ಚೇತರಿಕೆಯತ್ತ ಕೆಂಪಡಿಕೆ ಮಾರುಕಟ್ಟೆ – ಚಾಲಿಯನ್ನೂ ಮೇಲೆತ್ತಬಹುದು!

ಚೇತರಿಕೆಯತ್ತ ಕೆಂಪಡಿಕೆ ಮಾರುಕಟ್ಟೆ – ಚಾಲಿಯೂ ಮೇಲೆ.

ಬಹಳ ಸಮಯದ ತನಕ ಅಲ್ಲಾಡದೆ ಅಸ್ಥಿರವಾಗಿದ್ದ ಕೆಂಪಡಿಕೆ ಧಾರಣೆ ಜೂನ್ ಎರಡನೇ ವಾರ ಮತ್ತೆ ಚೇತರಿಕೆ ಕಾಣಲಾರಂಭಿಸಿದೆ. ಪ್ರತೀ ವರ್ಷದ ಮಾರುಕಟ್ಟೆ ಲಯವನ್ನು ಗಮನಿಸಿದರೆ ಸಾಮಾನ್ಯವಾಗಿ ಜೂನ್ ತಿಂಗಳಿಗೆ ಏರಿಕೆ ಪ್ರಾರಂಭವಾಗುತ್ತದೆ. ನಿಧಾನವಾಗಿ ಏರುತ್ತಾ ಆಗಸ್ಟ್ ಸಪ್ಟೆಂಬರ್ ತಿಂಗಳಿಗೆ ಮತ್ತೆ ಹಿಮ್ಮುಖವಾಗುತ್ತದೆ. ಈ ವರ್ಷವೂ ಅದೇ ಆಗಿದೆ. ಕೆಂಪಡಿಕೆ ದರ ಏರಿದ ಪರಿಣಾಮ ಚಾಲಿ ದರ ಚೇತರಿಕೆ ಆಗಲಾರಂಭಿಸಿದೆ. ಕರಿಕೋಕಾ, ಪಟೋರಾ, ಉಳ್ಳಿಗಡ್ಡೆ ಸಹ ಏರಿಕೆ ಕಂಡಿದೆ. ಇಂದು ಖಾಸಗಿ ವ್ಯಾಪಾರಿಗಳು ಹೊಸ ಅಡಿಕೆ ರೂ.405-410 ಕ್ಕೆ…

Read more
ಅಡಿಕೆ ಧಾರಣೆ ಮುಂದೆ ಏನಾಬಹುದು? ಏರಿಕೆ ಸಾಧ್ಯತೆ ಎಷ್ಟು?

ಅಡಿಕೆ ಧಾರಣೆ ಮುಂದೆ ಏನಾಬಹುದು? ಏರಿಕೆ ಸಾಧ್ಯತೆ ಎಷ್ಟು?

ನಮ್ಮೆಲ್ಲರ ಚಿತ್ತ ಈಗ ಅಡಿಕೆ ಧಾರಣೆಯ ಏರಿಳಿತದ ಮೇಲೆ. ಈ ವರ್ಷದ ಹವಾಮಾನ ಮತ್ತು ಮುಂದಿನ ವರ್ಷದ ರಾಜಕೀಯ ವಿಧ್ಯಮಾನಗಳ ಕೃಪೆಯಿಂದ ಅಡಿಕೆಗೆ ಬೆಲೆ ಏರುವ ಸೂಚನೆಯೇ ಹೆಚ್ಚಾಗಿ ಕಾಣಿಸುತ್ತಿದೆ. ಈಗಾಗಲೇ ರಾಜ್ಯ ಚುನಾವಣೆಯ ಕಾವು ಮುಗಿದಿದೆ. ರಾಜ್ಯದಲ್ಲಿ ಅಧಿಕಾರ ನಡೆಸುವ ಪಕ್ಷ ಬದಲಾಗಿದೆ. ಯಾವುದೇ ಪಕ್ಷವಾದರೂ ರೈತರಿಗೆ ತೊಂದರೆ ಮಾಡಲಾರರು. ಹಣ, ಸ್ವತ್ತು ಯಾವುದೇ ವಸ್ತು ಸಾಗಾಣಿಕೆಗೆ ಇರುವ ಅಡ್ಡಿ ಆತಂಕಗಳು ದೂರವಾಗಿವೆ. ಇದೇ ಕಾರಣದಿಂದ ಧಾರಣೆ ಏರಲು ಪ್ರಾರಂಭವಾಗಿದೆ.ಅಡಿಕೆ ಧಾರಣೆ ಏರಿಕೆಯಾಗಬೇಕೇ? ಹಾಗಾದರೆ ಅದಕ್ಕೆ…

Read more
ಅಡಿಕೆ ಮಾರುಕಟ್ಟೆ ಕೆಲವೇ ದಿನಗಳಲ್ಲಿ ತೇಜಿಯಾಗಲಿದೆ.

ಅಡಿಕೆ ಮಾರುಕಟ್ಟೆ  ಕೆಲವೇ ದಿನಗಳಲ್ಲಿ ತೇಜಿಯಾಗಲಿದೆ.

ಅಡಿಕೆ ಅಥವಾ ಇನ್ಯಾವುದೇ ಮಾರುಕಟ್ಟೆ ಯಾವಾಗ  ತೇಜಿಯಾಗುತ್ತದೆ, ಯಾವಾಗ ಮಂದಿಯಾಗುತ್ತದೆ ಎಂದು ಯಾರೂ ಊಹಿಸಲೂ ಸಾಧ್ಯವಾಗಲಾರದು.  ಮಾರುಕಟ್ಟೆ ವ್ಯವಹಾರದಲ್ಲಿರುವವರ ಲೆಕ್ಕಾಚಾರಗಳೇ ಬೇರೆ, ಕೃಷಿಕರ ಊಹನೆಯೇ ಬೇರೆ. ಇವಕ್ಕೆರಡಕ್ಕೂ ಹೊಂದಾಣಿಕೆ ಆಗುವುದು ತುಂಬಾ ಕಷ್ಟ. ಈ ವರ್ಷ ನಮ್ಮ ರಾಜ್ಯದಲ್ಲಿ ಚುನಾವಣೆ ಇದ್ದರೂ ಸಹ ದರ ಎರುವ ಸಾಧ್ಯತೆ ಕಂಡು ಬರುತ್ತಿದೆ. ಈಗಾಗಲೇ ಇದರ ಸೂಚನೆ ದೊರೆತಿದೆ. ಕಳೆದ ಒಂದು ವಾರದಿಂದ ಕೆಂಪಡಿಕೆ ಮಾರುಕಟ್ಟೆ ಮಲಗಿದ್ದುದು ಎದ್ದು  ನಿಂತಿದೆ. ಈ ಹಿಂದೆ ಎರಡು ತಿಂಗಳುಗಳ ಕಾಲ ಮಾರುಕಟ್ಟೆಯಲ್ಲಿ ಖರೀದಿದಾರರ…

Read more
ಅಡಿಕೆ ಮಾರುಕಟ್ಟೆಯಲ್ಲಿ ತಲ್ಲಣಿಕೆ. ಮುಂದಿದೆ ಭಾರೀ ಅನಿಶ್ಚಿತತೆ

ಅಡಿಕೆ ಮಾರುಕಟ್ಟೆಯಲ್ಲಿ ತಲ್ಲಣಿಕೆ. ಮುಂದಿದೆ ಭಾರೀ ಅನಿಶ್ಚಿತತೆ.

ಅಡಿಕೆ ಮಾರುಕಟ್ಟೆಯಲ್ಲಿ ಭಾರೀ ತಲ್ಲಣಿಕೆ ಉಂಟಾಗಿದ್ದು, ವ್ಯಾಪಾರಿಗಳಿಗೇ ಅಂಜಿಕೆ ಹುಟ್ಟಿದೆ. ಎಲ್ಲಾ ಅಡಿಕೆ ವರ್ತಕರಿಗೂ ಮುಂದೇನಾಗುವುದೋ ಎಂಬ ಚಿಂತೆ ಉಂಟಾಗಿದೆ. ಇರುವ ದಾಸ್ತಾನನ್ನು ಹೇಗಾದರೂ ವಿಲೇವಾರಿ ಮಾಡುವ ಚಿಂತೆಯಲ್ಲಿದ್ದಾರೆ. ಖರೀದಿದಾರರು ಭಾರೀ ಕಡಿಮೆ ಬೆಲೆಗೆ ಕೇಳುತ್ತಿದ್ದಾರೆ. ಈಗಿನ ಪರಿಸ್ಥಿತಿಯಲ್ಲಿ ಧಾರಣೆ ಕುಸಿತವೂ ಆಗಬಹುದು. ಹೀಗೆಯೇ ಮುಂದುವರಿಯಲೂ ಬಹುದು.   ಚಾಲಿ ಅಡಿಕೆ ಮಾರುಕಟ್ಟೆಯಲ್ಲಿ ಚೋಲ್ ಅಡಿಕೆ ಬೇಡ ಎಂಬ ಸ್ಥಿತಿ ಉಂಟಾಗಿ ಅಘೋಷಿತ ದರ ಕುಸಿತ ಉಂಟಾಗಿದೆ. ಖರೀದಿದಾರರಲ್ಲಿ ಭಾರೀ ಪ್ರಮಾಣದ ಸ್ಟಾಕು ಇದೆ ಎಂಬ ವರ್ತಮಾನ ಇದೆ….

Read more
ಚಳಿ ಇಳಿಮುಖ – ರಾಶಿ - ಚಾಲಿ 50,000!

ಉತ್ತರ ಭಾರತದ ಚಳಿ – ರಾಶಿ 50,000!- ಚಾಲಿ ಅನುಮಾನ.

ಉತ್ತರ ಭಾರತದಲ್ಲಿ ಚಳಿ ಹೆಚ್ಚಾದಾಗ ಸಂಸ್ಕರಣಾ ಉದ್ದಿಮೆಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಕೆಲಸ ನಡೆಯದ ಕಾರಣ ರಾಶಿ ಮತ್ತು ಚಾಲಿ ಎರಡಕ್ಕೂ ಬೇಡಿಕೆ ಕಡಿಮೆಯಾಗಿತ್ತು. ಈಗ  ಚಳಿ ಕಡಿಮೆಯಾಗಲಿಲ್ಲವಾದರೂ ಕೆಂಪಡಿಕೆ ಮತ್ತೆ ಚೇತರಿಸಿಕೊಳ್ಳಲಾರಂಭಿಸಿದೆ. ಚಾಲಿ ಸ್ಟಾಕು ಹೆಚ್ಚು ಇರುವ ಕಾರಣ ತಕ್ಷಣಕ್ಕೆ ಅನುಮಾನ ಎನ್ನುತ್ತಾರೆ. ಚಳಿ ಇದ್ದರೂ ಅಡಿಕೆಗೆ ಮತ್ತೆ ಬೇಡಿಕೆ ಪ್ರಾರಂಭವಾಗಿದೆ. ಬೆಲೆ ಚೇತರಿಕೆಯ  ಹಾದಿಯಲ್ಲಿದೆ. ಗುಟ್ಕಾ ಇತ್ಯಾದಿ ಅಡಿಕೆ ಸೇರಿಸಿದ ಉತ್ಪನ್ನ ತಯಾರಿಸುವಾಗ ಅವು ತೇವಾಂಶ ಎಳೆದುಕೊಳ್ಳಬಾರದು.  ವಿಶೇಷ ಚಳಿ, ಇಬ್ಬನಿ ಇದ್ದಾಗ ಅವುಗಳ ಸಂಸ್ಕರಣೆಗೆ…

Read more
ಅಡಿಕೆ ಕ್ರಯ ಏರಲಿದೆ- ರಾಶಿ ಬೆಲೆ ಚೇತರಿಕೆ. ಚಾಲಿಯೂ ಏರಿಕೆ ಸೂಚನೆ

ಅಡಿಕೆ ಕ್ರಯ ಏರಲಿದೆ-  ರಾಶಿ ಬೆಲೆ ಚೇತರಿಕೆ. ಚಾಲಿಯೂ ಏರಿಕೆ ಸೂಚನೆ.

ಯಾವ ಲೆಕ್ಕಾಚಾರಕ್ಕೂ ಸಿಗದ ಅಡಿಕೆ ಮಾರುಕಟ್ಟೆ ಮತ್ತೆ ಚೇತರಿಕೆಯತ್ತ ಮುಖಮಾಡಿದೆ. ಸಾಮಾನ್ಯವಾಗಿ ವಸ್ತುವೊಂದರ ಬೆಲೆ ಬೇಡಿಕೆ ಮತ್ತು ಪೂರೈಕೆಯನ್ನು ಅವಲಂಭಿಸಿ ಹೆಚ್ಚು ಕಡಿಮೆ ಆಗುತ್ತಿರುತ್ತದೆ. ಆದರೆ ಅಡಿಕೆ ಹಾಗಿಲ್ಲ. ಬೆಳೆ ಹೆಚ್ಚಾದರೂ ಬೆಲೆ ಏರಬಹುದು. ಬೆಳೆ ಕಡಿಮೆಯಾದರೂ ಬೆಲೆ ಏರದೆ ಇರಬಹುದು. ಇದೆಲ್ಲಾ ಅಡಿಕೆ ಮಾರುಕಟ್ಟೆಯಲ್ಲಿ ಯಾವಾಗಲೂ ನಡೆಯುತ್ತಿರುವಂತದ್ದು.ವರ್ಷದುದ್ದಕ್ಕೂ ಗುಟ್ಕಾ ಫ್ಯಾಕ್ಟರಿ ನಡೆಯುತ್ತಿರುತ್ತದೆ. ಗುಟ್ಕಾ ತಿನ್ನುವವರು, ಪಾನ್ ತಿನ್ನುವವರು ಅದಕ್ಕೆ ರಜೆ / ವಿರಾಮ ಕೊಡುವ ಕ್ರಮವೇ ಇಲ್ಲ. ಆದರೂ  ಬೆಲೆ ಮಾತ್ರ ಒಮ್ಮೊಮ್ಮೆ ಏರುತ್ತಾ ಹೋಗುತ್ತದೆ….

Read more
ದಿನಾಂಕ:13-12-2022 ಚಾಲಿ, ಕೆಂಪುಅಡಿಕೆ, ಕರಿಮೆಣಸು, ರಬ್ಬರ್ , ಕಾಫೀ

ದಿನಾಂಕ:13-12-2022 ಚಾಲಿ,ಕೆಂಪುಅಡಿಕೆ, ಕರಿಮೆಣಸು, ರಬ್ಬರ್ , ಕಾಫೀ ಧಾರಣೆ.

ಚಾಲಿ ದರ ಭಾರೀ ಕುಸಿತ ಆಗಲಿಲ್ಲ.ಏರಿಕೆಯ ಸೂಚನೆಯೂ ಇಲ್ಲ.ಕೆಂಪುಅಡಿಕೆ ಧಾರಣೆ ಮಾತ್ರ ಯಾವ ಬೆಳೆಗಾರನೂ ಕಲ್ಪಿಸಿರದ ಮಟ್ಟಕ್ಕೆ ಬಂದಿದೆ.ಯಾಕೆ ಎಂಬ ಕಾರಣ ಯಾರಿಗೂ ಗೊತ್ತಿಲ್ಲ. ಗುಟ್ಕಾ ತಿನ್ನುವುದು ಕಡಿಮೆಯಾಗಿಲ್ಲ.ಗುಟ್ಕಾ ತಯಾರಿಕೆ ನಿಂತಿಲ್ಲ. ಆದರೆ ಅಡಿಕೆಗೆ ಬೆಲೆ ಇಲ್ಲ. ಕರಿಮೆಣಸು ಒಮ್ಮೆ ಚೇರಿಸಿಕೊಂಡರೂ  ಮತ್ತೆ ಮುಗ್ಗರಿಸಿದೆ. ರಬ್ಬರ್ ಬೆಲೆ ಏರಿಕೆ ಸಾಧ್ಯತೆ ಇಲ್ಲ.ಕೊಬ್ಬರಿಯೂ ಸಹ ನೆಲಕಚ್ಚಿದ ಸ್ಥಿತಿಯಲ್ಲಿದೆ. ಒಟ್ಟಿನಲ್ಲಿ ಕೃಷಿ ಉತ್ಪನ್ನಗಳ ಬೆಲೆ ಭಾರೀ ಅಸ್ತಿರವಾಗಿದೆ. ಶಿವಮೊಗ್ಗ ಮಾರುಕಟ್ಟೆಯಲ್ಲಿ ಕಳೆದ ವಾರದಿಂದ ಅಧಿಕ ಪ್ರಮಾಣದಲ್ಲಿ ಅಡಿಕೆ ಮಾರುಕಟ್ಟೆಗೆ ಬರುತ್ತಿದೆ. ಸಾಗರ,…

Read more

ಅಡಿಕೆ ಧಾರಣೆ ಕುಸಿಯುತ್ತಿದೆ – ಏನು ಕಾರಣ ಇರಬಹುದು? ಯಾವಾಗ ಏರಬಹುದು?

ಕಳೆದ ಒಂದು ತಿಂಗಳಿಂದ ಕೆಂಪಡಿಕೆ ಧಾರಣೆ ಶೇ.40 ರಷ್ಟು ಕಡಿಮೆಯಾಗಿದೆ. ಸಪ್ಟೆಂಬರ್ ತಿಂಗಳಲ್ಲಿ ಹಸಿ ಅಡಿಕೆ ಕ್ವಿಂಟಾಲಿಗೆ 7200 ತನಕ ಇದ್ದುದು, ಇಳಿಕೆಯಾಗುತ್ತಾ ಸಪ್ಟೆಂಬರ್ ಕೊನೆಗೆ 6600 ಕ್ಕೆ ಕುಸಿಯಿತು. ಹಾಗೆಯೇ ಕಡಿಮೆಯಾಗುತ್ತಾ  ಈಗ 5200-5000 ಕ್ಕೆ ಇಳಿದಿದೆ.ವರ್ತಮಾನ ಪರಿಸ್ಥಿತಿಯಲ್ಲಿ ಇನ್ನೂ ಇಳಿಕೆಯ ಸಾದ್ಯತೆಗಳು ಕಾಣಿಸುತ್ತಿದೆ. ಹಾಗೆಯೇ ಧಾರಣೆ 55,000 ಕ್ಕೆ ಏರಿದ್ದು, ಈಗ ಸರಾಸರಿ-40,000 ದ ಸಮೀಪಕ್ಕೆ ಬಂದಿದೆ. ಎಲ್ಲಾ ಅಡಿಕೆ ಬೆಳೆಗಾರರ ಕುತೂಹಲ ಧಾರಣೆ ಯಾವಾಗ ಏರಬಹುದು ಎಂಬುದು ಒಂದೇ. ಅಡಿಕೆ ಚೇಣಿ ವಹಿಸಿಕೊಳ್ಳುವವರು…

Read more
ಅಡಿಕೆ ಮಾರುಕಟ್ಟೆ - ಚಾಲಿ, ಕೆಂಪು ಯಾವುದು ಏರಬಹುದು? ಕರಿಮೆಣಸು ಏರಲಿದೆಯೇ?

ಅಡಿಕೆ ಮಾರುಕಟ್ಟೆ- ಚಾಲಿ, ಕೆಂಪು ಯಾವುದು ಏರಬಹುದು? ಕರಿಮೆಣಸು ಏರಲಿದೆಯೇ?

ಚಾಲಿ ಮಾರುಕಟ್ಟೆ ದರ ಸ್ವಲ್ಪ ಏರಿಕೆ ಆಗುವ ಮುನ್ಸೂಚನೆ ಕಾಣಿಸುತ್ತದೆ. ಕೆಂಪು ಸ್ವಲ್ಪ ಸಮಯದ ತನಕ ಅಸ್ಥಿರವಾಗಿ ಮುಂದುವರಿಯಬಹುದು. ಹಾಗೆಯೇ ಕರಿಮೆಣಸು ಮತ್ತೆ ಚೇತರಿಕೆ ಆಗುವ ಮುನ್ಸೂಚನೆ ಇದೆ. ಖಾಸಗಿಯವರು ಸಾಂಸ್ಥಿಕ ಖರೀದಿದಾರರಿಗಿಂತ ಸ್ವಲ್ಪ ಮುಂದೆ ಇದ್ದಾರೆ. ಹಾಗೆಯೇ ಗುಜರಾತ್ ಚುನಾವಣೆ ಇನ್ನೇನು ಎರಡು ದಿನಗಳಲ್ಲಿ ಮುಗಿಯಲಿದೆ. ಆ ನಂತರ ಬೇಡಿಕೆ ಹೆಚ್ಚಾಗಬಹುದು ಎಂಬ ನಿರೀಕ್ಷೆಯಲ್ಲಿ ವ್ಯಾಪಾರಿಗಳು ಚಾಲಿ ದಾಸ್ತಾನಿಗೆ ಮುಂದಾಗಿದ್ದಾರೆ. ಕೆಂಪಡಿಕೆ ಇನ್ನು 1-2 ತಿಂಗಳು ಸ್ವಲ್ಪ ಇಳಿಕೆಯಾಗಬಹುದು. ಕರಿಮೆಣಸು ಈ ತಿಂಗಳಲ್ಲಿ ಮತ್ತೆ 52500…

Read more
ಅಡಿಕೆ ಧಾರಣೆ ಹಿಂದೆ- ಕಾರಣ ಏನು? ಯಾವಾಗ ಚೇತರಿಕೆ

ಅಡಿಕೆ ಧಾರಣೆ ಹಿಂದೆ- ಕಾರಣ ಏನು? ಯಾವಾಗ ಚೇತರಿಕೆ ಆಗಬಹುದು?

ಬೆಳೆಗಾರರ ಬಹು ನಿರೀಕ್ಷೆಯ ಉತ್ತಮ ಧಾರಣೆ ಯಾಕೋ ಈ ವರ್ಷ ಈಡೇರಲಿಲ್ಲ. ಕಳೆದ ವರ್ಷ ಇದೇ ಸಮಯದಲ್ಲಿ ಇದ್ದ ಧಾರಣೆಗಿಂತ ಈ ವರ್ಷ ಕಡಿಮೆ. ಕಾರಣ ಎನಿರಬಹುದು? ಯಾವಾಗ ಚೇತರಿಕೆ ಆಗಬಹುದು ಎಂಬ ನಿರೀಕ್ಷೆಯಲ್ಲಿರುವ ಬೆಳೆಗಾರರಿಗೆ ಇಲ್ಲಿದೆ ಕೆಲವು ಅಗತ್ಯ ಮಾಹಿತಿ. ಈ ವರ್ಷ ಅಡಿಕೆ ಧಾರಣೆ ಕಳೆದ ವರ್ಷದಷ್ಟು ಏರಿಕೆ ಆಗುವ ನಿರೀಕ್ಷೆ ಸದ್ಯಕ್ಕೆ ಇಲ್ಲ. ಚಾಲಿ ಅಡಿಕೆ ಧಾರಣೆ ಮತ್ತೆ ಕ್ವಿಂಟಾಲಿಗೆ ರೂ.1000 ಕಡಿಮೆಯಾಗಿದೆ. ಡಬ್ಬಲ್ ಚೋಲ್ ಸಹ 1000 ದಷ್ಟು ಕಡಿಮೆಯಾಗಿದೆ. ಕೆಂಪಡಿಕೆಗೂ…

Read more
error: Content is protected !!