ಮಾವಿನ ಕಾಯಿಗೆ ಈಗ ರೂ. 125, ಕಾರಣ ಅಕಾಲಿಕ ಮಾವು

ಮಾವಿನ ಕಾಯಿಗೆ ಈಗ ರೂ. 125, ಕಾರಣ ಅಕಾಲಿಕ ಮಾವು.

ಮಾರುಕಟ್ಟೆಯಲ್ಲಿ ಈಗ ತೋತಾಪುರಿ,ಆಪೂಸು ಮಾವಿನ ಕಾಯಿಗಳು ಕಿಲೋ 125 ಕ್ಕೂ ಹೆಚ್ಚಿನ ಬೆಲೆಗೆ ಮಾರಲ್ಪಡುತ್ತದೆ. ಯಾವುದೇ ಹಣ್ಣು ಹಂಪಲು, ತರಕಾರಿ  ಅಕಾಲಿಕವಾಗಿ   ಬೆಳೆದರೆ  ಅಧಿಕ ಲಾಭ. ಮಾವು ಸಹ ಹಾಗೆಯೇ. ಕರಾವಳಿಯ ಭಟ್ಕಳದಿಂದ ಮತ್ತು  ಕೋಲಾರ ಕಡೆಯಿಂದ ಈಗ ಮಾವಿನ ಕಾಯಿ ಗರಿಷ್ಟ ಪ್ರಮಾಣದಲ್ಲಿ ಮಾರುಕಟ್ಟೆಗೆ ಬರುತ್ತಿದೆ. ಮಾವು ಒಂದು ಋತುಮಾನದ ಹಣ್ಣಿನ ಬೆಳೆ ಎಂಬುದು ನಮಗೆಲ್ಲಾ ಗೊತ್ತಿರುವ ವಿಚಾರ . ಬೇಸಿಗೆ ಕಾಲ ಮಾರ್ಚ್ ನಿಂದ ಜೂನ್ ತನಕ  ಮಾವಿನ ಪ್ರಮುಖ ಸೀಸನ್. ಈಗ…

Read more
ಮಾವಿನ ಹಣ್ಣು ಈ ರೀತಿ ಆದರೆ ಅದು ಕೊಳೆಯುವ ಪ್ರಾರಂಭಿಕ ಹಂತ

ಮಾವಿನ ಕಾಯಿ ಹಣ್ಣಾಗುವಾಗ ಕೊಳೆಯುವುದಕ್ಕೆ ಏನು ಕಾರಣ?

ಮಾವಿನ ಹಣ್ಣಿನ ತೊಟ್ಟಿನ ಭಾಗ ಮೊದಲು ಮೆತ್ತಗಾಗಿ ಕೊಳೆಯುತ್ತದೆ. ಹಣ್ಣು ಮೇಲ್ಮೈಯಲ್ಲಿ ಅಲ್ಲಲ್ಲಿ ತಪ್ಪು ಕಲೆಗಳಾಗಿ ಕೊಳೆಯುತ್ತದೆ.  ಮಾವಿನ ಹಣ್ಣು ನೋಡುವಾಗ ಅದನ್ನು ತಿನ್ನಲು ಹೇಸಿಗೆಯೆನಿಸುತ್ತದೆ. ಇದು ಯಾಕೆ ಹೀಗಾಗುತ್ತದೆ ಎಂಬುದರ ಬಗ್ಗೆ ಬಹಳಷ್ಟು ರೈತರಿಗೆ ಗೊತ್ತೇ ಇಲ್ಲ.  ಇದು ರಾಸಾಯನಿಕ ಬಳಸಿ ಬೆಳೆದರೂ ಆಗುತ್ತದೆ. ಸಾವಯವದಲ್ಲಿ ಬೆಳೆದರೂ ಆಗುತ್ತದೆ. ಇದನ್ನು ಕೆಲವು ಕ್ರಮಗಳ ಮೂಲಕ ನಿಯಂತ್ರಣ ಮಾಡಬಹುದು. ಇದು ಮಾವಿನ ಹಣ್ಣಿನ ಸೀಸನ್. ಕೆಲವರ ಮನೆಯಂಗಳದ ಮಾವಿನ ಮರದಲ್ಲಿ ಕಾಯಿ ಇದೆ. ಕೆಲವರು ಅಂಗಡಿಯಿಂದ ಒಯ್ಯುತ್ತಾರೆ. …

Read more
ಮಾವು ಸ್ಪೆಶಲ್ ಬಳಸಿದ ಮಾವು

ಮಾವು ಬೆಳೆಯುವವರು ಇದನ್ನು ಬಳಸಿದರೆ ಭಾರೀ ಫಲಿತಾಂಶ.

ಮಾವು ಬೆಳೆಯುವವರು ಎಷ್ಟೇ ಹೂ ಬಿಟ್ಟರೂ ಬಹಳಷ್ಟು ಕಾಯಿಗಳನ್ನು ಕಳೆದುಕೊಳ್ಳುವುದು ಸಾಮಾನ್ಯ. ಬಲಿಯುವ ತನಕ ಉದುರಿ ಹಾಳಾಗುವ  ಪ್ರಮಾಣ ಅರ್ಧಕ್ಕರ್ಧ. ಇದಕ್ಕೆಲ್ಲಾ ಕಾರಣ ಸಸ್ಯದ ಧಾರಣಾ ಸಾಮರ್ಥ್ಯ. ಸಸ್ಯಕ್ಕೆ ಶಕ್ತಿ ಇದ್ದರೆ ಹೆಚ್ಚು ಫಲವನ್ನು ಆಧರಿಸುತ್ತದೆ. ಇಲ್ಲವಾದರೆ ರೋಗ, ಕೀಟಗಳ ಮೂಲಕ, ಶಾರೀರಿಕ ಅಸಮತೋಲನದ ಮೂಲಕ ಉದುರಿ ನಷ್ಟವಾಗುತ್ತದೆ. ಅದನ್ನು ಸರಿಪಡಿಸಲು ಒಂದು ಪೋಷಕಾಂಶ ಮಿಶ್ರಣದ ಸಿಂಪರಣೆ  ಮಾಡಬಹುದು. ಇದು ಗರಿಷ್ಟ ಪ್ರಮಾಣದಲ್ಲಿ ಕಾಯಿಗಳನ್ನು ಉಳಿಸುತ್ತದೆ. ಮಾವು ಸ್ಪೆಷಲ್  Mango special ಎಂಬ ಪೋಷಕಾಂಶ ಮಿಶ್ರಣ, ಸಸ್ಯ…

Read more
ರತ್ನಗಿರಿ ಅಲ್ಫೊನ್ಸ್ ಹಣ್ಣು

ರತ್ನಗಿರಿ ಅಲ್ಫೋನ್ಸ್ ಮಾವು – ಹೇಗೆ ಬೆಳೆಯುತ್ತಾರೆ? ಯಾಕೆ ರುಚಿ?

ನಾವೆಲ್ಲಾ ರತ್ನಗಿರಿ ಅಲ್ಫೋನ್ಸ್ ಮಾವಿನ ಹಣ್ಣು ಕೇಳಿದ್ದೇವೆ. ಇದರ ರುಚಿಗೆ ಸರಿಸಟಿಯಾದ ಮಾವು ಬೇರೊಂದಿಲ್ಲ ಎಂಬ ಹೆಗ್ಗಳಿಕೆಯೂ ಇದೆ. ಭಾರತದಿಂದ ರಪ್ತು ಆಗುವ ಮಾವುಗಳ ಸಾಲಿನಲ್ಲಿ ಈ ಅಲ್ಫೋನ್ಸ್ ಹಣ್ಣೇ ಅತ್ಯಧಿಕ. ಮಹಾರಾಷ್ಟ್ರದಲ್ಲಿ ರತ್ನಗಿರಿ ಅಲ್ಫೋನ್ಸ್ ಬೆಳೆಯುವ ಜಾಗ ಹೇಗಿದೆ? ಹೇಗೆ ಬೆಳೆಯುತ್ತಾರೆ. ಯಾಕೆ ಅದು ರುಚಿಯಾಗಿರುತ್ತದೆ ಎಂಬುದರ ಎಲ್ಲಾ ಮಾಹಿತಿ ಇಲ್ಲಿ ಇದೆ. ಭೌಗೋಳಿಕ ಸ್ಥಿತಿಯು ಪ್ರತಿಯೊಂದು ಬೆಳೆಯ ಮೇಲೆ ತನ್ನದೇ ಆದ ಪ್ರಭಾವವನ್ನು ಬೀರುತ್ತದೆ. ಭೌಗೋಳಿಕ ಸ್ಥಿತಿಗತಿಗೆ ಸಮನಾಗಿರುವ ಇನ್ನೊಂದು ಪ್ರದೇಶದಲ್ಲಿ ಅದನ್ನು  ಬೆಳೆಸಿದರೆ…

Read more
ಸರಿಯಾದ ಸಮಯಕ್ಕೆ ಸಿಂಪರಣೆ ಮಾಡಿದಾಗ ಹೀಗೆ ಹೂ ಬಿಡುತ್ತದೆ

ಚಿಗುರು ಉಳಿಸಿದರೆ – ಮಾವು ಉತ್ತಮ ಫಲ ಕೊಡುತ್ತದೆ.

ವಾಣಿಜ್ಯಿಕವಾಗಿ ಮಾವಿನ ಬೇಸಾಯ ಮಾಡುವವರು  ಮಾವಿನ ಹಣ್ಣು ಬೆಳೆಯುವ ತನಕ ಕನಿಷ್ಟ  8-10 ಸಲ  ಕೀಟನಾಶಕ ರೋಗ ನಾಶಕ ಸಿಂಪಡಿಸುತ್ತಾರೆ. ಇದನ್ನು ಮಾಡದೇ ಇದ್ದರೆ  ಮಾವಿನ ಬೇಸಾಯವೇ ವ್ಯರ್ಥ. ಯಾವುದೇ ಒಂದು ಬೆಳೆಯನ್ನು ವಾಣಿಜ್ಯಿಕವಾಗಿ ಮಾಡುವಾಗ ಅದಕ್ಕೆ ಕೀಟಗಳು ರೋಗಗಳು ಹೆಚ್ಚು. ನಿಯಂತ್ರಣ ಕೈಗೊಳ್ಳದೇ ಇದ್ದರೆ ಅದರ ಹಾನಿ ಹೆಚ್ಚಾಗುತ್ತಾ ಇರುತ್ತದೆ. ಇಂತದ್ದರಲ್ಲಿ ಒಂದು ಮಾವಿನ ಚಿಗುರು ಕೊರಕ ಹುಳು. ಚಿಗುರು ಸಸ್ಯ ಬೆಳವಣಿಗೆಯ ಪ್ರಮುಖ ಹಂತ. ಅದಕ್ಕೆ ತೊಂದರೆ ಆದಾಗ ಸಸ್ಯ ಬೆಳವಣಿಗೆ ಕುಂಠಿತವಾಗಿ ,…

Read more
ಬೊರ್ಡೋ ಪೇಸ್ಟ್- Bordeaux paint

ತೋಟಗಾರಿಕಾ ಬೆಳೆಗಾರರ ರಕ್ಷಕ ಈ ಶಿಲೀಂದ್ರ ನಾಶಕ.

ನಾವೆಲ್ಲಾ ಕೆಲವು ಸಂಶೋಧನಾ ಸಂಸ್ಥೆಗಳು, ಬೆಳೆ ಪ್ರಾತ್ಯಕ್ಷಿಕಾ ತಾಕುಗಳಿಗೆ ಭೇಟಿ ಕೊಟ್ಟಾಗ ಅಲ್ಲಿನ ತೋಟದ ಬೆಳೆಗಳ ಮರ, ಬಳ್ಳಿಯ ಕಾಂಡಕ್ಕೆ ನೀಲಿ ಮಿಶ್ರ ಬಿಳಿ ಬಣ್ಣದ ಲೇಪನ ಮಾಡಿರುವುದನ್ನು ಕಂಡಿರಬಹುದು.  ಅದು ಏನು ಗೊತ್ತೇ? ಇದು ನೋಡಲು ಚೆಂದವಾಗಿ ಇರಲಿ ಎಂದು ಲೇಪನ ಮಾಡಿದ್ದು ಅಲ್ಲ. ಅದು ಒಂದು ಸಸ್ಯ ಸಂರಕ್ಷಣಾ ಔಷಧಿಯ ಲೇಪನ. ಬಹುತೇಕ ತೋಟಗಾರಿಕಾ ಬೆಳೆಗಳಿಗೆ ಕಾಂಡದ ಮೂಲಕ ಕೆಲವು ರೋಗ – ಕೀಟಗಳು ಪ್ರವೇಶವಾಗುತ್ತವೆ. ಅದನ್ನು ಪ್ರತಿಬಂಧಿಸುವಲ್ಲಿ ಈ ಬಣ್ಣದ ಪೇಸ್ಟ್ ಲೇಪನ…

Read more
Poly bag fruit plant

ಮನೆಯ ಹಿತ್ತಲು, ಟೆರೇಸ್ ನಲ್ಲಿ ಹಣ್ಣು ಹಂಪಲು ಬೆಳೆಯುವ ವಿಧಾನ.

ಅವರವರ ಬಳಕೆಗೆ ಬೇಕಾಗುವ ಹಣ್ಣು ಹಂಪಲುಗಳನ್ನು ಹೀಗೆ ಬೆಳೆದರೆ ಉತ್ತಮ ಗುಣಮಟ್ಟದ ಸುರಕ್ಷಿತ ಹಣ್ಣುಗಳನ್ನು ತಿನ್ನಬಹುದು. ಒಂದು ಕುಟುಂಬಕ್ಕೆ ಮಾವಿನ ಹಣ್ಣು ಎಷ್ಟು ಬೇಕಾಗಬಹುದು? ವರ್ಷಕ್ಕೆ ಹೆಚ್ಚೆಂದರೆ 10 ಕಿಲೋ. ಇದನ್ನು ಉತ್ಪಾದಿಸಲು ಮಾವಿನ ತೋಟ ಮಾಡಬೇಕಾಗಿಲ್ಲ. ಮನೆಯ ಹಿತ್ತಲಲ್ಲಿ ಎಲ್ಲಿ ಗಾಳಿ ಬೆಳೆಕು ಚೆನ್ನಾಗಿ ಲಭ್ಯವಿರುತ್ತದೆಯೋ ಅಲ್ಲಿ ನೆಟ್ಟು ಫಲವನ್ನು ಪಡೆಯಬಹುದು. ಮಾವು ಮಾತ್ರವಲ್ಲ. ನಾವು ತಿನ್ನಬಯಸುವ ಎಲ್ಲಾ ನಮೂನೆಯ  ಹಣ್ಣು ಹಂಪಲುಗಳನ್ನೂ ಇದೇ ತರಹ ಬೆಳೆಸಿ ನಮ್ಮ ಕುಟುಂಬಕ್ಕೆ ಬೇಕಾದ ವಿಷಮುಕ್ತ ಹಣ್ಣು ಹಂಪಲು…

Read more
ರತ್ನಗಿರಿ ಅಲ್ಫೊನ್ಸ್ ಹಣ್ಣು

ಮಾವು ಕೊಯ್ಯುವಷ್ಟು ಬೆಳೆದಿದೆಯೇ ? ಹೇಗೆ ತಿಳಿಯುವುದು?

ಮಾವಿನ ಕಾಯಿ ಕೊಯ್ಯುವಾಗ ಅದು ಸರಿಯಾಗಿ ಬೆಳೆದಿದ್ದರೆ ಅದರ ರುಚಿಯೇ ಭಿನ್ನ. ಕಾಯಿ ಕೊಯ್ಯುವಷ್ಟು ಬೆಳೆದಿದೆಯೇ ಇಲ್ಲವೇ ಎಂದು ತಿಳಿಯಲು ಸ್ವಲ್ಪ ಅನುಭವ ಬೇಕು. ಈ ಬಗ್ಗೆ ಮಾಹಿತಿ ಇಲ್ಲಿದೆ. ಈಗ ಮಾವಿನ ಕಾಯಿ ಮಾಗುವ ಸಮಯ. ಮಾವಿನ ಕಾಯಿ ಹೂ  ಬಿಟ್ಟು, ಮಾಗಿ ಹಣ್ಣಾಗಲು 3 ತಿಂಗಳು ಬೇಕು. ಈ ಅವಧಿಯನ್ನು ಕರಾರುವಕ್ಕಾಗಿ ಲೆಕ್ಕಾಚಾರ ಹಾಕಲು ಆಗದು. ಅದಕ್ಕಾಗಿ ಕೆಲವು ಕಣ್ಣಂದಾಜಿನ ಪರೀಕ್ಷೆಗಳು ಮತ್ತು ಯಾದೃಚ್ಚಿಕ ಪರೀಕ್ಷೆಗಳನ್ನು ಮಾಡಿ ಬಲಿತಿದೆಯೇ ಇಲ್ಲವೇ ಎಂದು ತಿಳಿಯಬಹುದು. ಎಳೆಯದಾದ…

Read more
ಮಾವಿನ ಹಣ್ಣು

ರಾಸಾಯನಿಕ ಬಳಸದೆ ಹಣ್ಣು ಮಾಡುವ ಸರಳ ವಿಧಾನ

ಹೆಚ್ಚಾಗಿ ಮಾವಿನ ಕಾಯಿ ಹಣ್ಣು ಮಾಡಲು ಹಿಂದಿನಿಂದಲೂ ಕ್ಯಾಲ್ಸಿಯಂ ಕಾರ್ಬೇಟ್ ಎಂಬ ಅಪಾಯಕಾರೀ ವಸ್ತುವನ್ನು ಬಳಸಲಾಗುತ್ತಿತ್ತು. ಈಗ ಹಾಗಿಲ್ಲ. ಅದರ ಬದಲಿಗೆ  ಅರೋಗ್ಯಕ್ಕೆ ಹಾನಿ ಇಲ್ಲದ ಹಣ್ಣು ಮಾಡುವ ವಿಧಾನವನ್ನು ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯವರು ಬೆಳೆಗಾರರಿಗೆ ತಿಳಿಸಿಕೊಟ್ಟಿದ್ದಾರೆ. ಇದನ್ನು ಬಹಳಷ್ಟು ಬೆಳೆಗಾರರು ಅಳವಡಿಸಿಕೊಂಡಿದ್ದಾರೆ. ನಮ್ಮ ರಾಜ್ಯದ ಮಾವಿನ ರಾಜದಾನಿ ಎಂದೇ  ಖ್ಯಾತವಾದ ಶ್ರೀನಿವಾಸಪುರದಿಂದ ಸಂಜೆ ಹೊತ್ತು ಲಾರಿಗೆ ಲೊಡ್ ಆದ ಮಾವು ಮರುದಿನ ತಲುಪಬೇಕಾದಲ್ಲಿಗೆ ತಲುಪುವಾಗ ಮೆತ್ತಗಾಗುತ್ತದೆ.  ಅದನ್ನು ಖರೀದಿಸಿವರು ಮರುದಿನ ಮಾರಾಟ ಮಾಡುವಾಗ ಬಣ್ಣ…

Read more
Kare Ishaad

ಉತ್ತರ ಕನ್ನಡದ ವಿಶೇಷ ಮಾವು- ಕರೇ ಈಶಾಡ್.

ಕುಮಟಾ ಅಂಕೋಲಾ ಮಧ್ಯೆ ಹೆಚ್ಚಿನವರ ಮನೆ ಬಾಗಿಲಿನಲ್ಲಿ ಒಂದೆರಡು ಮಾವಿನ ಮರ ಇದ್ದೇ ಇರುತ್ತದೆ. ಇಲ್ಲಿ ಜನ ಯಾವುದಾದರೂ ಮರ ಕಡಿದಾರು ಆದರೆ ಮನೆ ಹಿತ್ತಲಿನಲ್ಲಿರುವ ಕರೇ ಈಶಾಡ್ ಮಾವಿನ ಮರಕ್ಕೆ  ಕೊಡಲಿ ಇಡಲಾರರು. ಕಾರಣ ಇದು ಆ ಪ್ರದೇಶದ ಪ್ರಸಿದ್ದ ಮಾವಿನ ತಳಿ. ಜೊತೆಗೆ ಹಣ್ಣಿನ ಸೀಸನ್‍ನಲ್ಲಿ ಸ್ವಲ್ಪ ಉತ್ಪತ್ತಿ ತಂದುಕೊಡುವ ಬೆಳೆ.    ಕರೇ ಈಶಾಡ್ ಎಂಬುದು ಕುಮಟಾ ಅಂಕೋಲಾ ಮಧ್ಯದ ಪ್ರದೇಶಗಳಲ್ಲಿ ಬೆಳೆಯಲ್ಪಡುವ ಸ್ಥಳೀಯ ಮಾವಿನ ತಳಿ. ಸುಮಾರಾಗಿ ಮುಂಡಪ್ಪದ ಗಾತ್ರದಲ್ಲಿರುವ ಈ…

Read more
error: Content is protected !!