ಹಣ್ಣು ಆದ ಕರಿಮೆಣಸು

ಕರಿಮೆಣಸು- 25% ಅಧಿಕ ಇಳುವರಿ ಪಡೆಯಲು ಏನು ಮಾಡಬೇಕು?

ನಾವು ಹೆಚ್ಚಾಗಿ ಕರಿಮೆಣಸು ಕೊಯಿಲಿನ ಸಮಯದಲ್ಲಿ ಅವಸರ ಮಾಡುತ್ತೇವೆ. ಇನ್ನೇನು ಜನವರಿ ಬಂದಿದೆ. ಕರಿಮೆಣಸು ಬೆಳೆದು ಹಣ್ಣಾದರೆ ಹಕ್ಕಿಗಳು ತಿಂದು ನಷ್ಟವಾಗುತ್ತದೆ ಎಂದು ಬಲಿಯುವ ಮುನ್ನ ಕೊಯಿಲಿಗೆ ಪ್ರಾರಂಭಿಸುತ್ತೇವೆ. ಇದರಿಂದ ನಾವು 25 % ಕ್ಕೂ ಹೆಚ್ಚು ತೂಕ ನಷ್ಟ ಮಾಡಿಕೊಳ್ಳುತ್ತೇವೆ. ಈ ನಷ್ಟವನ್ನು ಕಡಿಮೆ ಮಾಡಿಕೊಂಡರೆ 1 ಕ್ವಿಂಟಾಲು ಇಳುವರಿ ಪಡೆಯುವ ಬದಲು ಇನ್ನೂ 25 ಕಿಲೋ ಹೆಚ್ಚು ಪಡೆಯಬಹುದು ಎಂಬುದು ಕೆಲವು ಉತ್ತಮ ಮೆಣಸು ಬೆಳೆಗಾರರ ಅಭಿಪ್ರಾಯ. ಮೆಣಸಿನ ಬಳ್ಳಿಯಲ್ಲಿ ಕೆಲವು ಕರೆಗಳು ಹಣ್ಣಾದ…

Read more
ಎರಡು ವರ್ಷ ಕಳೆದ ಅಡಿಕೆ ಸಸಿ

ಎರಡು ವರ್ಷದ ಅಡಿಕೆ ಗಿಡಗಳ ಪಾಲನೆ ಪೋಷಣೆ ಹೇಗಿರಬೇಕು?

ಅಡಿಕೆ ಬೆಳೆಗಾರರು ಅಡಿಕೆ ಸಸಿಯನ್ನು ಮಕ್ಕಳಂತೆ ಸಾಕಬೇಕು. ಹಾಗಿದ್ದರೆ ಅದು ನಿರೀಕ್ಷೆಯೆ ಸಮಯಕ್ಕೆ ಫಲ ಕೊಡುತ್ತದೆ. ಧೀರ್ಘ ಕಾಲದ ತನಕವೂ ಫಲ ಕೊಡುತ್ತಾ ಇರುತ್ತದೆ. ಫಲ ಬರಲು ಪ್ರಾರಂಭವಾದ ನಂತರ ಸಾಕಿದರೆ ಏನೂ ಪ್ರಯೋಜನ ಇಲ್ಲ. ಅದಕ್ಕಾಗಿ ನೆಟ್ಟು ಮೊದಲ ವರ್ಷ ಕಳೆದು ಎರಡು ವರ್ಷಕ್ಕೆ ಕಾಲಿಡುವಾಗ ಯಾವ ಯಾವ ಪಾಲನೆ ಪೋಷಣೆ  ಮಾಡಿ ಅದನ್ನು ಸಲಹಬೇಕು ಎಂಬ ಪೂರ್ತಿ ಮಾಹಿತಿ ಇಲ್ಲಿದೆ. ನೆಟ್ಟ ಸಸಿಯನ್ನು ತಕ್ಷಣದಿಂದ ಹೇಗೆ ಸಾಕಬೇಕು ಎಂಬ ಬಗ್ಗೆ ಈ ಹಿಂದೆ ಸವಿಸ್ತಾರವಾದ…

Read more
ಕುರುವಾಯಿ ದುಂಬಿ

ಕುರುವಾಯಿ ದುಂಬಿಯ ಕಾಟ ಹೆಚ್ಚಾಗಲು ಕೊಟ್ಟಿಗೆ ಗೊಬ್ಬರ ಕಾರಣ

ಯಾವಾಗಲೂ  ಕತ್ತಲಾಗುತಲೇ ನಿಮ್ಮ ಮನೆಯ ವಿದ್ಯುತ್ ದೀಪಕ್ಕೆ  ಒಂದು ದೊಡ್ದ ದುಂಬಿ ಬಂದು ನೆಲಕ್ಕೆ  ಬೀಳುತ್ತದೆ. ಅದರಲ್ಲಿ  ಹೆಚ್ಚಿನದು ತೆಂಗಿನ ಮರದ ಸುಳಿಯನ್ನು ಕೊರೆಯುವ ಕುರುವಾಯಿ  ದುಂಬಿಯಾಗಿರುತ್ತದೆ. ಇದು ವಂಶಾಭಿವೃದ್ದಿಯಾಗುವುದು ಕೊಟ್ಟಿಗೆ ಗೊಬ್ಬರ ಅಥವಾ ಸಾವಯವ ಗೊಬ್ಬರದಲ್ಲಿ. ಕುರುವಾಯಿ ನಿಯಂತ್ರಣವಾಗಬೇಕಿದ್ದರೆ ಸಾವಯವ ಗೊಬ್ಬರವನ್ನು  ಉಪಚರಿಸಿ ಬಳಕೆ ಮಾಡಬೇಕು. ತೆಂಗಿನ ಮರವನ್ನು ಕೊಲ್ಲದೇ, ಅದನ್ನು ಏಳಿಗೆಯಾಗಲು ಬಿಡದ ಒಂದು ಸಾಮಾನ್ಯ ಕೀಟ ಕುರುವಾಯಿ. ನಮ್ಮ ಹಿರಿಯರು ಹೇಳುವುದಿದೆ, ಒಂದು ಕುರುವಾಯಿ ಕೊಂದರೆ 1 ದೇವಾಸ್ಥಾನ ಕಟ್ಟಿದ ಪುಣ್ಯವಿದೆ ಎಂದು….

Read more
ಚಾಲಿ ಮತ್ತು ಕೆಂಪು ಅಡಿಕೆ ಮಾರಾಟ

2022 ಹೊಸ ವರ್ಷದ ಮೊದಲ ದಿನ – ಚಾಲಿ- ಕರಿಮೆಣಸು ಇಳಿಕೆ. ಕೆಂಪು ಸ್ಥಿರ, ಕೊಬ್ಬರಿ ಏರಿಕೆ.

2021 ಕಳೆದು 2022 ಬಂದಾಯ್ತು. 2021 ನೇ ವರ್ಷದಲ್ಲಿ ಚಾಲಿ ಅಡಿಕೆ ಬೆಳೆಗಾರರು ತಮ್ಮ ಆನುಭವದಲ್ಲಿ ಕಂಡಿರದ ದರ ಏರಿಕೆಯನ್ನು ನೋಡಿದ್ದಾರೆ. ಸಂತೋಷ ಪಡಬೇಕಾದ ಸಂಗತಿ. ಆದರೆ ಕೆಂಪಡಿಕೆಗೆ ಮಾತ್ರ ಅಂಥಃ ಬೆಲೆ ಏರಿಕೆ ಆಗಿಲ್ಲ. ನಿರಾಸೆಯೂ ಆಗಿಲ್ಲ.  ಹೊಸ ವರ್ಷದ ಮೊದಲ ದಿನ ಚಾಲಿ ಸ್ವಲ್ಪ ಇಳಿಕೆಯೂ, ಕೆಂಪು ಸ್ಥಿರವಾಗಿಯೂ, ಕರಿಮೆಣಸಿನ ಬೆಲೆ ಕುಸಿತ ಆಗಿದೆ. ಕೊಬ್ಬರಿ ಏರಿದೆ. 2022 ನೇ ಇಸವಿಯೂ ರೈತರ ಪಾಲಿಗೆ ಅದೃಷ್ಟದ ವರ್ಷವಾಗಿಯೇ ಉಳಿಯಲಿದೆ.   ಕಳೆದ ಮೂರು ನಾಲ್ಕು…

Read more
Mr.Sudhir balse's pepper plantation view

Mr. Sudhir Balse. Model pepper planter of Karnataka

This is the pepper and arecanut plantation of Mr Sudhir Balse, Chavatti, Yallapura taluk, Uttara Kannada dist. Karnataka. If anybody is traveled from Sirsi to Yallapura -Dandeli, by  this root, they are all attracted by this glory of pepper crop along with arecanut garden. It will attract the  people even he is not an agriculturist….

Read more
ಬಟರ್ ಪ್ರೂಟ್ ನ ವಿಶೇಷ ತಳಿ ಹಾಸ್

ಬಟರ್ ಪ್ರೂಟ್ ನಲ್ಲಿ ಅಧಿಕ ಇಳುವರಿಯ ವಿಶೇಷ ತಳಿಗಳು.

ಬೆಣ್ಣೆ ಹಣ್ಣು, ಬಟರ್ ಪ್ರೂಟ್ ಅಥವಾ ಅವೆಕಾಡೋ (Avocado)ಈಗ ಭಾರೀ ಪ್ರಚಲಿತದಲ್ಲಿರುವ ಹಣ್ಣಿನ ಬೆಳೆಯಾಗಿದೆ. ತಾಜಾ ಹಣ್ಣಿಗಾಗಿ, ಸಂಸ್ಕರಣೆ ಉದ್ದೇಶಕ್ಕೆ ಚೆನ್ನಾಗಿ ಹೊಂದಿಕೆಯಾಗುವುದರಿಂದ  ಈ ಹಣ್ಣಿಗೆ ಪ್ರಾಮುಖ್ಯ ಸ್ಥಾನ ಬಂದಿದೆ. ಇದರ ಆರೋಗ್ಯ ಗುಣ ಮತ್ತು ಬೇಡಿಕೆಯಿಂದಾಗಿ ಮಾರುಕಟ್ಟೆಯಲ್ಲಿ ಉತ್ತಮ ದರವೂ ಲಭ್ಯ. ಇತ್ತೀಚೆಗೆ 2015 ರ ತರುವಾಯ ಈ ಹಣ್ಣಿಗೆ ಭಾರೀ ಜನಪ್ರಿಯತೆ ದೊರಕಿತು. ತಳಿ ಹುಡುಕಾಟ, ತಳಿ ಅಭಿವೃದ್ದಿ ಸಸ್ಯೋತ್ಪಾದನೆ ಅವಕಾಡೋ ಹಣ್ಣನ್ನು ಪ್ರಮುಖ ಹಣ್ಣಿನ ಬೆಳೆಗಳ ಸ್ಥಾನದಲ್ಲಿ ತಂದು ನಿಲ್ಲಿಸಿದವು.ಹಾಸ್ ಎಂಬ ವಿಶೇಷ…

Read more
ಅಡಿಕೆ ಮಾರುಕಟ್ಟೆ ಅಂಗಳ

ಅಡಿಕೆ ಧಾರಣೆ ಸ್ಥಿರ. ಬೆಳೆಗಾರರಿಗೆ ನೆಮ್ಮದಿ- ಸೋಮವಾರ ದಿನಾಂಕ 27-12-2021.

2021 ನೇ ಇಸವಿಯಲ್ಲಿ ಅಡಿಕೆ ಧಾರಣೆ ಬೆಳೆಗಾರರಿಗೆ ಹೊಸ ಉತ್ಸಾಹವನ್ನು ಕೊಟ್ಟಿದೆ. ಸಾಕಷ್ಟು ಹೊಸ ತೋಟಗಳು ತಲೆ ಎತ್ತಿವೆ. ಬಹಳಷ್ಟು ಬೆಳೆಗಾರರು ಬೀಜಕ್ಕಾಗಿಯೇ ಅಡಿಕೆ ಮಾರಾಟ ಮಾಡಿ ಲಾಭಮಾಡಿಕೊಂಡಿದ್ದಾರೆ.  ಅಡಿಕೆ ಧಾರಣೆಯೂ ಉತ್ತಮವಾಗಿತ್ತು. ಬೀಜದ ಅಡಿಕೆಗೂ 7-8 10 ರೂ ತನಕ ಇತ್ತು. ಒಟ್ಟಿನಲ್ಲಿ ಅಡಿಕೆ ಬೆಳೆಗಾರರು ತೃಪ್ತಿಯ ಧಾರಣೆಯನ್ನು ಕಂಡು ವರ್ಷ ಇದು  ಎಂದರೆ ತಪ್ಪಾಗಲಾರದು. ಹೊಸ ವರ್ಷ 2022 ಸಹ ಅಡಿಕೆ ಬೆಳೆಗಾರರಿಗೆ ನೆಮ್ಮದಿಯ ವರ್ಷವಾಗೇ ಇರಲಿದೆ. ಯಾಕೋ ಚಾಲಿ ಅಡಿಕೆ ಮಾರುಕಟ್ಟೆಯಲ್ಲಿ ಸಣ್ಣ…

Read more
ರೈತ ಶಕ್ತಿ ದೇಶದಲ್ಲಿ ಸೈನಿಕ ಶಕ್ತಿಗಿಂತಲೂ ಮಿಗಿಲಾದುದು

ರೈತರಾಗಿ ಹುಟ್ಟಿದ್ದೇ ಪುಣ್ಯ. ಒಕ್ಕಲುತನ ಕೀಳಲ್ಲ.

ಒಕ್ಕಲುತನ ಮಾಡುತ್ತಾ ಜಗತ್ತಿನಲ್ಲಿ  ಎಲ್ಲರಿಗೂ ಅನ್ನ ಕೊಡುತ್ತಾ ಬಂದವರು ರೈತರು. ಎಲ್ಲರೂ ಜೀವಮಾನ ಪರ್ಯಂತ  ಬೇರೆಯವರ ಋಣದಲ್ಲಿದ್ದರೆ ಅದು ರೈತರಲ್ಲಿ. ರೈತರೆಂದರೆ  ನಿತ್ಯ ಸ್ಮರಣೀಯರು. ಅದರೂ ಇಂದು ನಮಗಾಗಿ ವಿಶೇಷ ದಿನ. ಡಿಸೆಂಬರ್  23   ಇದು ಜಾಗತಿಕ ರೈತರ ದಿನ. ಅಥವಾ ಕಿಸಾನ್ ದಿವಸ್. ಈ ದಿನ ನಮ್ಮ ದೇಶದ ಮಾಜೀ ಪ್ರಧಾನಿ ಛೌಧುರಿ ಚರಣ್ ಸಿಂಗ್ ಇವರ ಜನ್ಮ ದಿನ. ಚೌಧುರಿ ಚರಣ್ ಸಿಂಗ್ ಇವರು ರೈತರ ಮುಖಂಡರು.  ಸರಳ ಮನುಷ್ಯ.  ಇವರು ಜೈ ಜವಾನ್ …

Read more
ಕೆಂಪು ಅಡಿಕೆ

ಚಾಲಿ ದರ ಹಿಂದೆ- ಕೆಂಪು ಸ್ಥಿರ: ದಿನಾಂಕ:21-12-2021 ರ ಧಾರಣೆ.

ಹೊಸ ಚಾಲಿ ಮಾರುಕಟ್ಟೆಗೆ   ಬರಲಾರಂಭಿಸಿದೆ. ಚಾಲಿಯ ಗುಣ ಮಟ್ಟದ ಮೇಲೆ ಬೆಳೆಗಾರರಿಗೆ ಹೆಚ್ಚು ಖಾತ್ರಿ ಇಲ್ಲದ ಕಾರಣ ಬಿದ್ದ ಒದ್ದೆಯಾದ ಅಡಿಕೆಯನ್ನು ಹೇಗೂ ದರ ಒಳ್ಳೆಯದಿದೆಯಲ್ಲಾ ಎಂದು ಮಾರಾಟ ಮಾಡುತ್ತಿದ್ದಾರೆ. ಮೊದಲೇ ಹೇಳಿದಂತೆ ಚಾಲಿಗೆ ಖಾಸಗಿ ವ್ಯಾಪಾರಸ್ಥರಲ್ಲಿ ದರ ಕಡಿಮೆ, ಸಹಕಾರಿಗಳಲ್ಲಿ ಸ್ಥಿರವಾಗಿಯೂ ಇದೆ. ನಾಳೆ ನಾಡಿದ್ದಿನಲ್ಲಿ ಸಾಂಸ್ಥಿಕ ಖರೀದಿದಾರರೂ ಸ್ವಲ್ಪ ದರ ಇಳಿಸುವ ಮುನ್ಸೂಚನೆ ಇದೆ. ಕೆಂಪು ಅಡಿಕೆ ಬೆಳೆಗಾರರಲ್ಲಿ ದೊಡ್ಡ ಬೆಳೆಗಾರರು ಮತ್ತು ಚೇಣಿಯವರು ಮಾರಾಟಕ್ಕೆ  ದರ ಯಾವಾಗ ಏರುತ್ತದೆ ಎಂದು ಕಾಯುತ್ತಿದ್ದಾರೆ. ಈ…

Read more

ಸಾವಯವ ಇಂಗಾಲ- ಇದು ಇದ್ದರೆ ಮಣ್ಣಿಗೆ ಬೇರೆ ಹೆಚ್ಚೇನೂ ಬೇಡ.

ಮಣ್ಣು ವಿಜ್ಞಾನಿಗಳು ಮಣ್ಣು ನೋಡಿ ಮೊದಲು ಹೇಳುವುದು ಈ ಮಣ್ಣಿನಲ್ಲಿ ಸಾವಯವ ಇಂಗಾಲ ಎಷ್ಟು ಇದೆ ಎಂಬುದನ್ನು. ಇದನ್ನು ಅನುಸರಿಸಿ ನಂತರದ ಸಲಹೆಗಳು. ಮಣ್ಣು ಯಾವ ಪೋಷಕಾಂಶ  ಹಾಕಿದರೂ ಅದು ಸಸ್ಯ ಸ್ವೀಕರಿಸಬೇಕಾದರೆ ಆದರಲ್ಲಿ ಇಂಗಾಲದ ಅಂಶ ಹೆಚ್ಚಿನ ಪ್ರಮಾಣದಲ್ಲಿ  ಇರಬೇಕು. ಈಗ ನಮ್ಮ ಸುತ್ತಮುತ್ತ ಮಾರಾಟವಾಗುತ್ತಿರುವ ವಿವಿಧ ಹೆಸರಿನ ಜೈವಿಕ ಗೊಬ್ಬರಗಳೂ ಕೆಲಸ ಮಾಡಿ ನಮಗೆ ತೃಪ್ತಿಕರ ಫಲಿತಾಂಶ ಕೊಡಬೇಕಿದ್ದರೆ ಮಣ್ಣಿನಲ್ಲಿ  ಕಾರ್ಬನ್ ( ಇಂಗಾಲ) ಅಂಶ ಹೇರಳವಾಗಿ ಇರಬೇಕು. ಹೀಗಿರುವಾಗ ನಾವು ಗೊಬ್ಬರ ಹಾಕುವುದಕ್ಕಿಂತ…

Read more
error: Content is protected !!