ಶತಮಂಗಳ ಅಡಿಕೆ ಮರ

ಭಾರೀ ಬೇಡಿಕೆಯ ಹೊಸತಳಿಯ ಅಡಿಕೆ – ಶತಮಂಗಳ.

ಇತ್ತೀಚೆಗೆ ಬಿಡುಗಡೆಯಾದ ಅಧಿಕ ಇಳುವರಿ ಕೊಡಬಲ್ಲ ಭಾರೀ ಭರವಸೆಯ ತಳಿ ಶತಮಂಗಳ ದ ಬೀಜ , ಸಸಿಗೆ ಭಾರೀ ಬೇಡಿಕೆ. ಈ ತಳಿಯನ್ನು CPCRI ವಿಟ್ಲ ಕೇಂದ್ರವು ಬಿಡುಗಡೆ ಮಾಡಿದ್ದು, ಈಗಿರುವ ಎಲ್ಲಾ ತಳಿಗಳಿಗಿಂತ ಅಧಿಕ ಇಳುವರಿ ಕೊಡುವ ಸಾಮರ್ಥ್ಯ ಹೊಂದಿದೆ. ಹಾಗಾಗಿ ಬೆಳೆಯುವ ರೈತರು ಈ ತಳಿಗೆ ಮುಗಿ ಬೀಳುತ್ತಿದ್ದಾರೆ. ಪ್ರಾದೇಶಿಕ ತಳಿಗಳು: ಅಡಿಕೆಯಲ್ಲಿ  ಮುಖ್ಯವಾಗಿ ಕೆಂಪಡಿಕೆಗೆ ಹೊಂದುವ ತಳಿ ಮತ್ತು ಚಾಲಿಗೆ ಹೊಂದುವ ತಳಿ  ಎಂಬ  ಎರಡು ಪ್ರಕಾರಗಳು. ಕೆಂಪಡಿಕೆಮಾಡುವ ಪ್ರದೇಶಗಳಲ್ಲಿ  ಸ್ಥಳೀಯ ತಳಿಗಳೇ …

Read more
ಕೇಂದ್ರ ಬಜೆಟ್ ವಿತ್ತ ಮಂತ್ರಿ ನಿರ್ಮಲಾ ಸೀತಾರಾಮ್

ಕೇಂದ್ರ ಕೃಷಿ ಬಜೆಟ್- 2022-23 – ನಮಗೆ ಏಷ್ಟು ಲಾಭವಿದೆ ಇದರಲ್ಲಿ?

ಕೇಂದ್ರ ಸರಕಾರ 2022-23 ನೇ ಸಾಲಿನ ಬಜೆಟ್ ಅನ್ನು ಮಂಡಿಸಿದೆ. ಇದರಲ್ಲಿ ಮಾಮೂಲಿನಂತೆ ಎಲ್ಲಾ ಕ್ಷೇತ್ರಗಳಿಗೂ ಬೇಜಾರಾಗದಂತೆ ಪ್ರಾಶಸ್ತ್ಯಗಳನ್ನು ನೀಡಲಾಗಿದೆ. ಕೃಷಿ ಕ್ಷೇತ್ರಕ್ಕೆ ಕೊಡಮಾಡಲ್ಪಟ್ಟ ಕೊಡುಗೆಗಳು ಮತ್ತು ಇದರಲ್ಲಿ ನಮಗೆ ಎಷ್ಟು ಲಾಭವಿದೆ ಎಂಬ ವಿವರಗಳು ಇಲ್ಲಿವೆ. ಭಾರತ ಕೃಷಿ ಆರ್ಥಿಕತೆಯ ಆಧಾರದಲ್ಲಿ ನಿಂತ ರಾಷ್ಟ್ರವಾಗಿದ್ದು, ಕೃಷಿ ಕ್ಷೇತ್ರ ಯಾವುದೇ ಆಡಳಿತ ನಡೆಸುವ ಸರಕಾರವಾದರೂ ಅದಕ್ಕೆ ಆದ್ಯತಾ ಕ್ಷೇತ್ರವಾಗಿರುತ್ತದೆ. ಕೃಷಿಕರಿಗೆ ಕೊಡುಗೆಗಳು ಬೇಕು. ಅದನ್ನು ಈ ತನಕ ಆಡಳಿತ ನಡೆಸಿದ ಎಲ್ಲಾ ಸರಕಾರಗಳೂ ಬೇರೆ ಬೇರೆ ರೂಪದಲ್ಲಿ…

Read more
ಅಡಿಕೆ ಮಾರಾಟ ಫ್ರಾಂಗಣ

ಜನವರಿ ಕೊನೆಗೆ ಅಡಿಕೆ ಮಾರುಕಟ್ಟೆ ಧಾರಣೆ ದಿನಾಂಕ:31-01-2022

2022 ನೇ ವರ್ಷದ ಜನವರಿ ತಿಂಗಳಲ್ಲಿ ಅಡಿಕೆ ಮಾರುಕಟ್ಟೆಯಲ್ಲಿ ಯಾವುದೇ ಸ್ಥಿತ್ಯಂತರ ಆಗದೆ, ಸ್ವಲ್ಪ ಅನುಮಾನದಲ್ಲೇ ಮುಂದುವರಿದಿದೆ. ಖಾಸಗಿ ವ್ಯಾಪಾರಿಳು ಸಾಂಸ್ಥಿಕ ವ್ಯಾಪಾರಿಗಳ ಜೊತೆಗೆ ಸ್ಪರ್ಧೆಗೆ ಇಳಿಯಲೇ ಇಲ್ಲ. ಸಾಂಸ್ಥಿಕ ವ್ಯಾಪಾರಿಗಳು ತಮ್ಮ ದರಪಟ್ಟಿಯಲ್ಲಿ ವ್ಯತ್ಯಾಸ ಮಾಡದೆ ಗುಣಮಟ್ಟದ ಆಧಾರದಲ್ಲಿ ಬೆಲೆ ನಿರ್ಧರಿಸಿ ಅಡಿಕೆ ಖರೀದಿ ನಡೆಸುತ್ತಿದ್ದರು. ಜನವರಿ ತಿಂಗಳ ಕೊನೆ ಮಾರುಕಟ್ಟೆ ದಿನವಾದ ದಿನಾಂಕ 31-01-2022 ರಂದು ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಕೊಬ್ಬರಿ, ಕರಿಮೆಣಸು, ರಬ್ಬರ್ ಕಾಫೀ ಧಾರಣೆ ಹೇಗಿತ್ತು ಗಮನಿಸಿ. ಅಡಿಕೆ ಮರುಕಟ್ಟೆ…

Read more
ಹೂವು ಬಿಟ್ಟ ಮಾವಿನ ಮರ

ಮಾವಿನ ಹೂವು ಉದುರದಂತೆ ರಕ್ಷಿಸುವ ವಿಧಾನ.

ಈ ವರ್ಷ ಮಾವಿನ ಮರಗಳೆಲ್ಲಾ ಹೂವು  ಬಿಟ್ಟಿವೆ. ಎಲ್ಲಾ ಹೂವು ಕಾಯಿಕಚ್ಚಿ ಕಾಯಿಯಾದರೆ ಮಾವಿನ ಮಾರುಕಟ್ಟೆಯೇ ಸಾಕಾಗದು. ಆದರೆ ಬಹುತೇಕ ಮಾವಿನ ಹೂವು ಉಳಿಯುವುದಿಲ್ಲ.  ರಕ್ಷಿಸಲು ಕೆಲವು ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು. ಮಾವಿನ ಮರದಲ್ಲಿ ಹೂ ಬಿಡುವ ಹಂತ ಬಹಳ ನಿರ್ಣಾಯಕ ಹಂತವಾಗಿದ್ದು, ದೊಡ್ಡ ದೊಡ್ಡ ಬೆಳೆಗಾರರರು  ಹೂ ಉಳಿದು ಕಾಯಿ ಹೆಚ್ಚಲು ಗರಿಷ್ಟ ಸಿಂಪರಣೆ ಮಾಡುತ್ತಾರೆ.ವಾಣಿಜ್ಯಿಕ ಮಾವು ಬೆಳೆಗೆ ಇದೆಲ್ಲಾ ಸರಿ. ಸಣ್ಣ ಸಣ್ಣ ಹಿತ್ತಲಿನ ಹಣ್ಣು ಹಂಪಲು ಮರವುಳ್ಳವರು ಹೂವು ಬಿಟ್ಟದ್ದನ್ನು ರಕ್ಷಿಸಿಕೊಳ್ಳುವ  ಉಪಾಯ…

Read more
ಕಳೆನಾಶಕ ಬಳಸಿ ಸಾಯಿಸಿದ ಹುಲ್ಲು

ಕಳೆನಾಶಕಗಳಿಂದ ಕ್ಯಾನ್ಸರ್ ಬರುವುದು ನಿಜವೇ ?

ಕಳೆನಾಶಕಗಳನ್ನು ಬಳಸಿದರೆ ಕ್ಯಾನ್ಸರ್ ಬರುತ್ತದೆ ಎಂಬುದಾಗಿ ಈಗ ಇರುವ ವ್ಯಾಪಕ ಪ್ರಚಾರ. ಕಳೆನಾಶಕ ಬಳಕೆ ಮಾಡುವುದು ಕಳೆಗಳನ್ನು ಕೊಲ್ಲಲು. ಕಳೆಗಳನ್ನು ಕೊಲ್ಲಲು ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದೆ ಇದ್ದರೆ, ಕಳೆನಾಶಕ ಬಳಸಿದ ಹುಲ್ಲನ್ನು ಪಶುಗಳಿಗೆ ಮೇವಾಗಿ ಕೊಟ್ಟರೆ ಅದು ಕ್ಯಾನ್ಸರ್ ಕಾರಕವಾಗಬಹುದು. ಆದರೆ ಹುಲ್ಲು ಸತ್ತಾಗ ಅದಕ್ಕೆ ಕ್ಯಾನ್ಸರ್ ಬರಲಾರದು. ಹಾಗಾಗಿ ಕಳೆನಾಶಕ ಕಳೆಗಳಿಗೆ ಅಗತ್ಯವಿದ್ದರೆ ಮಾತ್ರ ಬಳಕೆ ಮಾಡುವುದು ಸೂಕ್ತ. ಬಹುಷಃ ಮಾಧ್ಯಮಗಳ ಮೂಲಕ ಮಾಹಿತಿ ಪಡೆಯುವ ಪ್ರತೀಯೊಬ್ಬ ಕಳೆನಾಶಕ ಬಳಕೆದಾರನಿಗೂ ಈ ಸಂದೇಶ ತಲುಪಿರಬಹುದು….

Read more
ರತ್ನಗಿರಿ ಅಲ್ಫೊನ್ಸ್ ಹಣ್ಣು

ರತ್ನಗಿರಿ ಅಲ್ಫೋನ್ಸ್ ಮಾವು – ಹೇಗೆ ಬೆಳೆಯುತ್ತಾರೆ? ಯಾಕೆ ರುಚಿ?

ನಾವೆಲ್ಲಾ ರತ್ನಗಿರಿ ಅಲ್ಫೋನ್ಸ್ ಮಾವಿನ ಹಣ್ಣು ಕೇಳಿದ್ದೇವೆ. ಇದರ ರುಚಿಗೆ ಸರಿಸಟಿಯಾದ ಮಾವು ಬೇರೊಂದಿಲ್ಲ ಎಂಬ ಹೆಗ್ಗಳಿಕೆಯೂ ಇದೆ. ಭಾರತದಿಂದ ರಪ್ತು ಆಗುವ ಮಾವುಗಳ ಸಾಲಿನಲ್ಲಿ ಈ ಅಲ್ಫೋನ್ಸ್ ಹಣ್ಣೇ ಅತ್ಯಧಿಕ. ಮಹಾರಾಷ್ಟ್ರದಲ್ಲಿ ರತ್ನಗಿರಿ ಅಲ್ಫೋನ್ಸ್ ಬೆಳೆಯುವ ಜಾಗ ಹೇಗಿದೆ? ಹೇಗೆ ಬೆಳೆಯುತ್ತಾರೆ. ಯಾಕೆ ಅದು ರುಚಿಯಾಗಿರುತ್ತದೆ ಎಂಬುದರ ಎಲ್ಲಾ ಮಾಹಿತಿ ಇಲ್ಲಿ ಇದೆ. ಭೌಗೋಳಿಕ ಸ್ಥಿತಿಯು ಪ್ರತಿಯೊಂದು ಬೆಳೆಯ ಮೇಲೆ ತನ್ನದೇ ಆದ ಪ್ರಭಾವವನ್ನು ಬೀರುತ್ತದೆ. ಭೌಗೋಳಿಕ ಸ್ಥಿತಿಗತಿಗೆ ಸಮನಾಗಿರುವ ಇನ್ನೊಂದು ಪ್ರದೇಶದಲ್ಲಿ ಅದನ್ನು  ಬೆಳೆಸಿದರೆ…

Read more
ಹೆಬ್ಬಲಸಿನ ಹಣ್ಣು

ಹೆಬ್ಬಲಸಿನ ಕಾಯಿ- ಹಣ್ಣಿಗೂ ಭಾರೀ ಬೆಲೆ ಬಂದಿದೆ.

ಹೆಬ್ಬಲಸಿನ ಕಾಯಿ- ಹಣ್ಣು ಎರಡಕ್ಕೂ ಬೆಲೆ ಇದೆ. ಇದನ್ನು ಮೌಲ್ಯವರ್ಧನೆ ಮಾಡಿ ಮಾರಾಟ ಮಾಡುವವರಿದ್ದಾರೆ. ಇದರ ಮರ ಬೆಲೆಬಾಳುವ ನಾಟ ಸಹ. ಮನುಷ್ಯ ಪಶು ಪಕ್ಷಿ ಎಲ್ಲದಕ್ಕೂ ಆಹಾರ ಕೊಡುವ ವೃಕ್ಷ. ಯಾವಾಗಲೂ ಒಂದು ವಸ್ತು ಅಳಿಯುತ್ತಾ ಬಂದಾಗ ಅದಕ್ಕ್ಕೆ ಬೇಡಿಕೆ ಬರುತ್ತದೆ. ಹಾಗಾಗಿದೆ ಈ ಹೆಬ್ಬಲಸಿನ ಕಾಯಿಯ ಕಥೆ. ಹೆಬ್ಬಲಸಿನ ಹಣ್ಣು,ಅಳಿದು ಹೋಗುತ್ತಿರುವ ಒಂದು ಅಮೂಲ್ಯ ಹಣ್ಣಿನ ಕಥೆ ಇಲ್ಲಿದೆ. ಹೆಬ್ಬಲಸಿನ ಹಣ್ಣಿನ ಕಥೆ:   ಆಗ ಕೊನೇ  ಪರೀಕ್ಷೆ ನಡೆಯುವುದು ಎಪ್ರೀಲ್ ತಿಂಗಳ ತರುವಾಯ. ನಾವು…

Read more
ಬಳಕೆಗೆ ಸಿದ್ದವಾದ ಸುಡುಮಣ್ಣು – Sudumannu ready to use.

ಸುಡುಮಣ್ಣು – ಇದು ಮಣ್ಣಿನ ಆರೋಗ್ಯ ರಕ್ಷಕ ಡಾಕ್ಟರ್.

ಎಲ್ಲಾ  ತರಹದ ಮಣ್ಣು ಬೆಳೆಗಳಿಗೆ ಸೂಕ್ತವಲ್ಲ. ಕೆಲವು ಮಣ್ಣಿನಲ್ಲಿ ಬೆಳೆಗಳಿಗೆ  ಹಾನಿಕಾರಕ ರೋಗಾಣುಗಳು ಮತ್ತು ಕೀಟದ ಮೊಟ್ಟೆಗಳು ಇರಬಹುದು. ಅಂತಹ ಸಂಶಯ ಇರುವ ಮಣ್ಣನ್ನು ಸ್ವಲ್ಪ ಬಿಸಿ ಪ್ರಕ್ರಿಯೆಗೆ ಒಳಪಡಿಸಿ ಸುಡುಮಣ್ಣಾಗಿ ಪರಿವರ್ತಿಸಿದರೆ,  ಅದು ಪೂರ್ಣ ಸ್ಟೆರಿಲೈಸ್ ಮಾಡಿದ  ಸ್ವಚ್ಚ ಶುದ್ಧ ಮಣ್ಣಾಗುತ್ತದೆ. ಮಣ್ಣನ್ನು ಸ್ವಲ್ಪ ಬಿಸಿ ಮಾಡಿದಾಗ ಅದಕ್ಕೆ ಕರಕಲು ಸಾವಯವ ತ್ಯಾಜ್ಯ ಸೇರಿದಾಗ ಅದು ಸಾವಯವ ಇಂಗಾಲವನ್ನು (Carbon – bio char ) ಹೆಚ್ಚಿಸುವಲ್ಲಿ ಸಹಾಯಕವಾಗುತ್ತದೆ. ಸಾವಯವ ತ್ಯಾಜ್ಯಗಳು ಮಣ್ಣನ್ನು ಜೈವಿಕವಾಗಿ ಶ್ರೀಮಂತಿಕೆಗೆ…

Read more
ಸರ್ವ ರೋಗ – ಕೀಟ ನಿಯಂತ್ರಕ ಬೂದಿ

ಸರ್ವ ರೋಗ- ಕೀಟ ನಿಯಂತ್ರಣಕ್ಕೆ ಬೂದಿ ಮದ್ದು. ಹೇಗೆ ಗೊತ್ತೇ?

ಸಾವಯವ ತ್ಯಾಜ್ಯಗಳಾದ ಮರಮಟ್ಟು ಹಾಗೂ ಬೆಳೆ ಉಳಿಕೆಗಳನ್ನು ಸುಟ್ಟಾಗ ಬೂದಿ  ದೊರೆಯುತ್ತದೆ. ಇದರಲ್ಲಿ  ವಿಶೇಷ ಶಕ್ತಿ ಇದ್ದು, ಅನಾದಿ ಕಾಲದಿಂದಲೂ ಇದನ್ನು ಒಂದು ಸಾಂಪ್ರದಾಯಿಕ ಸಾವಯವ ಕೀಟ- ರೋಗ ನಿಯಂತ್ರಕ ಮತ್ತು  ಬೆಳೆ  ಪೋಷಕವಾಗಿ ಬಳಸುತ್ತಾ ಬರಲಾಗಿದೆ. ನಮ್ಮ ಪೂರ್ವಜರಿಂದ ಲಾಗಾಯ್ತು ಅನುಸರಿಸಲಾಗುತ್ತಿದ್ದ  ಈ ಕ್ರಮ ಸಾಕಷ್ಟು ಅನುಕೂಲವನ್ನು ಮಾಡಿಕೊಟ್ಟಿದೆ. ಸರ್ವ ರೋಗಕ್ಕೆ ಬೂದಿ ಮದ್ದು ಎಂಬ ಹಿರಿಯರ ನಾಳ್ನುಡಿ ಸತ್ಯವಾದದ್ದು. ಹಿಂದೆ ಹಳ್ಳಿಗಳಲ್ಲಿ  ಪ್ರತೀ ಮನೆಯಲ್ಲೂ ವರ್ಷಕ್ಕೆ ಒಂದಷ್ಟು ಕಟ್ಟಿಗೆ ಸುಟ್ಟ ಬೂದಿ (Wood Ash)ಸಿಗುತ್ತಿತ್ತು….

Read more
ಚೇತರಿಕೆಯತ್ತ ಕೆಂಪಡಿಕೆ

ಕೆಂಪಡಿಕೆ ಚೇತರಿಕೆ- ಚಾಲಿ ಅಡಿಕೆಗೆ ಮಬ್ಬು. 21-01-2022 ರಂದು ಧಾರಣೆ.

ನಿರೀಕ್ಷೆಯಂತೆ ಕೆಂಪಡಿಕೆ ಮಾರುಕಟ್ಟೆಯಲ್ಲಿ ಚೇತರಿಕೆ ಪ್ರಾರಂಭವಾಗಿದೆ. ಖರೀದಿಯಲ್ಲಿ ಉತ್ಸಾಹ (Force) ಇದೆ ಎಂಬುದಾಗಿ ವರ್ತಕರು ಹೇಳುತ್ತಿದ್ದಾರೆ. ಯಾವಾಗಲೂ ಸರಾಸರಿ ದರ ಮತ್ತು ಗರಿಷ್ಟ ದರಗಳ ಅಂತರ ಹತ್ತಿರವಾದರೆ ಖರೀದಿಯಲ್ಲಿ ಆಸಕ್ತಿ ಹೆಚ್ಚು ಎನ್ನಲಾಗುತ್ತದೆ. ಇದು ಈಗ ಪ್ರಾರಂಭವಾಗಿದೆ. ಚಾಲಿ ಮಾತ್ರ ಸ್ವಲ್ಪ ಮಬ್ಬು. ದಿನಾಂಕ 21-01-2022 ರಂದು ರಾಜ್ಯದೆಲ್ಲೆಡೆ ಧಾರಣೆ. ಕರಾವಳಿಯ ಚಾಲಿ ಅಡಿಕೆ ಈ ವರ್ಷ ಗುಣಮಟ್ಟ ಇಲ್ಲ. ಯಾವಾಗಲೂ ಕರಾವಳಿಯ ಚಾಲಿ ಅಡಿಕೆ ಎಂದರೆ ಅದಕ್ಕೆ  ವಿಶೇಷ ಸ್ಥಾನಮಾನ ಇತ್ತು. ಈ ವರ್ಷದ ಪ್ರತಿಕೂಲ…

Read more
error: Content is protected !!