ಕರಿಮೆಣಸು ಹೀಗೆ ಬೆಳೆಸಬಹುದು

ಬುಷ್ ಪೆಪ್ಪರ್- ಕೊಯಿಲು ಬೆಳೆಸುವುದು ಹೇಗೆ- ಅನುಕೂಲ ಏನು?

ತೋಟದಲ್ಲಿ ಮರಕ್ಕೆ ಅಥವಾ ಯಾವುದಾದರು ಅಧಾರಕ್ಕೆ  ಹಬ್ಬಿಸಿ ಬೆಳೆಸಿದ ಕರಿಮೆಣಸನ್ನು  ಬೆಳೆಸುವುದು ನಮಗೆಲ್ಲಾ ಗೊತ್ತಿರುವ ಬೆಳೆ ಕ್ರಮ. ಇದನ್ನು ಮರಕ್ಕೆ ಹಬ್ಬಿಸು  ಬೆಳೆಸುವುದಲ್ಲದೆ ನೆಲದಲ್ಲಿಯೆ ಬೆಳೆಸಿ ಮೆಣಸು ಪಡೆಯಬಹುದು. ಈ ರೀತಿ ಮೆಣಸು ಬೆಳೆಸುವುದಕ್ಕೆ ಬುಷ್ ಪೆಪ್ಪರ್ ,ಪೊದೆಮೆಣಸು (bush pepper) ಎನ್ನುತ್ತಾರೆ. ಇದನ್ನು ಕೊಯ್ಯುವುದು ಸುಲಭ. ವರ್ಷದಲ್ಲಿ ಎರಡು ಮೂರು ಬಾರಿ ಇಳುವರಿಯು ಕೊಡುತ್ತದೆ. ಕೆಲವು ಇತಿಮಿತಿಗಳಲ್ಲಿ  ಇದನ್ನು ಬೆಳೆಸಬಹುದು. ಅಸಾಂಪ್ರದಾಯಿಕ ಪ್ರದೇಶಗಲ್ಲಿ ತಾಜಾ ಮೆಣಸು ಬಯಸುವವರಿಗೆ ಇದು ಉತ್ತಮ.  ಕಾಳು ಮೆಣಸು ಬೆಳೆಸಬೇಕೆಂಬ  ಆಸಕ್ತಿ…

Read more
ಶುಂಠಿ ಹೊಲ

ಶುಂಠಿ ಈಗ ನೆಟ್ಟರೆ ಬೆಳೆಗೆ ರೋಗ ಕಡಿಮೆ ಹೇಗೆ?.

ಶುಂಠಿ ಮುಂತಾದ  ಗೆಡ್ಡೆ ಗೆಣಸು ಬೆಳೆಗಳನ್ನು ಬೆಳೆಸುವರೇ ಕುಂಭ  ಮಾಸ ಅತ್ಯಂತ ಸೂಕ್ತ ಕಾಲ. ಶುಂಠಿಗೆ ಈ ವರ್ಷ ಬೆಲೆ ಕುಸಿತವಾಗಿದೆ ಎಂದು ಬೆಳೆ ಬಿಟ್ಟು ಬಿಡಬೇಡಿ. ಈ ವರ್ಷ ಮತ್ತೆ ಶುಂಠಿಗೆ ಚಾನ್ಸ್ ಬರುವ ಸಾಧ್ಯತೆ ಇದೆ. ಜೊತೆಗೆ ಬಿತ್ತನೆ ಗಡ್ಡೆಯೂ ಕಡಿಮೆ ಬೆಲೆಗೆ ಲಭ್ಯ. ಮಾರ್ಚ್ ನಂತರ ಶುಂಠಿ ನೆಟ್ಟರೆ ಮಳೆ ಬರುವ ಸಮಯಕ್ಕೆ ಗಿಡ ಬೆಳೆದು ರೋಗ ಸಾಧ್ಯತೆ ಕಡಿಮೆ. ಮಾಗಿ ತಿಂಗಳು ಅಥವಾ ಕುಂಭ ಮಾಸ ಕಳೆದರೆ ಮಳೆಗಾಲ. ಆಷಾಢ ಕಳೆದರೆ…

Read more
ತೋಟಕ್ಕೆ ಮಣ್ಣು – Fresh soil

ತೋಟಕ್ಕೆ ಹೇಗೆ ಮಣ್ಣು ಹಾಕಬೇಕು- ಯಾವ ಮಣ್ಣು ಸೂಕ್ತ ?

ಅಡಿಕೆ ತೋಟಕ್ಕೆ ಮಣ್ಣು ಹಾಕುವುದು ನಾವೆಲ್ಲಾ ಮಾಡುವ ಒಂದು ಪ್ರಮುಖ ಬೇಸಾಯ ಕ್ರಮ. ಮಣ್ಣು ಹಾಕುವ ಪದ್ದತಿ ಒಳ್ಳೆಯದು. ಅದರೆ ಹಾಕುವಾಗ ಹೇಗೆ ಹಾಕಬೇಕು, ಎಂತಹ ಮಣ್ಣು ಹಾಕಬೇಕು, ಎಷ್ಟು ಪ್ರಮಾಣದಲ್ಲಿ ಹಾಕಬೇಕು ಎಂಬುದು ಪ್ರಾಮುಖ್ಯ ಸಂಗತಿ. ತೀರಾ ಹೆಚ್ಚಿನ ಪ್ರಮಾಣದಲ್ಲಿ ಮಣ್ಣು ಹಾಕಬಾರದು. ಫಲವತ್ತಾಗಿರದ ಮಣ್ಣು ಬೇಡ. ಸಾವಯವ ವಸ್ತುಗಳು ಸೇರಿ ಬಣ್ಣ ಬದಲಾದ ಮಣ್ಣನ್ನು ಹಾಕಿದರೆ ಅದರ ಪ್ರಯೋಜನ ಹೆಚ್ಚು. ತೋಟ- ಹೊಲಕ್ಕೆ ಹೊಸ ಮಣ್ಣು ಹಾಕುವ ಉದ್ದೇಶ ಮಣ್ಣು ಹೆಚ್ಚು ಸಡಿಲವಾಗಿ ಮೇಲು…

Read more
ಕೆಂಪಡಿಕೆ

ಕೆಂಪಡಿಕೆ ಬಲ- ಚಾಲಿಹಿನ್ನೆಡೆ- ಇಂದು 08-03-2022 ಅಡಿಕೆ ಧಾರಣೆ.

ಹಿಂದಿನ ಲೆಕ್ಕಾಚಾರಗಳು ಹಾಗೂ ಪರಿಸ್ಥಿತಿಗಳಂತೆ ಚಾಲಿ ಅಡಿಕೆ ಮಾರುಕಟ್ಟೆಯಲ್ಲಿ ಉತ್ಸಾಹ ಕಡಿಮೆಯಾಗಿದೆ. ಅತ್ಯಲ್ಪ ಪ್ರಮಾಣದ ಅಡಿಕೆ ಮಾತ್ರ ಉತ್ತಮ ದರಕ್ಕೆ ಖರೀದಿಯಾಗುತ್ತಿದ್ದು, ಪ್ರಕಟಣೆಯ ದರಕ್ಕೂ ಕೊಳ್ಳುವ ದರಕ್ಕೂ ಸಂಬಂಧವೇ ಇಲ್ಲದಾಗಿದೆ. ಆದರೆ ಕೆಂಪಡಿಕೆ ಮಾರುಕಟ್ಟೆ ಮಾತ್ರ  ಬಲ ಕಳೆದುಕೊಳ್ಳದೆ ಉಳಿದಿದೆ. ಬಹುತೇಕ ಕೆಂಪಡಿಕೆ ಉಳ್ಳವರು ಉತ್ತಮ ದರದ ನಿರೀಕ್ಷೆಯಲ್ಲಿ ಮಾರಾಟ ಮಾಡುವುದನ್ನು ಮುಂದೂಡುತ್ತಿದ್ದಾರೆ.ಈ ವರ್ಷ ಹಿಂದೆಲ್ಲಾ ಆಗುತ್ತಿದ್ದಂತೆ ಕೆಂಪಡಿಕೆ ದರವನ್ನು ಹಿಂಬಾಲಿಸುತ್ತಾ ಚಾಲಿ ದರ ಮುಂದುವರಿಯಲಿದೆ ಎಂಬ ವದಂತಿಗಳಿವೆ.   ನಿನ್ನೆ ದಿನಾಂಕ 07-03-2022 ರಂದು ಕೆಂಪಡಿಕೆಯ…

Read more
ಸಾವಯವ ತ್ಯಾಜ್ಯಗಳನ್ನು ಮಧ್ಯದಲ್ಲಿ ಹಾಕಬೇಕು.

ಬೆಳೆಗಳಿಗೆ ಸಾವಯವ ಗೊಬ್ಬರ ಹಾಕುವ ವೈಜ್ಞಾನಿಕ ವಿಧಾನ.

ಹಸಿ ಸಾವಯವ ಗೊಬ್ಬರಗಳನ್ನು ಹಾಕಿದ ಸ್ಥಳದಲ್ಲಿ ನೆಲದ ಹುಲ್ಲು ಇತ್ಯಾದಿ ಸತ್ತು ಹೋಗುತ್ತದೆ.  ಕಳಿಯುವ ಕ್ರಿಯೆಯಲ್ಲಿ ಕೆಲವು ಆಮ್ಲಗಳು ಮತ್ತು ಶಾಖ ಬಿಡುಗಡೆಯಾಗಿ ನೆಲಕ್ಕೆ ಅದು ಸ್ವಲ್ಪ ಮಟ್ಟಿಗೆ ಪ್ರಸಾರವಾಗುತ್ತದೆ. ಒಂದು ವೇಳೆ ನೀವು ಹಸಿ ಸಾವಯವ ಗೊಬ್ಬರಗಳನ್ನು ಮರದ – ಸಸಿಯ ಬುಡಕ್ಕೆ ಹಾಕಿದರೆ ಅದರ ಕಾಂಡದ ಭಾಗಕ್ಕೆ ಘಾಸಿ ಉಂಟಾಗುತ್ತದೆ. ಮನುಷ್ಯ ಎಷ್ಟೇ ಉತ್ತಮ ಆಹಾರ ಸೇವನೆ ಮಾಡಿದರೂ ಸಹ, ಅದು ಸರಿಯಾಗಿ ಜೀರ್ಣ ಆಗಬೇಕಿದ್ದರೆ ಅದರ ಜೊತೆಗೆ ತೇವಾಂಶ ( ನೀರು) ಅಗತ್ಯ….

Read more
ಅಡ್ಡ ಇಟ್ಟ ತೆಂಗಿನ ಯಾಇಯಲ್ಲಿ ಮೊಳಕೆ ಬಂದಿರುವುದು.

ಬೀಜದ ತೆಂಗಿನ ಕಾಯಿಯನ್ನು ಹೇಗೆ ಮೊಳಕೆ ಬರಲು ಇಡಬೇಕು?

ಯಾವುದೇ  ಸಸಿ  ಮಾಡುವಾಗ ಮೊದಲಾಗಿ ಬೀಜ ಮೂಲ ಒಳ್ಳೆಯದು ಆಗಿರಬೇಕು. ತೃಪ್ತಿಕರ ಗುಣಪಡೆದ ಮರದಿಂದ ಮಾತ್ರ ಬೀಜದವನ್ನು ಆಯ್ಕೆ ಮಾಡಬೇಕು. ಬೀಜದ ಆಯ್ಕೆಗೆ ಮೊದಲ ಸ್ಥಾನವಾದರೆ , ಆ ಬೀಜವನ್ನು ಸೂಕ್ತ ವಿಧಾನದಲ್ಲಿ  ಮೊಳಕೆ ಬರಿಸುವುದು ಎರಡನೇ ಪ್ರಾಮುಖ್ಯ ಹಂತ. ಸಧೃಢ ಮೊಳಕೆಯ ಸಸಿ ಮಾತ್ರ ಆರೋಗ್ಯಕರವಾಗಿ ಬೆಳೆಯಬಲ್ಲುದು. ತೆಂಗಿನ ಬೀಜದ ಆಯ್ಕೆಯೂ ಇದಕ್ಕೆ ಹೊರತಲ್ಲ. ಉತ್ತಮ ಬೀಜವನ್ನು ಯೋಗ್ಯ ರೀತಿಯಲ್ಲಿ ಮೊಳಕೆಗೆ ಇಟ್ಟರೆ ಅದು ಉತ್ತಮ ಸಸಿಯಾಗುತ್ತದೆ. ಬೆಳೆಯುವ ಸಿರಿ ಮೊಳಕೆಯಲ್ಲಿ ಎನ್ನುತ್ತಾರೆ ಹಿರಿಯರು. ಅಂದರೆ…

Read more
ಸಂಪೂರ್ಣ ಸಾವಯವ ತರಕಾರಿ

ಆರೋಗ್ಯ ರಕ್ಷಕ ಸಾವಯವ ತರಕಾರಿಗಳು.

ಗಡ್ಡೆ ಗೆಣಸಿನ ಬೆಳೆ ಬಹಳ ಹಿಂದಿನದ್ದು. ಬಹುಷಃ  ಮಾನವ ಬೇಯಿಸಿ ತಿನ್ನುವುದನ್ನು ಕಲಿಯುವ ಮುಂಚೆ  ಕಂದ ಮೂಲಗಳನ್ನು ತಿಂದು ಬದುಕುತ್ತಿದ್ದರಂತೆ. ಇದರಷ್ಟು ಆರೋಗ್ಯಕರ ತರಕಾರಿ ಬೇರೊಂದಿಲ್ಲ. ಇದಕ್ಕೆ ರಾಸಾಯನಿಕಗಳ ಅಗತ್ಯವೇ ಇಲ್ಲ. ಸಂಪೂರ್ಣ ಸಾವಯವ ತರಕಾರಿ ಎಂದರೆ ಇದು. ಇವುಗಳನ್ನು ಮರೆತು ಹೋದ ತರಕಾರಿಗಳು ಎಂದು ಹೇಳಿದರೂ ತಪ್ಪಾಗಲಾರದು. ತಲೆಮಾರಿನಿದ ತಲೆಮಾರಿಗೆ ಬದಲಾವಣೆಯಾಗುವಾಗ ಕೆಲವು ಮರೆತು ಹೋಗುವ ವಿಚಾರಗಳಿರುತ್ತವೆ. ಅವುಗಳಲ್ಲಿ ಈ ಗಡ್ಡೆ ಗೆಣಸು ತರಕಾರಿಗಳ ಬೆಳೆ ಹಾಗೂ ಅಡುಗೆಯೂ ಸೇರಿದೆ. ಈ ತರಕಾರಿಗಳಲ್ಲಿ  ಇರುವಷ್ಟು ಆರೋಗ್ಯ ಗುಣ…

Read more

ಈ ಗಡ್ದೆ ಗೆಣಸು ತರಕಾರಿ ಬೆಳೆಗೆ ಅತೀ ಕಡಿಮೆ ನೀರು ಸಾಕು.

ಎಲ್ಲಾ ತರಕಾರಿಗಳನ್ನು ಕೆಲವು ಋತುಮಾನಗಳಲ್ಲಿ ಬೆಳೆಸುವುದು ಕ್ರಮ. ಸುವರ್ಣ ಗಡ್ಡೆ ಎಂಬ ತರಕಾರಿಯನ್ನು ನಾಟಿ ಮಾಡುವ ಸಮಯ ಈಗ. ಈ ಬೆಳೆಗೆ  ಮಳೆಗಾಲ ಬರುವ ತನಕ ಅಲ್ಪ ಸ್ವಲ್ಪ ನೀರು ಕೊಟ್ಟರೆ ಸಾಕು ಮಳೆಗಾಲ ಮುಗಿಯುವ ಸಮಯದಲ್ಲಿ ದೊಡ್ಡ ಗಡ್ಡೆಯಾಗಿ ಪ್ರತಿಫಲ ಕೊಡುತ್ತದೆ.  ಇದು ಅತೀ ಕಡಿಮೆ ನೀರಿನಲ್ಲಿ ಬೆಳೆಯಬಹುದುದಾದ  ಗಡ್ದೆ ಗೆಣಸು  ತರಕಾರಿ ಎಂದರೂ ತಪ್ಪಾಗಲಾರದು. ಕೇರಳದವರು ಎಲ್ಲೇ ಹೋದರೂ ಮರಗೆಣಸು, ಸುವರ್ಣಗಡ್ಡೇ ಬೆಳೆಯುವುದನ್ನು ಬಿಡುವುದಿಲ್ಲ. ಅವರು ಸುವರ್ಣ ಗಡ್ಡೆ ನೆಡುವುದು ಮಾರ್ಚ್ ತಿಂಗಳಲ್ಲಿ,(ಕುಂಭ ಮಾಸ) …

Read more
ಸ್ವಚ್ಚಂದ ಪರಿಸರದಲ್ಲಿ ಮೇಯುತ್ತಿರುವ ಗೀರ್ ಹಸು

ಹಸುಗಳನ್ನು ಕಟ್ಟಿ ಸಾಕುವುದರಿಂದ ಏನೆಲ್ಲಾ ಅನಾಹುತಗಳಾಗುತ್ತದೆ?

ಬಹಳಷ್ಟು ಜನ ಹಸು ಸಾಕಾಣೆ ಮಾಡುತ್ತಾರೆ. ಆದರೆ ಆ ಹಸುಗಳು ಹಟ್ಟಿಯೆಂಬ ಜೈಲಿನಲ್ಲಿ ಎಲ್ಲಾ  ಆಹಾರಗಳ ಸಮೇತ ಬಂಧಿಯಾಗಿ ಇಡುತ್ತಾರೆ. ಇದರಿಂದ ಆಗುವ ಅತೀ ದೊಡ್ಡ ಸಮಸ್ಯೆ  ಕೇಳಿದರೆ ಹಸು ಸಾಕುವವರು ಆ ವೃತ್ತಿಯನ್ನು ಬಿಟ್ಟು ಬಿಡಬಹುದು. ಹಾಲು ಕುಡಿಯುವವರೂ ಬಳಕೆ ಕಡಿಮೆ ಮಾಡಬಹುದು. ಮನುಷ್ಯರನ್ನು ದಿನವಿಡೀ ಒಂದು ಕೋಣೆಯಲ್ಲಿ ಹೊಟ್ಟೆಗೆ ಬೇಕಾದಷ್ಟು ತಿನ್ನಲು ಕೊಟ್ಟು ಕೂಡೀ ಹಾಕಿದರೆ ಏನಾಗುತ್ತದೆ ಎಂಬುದು ಎಲ್ಲರಿಗೂ ಗೊತ್ತಿದೆ. ಇದೆಲ್ಲಾ ಒಂದು ದಿನ ಎರಡೂ ದಿನ ಹೇಗಾದರೂ ನಡೆಯುತ್ತದೆ. ಅನುದಿನವೂ ಹೀಗೇ…

Read more
ಉತ್ತಮ ಪೋಷಕಾಂಶಗಳಿಂದ ಬಂದ ಬಾಳೆ ಗೊನೆ

ಉತ್ತಮ ಬಾಳೆಗೊನೆಗೆ ಎಷ್ಟು ಪೋಷಕಾಂಶ ಕೊಡಬೇಕು?

ಯಾವುದೇ ಬೆಳೆಗೆ ಅದರ ಬೆಳೆ ಅವಧಿಗನುಗುಣವಾಗಿ ಪೋಷಕಾಂಶಗಳನ್ನು  ಬಳಸಿಕೊಳ್ಳುತ್ತದೆ. ಬಾಳೆ ಅಲ್ಪಾವಧಿ ಬೆಳೆಯಾಗಿದ್ದು ಅಧಿಕ ಪೋಷಕಾಂಶ ವನ್ನು ಬಯಸುತ್ತದೆ. ಧೀರ್ಘಾವಧಿ ಬೆಳೆಗಳು  ನಿಧಾನ ಗತಿಯಲ್ಲಿ ಪೋಷಕಗಳನ್ನು ಬಳಕೆ ಮಾಡಿಕೊಂಡರೆ ಅಲ್ಪಾವಧಿ ಬೆಳೆಗಳು ಅಧಿಕ ಪೋಷಕಗಳನ್ನು ಬಳಸಿಕೊಳ್ಳುತ್ತವೆ. ಬಾಳೆ ಬೆಳೆ ಅಲ್ಪಾವಧಿ ಬೆಳೆ ಎಂದರೆ ತಪ್ಪಾಗಲಾರದು. ಇದು ನಾಟಿ ಮಾಡಿ 6 ರಿಂದ10  ತಿಂಗಳ ಒಳಗೆ ಫಸಲನ್ನು ಕೊಡುತ್ತದೆ. ಇಷ್ಟು ಕನಿಷ್ಟ ಅವಧಿಯಲ್ಲಿ  ಅದು ತನ್ನ ಶರೀರ ಸುಮಾರು ಕ್ವಿಂಟಾಲಿಗೂ ಹೆಚ್ಚು ಬೆಳೆಯುತ್ತದೆ. ಗೊನೆ ಹೊರ ಬೀಳುವ ಸಮಯದಲ್ಲಿ …

Read more
error: Content is protected !!