ಬಾಳೆ ಎಲೆ ಶಿಲೀಂದ್ರ ರೋಗ

ಮಳೆಗಾಲದಲ್ಲಿ ಬಾಳೆ ಬೆಳೆಗೆ ಬಾಧಿಸುವ ರೋಗದ ನಿವಾರಣೆ ಹೀಗೆ.

ಬಾಳೆಯ ಎಲೆ ಹಳದಿಯಾಗುವುದು, ಒಣಗುವುದು ಶಿಲೀಂದ್ರ ರೋಗ. ಇದಕ್ಕೆ ಮುನ್ನೆಚ್ಚರಿಕೆ  ಅಗತ್ಯ. ಶಿಲೀಂದ್ರ ರೋಗಗಳು ಹೆಚ್ಚಾಗಿ ಮಳೆಗಾಲದಲ್ಲಿ  ಬರುವುದು ಜಾಸ್ತಿ. ಅದು ಮಳೆಗಾಲ ಮುಗಿಯುವ ಸಮಯದಲ್ಲಿ ಬಂದರೆ  ಮುಂದಿನ ಚಳಿಗಾಲ ಪ್ರಾರಂಭವಾಗುವಾಗ  ನಮ್ಮ ಗಮನಕ್ಕೆ ಬರುತ್ತದೆ. ಕೆಲವೊಮ್ಮೆ ಇಬ್ಬನಿ ಬೀಳುವ ಸಮಯದಲ್ಲೂ ಬರುತ್ತದೆ. ಬಾಳೆಗೆ  ಬರುವ ರೋಗಗಳಲ್ಲಿ ಬಂಚೀ ಟಾಪ್ ಒಂದನ್ನು ಹೊರತು ಪಡಿಸಿ ಉಳಿದ ರೋಗಗಳನ್ನು ಪ್ರಾರಂಭಿಕ ಹಂತದಲ್ಲಿ ಗುರುತಿಸಿದರೆ ನಿಯಂತ್ರಣ ಮಾಡುವುದು ಸುಲಭ. . ಬಾಳೆಯಲ್ಲಿ ಚಳಿಗಾಲ ಪ್ರಾರಂಭವಾಗುವಾಗ  ಮತ್ತು ಮಳೆಗಾಲ ಅಂತ್ಯದ ಸಮಯದಲ್ಲಿ…

Read more
ಸತ್ತ ತೆಂಗಿನ ಮರಕ್ಕೆ ಬಕೆಟ್ ಮುಚ್ಚಿದ್ದು

ಸಣ್ಣ ಯೋಚನೆ- ದೊಡ್ದ ಫಲಿತಾಂಶ.

ನಾವು ಎಲೆಲ್ಲೋ ಪ್ರಯಾಣ ಮಾಡಬೇಕಾದರೆ ಹಲವಾರು ತೀರಾ ಸರಳವಾದ  ವಿಚಾರಗಳನ್ನು ಗಮನಿಸುತ್ತೇವೆ.  ಸರಳ ವಿಷಯಗಳಾದರೂ ನಮಗೆ ಅದು ಹೊಳೆದಿರುವುದಿಲ್ಲ. ಸಣ್ಣ ಯೋಚನೆಯಲ್ಲೇ  ದೊಡ್ಡ ಉಪಕಾರ ಇರುತ್ತದೆ. ಅದಕ್ಕೇ ಹೇಳುವುದು ಊರು ಸುತ್ತುವುದರಿಂದ ಜ್ಞಾನರ್ಜನೆ ಆಗುತ್ತದೆ.. ನಮ್ಮಲ್ಲಿ ಅಡಿಕೆ ಮರಗಳು ಸಾಯುತ್ತವೆ. ತೆಂಗಿನ ಮರಗಳು ಸಾಯುತ್ತವೆ. ಸತ್ತ ಮರದಲ್ಲಿ ಕರಿಮೆಣಸು, ವೀಳ್ಯದೆಲೆ ಮುಂತಾದ ಬೆಳೆ  ಇರುತ್ತದೆ. ಆಧಾರ ಮರ ಸತ್ತ ತರುವಾಯ ಅದು ಉತ್ತಮವಾಗಿ ಬೆಳೆಯುತ್ತದೆ. ಹೆಚ್ಚು ಫಸಲನ್ನೂ  ಕೊಡುತ್ತಿರುತ್ತದೆ.  ನಂತರ ಅದಕ್ಕೆ ರೋಗ ಸಹ ಬರುವುದು ನಿಧಾನ. …

Read more

ಕೃಷಿ ಉತ್ಪನ್ನಗಳ ನಿರ್ಜಲೀಕರಣದಿಂದ ಲಾಭ ಹೆಚ್ಚು.

ಮಾರುಕಟ್ಟೆಯಲ್ಲಿ ವ್ಯಾಪಾರಿ ನನಗೆ ನಿಮ್ಮ  ಉತ್ಪನ್ನ ಬೇಕು ಎಂದು ಕೇಳುವ ಸ್ಥಿತಿ ಯಾವಾಗ ಬರುತ್ತದೆಯೋ ಆಗ ರೈತರು ತಮ್ಮ ಉತ್ಪನ್ನಕ್ಕೆ MRP ಇಡಬಹುದು. ಅದಕ್ಕೆ ಸ್ವಲ್ಪವೇ ತಯಾರಿ ನಡೆಯಬೇಕಿದೆ. ನೀವು 100  ಟನ್  ಬೀನ್ಸ್  ಬೆಳೆದರೆ ಕೊಳ್ಳುವ ವ್ಯಾಪಾರಿ ಬುದ್ದಿವಂತಿಕೆ  ಮೆರೆಯುತ್ತಾನೆ. ನಿಮ್ಮ ಕೊಯಿಲಿನ ಸಮಯದ ತನಕ ಉತ್ತಮ ಬೆಲೆ ಇದ್ದರೆ  ನೀವು ಕೊಯ್ಯುವಾಗ ಬೆಲೆ ನೆಲಕಚ್ಚುತ್ತದೆ. ಆ ಸಮಯದಲ್ಲಿ  ನೀವು “ನಾನು ಬೆಳೆದ ಬೆಳೆಯನ್ನು ಪೂರ್ತಿ ಸಂಸ್ಕರಣೆ ಮಾಡುತ್ತೇನೆ. ತಾಜಾ ಮಾರುಕಟ್ಟೆಗೆ ಕೊಡುವುದಿಲ್ಲ” ಎಂದರೆ ತಕ್ಷಣ …

Read more
ಜಾಯಿ ಕಾಯಿ ಫಲ

ಇದು ಅಡಿಕೆಗಿಂತಲೂ ಲಾಭದ ಮಿಶ್ರ ಬೆಳೆ

ನೂರು ವರ್ಷಕ್ಕೂಹೆಚ್ಚು ಬದುಕಬಲ್ಲುದು. ಈ ಅವಧಿಯುದ್ದಕ್ಕೂ ವರ್ಷದಿಂದ ವರ್ಷಕ್ಕೆ ಆದಾಯ ಹೆಚ್ಚಿಸಿಕೊಡುತ್ತಾ ಇರುವ  ಯಾವ  ಮರಮಟ್ಟೂ ಇಲ್ಲ. ಅದು ಜಾಯೀ ವೃಕ್ಷ ಮಾತ್ರ. ಅದಕ್ಕೇ ಕೇರಳದ ಜನ ತಮ್ಮ ಮನೆಮುಂದೆ ಒಂದಷ್ಟು ಸಸಿ ಬೆಳೆಸಿ ಕಲ್ಪವೃಕ್ಷ  ಇದು ಎಂದು ಪೋಷಿಸುವುದು. ಕೇರಳದಾದ್ಯಂತ ಎಲ್ಲೆಲ್ಲಿ ಕಂಡರೂ ಜಾಯೀ ಕಾಯಿ ಮರಗಳು. ಯಾಕಪ್ಪಾ  ಇವರು ಮನೆ  ಮುಂದೆ ಇಂತಹ ದೊಡ್ಡ ಮರಮಟ್ಟು  ಬೆಳೆಸಿದ್ದಾರೆ  ಎನ್ನುತ್ತೀರಾ?  ಇದರಲ್ಲಿದೆ  ಭಾರೀ ಆದಾಯ. ಬರೇ ಕೇರಳ ಮಾತ್ರವಲ್ಲ. ಕರ್ನಾಟಕದಲ್ಲೂ ಕೆಲವು ರೈತರು ಸದ್ದಿಲ್ಲದೆ ಇದನ್ನು…

Read more

ಸಿರ್ಸಿ ಅಡಿಕೆ ಎಂಬ ವಿಶಿಷ್ಟ ಅಡಿಕೆ ತಳಿ.

ಮನುಷ್ಯರೆಲ್ಲರೂ ಒಂದೇ. ಆದರೆ  ಗುಣಗಳು ಮಾತ್ರ ಭಿನ್ನ. ಕೆಲವರು ಬಹಳ ಚುರುಕು. ಮತ್ತೆ ಕೆಲವರು ಮಂದ. ಹಾಗೆಯೇ ಫಲ ಕೊಡುವ ಸಸ್ಯಗಳಲ್ಲೂ ಇದೆ. ಕೆಲವು ಉತ್ತಮ ಗುಣವನ್ನು ತಮ್ಮ ಜೀನ್ ನಲ್ಲೇ ಒಳಗೊಂಡಂತದ್ದನ್ನು ಆಯ್ಕೆ  ಮಾಡಿ ಅದನ್ನು ಅಭಿವೃದ್ದಿಪಡಿಸಿ ಬೆಳೆಸಬಹುದಾದ್ ಅತಳಿಯಾಗಿ ಬಿಡುಗಡೆ ಮಾಡಲಾಗುತ್ತದೆ. ಅಂತದ್ದೇ ಇದು ಶಿರಸಿಯ ಆಕೆ ತಳಿ ಅಡಿಕೆ.(SAS). ಎಕ್ರೆಗೆ 28 ಕ್ವಿಂಟಾಲು ಅಡಿಕೆ: ಶಿರ್ಸಿಯ ಆಯ್ಕೆ ಅಡಿಕೆ  ( Sirsi areca selection 1 )  ಉತ್ತರಕನ್ನಡ ಜಿಲ್ಲೆಯ ಶಿರಸಿ ಭಾಗದ…

Read more
ಅಪಾರ ಔಷಧೀಯ ಹೂವು

ಅಪಾರ ಔಷಧೀಯ ಸಸ್ಯ – ಕೊಡಸಾನ

ಹೊಟ್ಟೆ  ಸರಿಯಿಲ್ಲವೇ? ಹುಳದ ಸಮಸ್ಯೆಯೇ, ನಮ್ಮ ಹಿರಿಯರು ವೈದ್ಯರ ಬಳಿಗೆ ಕರೆದೊಯ್ಯುತ್ತಿರಲಿಲ್ಲ. ಮನೆ ಹಿತ್ತಲ ಗುಡ್ಡಕ್ಕೆ ಹೋಗಿ ಸೊಪ್ಪು, ಹೂವು ಕೆತ್ತೆ  ತಂದು ಅದನ್ನು ಅರೆದು ಕಷಾಯವೋ, ಅಡುಗೆಯೋ ಚೂರ್ಣವೋ ಮಾಡಿಕೊಡುತ್ತಿದ್ದರು. ಕೆಲವೇ ಕ್ಷಣದಲ್ಲಿ  ಸಮಸ್ಯೆ  ನಿವಾರಣೆಯಾಗುತ್ತಿತ್ತು. ಈಗ ಅಂತಹ ಸಸ್ಯಗಳೇ ಇಲ್ಲದಾಗಿದೆ.   ಸಸ್ಯ ವಿಷೇಶ: ಕೊಡಸಾನ ಸಸ್ಯ, ಕುಟಜ ಸಸ್ಯ  ಎಂಬುದು ನಮ್ಮ ಬೆಟ್ಟ ಗುಡ್ಡಗಳಲ್ಲಿ ಮಾರ್ಚ್ ತಿಂಗಳಿನಿಂದ ಜೂನ್ ತಿಂಗಳ ತನಕ ಕಾಣಸಿಗುವ  ಮಲ್ಲಿಗೆ ಹೂವಿನಂತಃ ಹೂ ಬಿಡುವ  ಸಾಮಾನ್ಯ ಎತ್ತರದ ಸಸ್ಯ. ಇದನ್ನು…

Read more

ಈ ಸಸ್ಯಗಳಲ್ಲಿ ವಿಶೇಷ ಗುಣಗಳು ಇವೆ.

ಕಳೆ ಸಸ್ಯಗಳೆಂದು ನಾವು ನಿರ್ಲಕ್ಷ್ಯ ಮಾಡುವ ಕೆಲವು ಸಸ್ಯಗಳು ಮಣ್ಣೀನ ಫಲವತ್ತತೆ  ಹೆಚ್ಚಿಸಲು ಸಹಕಾರಿ. ಅವುಗಳಲ್ಲಿ ಒಂದು ಕ್ರೊಟಲೇರಿಯಾ ಜಾತಿಯ ಸಸ್ಯ. ಸಸ್ಯಗಳು ಮತ್ತು ಮಣ್ಣು:  ಅಲ್ಪಾವಧಿಯ ಸಸ್ಯಗಳಾದ ಇವುಗಳನ್ನು ಹೊಲದಲ್ಲಿ ಬೆಳೆಯುವುದರಿಂದ ಮಣ್ಣಿನ ಭೌತಿಕ ಮತ್ತು ಜೈವಿಕ ರಚನೆ ಅಭಿವೃದ್ದಿಯಾಗುತ್ತದೆ. ಇಂತವುಗಳು  ನಮ್ಮ ಸುತ್ತಮುತ್ತ ಹಲವಾರು ಇವೆ. ಯಾವುದು ದ್ವಿದಳ ಕಾಳುಗಳನ್ನು ಕೊಡುವ ಸಸ್ಯಗಳಿವೆಯೋ ಅವೆಲ್ಲಾ ಪೋಷಕಾಂಶ ಕೊಡುವ ಸಸ್ಯಗಳು.  ಮಣ್ಣು  ಈ ತನಕ ಜೀವಂತವಾಗಿ ಉಳಿದುಕೊಂಡು ಬಂದುದು ಅದರಲ್ಲಿ ಆಶ್ರಯಿಸಿರುವ ಸೂಕ್ಷ್ಮ ಜೀವಿಗಳು, ಸಸ್ಯಗಳು…

Read more
ಗೊಬ್ಬರ ಮಾಡಿಕೊಡುವ ನೈಜ ಎರೆಹುಳು

ಗೊಬ್ಬರ ಮಾಡಿಕೊಡುವ ನೈಜ ಎರೆಹುಳು ಯಾವುದು ಗೊತ್ತೇ?

ವಿದೇಶೀ ಪ್ರವರ್ಗದ ಎರೆಹುಳುಗಳಿಂದ  ತಯಾರಿಸಿದ ಮಾರಾಟಕ್ಕೆ ಲಭ್ಯವಿರುವ ಎರೆ ಗೊಬ್ಬರ ಬಳಸಿದರೆ  ಅದ್ಭುತ ಇಳುವರಿ ಎಂದೆಲ್ಲಾ ಪ್ರಚಾರದ ಹಿಂದೆ ಸಾಕಷ್ಟು ಉತ್ಪೇಕ್ಷೆಗಳು ಇವೆ. ವಿದೇಶೀ ಎರೆಹುಳುಗಳು ಸಾವಯವ ವಸ್ತುಗಳನ್ನು ಪುಡಿ ಮಾಡಿಕೊಡುವ ಒಂದು ಜೀವಿಗಳು ಎಂಬುದಾಗಿ ಹೇಳಲ್ಪಟ್ಟಿದೆ. ನಮ್ಮೆಲ್ಲರ ಹೊಲದಲ್ಲಿ  ಇರುವ ಎರೆಹುಳುಗಳ ಕೆಲಸಕ್ಕೆ ಅವು ಸಹಕರಿಸುವ ಜೀವಿಗಳು ಅಷ್ಟೇ. ಮಣ್ಣಿನಲ್ಲಿ ಕೆಲಸ ಮಾಡಿ ಸಸ್ಯ ಬೆಳವಣಿಗೆ ಮತ್ತು ಮಣ್ಣಿನ ಸುಧಾರಣೆ ಮಾಡುವವುಗಳು  ಮಣ್ಣು ಜನ್ಯ ಎರೆ ಹುಳುಗಳು ಮಾತ್ರ. ಎರೆಹುಳು ಗೊಬ್ಬರ ಬಳಸಿದರೆ ಹಾಗಾಗುತ್ತದೆ , ಹೀಗಾಗುತ್ತದೆ ಎಂದೆಲ್ಲಾ ಹೇಳಿ ಚೀಲದಲ್ಲಿ ತುಂಬಿ…

Read more
ಸತ್ವ ಉಳ್ಳ ಲಂಟಾನ ಸಸ್ಯ

ಈ ಸಸ್ಯಗಳಲ್ಲಿ ವಿಶೇಷ ಗುಣಗಳು ಇವೆ.

ನಮ್ಮ ಸುತ್ತಮುತ್ತ ಇರುವ ಕೆಲವು ಗಿಡಗಳು ಬೇರೆ ಬೇರೆ ಸತ್ವಗಳನ್ನು ಒಳಗೊಂಡಿವೆ. ಕೆಲವು ಪೋಷಕವಾಗಿಯೂ  ಮತ್ತೆ ಕೆಲವು ಕೀಟ – ರೋಗ ನಿಯಂತ್ರಕವಾಗಿಯೂ ಕೆಲಸ ಮಾಡುತ್ತವೆ. ಇತ್ತೀಚಿನ ದಿನಗಳಲ್ಲಿ ಇವುಗಳನ್ನು ಕಳೆ ನಾಶಕಗಳು ಬಲಿ ತೆಗೆದುಕೊಳ್ಳುತ್ತಿವೆ. ರೈತರೇ ಇವುಗಳನ್ನು ಅನವಶ್ಯಕ  ಕೊಲ್ಲಬೇಡಿ. ಅದರ ಸದುಪಯೋಗ ಮಾಡಿಕೊಳ್ಳಿ. ಏನಿದೆ ಸತ್ವ: ಸಾಮಾನ್ಯವಾಗಿ ಸಾವಯವ ವಿಧಾನದಲ್ಲಿ ಬೇಸಾಯ ಮಾಡುವಾಗ ಸಾರಜನಕ ಮೂಲವನ್ನು ಬೇಕಾದಷ್ಟು ಪ್ರಮಾಣದಲ್ಲಿ  ಹೊಂದಿಸಿಕೊಳ್ಳಲಿಕ್ಕಾಗುತ್ತದೆ. ಆದರೆ ರಂಜಕ ಮತ್ತು  ಪೊಟ್ಯಾಶಿಯಂ ಸತ್ವಗಳನ್ನು ಬೇಕಾದಷ್ಟು ಪ್ರಮಾಣದಲ್ಲಿ  ಹೊಂದಿಸಿಕೊಳ್ಳುವುದು ಕಷ್ಟವಾಗುತ್ತದೆ. ಇದರಿಂದ…

Read more
ನೆಲ್ಲಿ ಕಾಯಿ

ಭೂಲೋಕದ ಸಂಜೀವಿನಿ- ನೆಲ್ಲಿ ಕಾಯಿ

ಮಾನವ ತನ್ನ ಆರೋಗ್ಯವನ್ನು ಕಾಪಾಡಿಕೊಳ್ಳಲು  ಪ್ರಕೃತಿ ಕೊಟ್ಟ  ಔಷಧೀಯ ಸಸ್ಯವೇ ನೆಲ್ಲಿ. ಸಾಮಾನ್ಯವಾಗಿ ಇದನ್ನು ಆಮಲಕ, ಬೆಟ್ದದನೆಲ್ಲಿ, ಅಥವಾ ಇಂಡಿಯನ್ ಗೂಸ್ ಬೆರಿ ಎಂದು ಕರೆಯಲಾಗುತ್ತದೆ. ಇದು ಭಾರತದಲ್ಲಿ ನಮ್ಮ ಹಿರಿಯರಿಂದಲೂ ಉಪಯೋಗಿಸಿಕೊಂಡು ಬಂದಂತ ಔಷಧೀಯ ಮಹತ್ವದ  ಹಣ್ಣಿನ ಬೆಳೆ. ಹೇಗೆ ಬೆಳೆಸಬಹುದು: ನೆಲ್ಲಿಯ ವಿಶೇಷತೆಯೆಂದರೆ ವಿವಿಧ ರೀತಿಯ ಮಣ್ಣುಗಳಲ್ಲೂ  ಇದನ್ನು ಬೆಳೆಸಬಹುದು. ಹಾಗೆಯೆ ಒಣ ಪ್ರದೇಶಗಳಲ್ಲೂ, ಅತಿ ಹೆಚ್ಚು ಹಾಗು ಕಡಿಮೆ ಉಷ್ಟಾಂಶದಲ್ಲೂ, ಕ್ಷಾರೀಯ ಮಣ್ಣಿನಲ್ಲೂ ಬೆಳೆಸಬಹುದಾದ ಬೆಳೆ. ಕಸಿಗಿಡ ನೆಟ್ಟು ನಾಲ್ಕು ವರ್ಷಗಳ ಬಳಿಕ…

Read more
error: Content is protected !!