂ ಇದ್ದಾರೆ. ಇದು ತರಕಾರಿ ಬೆಳೆಗಾರರಿಗೆ ನಷ್ಟವನ್ನು ತುಂಬಾ ಕಡಿಮೆ ಮಾಡಿದೆ. ಸಮಯದ ಉಳಿತಾಯವನ್ನೂ ಮಾಡಿದೆ….

Read more
ಜೈವಿಕ ಗೊಬ್ಬರ ಸಿಂಪರಣೆ

ಜೈವಿಕ ಗೊಬ್ಬರಗಳ ಮಾರಾಟ ಮತ್ತು ನಂಬಿಕಾರ್ಹತೆ.

ಇತ್ತೀಚಿನ ಕೆಲವು ವರ್ಷಗಳಿಂದ ಜೈವಿಕ ಉತ್ಪನ್ನಗಳ  ತಯಾರಿಕೆ ಮತ್ತು ಮಾರಾಟ ಹೆಚ್ಚಾಗುತ್ತಿದೆ. ಈ ಜೈವಿಕ ಉತ್ಪನ್ನಗಳು ಒಳ್ಳೆಯ  ಉತ್ಪನ್ನಗಳಾದರೂ ನಾಯಿಕೊಡೆಗಳಂತೆ ತಯಾರಕರು ಹುಟ್ಟಿಕೊಳ್ಳುತ್ತಿದ್ದಾರೆ.ಜೊತೆಗೆ ದರ ಸ್ಪರ್ಧೆ ಇರುವಾಗ ಗ್ರಾಹಕರಿಗೆ ಇದು ಒಂದು ಗೊಂದಲದ ಗೂಡಾಗಿದೆ. ಯಾವುದು ಉತ್ತಮ, ಯಾವುದು ಕಳಪೆ ಎಂದು ಅರಿಯುವುದಕ್ಕೆ ಅಸಾಧ್ಯವಾದ ಈ ಉತ್ಪನ್ನಗಳಲ್ಲಿ ಹೇಗಾದರೂ ನಂಬಿಕೆ ಇಡುವುದು ತಿಳಿಯದಾಗಿದೆ.   ಜೈವಿಕ ಗೊಬ್ಬರ ಅಥವಾ ಜೀವಾಣುಗಳು ಎಂದರೆ ಅದು ಕಣ್ಣಿಗೆ ಕಾಣದ ಜೀವಿಗಳು.ಇದರಲ್ಲಿ ಕೆಲವು ಪೋಷಕ ಒದಗಿಸುವಂತವುಗಳು ಮತ್ತೆ ಕೆಲವು ಕೀಟ  ರೋಗ…

Read more
ಉತ್ತರ –ದಕ್ಷಿಣ (ನೈರುತ್ಯ) ಬಿಸಿಲು ಬೀಳುವ ಭಾಗಕ್ಕೆ ಸುಣ್ಣ ಅಗತ್ಯ

ಅಡಿಕೆ ಮರಗಳಿಗೆ ಸುಣ್ಣ ಬಳಿದರೆ ಇಳುವರಿ ಹೆಚ್ಚುತ್ತದೆ.

ಅಡಿಕೆ ಮರಗಳ ಕಾಂಡವನ್ನು ಬಿಸಿಲಿನ ಘಾಸಿಯಿಂದ ರಕ್ಷಿಸಿದರೆ ಧೀರ್ಘಾವಧಿ ತನಕ ಫಸಲು  ಕೊಡುತ್ತದೆ. ವರ್ಷ ವರ್ಷವೂ ಗಾಳಿಗೆ ಮರ ಬೀಳುವುದರಿಂದಾಗಿ ಉಂಟಾಗುವ ನಷ್ಟ ಕಡಿಮೆಯಾಗಿ ಇಳುವರಿ ಸ್ಥಿರವಾಗಿರುತ್ತದೆ . ಮರದ ಕಾಂಡಕ್ಕೆ ಸುಣ್ಣ ಬಳಿದರೆ ಕಾಂಡ   ಹಾಳಾಗದೆ  ಅಯುಸ್ಸು ಹೆಚ್ಚಿ ಇಳುವರಿಯು ಹೆಚ್ಚುತ್ತದೆ. ದಕ್ಷಿಣಾಯನ ಮುಗಿಯುವ ಮಕರ ಸಂಕ್ರಮಣದ ತನಕ ಸೂರ್ಯನ ಬಿಸಿಲು ಮರದ ಕಾಂಡಕ್ಕೆ ನೇರವಾಗಿ ಹೊಡೆದು ಮರ ಕಾಂಡ ಸೂರ್ಯ ಕಿರಣದ ಘ್ಹಾಸಿಗೆ ಒಳಗಾಗುತ್ತದೆ. ಅಂತಹ ಮರಗಳು ಬೇಗ ಹಾಳಾಗುತ್ತವೆ. ಒಂದು ವರ್ಷ ನೇರ…

Read more
ತೆಂಗಿನ ಮರದ ಸುಳಿ ಕೊಳೆ

ತೆಂಗಿನ ಮರದ ಸುಳಿ ಕೊಳೆಯುವುದು ಯಾಕೆ? ಪರಿಹಾರ ಏನು?

ತೆಂಗಿನ ಮರದ ಶಿರ ಹೋಗುವುದಕ್ಕೆ ವಾತಾವರಣ ಕಾರಣ. ಇದು ಯಾವ ಪಕ್ಷಿ, ಪ್ರಾಣಿಯಿಂದಾಗಿ ಆಗುವುದಲ್ಲ. ಇದಕ್ಕೆ ಪ್ರಾರಂಭಿಕ ಹಂತದಲ್ಲಿ ಮಾತ್ರ ಚಿಕಿತ್ಸೆ   ಫಲಕಾರಿ. ಹಳ್ಳಿಯ ಜನ ಈಗಲೂ ಕುಪುಳು ಹಕ್ಕಿ Greater Coucal (ಬಾರದ್ವಾಜ ಪಕ್ಷಿ) ತೆಂಗಿನ ಗರಿಯಲ್ಲಿ ಕುಳಿತು ಮೂತ್ರ ಮಾಡಿದರೆ ತೆಂಗಿನ ಮರವೇ ಸತ್ತು ಹೋಗುತ್ತದೆ ಎಂದು ತಿಳಿದಿದ್ದಾರೆ. ಇದು ಈ ಹಕ್ಕಿಯಿಂದಾಗಿ ಆಗುವುದಲ್ಲ. ಹಕ್ಕಿಗಳು ಮೂತ್ರವನ್ನೇ ಮಾಡಲಾರವು. ಇದು ವಾತಾವರಣದ ಅನುಕೂಲ ಸ್ಥಿತಿ ಒದಗಿದಾಗ ಕೊಳೆತಿನಿ ಶಿಲೀಂದ್ರ ಬಾಧಿಸಿ ಉಂಟುಮಾಡುವ ರೋಗ.  ಸುಳಿ…

Read more
error: Content is protected !!