ಹೆಬ್ಬಲಸಿನ ಹಣ್ಣು

ಹೆಬ್ಬಲಸಿನ ಕಾಯಿ- ಹಣ್ಣಿಗೂ ಭಾರೀ ಬೆಲೆ ಬಂದಿದೆ.

ಹೆಬ್ಬಲಸಿನ ಕಾಯಿ- ಹಣ್ಣು ಎರಡಕ್ಕೂ ಬೆಲೆ ಇದೆ. ಇದನ್ನು ಮೌಲ್ಯವರ್ಧನೆ ಮಾಡಿ ಮಾರಾಟ ಮಾಡುವವರಿದ್ದಾರೆ. ಇದರ ಮರ ಬೆಲೆಬಾಳುವ ನಾಟ ಸಹ. ಮನುಷ್ಯ ಪಶು ಪಕ್ಷಿ ಎಲ್ಲದಕ್ಕೂ ಆಹಾರ ಕೊಡುವ ವೃಕ್ಷ. ಯಾವಾಗಲೂ ಒಂದು ವಸ್ತು ಅಳಿಯುತ್ತಾ ಬಂದಾಗ ಅದಕ್ಕ್ಕೆ ಬೇಡಿಕೆ ಬರುತ್ತದೆ. ಹಾಗಾಗಿದೆ ಈ ಹೆಬ್ಬಲಸಿನ ಕಾಯಿಯ ಕಥೆ. ಹೆಬ್ಬಲಸಿನ ಹಣ್ಣು,ಅಳಿದು ಹೋಗುತ್ತಿರುವ ಒಂದು ಅಮೂಲ್ಯ ಹಣ್ಣಿನ ಕಥೆ ಇಲ್ಲಿದೆ. ಹೆಬ್ಬಲಸಿನ ಹಣ್ಣಿನ ಕಥೆ:   ಆಗ ಕೊನೇ  ಪರೀಕ್ಷೆ ನಡೆಯುವುದು ಎಪ್ರೀಲ್ ತಿಂಗಳ ತರುವಾಯ. ನಾವು…

Read more
ಬಳಕೆಗೆ ಸಿದ್ದವಾದ ಸುಡುಮಣ್ಣು – Sudumannu ready to use.

ಸುಡುಮಣ್ಣು – ಇದು ಮಣ್ಣಿನ ಆರೋಗ್ಯ ರಕ್ಷಕ ಡಾಕ್ಟರ್.

ಎಲ್ಲಾ  ತರಹದ ಮಣ್ಣು ಬೆಳೆಗಳಿಗೆ ಸೂಕ್ತವಲ್ಲ. ಕೆಲವು ಮಣ್ಣಿನಲ್ಲಿ ಬೆಳೆಗಳಿಗೆ  ಹಾನಿಕಾರಕ ರೋಗಾಣುಗಳು ಮತ್ತು ಕೀಟದ ಮೊಟ್ಟೆಗಳು ಇರಬಹುದು. ಅಂತಹ ಸಂಶಯ ಇರುವ ಮಣ್ಣನ್ನು ಸ್ವಲ್ಪ ಬಿಸಿ ಪ್ರಕ್ರಿಯೆಗೆ ಒಳಪಡಿಸಿ ಸುಡುಮಣ್ಣಾಗಿ ಪರಿವರ್ತಿಸಿದರೆ,  ಅದು ಪೂರ್ಣ ಸ್ಟೆರಿಲೈಸ್ ಮಾಡಿದ  ಸ್ವಚ್ಚ ಶುದ್ಧ ಮಣ್ಣಾಗುತ್ತದೆ. ಮಣ್ಣನ್ನು ಸ್ವಲ್ಪ ಬಿಸಿ ಮಾಡಿದಾಗ ಅದಕ್ಕೆ ಕರಕಲು ಸಾವಯವ ತ್ಯಾಜ್ಯ ಸೇರಿದಾಗ ಅದು ಸಾವಯವ ಇಂಗಾಲವನ್ನು (Carbon – bio char ) ಹೆಚ್ಚಿಸುವಲ್ಲಿ ಸಹಾಯಕವಾಗುತ್ತದೆ. ಸಾವಯವ ತ್ಯಾಜ್ಯಗಳು ಮಣ್ಣನ್ನು ಜೈವಿಕವಾಗಿ ಶ್ರೀಮಂತಿಕೆಗೆ…

Read more
ಸರ್ವ ರೋಗ – ಕೀಟ ನಿಯಂತ್ರಕ ಬೂದಿ

ಸರ್ವ ರೋಗ- ಕೀಟ ನಿಯಂತ್ರಣಕ್ಕೆ ಬೂದಿ ಮದ್ದು. ಹೇಗೆ ಗೊತ್ತೇ?

ಸಾವಯವ ತ್ಯಾಜ್ಯಗಳಾದ ಮರಮಟ್ಟು ಹಾಗೂ ಬೆಳೆ ಉಳಿಕೆಗಳನ್ನು ಸುಟ್ಟಾಗ ಬೂದಿ  ದೊರೆಯುತ್ತದೆ. ಇದರಲ್ಲಿ  ವಿಶೇಷ ಶಕ್ತಿ ಇದ್ದು, ಅನಾದಿ ಕಾಲದಿಂದಲೂ ಇದನ್ನು ಒಂದು ಸಾಂಪ್ರದಾಯಿಕ ಸಾವಯವ ಕೀಟ- ರೋಗ ನಿಯಂತ್ರಕ ಮತ್ತು  ಬೆಳೆ  ಪೋಷಕವಾಗಿ ಬಳಸುತ್ತಾ ಬರಲಾಗಿದೆ. ನಮ್ಮ ಪೂರ್ವಜರಿಂದ ಲಾಗಾಯ್ತು ಅನುಸರಿಸಲಾಗುತ್ತಿದ್ದ  ಈ ಕ್ರಮ ಸಾಕಷ್ಟು ಅನುಕೂಲವನ್ನು ಮಾಡಿಕೊಟ್ಟಿದೆ. ಸರ್ವ ರೋಗಕ್ಕೆ ಬೂದಿ ಮದ್ದು ಎಂಬ ಹಿರಿಯರ ನಾಳ್ನುಡಿ ಸತ್ಯವಾದದ್ದು. ಹಿಂದೆ ಹಳ್ಳಿಗಳಲ್ಲಿ  ಪ್ರತೀ ಮನೆಯಲ್ಲೂ ವರ್ಷಕ್ಕೆ ಒಂದಷ್ಟು ಕಟ್ಟಿಗೆ ಸುಟ್ಟ ಬೂದಿ (Wood Ash)ಸಿಗುತ್ತಿತ್ತು….

Read more
ಚೇತರಿಕೆಯತ್ತ ಕೆಂಪಡಿಕೆ

ಕೆಂಪಡಿಕೆ ಚೇತರಿಕೆ- ಚಾಲಿ ಅಡಿಕೆಗೆ ಮಬ್ಬು. 21-01-2022 ರಂದು ಧಾರಣೆ.

ನಿರೀಕ್ಷೆಯಂತೆ ಕೆಂಪಡಿಕೆ ಮಾರುಕಟ್ಟೆಯಲ್ಲಿ ಚೇತರಿಕೆ ಪ್ರಾರಂಭವಾಗಿದೆ. ಖರೀದಿಯಲ್ಲಿ ಉತ್ಸಾಹ (Force) ಇದೆ ಎಂಬುದಾಗಿ ವರ್ತಕರು ಹೇಳುತ್ತಿದ್ದಾರೆ. ಯಾವಾಗಲೂ ಸರಾಸರಿ ದರ ಮತ್ತು ಗರಿಷ್ಟ ದರಗಳ ಅಂತರ ಹತ್ತಿರವಾದರೆ ಖರೀದಿಯಲ್ಲಿ ಆಸಕ್ತಿ ಹೆಚ್ಚು ಎನ್ನಲಾಗುತ್ತದೆ. ಇದು ಈಗ ಪ್ರಾರಂಭವಾಗಿದೆ. ಚಾಲಿ ಮಾತ್ರ ಸ್ವಲ್ಪ ಮಬ್ಬು. ದಿನಾಂಕ 21-01-2022 ರಂದು ರಾಜ್ಯದೆಲ್ಲೆಡೆ ಧಾರಣೆ. ಕರಾವಳಿಯ ಚಾಲಿ ಅಡಿಕೆ ಈ ವರ್ಷ ಗುಣಮಟ್ಟ ಇಲ್ಲ. ಯಾವಾಗಲೂ ಕರಾವಳಿಯ ಚಾಲಿ ಅಡಿಕೆ ಎಂದರೆ ಅದಕ್ಕೆ  ವಿಶೇಷ ಸ್ಥಾನಮಾನ ಇತ್ತು. ಈ ವರ್ಷದ ಪ್ರತಿಕೂಲ…

Read more
ಒಣ ನೆಲದಲ್ಲಿ ಕಾಯಿ ಕಚ್ಚುವಿಕೆ ಹೆಚ್ಚು

ಸಿಂಗಾರಕ್ಕೆ ಸಿಂಪರಣೆ ಅಗತ್ಯ ಇದೆಯೇ?. ಮರಕ್ಕೆ ಶಕ್ತಿ ಕೊಟ್ಟರೆ ಸಾಲದೆ?.

ಅಡಿಕೆ ಬೆಳೆಗಾರರ ಕೊಯಿಲಿನ ತಲೆಬಿಸಿ ಕಡಿಮೆಯಾಗಿದೆ. ಈಗ ಮುಂದಿನ ಬೆಳೆಯನ್ನು ಉಳಿಸಿಕೊಳ್ಳುವುದಕ್ಕಾಗಿ ಸಿಂಪರಣೆ. ಹೇಗಾದರೂ ಮಾಡಿ ಬಿಡುವ ಹೂ ಗೊಂಚಲಿನ ಕಾಯಿಗಳನ್ನು ಉಳಿಸಿಕೊಳ್ಳಬೇಕು ಎಂಬ ಕಾರಣಕ್ಕಾಗಿ ಸಿಂಗಾರಕ್ಕೆ ಸಿಂಪರಣೆ ಪ್ರಾರಂಭಿಸಿದ್ದಾರೆ. ಕೆಲವರು 2 ಸಿಂಪರಣೆ ಮುಗಿಸಿದ್ದೂ ಆಗಿದೆ. ನಿಜವಾಗಿ ಹೇಳಬೇಕೆಂದರೆ ನಾವು ಮಾಡುವಷ್ಟು ಸಿಂಪರಣೆಯ ಅಗತ್ಯ ಅಡಿಕೆಗೆ ಇಲ್ಲ. ಮರಕ್ಕೆ ಶಕ್ತಿ ಕೊಟ್ಟರೆ ಸಾಕಾಗುತ್ತದೆ. ಫಸಲು ಹೆಚ್ಚಾಗಬೇಕು ಎಂದು ತರಹೇವಾರು  ಕೀಟ,ರೋಗನಾಶಕಗಳನ್ನು ಪ್ರತೀ ಹೂ ಗೊಂಚಲಿಗೆ ಸಿಂಪಡಿಸುವುದು, ಸಿಕ್ಕ ಸಿಕ್ಕವರೊಂದಿಗೆ  ಈ ಬಗ್ಗೆ  ಸಲಹೆ ಕೇಳಿ ಅದರಂತೆ …

Read more
2 ನೇ ಹಸುರು ಕ್ರಾಂತಿಯ ಅಶಯ

ಭಾರತದಲ್ಲಿ 2 ನೇ ಹಸುರು ಕ್ರಾಂತಿ ನೈಸರ್ಗಿಕ ಕೃಷಿಗೆ ಒತ್ತು.

ನಮ್ಮ ದೇಶಕ್ಕೆ 2 ನೇ ಹಸುರು ಕ್ರಾಂತಿಯ ಅವಶ್ಯಕತೆ ಇದೆ. ಈ ಕ್ರಾಂತಿ ಮುಂದಿನ ತಲೆಮಾರಿನ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು next-generation reform ಸುಸ್ಥಿರ ಮತ್ತು ಪರಿಸರ ಸ್ನೇಹಿಯಾಗಿ  ಹವಾಮಾನ ವೈಪರೀತ್ಯಗಳಿಗೆ ಹೊಂದಾಣಿಕೆಯಾಗುವಂತಿರಬೇಕು ಎಂಬ ಧ್ಯೇಯೋದ್ದೇಶಗಳಿವೆ. ನಮ್ಮ ದೇಶದ ಪ್ರಧಾನಿಗಳು, ರಕ್ಷಣಾ ಮಂತ್ರಿಗಳು ಹಾಗೂ ಕೃಷಿ ಮಂತ್ರಿಗಳ ಹಲವು ಹೇಳಿಕೆಗಳ ಪ್ರಕಾರ ಈ 2 ನೇ ಹಸಿರು ಕ್ರಾಂತಿಯಲ್ಲಿ ನೈಸರ್ಗಿಕ ಕೃಷಿಗೆ ಮಹತ್ವ ಬರಲಿದೆ ಎಂದು ಕಾಣಿಸುತ್ತದೆ. ನೈಸರ್ಗಿಕ ಕೃಷಿ ವಿಧಾನವನ್ನು ಅನುಸರಿಸುವ ಮೂಲಕ ನಮ್ಮ ದೇಶದ ರೈತರು…

Read more
ಅಡಿಕೆ ಚೀಲ

ಅಡಿಕೆ ಆಮದು ಅಂಕುಶ ಸಡಿಲಿಕೆ- ಮಿಜೋರಾಂ ಸರಕಾರದ ಕ್ರಮ.

ಅಡಿಕೆಯ ಬೆಲೆ ಗಗನಕೇರುವಾಗ ಯಾರಾದರೂ ಅದಕ್ಕೊಂದು ತಡೆ ಹಾಕಲು  ಕಲ್ಲು ಎಸೆಯಲು ಸಿದ್ದತೆ ನಡೆಸುತ್ತಾರೆ.ಇಂದು ಅಡಿಕೆಯ ಬೆಲೆ ಗಗನಕ್ಕೆ ಏರಲು ಬಲವಾದ ಕಾರಣ ಅಡಿಕೆ ಆಮದು ತಡೆ. ಈಗ ಈ ತಡೆಯ ಮೇಲೆ ಅಂಕುಶ ಸಡಿಲವಾದಂತೆ ಕಾಣಿಸುತ್ತಿದೆ. ಮಿಜೋರಾಂ ಸರಕಾರ ಈ ತನಕ ಅಡಿಕೆಯನ್ನು ತನ್ನೊಳಗೆ ಬಾರದಂತೆ ತಡೆದಿದ್ದ ಅಧಿಕಾರಿಗಳನ್ನು ಸರಕು ಸಾಗಾಣಿಕೆ ಸಂಘದ ಒತ್ತಾಯದ ಮೇರೆಗೆ ವರ್ಗಾವಣೆ ಮಾಡಿದೆ. ಈ ಕಾರಣದಿಂದ ಮುಂದೆ ಅಡಿಕೆ ಆಮದಿನ ಮೇಲೆ ಅಂಕುಶ ಸಡಿಲವಾದರೂ ಅಚ್ಚರಿ ಇಲ್ಲ. ಮಿಜೋರಾಂ ಮೂಲಕ…

Read more
ಒಣಗಲು ಹರಡಿದ ಅಡಿಕೆ

ಗುಣಮಟ್ಟದ ಅಡಿಕೆ ಉತ್ಪಾದನೆ ತಾಂತ್ರಿಕತೆ.

ಅಡಿಕೆ ಬೆಳೆಗಾರರು ಕೆಂಪಡಿಕೆ ಮಾಡುವವರು ಆಗಲಿ, ಚಾಲಿ ಮಾಡುವವರೇ ಆಗಲಿ, ಗುಣಮಟ್ಟದ  ಅಡಿಕೆ ಉತ್ಪಾದನೆ ಕಡೆಗೆ ಅದ್ಯ ಗಮನಹರಿಸಲೇ ಬೇಕು. ಇದು ನಮ ಸುರಕ್ಷತೆಗಾಗಿ ನಾವು ಮಾಡಬೇಕಾದ ಅಗತ್ಯ ಕೆಲಸ. ಗುಣಮಟ್ಟ ಉಳ್ಳ ಅಡಿಕೆಗೆ ಗರಿಷ್ಟ ಬೆಲೆ. ಅಡಿಕೆಯ ಮಾನ ಉಳಿಯುವುದೂ ಗುಣಮಟ್ಟ ಪಾಲನೆಯಲ್ಲಿ. ಹೀಗಿರುವಾಗ ಅಡಿಕೆ ಬೆಳೆಗಾರರು ತಮ್ಮ ಭವಿಷ್ಯದ ಹಿತ ದೃಷ್ಟಿಯಿಂದ ಗುಣಮಟ್ಟಕ್ಕೆ ಆದ್ಯ ಗಮನ ಕೊಡಲೇ ಬೇಕು. ಅಡಿಕೆಯ ಕುರಿತಾಗಿ ಯಾವಾಗಲೂ ನ್ಯಾಯಾಲಯ  ಬೆಳೆಗಾರರ ಮೇಲೆ ತಿರುಗಿ ಬೀಳಬಹುದು. ಯಾರಾದರೂ ಅಡಿಕೆಯಲ್ಲಿ ಆರೋಗ್ಯಕ್ಕೆ…

Read more
ಅತ್ಯುತ್ತಮ ಕರಿಮೆಣಸು

ಕರಿಮೆಣಸು –ಧೀರ್ಘ ಕಾಲ ದಾಸ್ತಾನು ಇಡಲು ಹೇಗೆ ಸಂಸ್ಕರಿಸಬೇಕು?

ಕರಿಮೆಣಸು ಎಂಬ ಸಾಂಬಾರ ಬೆಳೆ ವರ್ಷವೂ ಒಂದೇ ರೀತಿ ಇಳುವರಿ ಕೊಡುವುದಿಲ್ಲ. ಬೆಲೆಯೂ  ಆಗಾಗ ಭಾರೀ ಏರಿಕೆ – ಇಳಿಕೆ ಆಗುತ್ತಾ ಇರುತ್ತದೆ. ರೋಗಗಳೂ ಹೆಚ್ಚು. ಈ ಬೆಳೆಯನ್ನು  ಎಲ್ಲಾ ಬೆಳೆಗಾರರೂ ಆಪತ್ಕಾಲದ ನಿಧಿಯಾಗಿ ಉಳಿಸಿಕೊಂಡು ಉತ್ತಮ ಬೆಲೆ ಬಂದಾಗ ಮಾರಾಟ ಮಾಡಬೇಕು. ಧೀರ್ಘ ಕಾಲ ದಾಸ್ತಾನು ಇಟ್ಟರೂ ಹಾಳಾಗಲಾರದ ಏಕೈಕ ಕೃಷಿ ಉತ್ಪನ್ನ ಇದು. ಧೀರ್ಘ ಕಾಲ ದಾಸ್ತಾನು ಇಟ್ಟು ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಹೀಗೆ ಸಂಸ್ಕರಿಸಬೇಕು. ಕರಿಮೆಣಸು ಕೊಯಿಲು ಪ್ರಾರಂಭವಾಗಿದೆ. ದಾಸ್ತಾನು ಇಡುವವರು…

Read more
ಕೆಂಪು ರಾಸಿ ಅಯದೆ ಇದ್ದದ್ದು

ಅಡಿಕೆ ಧಾರಣೆ ಸ್ಥಿತಿಗತಿ-ದಿನಾಂಕ 10-01-2022, ಚಾಲಿ ಚುರುಕು. ಕೆಂಪು ಸ್ಥಿರ.

ಹೊಸ ವರ್ಷದ ಎರಡನೇ ವಾರ 10-01-2022 ಅಡಿಕೆ ಧಾರಣೆ ಸ್ಥಿರವಾಗಿ ಮುಂದುವರಿದಿದೆ. ಚಾಲಿ ಅಡಿಕೆ ಮಾರುಕಟ್ಟೆಗೆ ಕ್ಯಾಂಪ್ಕೋ ಬೆಂಗಾವಲಾಗಿ ನಿಂತು ದರ ಕುಸಿಯದಂತೆ ಮಾಡಿದೆ. ಈ ವರ್ಷದಾದ್ಯಂತ ಅಡಿಕೆ ಧಾರಣೆ ಇದೇ ರೀತಿಯಲ್ಲಿ ಮುಂದುವರಿಯಲಿದೆ ಎನ್ನಲಾಗುತ್ತಿದೆ. ಕಳೆದ ವರ್ಷದ ದಾಖಲೆಯ ಬೆಲೆಯನ್ನು ಹಿಂದಿಕ್ಕಿ ಇನ್ನೂ ಏರುವ ಸಾಧ್ಯತೆ ಇದೆ ಎಂಬುದಾಗಿಯೂ  ಹೇಳುತ್ತಿದ್ದಾರೆ. ಈ ಸಮಯದ ದರ ಸ್ಥಿತಿಯನ್ನು ನೋಡಿದಾಗ ಹೊಸ ಚಾಲಿ ಧಾರಣೆ ಈ ವರ್ಷ 500 ದಾಟಬಹುದು, ಕೆಂಪು 50,000 ಮೀರಿ ಏರಿಕೆಯಾಗಬಹುದು ಎಂಬ ವದಂತಿಗಳಿವೆ….

Read more
error: Content is protected !!